/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಈ ದಿನ ಕೆಲವು ಕೆಲಸಗಳು ಬೇಸರದಿಂದ ಮುಕ್ತಾಯವಾಗಬಹುದು
- ಸಹೋದ್ಯೋಗಿಗಳು,ಮಿತ್ರರು,ಬಂಧುಗಳು ನಿಮ್ಮ ವರ್ತನೆಯಲ್ಲಿ ತಪ್ಪು ಹುಡುಕುತ್ತಾರೆ
- ಸಣ್ಣ ಸಣ್ಣ ವಿಷಯಗಳಿಗೆ ಮಿತಿ ಮೀರಿ ಮಾತಾಡಬಾರದು
- ಕೆಲವು ಕಾನೂನು ತೊಡಕುಗಳು ನಿಮ್ಮ ನೌಕರಿಯಲ್ಲಿ ಎದುರಾಗಬಹುದು
- ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ
- ಕೆಲವು ಕಾನೂನು ತೊಡಕುಗಳು ನಿಮ್ಮ ನೌಕರಿಯಲ್ಲಿ ಎದುರಾಗಬಹುದು
- ಬೆನ್ನಿನ ಮೂಳೆಗೆ ತೊಂದರೆ ಆಗಬಹುದು ವೈದ್ಯರ ಸಲಹೆ ಪಡೆಯಿರಿ
- ಅಂದುಕೊಂಡ ಕಾರ್ಯವನ್ನು ಮೇಲ್ದರ್ಜೆಗೆ ಏರಿಸಿ ಅದಕ್ಕೆ ಆದ್ಯತೆ ಕೊಡುತ್ತೀರಿ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಷಭ
- ನಿರೀಕ್ಷಿತ ಕೆಲಸದ ವಿರುದ್ಧವಾಗಿ ಅಸಮಾಧಾನವಾಗುತ್ತದೆ
- ನಿಮ್ಮ ಆಸೆಗಳಿಗೆ ಹಿನ್ನಡೆ ಆಗಬಹುದು
- ಉತ್ತಮ ಅಧಿಕಾರಿಗಳು ನಿಮ್ಮ ಮೇಲೆ ಸಿಡಿದೇಳಬಹುದು
- ಪ್ರಯಾಣ, ಪ್ರವಾಸಗಳು ರದ್ದಾಗವುದರಿಂದ ಮಾನಸಿಕ ಬೇಸರ ಕಾಡಬಹುದು
- ಇತರರನ್ನು ಅವಲಂಬಿಸಿ ಕೆಲಸಗಳನ್ನು ಮಾಡಬೇಕಾದ ಸಂದರ್ಭಗಳು ಹೆಚ್ಚಾಗಿ ಕಾಣುತ್ತದೆ
- ದೈನಂದಿನ ಶಿಸ್ತು ಅಸ್ತವ್ಯಸ್ತವಾಗುತ್ತದೆ ಮನಸ್ಸಿನಲ್ಲಿ ಗಾಬರಿ ಉಂಟಾಗಬಹುದು
- ಹಣಗಳಿಸಬೇಕೆಂಬ ಭರದಲ್ಲಿ ತಪ್ಪು ದಾರಿ ಹಿಡಿಯಬಾರದು
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥಿಸಿ
ಮಿಥುನ
- ಮನಸ್ಸು ದಿನಪೂರ್ತಿ ಅಧೈರ್ಯದಿಂದ ಕೆಲಸ ಮಾಡುವ ಸಾಧ್ಯತೆಯಿದೆ
- ಮನೆಯಲ್ಲಿ ಎಲ್ಲವೂ ಶುಭ ಆದರೂ ಮಾನಸಿಕವಾಗಿ ಸಮಾಧಾನವಿರುವುದಿಲ್ಲ
- ಆಸ್ತಿ ಖರೀದಿಸಲು ಸಹಾಯಕವಾದ ಹಣ ಕೈ ಸೇರುತ್ತದೆ
- ವಿದೇಶದಲ್ಲಿರುವವರಿಂದ ಮನೆಗೆ ಶುಭವಾರ್ತೆ ಬರಬಹುದು
