Advertisment

ಚಿತ್ತಾಪುರ ಆರ್‌ಎಸ್ಎಸ್ ಪಥ ಸಂಚಲನ ವಿವಾದ: ಎಲ್ಲರಿಗೂ ಪ್ರತೇಕ ದಿನ ಮೆರವಣಿಗೆಗೆ ಅವಕಾಶ ಕೊಡುತ್ತೇವೆ ಎಂದ ಸರ್ಕಾರ

ಕಲ್ಬುರ್ಗಿಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ ವಿವಾದದ ಬಗ್ಗೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. 11 ಅರ್ಜಿಗಳು ಅನುಮತಿಗಾಗಿ ಬಂದಿವೆ. ಎಲ್ಲರಿಗೂ ಪ್ರತೇಕ ದಿನದಂದು ಪಥಸಂಚಲನ, ಮೆರವಣಿಗೆಗೆ ಅವಕಾಶ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ, ಹೈಕೋರ್ಟ್ ಗೆ ತಿಳಿಸಿದೆ.

author-image
Chandramohan
PRIYANK_KHARGE_RSS

ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ ವಿವಾದ

Advertisment
  • ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ ವಿವಾದ
  • ಎಲ್ಲರಿಗೂ ಪ್ರತೇಕ ದಿನ ಅನುಮತಿ ನೀಡುತ್ತೇವೆ ಎಂದ ರಾಜ್ಯ ಸರ್ಕಾರ
  • ಸರ್ಕಾರ ಅನುಮತಿ ಕೊಡದೇ ಇದ್ದರೇ, ನಾವು ಅನುಮತಿ ನೀಡುತ್ತೇವೆ ಎಂದ ಹೈಕೋರ್ಟ್

ಕಲ್ಬುರ್ಗಿಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥ ಸಂಚಲನ ವಿವಾದದ ಬಗ್ಗೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ಮುಂದುವರಿಯಿತು. 
ಈ ವೇಳೆ ಮೊನ್ನೆ ದಿನ ಬೆಂಗಳೂರಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ನಡೆದ ಶಾಂತಿ ಸಭೆಯ ವಿವರಗಳನ್ನು ಅಡ್ವೋಕೇಟ್ ಜನರಲ್ , ಹೈಕೋರ್ಟ್ ಗಮನಕ್ಕೆ ತಂದರು. 
ಈ ವೇಳೆ ವಾದಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ,  ಜಿಲ್ಲಾಡಳಿತಕ್ಕೆ ಸಾಕಷ್ಟು ಅರ್ಜಿಗಳು ಅನುಮತಿಗಾಗಿ ಬಂದಿವೆ.  ಎಲ್ಲರಿಗೂ ಬೇರೆ ಬೇರೆ ದಿನಾಂಕದಂದು ಮಾಡಲು ಪರವಾನಿಗೆ ಕೊಡುತ್ತೇವೆ.  ಅದಕ್ಕೆ ನಮಗೆ ಒಂದು ವಾರ ಸಮಯ ಬೇಕು ಎಂದು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಗೆ ತಿಳಿಸಿದ್ದಾರೆ. 
ಇನ್ನೂ  ಎಜಿ ನೇತೃತ್ವದ ಮೀಟಿಂಗ್ ಬಗ್ಗೆ  ಆರ್‌ಎಸ್ಎಸ್ ಪರ ವಕೀಲ ಅರುಣ್ ಶ್ಯಾಮ್ ಕೂಡ ಹೈಕೋರ್ಟ್ ಗಮನಕ್ಕೆ ತಂದರು. 
ಹನ್ನೊಂದು ಅರ್ಜಿಗಳು ಬಂದಿವೆ.  ಯಾರೆಲ್ಲ ಅರ್ಜಿ ಹಾಕಿದ್ದಾರೆ ಅವರಿಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡ್ತೇವೆ. ಒಂದು ವಾರದಲ್ಲಿ ಎಲ್ಲರಿಗೂ ಪ್ರತ್ಯೇಕ ದಿನಾಂಕ ನಿಗದಿ ಮಾಡ್ತೇವೆ  ಎಂದು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಗೆ ತಿಳಿಸಿದ್ದಾರೆ.  
ಆರ್‌ಎಸ್ಎಸ್ ಪರ  ವಕೀಲ ಅರುಣ್ ಶ್ಯಾಮ್   ನವೆಂಬರ್ 13 ಅಥವಾ 16 ರಂದು ಪಥ ಸಂಚಲನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.  ಚೌಟರಿ ಬುಕ್ ಮಾಡೋದಕ್ಕೆ ಅನುಕೂಲ ಆಗುತ್ತೆ ಎಂದು ವಕೀಲ ಅರುಣ್ ಶಾಮ್ ಹೈಕೋರ್ಟ್ ನಲ್ಲಿ ವಾದಿಸಿದ್ದರು

Advertisment

ಕನ್ನಡಿಗರಿಗೆ ಸೆಡ್ಡು.. ಥಗ್ ಲೈಫ್ ಬಿಡುಗಡೆಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಟ ಕಮಲ್ ಹಾಸನ್!

ನವೆಂಬರ್ 13 ರಂದು ದಿನಾಂಕ ನಿಗದಿ ಬಗ್ಗೆ ವರದಿ ನೀಡುವಂತೆ ನ್ಯಾಯಾಧೀಶರಾದ ಕಮಲ್ ಸೂಚನೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ದಿನಾಂಕ ನಿಗದಿ ಮಾಡದೇ ಹೋದ್ರೆ ಕೋರ್ಟ್ ನಿಂದ ಅನುಮತಿ ಕೊಡಲಾಗುವುದು‌‌ ಎಂದು ಹೈಕೋರ್ಟ್ ಹೇಳಿದೆ.  ವಿಚಾರಣೆಯನ್ನು  ಮತ್ತೆ  ನವೆಂಬರ್ 13 ಕ್ಕೆ  ನ್ಯಾ. ಎಂಜಿಎಸ್ ಕಮಲ್ ಮುಂದೂಡಿದ್ದಾರೆ. 

RSS

RSS ROUTE MARCH IN CHITTAPURA
Advertisment
Advertisment
Advertisment