Advertisment

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ : ನಟ ಪ್ರಕಾಶ್ ರಾಜ್‌ ಸೇರಿ 70 ಮಂದಿಗೆ ಪ್ರಶಸ್ತಿ ಘೋಷಣೆ, ಯಾಱರಿಗೆ ಪ್ರಶಸ್ತಿ ಸಿಕ್ತು ಗೊತ್ತಾ?

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಈ ಭಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿದ್ದಾರೆ. 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ನಟ ಪ್ರಕಾಶ ರಾಜ್ , ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

author-image
Chandramohan
kannada rajyosatva awardees

ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮಿ ಸಿಂಗ್, ಸಾಹಿತಿ ರಾಜೇಂದ್ರ ಚೆನ್ನಿಗೆ ಪ್ರಶಸ್ತಿ ಘೋಷಣೆ

Advertisment

ಕರ್ನಾಟಕ ರಾಜ್ಯ ಸರ್ಕಾರ ಈ ಭಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. 

Advertisment

ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಈ ಪೈಕಿ‌ ಕೆಲವರು ಸ್ವಯಂ ಮನವಿ ನೀಡಿದ್ರು, ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ‌‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ‌‌ ಆಯ್ಕೆ ಮಾಡಲಾಗಿದ್ದು,‌ ನಾಲ್ಕೈದು‌ ಬಾರಿ‌ ಸಭೆ ನಡೆಸಿದ ಸದಸ್ಯರು ಅರ್ಹರನ್ನು ‌ಆಯ್ಕೆ ಮಾಡಲು ಸಹಕರಿಸಿದ್ದಕ್ಕೆ‌ ಧನ್ಯವಾದಗಳನ್ನು ಈ‌ ಮೂಲಕ‌ ತಿಳಿಸುತ್ತೇನೆ.‌

ಪ್ರಶಸ್ತಿ ನೀಡಿಕೆ‌ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ  ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisment

ಮೊದಲೇ ನಿರ್ಧರಿಸಿದಂತೆ‌ ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 12 ಮಂದಿ‌ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ‌‌ ಮಾಡಲಾಗಿದೆ.‌

ಸಾಹಿತ್ಯ
ಪ್ರೊ. ರಾಜೇಂದ್ರ ಚೆನ್ನಿ    ಶಿವಮೊಗ್ಗ
ಶ್ರೀ ತುಂಬಾಡಿ ರಾಮಯ್ಯ    ತುಮಕೂರು
ಪ್ರೊ ಅರ್ ಸುನಂದಮ್ಮ     ಚಿಕ್ಕಬಳ್ಳಾಪುರ
ಡಾ.ಎಚ್.ಎಲ್ ಪುಷ್ಪ     ತುಮಕೂರು
ಶ್ರೀ ರಹಮತ್ ತರೀಕೆರೆ    ಚಿಕ್ಕಮಗಳೂರು
ಶ್ರೀ ಹ.ಮ. ಪೂಜಾರ    ವಿಜಯಪುರ

ಜಾನಪದ
ಶ್ರೀ ಬಸಪ್ಪ ಭರಮಪ್ಪ ಚೌಡ್ಕಿ 
ಕೊಪ್ಪಳ
ಶ್ರೀ ಬಿ. ಟಾಕಪ್ಪ ಕಣ್ಣೂರು 
ಶಿವಮೊಗ್ಗ
ಶ್ರೀ ಸನ್ನಿಂಗಪ್ಪ  ಸತ್ತೆಪ್ಪ ಮುಶೆನ್ನಗೋಳ
ಬೆಳಗಾವಿ
ಶ್ರೀ ಹನುಮಂತಪ್ಪ, ಮಾರಪ್ಪ, ಚೀಳಂಗಿ 
ಚಿತ್ರದುರ್ಗ
ಶ್ರೀ ಎಂ. ತೋಪಣ್ಣ
ಕೋಲಾರ
ಶ್ರೀ ಸೋಮಣ್ಣ ದುಂಡಪ್ಪ ಧನಗೊಂಡ
ವಿಜಯಪುರ
ಶ್ರೀಮತಿ ಸಿಂಧು ಗುಜರನ್
ದಕ್ಷಿಣ ಕನ್ನಡ
ಶ್ರೀ ಎಲ್. ಮಹದೇವಪ್ಪ ಉಡಿಗಾಲ
ಮೈಸೂರು

Advertisment

ಸಂಗೀತ
ಶ್ರೀ ದೇವೆಂದ್ರಕುಮಾರ ಪತ್ತಾರ್
ಕೊಪ್ಪಳ
ಶ್ರೀ ಮಡಿವಾಳಯ್ಯ ಸಾಲಿ
ಬೀದರ್
ನೃತ್ಯ 
ಪ್ರೊ. ಕೆ. ರಾಮಮೂರ್ತಿ ರಾವ್
ಮೈಸೂರು

