ಧರ್ಮಸ್ಥಳ ಪ್ರಕರಣಕ್ಕೆ ಎಂಟ್ರಿ ಕೊಟ್ಟ NHRC.. ಐಪಿಎಸ್ ಸೇರಿ ನಾಲ್ವರು ಅಧಿಕಾರಿಗಳು ಅಖಾಡಕ್ಕೆ

ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ಭೇದಿಸುತ್ತಿರೋ ಎಸ್​ಐಟಿ ತಂಡ ನೆಲ ಅಗೆದು, ಬಗೆದು ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ. ಈ ಮಧ್ಯೆ ಜಿಪಿಆರ್ ಕಾರ್ಯಾಚರಣೆಗೆ ಎಂಟ್ರಿಕೊಟ್ಟಿರೋದು ಎಸ್​ಐಟಿಗೆ ಆನೆ ಬಲ ಬಂದಂತಾಗಿದೆ.

author-image
Bhimappa
DHARMASTALA_NEW
Advertisment

ಧರ್ಮಸ್ಥಳದಲ್ಲಿ ಕೆಲವರು ನಾಪತ್ತೆ ಆರೋಪದ ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಅಖಾಡಕ್ಕಿಳಿದ ಡ್ರೋನ್ ಮೌಂಟಡ್ ರಾಡಾರ್ ಮೇಲೆ ನಿರೀಕ್ಷೆ ಬೆಟ್ಟದಷ್ಟಾಗಿದೆ. ಈ ಮಧ್ಯೆ ಮಾನವ ಹಕ್ಕುಗಳ ಆಯೋಗ ಧರ್ಮಸ್ಥಳದ ಹಾದಿಯಲ್ಲಿ ಹೆಜ್ಜೆ ಹಾಕಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ಭೇದಿಸುತ್ತಿರೋ ಎಸ್​ಐಟಿ ತಂಡ ನೆಲ ಅಗೆದು, ಬಗೆದು ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ. ಈ ಮಧ್ಯೆ ಜಿಪಿಆರ್ ಕಾರ್ಯಾಚರಣೆಗೆ ಎಂಟ್ರಿಕೊಟ್ಟಿರೋದು ಎಸ್​ಐಟಿಗೆ ಆನೆ ಬಲ ಬಂದಂತಾಗಿದೆ. ನೇತ್ರಾವತಿ ನದಿ ತೀರ, ರತ್ನಗಿರಿ ಬೀಡು ಬಿಟ್ಟಿರೋ ಎಸ್​ಐಟಿ ತಂಡದ ಜೊತೆ ಮತ್ತೊಂದು ತಂಡ ಧರ್ಮಸ್ಥಳದ ಹಾದಿ ಹಿಡಿದಿದೆ.

DHARMASTALA (3)

ರಾತ್ರಿ ಕಾರ್ಯಾಚರಣೆಗಿಳಿದಿದ್ದ ಮಾನವ ಹಕ್ಕುಗಳ ಆಯೋಗ!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಎನ್​ಹೆಚ್​ಆರ್​ಸಿ ಅಂದ್ರೆ ಮಾನವ ಹಕ್ಕುಗಳ ಆಯೋಗ ಎಂಟ್ರಿಯಾಗಿದೆ. ಕಳೆದ ರಾತ್ರಿಯೇ ಕಾರ್ಯಾಚರಣೆಗಿಳಿದ ಆಯೋಗ, ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಣ್ಣು ಸುರಿದ ಆರೋಪ ಹೊತ್ತಿರುವ 16ನೇ ಪಾಯಿಂಟ್​ನಲ್ಲೂ ಪರಿಶೀಲಿಸಿದೆ. ಓರ್ವ ಐಪಿಎಸ್ ಅಧಿಕಾರಿ ಸೇರಿ ಬೆಳ್ತಂಗಡಿಯಲ್ಲಿ ಬೀಡುಬಿಟ್ಟಿರೋ ನಾಲ್ವರು ಅಧಿಕಾರಿಗಳ ತಂಡ ಇಂದು ಮತ್ತೆ ಅಖಾಡಕ್ಕೆ ಇಳಿಯಲಿದೆ.