- ಪ್ರೇಮಿಗಳಿಗೆ ಶುಭದಿನ, ಸದುಪಯೋಗವಾಗಲಿ
- ಆರ್ಥಿಕವಾಗಿ ಅನುಕೂಲವಾಗುವ ದಿನ
- ಪ್ರಭಾವಿ ವ್ಯಕ್ತಿಗಳ ಭೇಟಿ, ಪರಿಚಯ, ಸಂತೋಷವನ್ನುಂಟು ಮಾಡುತ್ತದೆ
- ಸುಬ್ರಹ್ಮಣ್ಯ ದೇವರನ್ನು ಆರಾಧಿಸಿ
ಕಟಕ
- ಮನೆಗೆ ಬಂದ ಅತಿಥಿಗಳಿಂದ ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಸಾಧ್ಯತೆ
- ವ್ಯವಹಾರದಲ್ಲಿ ಒಪ್ಪಂದಗಳಾಗಬಹುದು ಅಥವಾ ಮಾತುಕತೆಗಳು ನಡೆಯಬಹುದು
- ವಸ್ತುಗಳ ವಿತಕರಿಗೆ ತುಂಬಾ ಲಾಭದ ದಿನ
- ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರು ಸವಾಲುಗಳನ್ನು ಎದುರಿಸಬೇಕಾದ ದಿನ
- ದಾಂಪತ್ಯದಲ್ಲಿ ಕಲಹ, ಅಸಮಾಧಾನ ಉಂಟಾಗಬಹುದು
- ಮಹಾವಿಷ್ಣುವಿನ ಆರಾಧನೆ ಮಾಡಿ
ಸಿಂಹ
- ಈ ದಿನ ಬರೀ ನಕಾರಾತ್ಮಕ ಚಿಂತನೆಗಳು, ವಿಷಯಗಳು ನಿಮ್ಮ ಮುಂದೆ ಬರುವಂತಹದ್ದು
- ಸಂಬಂಧಿಕರು ಮತ್ತು ಸ್ನೇಹಿತರು ದೊಡ್ಡ ಆತಂಕಕ್ಕೆ ಒಳಗಾಗಬಹುದು
- ಇಡೀ ದಿನವನ್ನು ತುಂಬಾ ತಾಳ್ಮೆಯಿಂದ ಕಳೆಯಬೇಕಾಗುತ್ತದೆ
- ದಾಂಪತ್ಯದಲ್ಲಿ ವೈಮನಸ್ಯ ಬರದಂತೆ ನೋಡಿಕೊಳ್ಳಬೇಕು
- ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರಬಹುದು
- ಹಳೆಯ ಲೆಕ್ಕದಿಂದ ಬೇಸರ ಉಂಟಾಗಲಿದೆ
- ಅಷ್ಟಲಕ್ಷ್ಮೀಯನ್ನು ಆರಾಧಿಸಿ
ಕನ್ಯಾ
- ಸಾಯಂಕಾಲಕ್ಕೆ ನಿಮ್ಮ ಅದೃಷ್ಟ ವಿರುದ್ಧ ಅನಿಸುತ್ತದೆ
- ಪ್ರೇಮಿಗಳಿಗೆ ಅಡ್ಡಿ ಆಗುವ ದಿನ, ಸವಾಲುಗಳನ್ನು ಎದುರಿಸಬೇಕಾಗುತ್ತದೆ
- ಕಾರ್ಯಕ್ಷೇತ್ರದಲ್ಲಿ ಸಿಹಿ ಸುದ್ದಿ ಇರುತ್ತದೆ, ಅನುಭವಿಸಲು ಯೋಗವಿಲ್ಲ
- ಆರ್ಥಿಕವಾದ ಸ್ಥಿತಿ ಅಥವಾ ಬಂಧುಗಳ ವಿಶ್ವಾಸ ಸಮಾಧಾನ ಕೊಡುವ ದಿನ
- ಕುಟುಂಬದಲ್ಲಿ ನಂಬಿಕೆ ಕಡಿಮೆಯಾಗಬಹುದು
- ಅಲ್ಪ ಸ್ವಲ್ಪ ಕೂಡಿಟ್ಟ ಹಣ ಔಷಧಿಗಳಿಗೆ ಖರ್ಚಾಗಬಹುದು
- ಕುಬೇರನನ್ನು ಪ್ರಾರ್ಥಿಸಿ