ಚಲನಚಿತ್ರ /ಕಿರುತೆರೆ
ಶ್ರೀ ಪ್ರಕಾಶ್ ರಾಜ್
ದಕ್ಷಿಣ ಕನ್ನಡ
ಶ್ರೀಮತಿ ವಿಜಯಲಕ್ಷ್ಮೀ ಸಿಂಗ್
ಕೊಡಗು

ಆಡಳಿತ
ಶ್ರೀ ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) 
ಬೆಂಗಳೂರು ದಕ್ಷಿಣ (ರಾಮನಗರ)

 ಆಡಳಿತ
ಶ್ರೀ ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) 
ಬೆಂಗಳೂರು ದಕ್ಷಿಣ (ರಾಮನಗರ) 
ವೈದ್ಯಕೀಯ
ಡಾ. ಆಲಮ್ಮ ಮಾರಣ್ಣ 
ತುಮಕೂರು
ಡಾ. ಜಯರಂಗನಾಥ್ 
ಬೆಂಗಳೂರು ಗ್ರಾಮಾಂತರ

Advertisment

ಸಮಾಜ ಸೇವೆ
ಶ್ರೀಮತಿ ಸೂಲಗಿತ್ತಿ ಈರಮ್ಮ 
ವಿಜಯನಗರ
ಶ್ರೀಮತಿ ಫಕ್ಕೀರಿ
ಬೆಂಗಳೂರು ಗ್ರಾಮಾಂತರ 
ಶ್ರೀಮತಿ ಕೋರಿನ್ ಆಂಟೊನಿಯಟ್ ರಸ್ಕೀನಾ
ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ
ಉಡುಪಿ 
ಶ್ರೀ ಕೋಣಂದೂರು ಲಿಂಗಪ್ಪ 
ಶಿವಮೊಗ್ಗ

ಶ್ರೀ ಉಮೇಶ ಪಂಬದ    ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್    ಧಾರವಾಡ
ಶ್ರೀ ಕೆ.ದಿನೇಶ್    ಬೆಂಗಳೂರು
ಶ್ರೀ ಶಾಂತರಾಜು     ತುಮಕೂರು 
ಶ್ರೀ ಜಾಫರ್ ಮೊಹಿಯುದ್ದೀನ್    ರಾಯಚೂರು
ಶ್ರೀ ಪೆನ್ನ ಓಬಳಯ್ಯ      ಬೆಂಗಳೂರು ಗ್ರಾಮಾಂತರ 
ಶ್ರೀ ಶಾಂತಿ ಬಾಯಿ    ಬಳ್ಳಾರಿ 
ಶ್ರೀ ಪುಂಡಲೀಕ ಶಾಸ್ತ್ರೀ(ಬುಡಬುಡಕೆ)    ಬೆಳಗಾವಿ

ಹೊರನಾಡು/ ಹೊರದೇಶ
ಶ್ರೀ ಜಕರಿಯ ಬಜಪೆ (ಸೌದಿ)
ಹೊರನಾಡು/ ಹೊರದೇಶ
ಶ್ರೀ ಪಿ ವಿ ಶೆಟ್ಟಿ (ಮುಂಬೈ)
ಹೊರನಾಡು/ ಹೊರದೇಶ

Advertisment

ಪರಿಸರ
ಶ್ರೀ ರಾಮೇಗೌಡ
ಚಾಮರಾಜನಗರ
ಶ್ರೀ ಮಲ್ಲಿಕಾರ್ಜುನ ನಿಂಗಪ್ಪ
ಯಾದಗಿರಿ

ಕೃಷಿ
ಡಾ.ಎಸ್.ವಿ.ಹಿತ್ತಲಮನಿ
ಹಾವೇರಿ
ಶ್ರೀ ಎಂ ಸಿ ರಂಗಸ್ವಾಮಿ
ಹಾಸನ

ಮಾಧ್ಯಮ
ಶ್ರೀ ಕೆ.ಸುಬ್ರಮಣ್ಯ 
ಬೆಂಗಳೂರು 
ಶ್ರೀ ಅಂಶಿ ಪ್ರಸನ್ನಕುಮಾರ್
ಮೈಸೂರು
ಶ್ರೀ ಬಿ.ಎಂ ಹನೀಫ್
ದಕ್ಷಿಣ ಕನ್ನಡ
ಶ್ರೀ ಎಂ ಸಿದ್ಧರಾಜು
ಮಂಡ್ಯ
ಶ್ರೀ ರಾಮಯ್ಯ     ಚಿಕ್ಕಬಳ್ಳಾಪುರ
ಶ್ರೀ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್    ದಾವಣಗೆರೆ
ಡಾ. ಆರ್. ವಿ ನಾಡಗೌಡ     ಗದಗ


