Advertisment

ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು 2500 ಹೆಚ್ಚುವರಿ ಬಸ್ ಸಂಚಾರ

ಇದೇ ತಿಂಗಳು 20 ರಿಂದ 22ರವರೆಗೆ ದೀಪಾವಳಿ ಹಬ್ಬ ಇದೆ. ದೀಪಾವಳಿ ಹಬ್ಬಕ್ಕಾಗಿ ಬೆಂಗಳೂರಿನಿಂದ ಜನರು ಎರಡು ಮೂರು ದಿನ ರಜೆ ಹಾಕಿ ತಮ್ಮ ಊರುಗಳಿಗೆ ತೆರಳುತ್ತಾರೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ, 2500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ.

author-image
Chandramohan
KSRTC

ದೀಪಾವಳಿ ಹಬ್ಬಕ್ಕೆ 2500 ಹೆಚ್ಚುವರಿ ಬಸ್ ವ್ಯವಸ್ಥೆ

Advertisment
  • ದೀಪಾವಳಿ ಹಬ್ಬಕ್ಕೆ 2500 ಹೆಚ್ಚುವರಿ ಬಸ್ ವ್ಯವಸ್ಥೆ
  • ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ಬಸ್ ಗಳ ಸಂಚಾರ
  • ಕೆಎಸ್‌ಆರ್‌ಟಿಸಿ ಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ
  • ಹಬ್ಬ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಬರಲು ಕೂಡ ಬಸ್ ವ್ಯವಸ್ಥೆ

KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.  ದೀಪಾವಳಿ ಹಬ್ಬಕ್ಕೆ 2500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ.  ಅಕ್ಟೋಬರ್  17 ರಿಂದ 20 ರವರೆಗೆ ರಾಜ್ಯಾದ್ಯಂತ ಹೆಚ್ಚುವರಿ ಬಸ್ ಗಳು ಕಾರ್ಯಾಚರಣೆ  ಮಾಡಲಿವೆ.  ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್ ನಿಂದ ರಾಜ್ಯದ ವಿವಿಧ ಭಾಗಗಳಿಗೆ ವಿಶೇಷ ಬಸ್‌ಗಳ ಸಂಚಾರ ಮಾಡಲಿವೆ.  KSRTC ಸಾಮಾನ್ಯ ಸಾರಿಗೆ, ಐರಾವತ, ಸ್ಲೀಪರ್ ಕೋಚ್ ಸೇರಿ ಎಲ್ಲಾ ಐಷಾರಾಮಿ ಬಸ್ ಗಳು ಪ್ರಯಾಣಿಕರ ಸೌಲಭ್ಯಕ್ಕಾಗಿ ಲಭ್ಯ ಇವೆ.  ಹಬ್ಬಕ್ಕಾಗಿ ಊರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ KSRTC ಈ  ಕ್ರಮ ತೆಗೆದುಕೊಂಡಿದೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ಸೇವೆಯನ್ನು   KSRTC ಕಲ್ಪಿಸುತ್ತಿದೆ. ಮೆಜೆಸ್ಟಿಕ್, ಶಾಂತಿನಗರ,  ಮೈಸೂರು ರಸ್ತೆಯ  ಸ್ಯಾಟಲೈಟ್ ಬಸ್ ನಿಲ್ದಾಣ, ಪೀಣ್ಯ ಬಸ್ ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆ ಮಾಡಲಿವೆ. 

Advertisment

ಹಬ್ಬ ಮುಗಿದ ಬಳಿಕವೂ ವಿಶೇಷ ಬಸ್ ಗಳ ಕಾರ್ಯಾಚರಣೆ ಮುಂದುವರಿಯಲಿದೆ.  ಸೆಪ್ಟೆಂಬರ್‌ 22 ಹಾಗೂ 26 ರಂದು ವಾಪಸ್ ಬರುವ ಪ್ರಯಾಣಿಕರಿಗೂ KSRTC ಸೇವೆ ಲಭ್ಯವಿದೆ.  ರಾಜ್ಯ ಹಾಗೂ ಅಂತರ್ ರಾಜ್ಯದಿಂದಲೂ KSRTC ಬಸ್ ಗಳು ಲಭ್ಯ ಇವೆ.  ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ಹೊರಡಿಸಿದೆ. 

ಎಲ್ಲಿಂದ ಎಲ್ಲಿಗೆ
1.ಮೆಜೆಸ್ಟಿಕ್

ಮೆಜೆಸ್ಟಿಕ್ to ಧರ್ಮಸ್ಥಳ, ಶೃಂಗೇರಿ, ಹೊರನಾಡು,  ಮಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಗೋಕರ್ಣ, ಕಾರವಾರ ಭಾಗ

ಮೆಜೆಸ್ಟಿಕ್ to ಉತ್ತರ ಕರ್ನಾಟಕದ ಹುಬ್ಬಳಿ,ಬೆಳಗಾವಿ, ದಾರವಾಡ, ವಿಜಯಪುರ,ಯಾದಗಿರಿ ಸೇರಿ ಇತರೆಡೆ

Advertisment

ಮೆಜೆಸ್ಟಿಕ್ To ತಿರುಪತಿ, ವಿಜಯವಾಡ, ಹೈದರಾಬಾದ್ ಕಡೆಗೆ ಬಸ್ ಗಳು ಲಭ್ಯ
2.ಸ್ಯಾಟಲೈಟ್ ಬಸ್ ನಿಲ್ದಾಣ

ಮೈಸೂರು ಭಾಗದ ಎಲ್ಲಾ ಕಡೆ ಬಸ್ ಗಳ ಕಾರ್ಯಾಚರಣೆ

ಮಂಡ್ಯ,ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು,ವೀರಾಜಪೇಟೆ, ಪಿರಿಯಾಪಟ್ಟಣಕ್ಕೆ ಬಸ್ ಗಳು ಲಭ್ಯಇವೆ. 

3. ಶಾಂತಿನಗರ ಬಸ್ ನಿಲ್ದಾಣ

ತಮಿಳುಳುನಾಡು ಮತ್ತು ಕೇರಳ ಕಡೆಗೆ 

ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, 

Advertisment

ಕೋಯಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆ ಬಸ್ ಗಳು ಲಭ್ಯ

ಪ್ರಯಾಣಿಕರು ಮುಂಚಿತವಾಗಿ  ಸೀಟ್ ಬುಕ್ ಮಾಡಿದ್ರೆ 5% ರಿಯಾಯ್ತಿ ಆಫರ್ ಕೂಡ ಇದೆ. 

ಎರಡೂ ಬದಿಯ ಮುಂಗಡ ಟಿಕೆಟ್ ಬುಕ್ ಮಾಡಿದ್ರೆ 10% ರಿಯಾಯಿತಿ ಆಫರ್ ಕೂಡ ಇದೆ. 

www.ksrtc.Karnataka.gov.in ವೆಬ್ ಸೈಟ್ ನಲ್ಲಿ ಬಸ್ ಬುಕ್ ಮಾಡಲು ಅವಕಾಶ ಇದೆ. 

ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್​​ನ್ಯೂಸ್​​.. 9000 ಹುದ್ದೆಗಳಿಗೆ ನೇಮಕಾತಿ..!




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

KSRTC ADDITIONAL BUSES FOR DEEPAVALI FESTIVAL
Advertisment
Advertisment
Advertisment