Advertisment

ಬಂಗ್ಲೆಗುಡ್ಡದಲ್ಲಿ ಬುರುಡೆ, ಅಸ್ಥಿಪಂಜರಗಳು ಪತ್ತೆ ವಿಚಾರ.. ದೂರು ನೀಡಲು SIT ಸಿದ್ಧತೆ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಗ್ಲೆಗುಡ್ಡೆಯ ಅರಣ್ಯದಲ್ಲಿ ಏಳು ತಲೆಬುರುಡೆ ಹಾಗೂ ಅಸ್ಥಿಪಂಜರದ ಕುರುಹು ಪತ್ತೆಯಾಗಿವೆ. ಈ ಕುರಿತು ಎಸ್​ಐಟಿ ದೂರು ನೀಡಲು ಮುಂದಾಗಿದೆ.

author-image
Bhimappa
dharmasthala case(5)
Advertisment

ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ 7 ತಲೆ ಬುರುಡೆ ಅಸ್ಥಿಪಂಜರದ ಕುರುಹು ಪತ್ತೆಯಾದ ಹಿನ್ನಲೆಯಲ್ಲಿ, ಯುಡಿಆರ್ ಪ್ರಕರಣ ದಾಖಲಿಸಲು‌ ಎಸ್ಐಟಿ ತಯಾರಿ ನಡೆಸಿದೆ. 

Advertisment

ಧರ್ಮಸ್ಥಳ ಪ್ರಕರಣ ದಿನಕ್ಕೊಂದು ಮಜಲು ಪಡೆದುಕೊಳ್ಳುತ್ತಿದೆ. ಈಗ ಧರ್ಮಸ್ಥಳದಿಂದ ಬಂಗ್ಲೆಗುಡ್ಡೆಯ ಕಡೆ ಎಸ್​ಐಟಿ ಅಧಿಕಾರಿಗಳು ಹೋಗಿದ್ದು ಅಲ್ಲಿ ಕೂಡ ಏಳು ಬುರುಡೆಗಳು ಹಾಗೂ ಅಸ್ಥಿಪಂಜರಗಳು ಪತ್ತೆ ಆಗಿವೆ. ಈ ಸಂಬಂಧ ಸ್ಥಳೀಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವುಗಳ ಕುರಿತು ಪ್ರಕರಣವನ್ನು ಎಸ್​ಐಟಿ ದಾಖಲಿಸಲಿದೆ. 

ಸದ್ಯ ಪತ್ತೆ ಆಗಿರುವ ಅಸ್ಥಿಪಂಜರಗಳು ಯಾರದ್ದು, ಇಲ್ಲಿಗೆ ಬಂದು ಯಾಕೆ ಜೀವ ಕಳೆದುಕೊಂಡರು ಎಂಬುದನ್ನು ಎಸ್​ಐಟಿ ಅಧಿಕಾರಿಗಳು ಕಂಡುಕೊಳ್ಳಲು ತನಿಖೆ ನಡೆಸಲಿದ್ದಾರೆ. ಈಗಾಗಲೆ ಒಂದು ಅಸ್ಥಿಪಂಜರದ ಕುರುಹು ಸಿಕ್ಕಿದ್ದು ಅದು, ಕೊಡಗು ಮೂಲದ ಯು.ಬಿ ಅಯ್ಯಪ್ಪರದ್ದು ಎಂದು ಬಹುತೇಕ ಖಚಿತವಾಗಿದೆ. ಇನ್ನೂಳಿದ ಆರು ಅಸ್ಥಿಪಂಜರಗಳ ಗುರುತು ಪತ್ತೆಗಾಗಿ ಎಸ್​ಐಟಿ ಜಾಡು ಹಿಡಿದಿದ್ದು, ಪ್ರಯೋಗಾಲಯಕ್ಕೆ ಡಿಎನ್​ಎ ಟೆಸ್ಟ್​ಗೆ ಕಳುಹಿಸಲು ತಯಾರಿ‌ ಮಾಡಿಕೊಂಡಿದೆ.

ಇದನ್ನೂ ಓದಿ: ನಾಡಹಬ್ಬ ದಸರಾ ಮಹೋತ್ಸವ; ಇಂದಿನಿಂದ ಎಷ್ಟು ದಿನ ಶಾಲೆಗಳಿಗೆ ರಜೆ ಇದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HD Deve Gowda on Dharmasthala case dharmasthala case, sameer md BJP JDS on Dharmasthala dharmasthala Chenna Dharmasthala Dharmasthala case
Advertisment
Advertisment
Advertisment