ಸಹಕಾರ
ಶ್ರೀ ಶೇಖರಗೌಡ ವಿ ಮಾಲಿಪಾಟೀಲ್ 
ಕೊಪ್ಪಳ

 ಯಕ್ಷಗಾನ
ಶ್ರೀ ಕೋಟ ಸುರೇಶ ಬಂಗೇರ
ಉಡುಪಿ 
ಶ್ರೀ ಐರಬೈಲ್‌ಆನಂದ ಶೆಟ್ಟಿ
ಉಡುಪಿ 
ಶ್ರೀ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)
ಉತ್ತರ ಕನ್ನಡ

ಬಯಲಾಟ
ಶ್ರೀ ಗುಂಡೂರಾಜ್
ಹಾಸನ

ರಂಗಭೂಮಿ 
ಶ್ರೀ ಹೆಚ್.ಎಂ. ಪರಮಶಿವಯ್ಯ
ಬೆಂಗಳೂರು ದಕ್ಷಿಣ (ರಾಮನಗರ) 
ಶ್ರೀ ಎಲ್.ಬಿ.ಶೇಖ್ (ಮಾಸ್ತರ್)
ವಿಜಯಪುರ
ಶ್ರೀ ಬಂಗಾರಪ್ಪ ಖುದಾನ್‌ಪುರ
ಬೆಂಗಳೂರು
ಶ್ರೀ ಮೈಮ್ ರಮೇಶ್
ದಕ್ಷಿಣ ಕನ್ನಡ
ಶ್ರೀಮತಿ ಡಿ.ರತ್ನಮ್ಮ ದೇಸಾಯಿ 
ರಾಯಚೂರು

ಶಿಕ್ಷಣ 
ಡಾ. ಎಂ.ಆರ್. ಜಯರಾಮ್
ಬೆಂಗಳೂರು
ಡಾ. ಎನ್ ಎಸ್ ರಾಮೇಗೌಡ
ಮೈಸೂರು 
ಶ್ರೀ. ಎಸ್. ಬಿ. ಹೊಸಮನಿ
ಕಲಬುರಗಿ
ಶ್ರೀಮತಿ ರಾಜ್ ಶ್ರೀ ನಾಗರಾಜು
ಬೆಳಗಾವಿ

ಕ್ರೀಡೆ
ಶ್ರೀ ಆಶೀಶ್ ಕುಮಾರ್ ಬಲ್ಲಾಳ್
ಬೆಂಗಳೂರು 
ಶ್ರೀ ಎಂ ಯೋಗೇಂದ್ರ
ಮೈಸೂರು
ಡಾ. ಬಬಿನಾ ಎನ್.ಎಂ (ಯೋಗ)
ಕೊಡಗು

ನ್ಯಾಯಾಂಗ 
ನ್ಯಾ. ಶ್ರೀ ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ )
ಬಾಗಲಕೋಟೆ

 ಶಿಲ್ಪಕಲೆ
ಶ್ರೀ ಬಸಣ್ಣ ಮೋನಪ್ಪ ಬಡಿಗೇರ
ಯಾದಗಿರಿ
ಶ್ರೀ ನಾಗಲಿಂಗಪ್ಪ ಜಿ ಗಂಗೂರ 
ಬಾಗಲಕೋಟೆ

ಚಿತ್ರಕಲೆ
ಶ್ರೀ ಬಿ. ಮಾರುತಿ
ವಿಜಯನಗರ

 ಕರಕುಶಲ
ಶ್ರೀಮತಿ ಎಲ್. ಹೇಮಾಶೇಖರ್
ಮೈಸೂರು

kannada rajyosatva awardees02

ಡಾ.ಎಂ.ಆರ್.ಜಯರಾಮ, ಡಾ. ಎನ್‌.ಎಸ್.ರಾಮೇಗೌಡ, ಡಾ.ರಹಮತ್ ತರೀಕೆರೆ, ಸಿದ್ದಯ್ಯಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ. 




ಪ್ರಶಸ್ತಿಯು  5 ಲಕ್ಷ ನಗದು, 25ಗ್ರಾಂ ಚಿನ್ನದ ಪದಕ  ಪ್ರಶಸ್ತಿ ಫಲಕವನ್ನು   ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡಿದೆ. 
ನವಂಬರ್ 1 ರ  ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 

ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಿಎಂ ಜೊತೆ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಟ ವಿಷ್ಣುವರ್ಧನ್, ನಟಿ ಸರೋಜಾದೇವಿ  ಅವರಿಗೆ ರಾಜ್ಯ ಸರ್ಕಾರ ಈಗಾಗಲೇ 2025ರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada rajyosatva awards 2025
Advertisment
Advertisment
Advertisment