ಈ ಯೋಜನೆಗಳನ್ನು ಪಡೆಯಬೇಕು ಎಂದರೆ ವಾಹನಗಳ ಚಾಲಕರು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ವಾಣಿಜ್ಯ ವಾಹನ ಚಲಾಯಿಸಲು ಮಾನ್ಯವಾದ ಪರವಾನಗಿ (ಲೈಸೆನ್ಸ್​) ಹೊಂದಿರಲೇಬೇಕು. ನಿರ್ವಾಹಕರು ಹಾಗೂ ಕ್ಲೀನರ್​ಗಳು ಅಧಿಸೂಚಿಸಲ್ಪಟ್ಟ ಆಯಾ ಜಿಲ್ಲೆಯ ನೋಂದಣಿ ಅಧಿಕಾರಿಯಿಂದ ಯೋಜನೆಯಡಿ ಫಲಾನುಭವಿಯಾಗಿ ನೋಂದಣಿ ಮಾಡಿಸಬೇಕು.
ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್​ಗಳು ಅಪಘಾತದಿಂದ ಮೃತಪಟ್ಟರೇ ಅವರ ನಾಮ ನಿರ್ದೇಶಿತರಿಗೆ 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತದೆ. ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್​ಗಳು ಅಪಘಾತದಿಂದ ಶಾಶ್ವತ ದುರ್ಬಲರಾದರೆ ಗರಿಷ್ಠ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