ಧರ್ಮಸ್ಥಳ ಪ್ರಕರಣ; ಪಾಯಿಂಟ್ 13ರ ಪರಿಶೋಧನೆಗೆ GPR ಬಳಕೆ ಮಾಡಲು ಎಸ್​ಐಟಿ ಪ್ಲಾನ್

ಜಿಪಿಆರ್ ಎಷ್ಟು ಪರಿಣಾಮಕಾರಿ, ಜಿಪಿಆರ್ ಬಳಸೋದು ಹೇಗೆ, ಅದರ ಫಲಿತಾಂಶ ಯಾವ ರೀತಿ ಬರುತ್ತದೆ ಎಂಬುದರ ಬಗ್ಗೆ ಈಗಾಗಲೇ ಎಸ್​ಐಟಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಏಕಾಏಕಿ ಮಣ್ಣು ಅಗೆಯುವುದರಿಂದ ಸಾಕಷ್ಟು ಸಮಯ ಬೇಕಾಗುತ್ತದೆ.

author-image
Bhimappa
Advertisment

ಧರ್ಮಸ್ಥಳದಲ್ಲಿ ಮಹಿಳೆಯರು, ಯುವತಿಯರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಯಿಂಟ್ ನಂಬರ್​ 13ರಲ್ಲಿ ಜಿಪಿಆರ್​ (Ground Penetrating Radar) ಬಳಸಲು ಎಸ್​ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಎಸ್​​ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಸ್ಪಾಟ್​ಗೆ ಭೇಟಿ ನೀಡಲಿದ್ದಾರೆ. ಮಣ್ಣನ್ನು ಅಗೆದು ಪರಿಶೀಲನೆ ಮಾಡುವುದಕ್ಕಿಂತ ಮೊದಲು ಜಿಪಿಆರ್​ ತಂತ್ರಜ್ಞಾನ ಬಳಸಿ ಪರಿಶೋಧನೆ ಮಾಡಲು ಮುಂದಾಗಿದ್ದಾರೆ. 

ಜಿಪಿಆರ್ ಎಷ್ಟು ಪರಿಣಾಮಕಾರಿ, ಜಿಪಿಆರ್ ಬಳಸೋದು ಹೇಗೆ, ಅದರ ಫಲಿತಾಂಶ ಯಾವ ರೀತಿ ಬರುತ್ತದೆ ಎಂಬುದರ ಬಗ್ಗೆ ಈಗಾಗಲೇ ಎಸ್​ಐಟಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಏಕಾಏಕಿ ಮಣ್ಣು ಅಗೆಯುವುದರಿಂದ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ತಂತ್ರಜ್ಞಾನದ ಮೊರೆ ಹೋಗಲಾಗುತ್ತದೆ ಎನ್ನಲಾಗಿದೆ. ಪಾಯಿಂಟ್ 13ರ ಸಮೀಕ್ಷೆ ಮಾಡಿ ಮುಂದಿನ ಕೆಲಸ ಮಾಡಲಾಗುತ್ತದೆ. ​ 

dharmasthala
Advertisment