‘ಹೇಗಿದ್ದೀರಾ ಸರ್..’ ಅರೆಸ್ಟ್ ವೇಳೆ ದರ್ಶನ್ ಏನ್ಮಾಡಿದರು? ಬಂಧನ​ ಪ್ರಕ್ರಿಯೆ ಹೇಗಿತ್ತು?

ನಟ ದರ್ಶನ್ (Actor Darshan) ಅವರು ಮತ್ತೆ ಅರೆಸ್ಟ್ ಆಗಿದ್ದಾರೆ. ಮೂರನೇ ಬಾರಿಗೆ ಬಂಧನಕ್ಕೆ ಒಳಗಾಗಿರುವ ದರ್ಶನ್ ಅವರನ್ನು ಇವತ್ತು ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ನಿವಾಸದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

author-image
Ganesh Kerekuli
Darshan pavitra gowda (2)
Advertisment

ನಟ ದರ್ಶನ್ (Actor Darshan) ಅವರು ಮತ್ತೆ ಅರೆಸ್ಟ್ ಆಗಿದ್ದಾರೆ. ಮೂರನೇ ಬಾರಿಗೆ ಬಂಧನಕ್ಕೆ ಒಳಗಾಗಿರುವ ದರ್ಶನ್ ಅವರನ್ನು ಇವತ್ತು ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ನಿವಾಸದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. 

ಬಂಧನದ ಪ್ರಕ್ರಿಯೆ ಹೇಗಿತ್ತು..? 

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರೆ 7 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್​ ತೀರ್ಪು ನೀಡಿದ್ದು ನಟ ದರ್ಶನ್​, ಪವಿತ್ರಾ ಗೌಡ ಹಾಗೂ 7 ಆರೋಪಿಗಳ ಜಾಮೀನು ಅನ್ನು ರದ್ದು ಮಾಡಿದೆ. ಅಂತೆಯೇ ಇವತ್ತು ದರ್ಶನ್ ಅಂಡ್ ಗ್ಯಾಂಗ್​ ಪೊಲೀಸರಿಗೆ ಶರಣಾಗಬೇಕಿತ್ತು. 

ಮಧ್ಯಾಹ್ನ 3.30 ರ ಸುಮಾರಿಗೆ ದರ್ಶನ್, ನಟ ಧನ್ವೀರ್ ಜೊತೆ ವಿಜಯಲಕ್ಷ್ಮೀ ಫ್ಲ್ಯಾಟ್​ಗೆ ಬಂದಿದ್ದರು. ಈ ವೇಳೆ ಅರೆಸ್ಟ್ ವಾರೆಂಟ್ ತೋರಿಸಿ ದರ್ಶನ್​​ರನ್ನು ಬಂಧಿಸಲಾಗಿದೆ. ಕಾಮಾಕ್ಷ್ಮೀ ಪಾಳ್ಯ ಪೊಲೀಸರು ಅರೆಸ್ಟ್​ ಮಾಡಿ, ಬಂಧನದ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಿದ್ದಾರೆ.

ಇದನ್ನೂ ಓದಿ: ದರ್ಶನ್​​ ಜಾಮೀನು ರದ್ದು ಆಗ್ತಿದ್ದಂತೆ ಕಣ್ಣೀರಿಟ್ಟ ಪತ್ನಿ ವಿಜಯಲಕ್ಷ್ಮೀ..

Darshan pavitra

ಬಂಧನದ ಬಳಿಕ ದರ್ಶನ್ ಕುಟುಂಬದ ಓರ್ವ ಸದಸ್ಯರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ದರ್ಶನ್ ಬಂಧನದ ವೇಳೆ ಅಭಿಮಾನಿಗಳು ನಿವಾಸದ ಮುಂದೆ ಜಮಾಯಿಸಿದ್ದರು. ನೂಕು, ನುಗ್ಗಲು ತಪ್ಪಿಸುವ ಉದ್ದೇಶದಿಂದ ಕಾಮಾಕ್ಷಿ ಠಾಣೆ ಪೊಲೀಸರು ಕ್ರಮ ತೆಗೆದುಕೊಂಡು, ದರ್ಶನ್ ಅಭಿಮಾನಿಗಳನ್ನು ಅಲ್ಲಿಂದ ಚದುರಿಸಿದ್ದಾರೆ. 

ದರ್ಶನ್ ಮಾಡಿದ್ದೇನು..? 

ಈ ಬಾರಿ ಬಂಧನದ ವೇಳೆ ದರ್ಶನ್ ನಗು ಮುಖದಲ್ಲೇ ಪೊಲೀಸ್ರ ಮುಂದೆ ಬಾಗಿದ್ದಾರೆ. ಪೊಲೀಸರನ್ನು ಕಂಡು ಸೆಲ್ಯೂಟ್ ಹೊಡೆದಿದ್ದಾರೆ. ಇನ್​ಸ್ಪೆಕ್ಟರ್​​ಗಳನ್ನು ಕಂಡು ಹೇಗಿದ್ದೀರಾ ಸರ್ ಎಂದು ಮಾತನ್ನಾಡಿಸಿದ್ದಾರೆ. ಎಲ್ಲಾ ಪ್ರೊಸಿಜರ್ ಮುಗಿದ ಬಳಿಕ ನಗುಮುಖದಲ್ಲೇ ಪೊಲೀಸ್ರ ಜೊತೆ ಹೆಜ್ಜೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ:Breaking ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಮತ್ತೆ ಅರೆಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Pavitra Gowda AnuKumar Darshan bail cancelled
Advertisment