NHRC ರಾತ್ರಿ ಕಾರ್ಯಾಚರಣೆ!

  • ವಿವಿಧ ಆಯಾಮಗಳಲ್ಲಿ ದಾಖಲೆ ಮತ್ತು ಮಾಹಿತಿಗಳ ಸಂಗ್ರಹ
  • ಪೊಲೀಸ್​​ ಠಾಣೆ, ಎಸ್​​ಐಟಿ, ದೇವಸ್ಥಾನದಿಂದ ಮಾಹಿತಿ ಕಲೆ
  • ಧರ್ಮಸ್ಥಳ ಪಂಚಾಯತ್​ನಿಂದ ದಾಖಲೆಗಳ ಕೇಳಿದ NHRC
  • ಸ್ವಚ್ಛತಾ ಕಾರ್ಮಿಕರಿಂದ ಹೇಳಿಕೆಗಳನ್ನ ಸಂಗ್ರಹಿಸಿದ ಆಯೋಗ
  • ಗೌಪ್ಯವಾಗಿ ಹಲವರ ಭೇಟಿ ಮಾಡಿ ವಿಚಾರಣೆ ನಡೆಸಿದ ತಂಡ 
  • ಮುಂದಿನ 4-5 ದಿನ ಧರ್ಮಸ್ಥಳದಲ್ಲಿ ಬೀಡು ಬಿಡಲಿರುವ ಸಾಧ್ಯತೆ 
  • ಅಲ್ಲದೆ ಶವ ಹೂತಿಟ್ಟ ಪಾಯಿಂಟ್​ಗಳಿಗೂ ಭೇಟಿ, ಪರಿಶೀಲನೆ 

ಇದನ್ನೂ ಓದಿ:KN ರಾಜಣ್ಣ ಸಂಪುಟದಿಂದ ವಜಾ ಬೆನ್ನಲ್ಲೇ ಪುರಸಭೆ ಸದಸ್ಯತ್ವಕ್ಕೆ ಮಹಿಳಾ ಸದಸ್ಯೆ ರಾಜೀನಾಮೆ

DHARMASTALA_GPR

ಇಂದು ಮತ್ತೆ ಅಖಾಡಕ್ಕೆ ಡ್ರೋನ್ ಮೌಂಟಡ್ ರಾಡಾರ್!

ನಿನ್ನೆ ನೇತ್ರಾವತಿ ನದಿ ತೀರದಲ್ಲಿ 13ನೇ ಪಾಯಿಂಟ್​ನಲ್ಲಿ ಗಿಡಗಂಟಿಗಳ ಮಧ್ಯೆ ರೌಂಡ್ಸ್​ ಹಾಕಿದ್ದ ಡ್ರೋನ್ ಮೌಂಟಡ್ ರಾಡಾರ್​ಗೆ ಯಾವುದೇ ಕರುಹು ಪತ್ತೆಯಾಗಿರಲಿಲ್ಲ. ಇಂದು ಮತ್ತೆ ಜಿಪಿಆರ್​ ಅಖಾಡಕ್ಕಿಳಿಯಲಿದೆ.

ಒಂದ್ಕಡೆ ಜಿಪಿಆರ್​ ಮೇಲಿನ ಕುತೂಹಲ ಮತ್ತೊಂದು ಕಡೆ ಮಾನವ ಹಕ್ಕು ಆಯೋಗದ ಬಲ ಶವ ಹೂತಿಟ್ಟ ಆರೋಪದ ಪ್ರಕರಣವನ್ನ ಮತ್ತಷ್ಟು ಜಟಿಲವಾಗಿಸಿದೆ. ಇಂದು ಡ್ರೋನ್ ಮೌಂಟಡ್ ರಾಡಾರ್ ಯಾವುದಾದ್ರೂ ಕುರುಹುಗಳನ್ನ ಪತ್ತೆ ಹಚ್ಚುತ್ತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala Dharmasthala case
Advertisment