ತುಲಾ
- ಮಹಿಳೆಯರಿಗೆ ಆರೋಗ್ಯದ ಆತಂಕ ಕಾಡಬಹುದು ಎಚ್ಚರಿಕೆವಹಿಸಿ
- ನಿಮ್ಮ ಸಹಾಯಕ್ಕೆ ಯಾರು ಆಗುವುದಿಲ್ಲ ಎಂಬ ಮನೋಭಾವನೆ ಕಾಡುತ್ತದೆ
- ಕಷ್ಟ ಪಟ್ಟು ಮಾಡಿದ ಕೆಲಸ, ಹಿಂದೆ ಮಾಡಿದ ಉದ್ಯೋಗ ನೆನಪಾಗಿ ನೋವನ್ನು ಅನುಭವಿಸುತ್ತೀರಿ
- ಕುಟುಂಬದ ಎಲ್ಲಾ ಸದಸ್ಯರು ಕೂಡ ಸಂತೋಷವಾಗಿರುವ ದಿನ
- ಧನಾತ್ಮಕವಾದ ಚಿಂತನೆಗಳು ನಿಮ್ಮ ಮನಸಿಗೆ ಬರುವುದಿಲ್ಲ
- ಅಧಿಕ ಖರ್ಚು, ಅನಾರೋಗ್ಯವು ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ
- ನಿಮ್ಮ ಕುಲದೇವತೆಯನ್ನು ಆರಾಧಿಸಿ
ವೃಶ್ಚಿಕ
- ನೀವು ಯೋಚಿಸಿದ ಎಲ್ಲಾ ಕೆಲಸಗಳೂ ಪೂರ್ಣಗೊಳ್ಳುತ್ತದೆ
- ಕೆಲಸವನ್ನು ಅಲ್ಪ ಎಂದು ಭಾವಿಸದೆ ಶ್ರದ್ದೆ ಇರಲಿ ತಾತ್ಸಾರ ಬೇಡ
- ನಿಮ್ಮ ನಿರ್ದಿಷ್ಟ ಗುರಿಗಳನ್ನು ತಲುಪಲು ಹಲವು ರೀತಿಯಲ್ಲಿ ಪ್ರಯತ್ನಿಸಿ ವಿಫಲರಾಗುತ್ತೀರಿ
- ಹೊಸ ಹೊಸ ಕೆಲಸವನ್ನು ಆರಂಭ ಮಾಡುವುದಕ್ಕೆ ಅದ್ಭುತವಾದ ದಿನ
- ಕೆಲಸಕ್ಕೆ ಅಥವಾ ಹೆಚ್ಚಿನ ವಿದ್ಯಾಭ್ಯಾಸದ ನಿಮಿತ್ತ ಸಂದರ್ಶನಕ್ಕೆ ಭಾಗಿಯಾದರೆ ಯಶಸ್ಸು ನಿಮ್ಮದಾಗಿರುತ್ತೆ
- ಮುರಿದು ಬಿದ್ದ ಸಂಬಂಧಗಳನ್ನು ಸರಿಪಡಿಸಲು ಉತ್ತಮವಾದ ದಿನ
- ಪ್ರೇಮಿಗಳಿಗೆ ತುಂಬಾ ಅಪಾಯಕರವಾದ ದಿನ
- ಪಾರ್ವತಿ ಪರಮೇಶ್ವರನ್ನ ಆರಾಧನೆ ಮಾಡಿ
ಧನುಸ್ಸು
- ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ದ್ರೋಹ ಮಾಡುವ ಸೂಚನೆ ಇದೆ
- ಆತುರದಿಂದ ಯಾವುದೇ ನಿರ್ಧಾರವನ್ನು ಮಾಡಬಾರದು
- ಸಂಪಾದನೆ ಮಾಡುವ ದೃಷ್ಟಿಯಲ್ಲಿ ಆತ್ಮಸ್ಥೆರ್ಯ ಇದ್ದರೂ ಖರ್ಚನ್ನು ನೋಡಿ ಧೈರ್ಯಗೆಡಬೇಕಾದ
- ಪರಿಸ್ಥಿತಿ ಏರ್ಪಾಟಾಗಬಹುದು
- ಅನಗತ್ಯ ವಿಚಾರಗಳಗೆ ಜಗಳವಾಗುವ ಸಂಭವವೂ ಹೆಚ್ಚಾಗಿರುತ್ತದೆ
- ಕುಟುಂಬದಲ್ಲಿ ಹೆಂಗಸರ ಆರೋಗ್ಯ ಹದಗೆಡಬಹುದು ಎಚ್ಚರಿಕೆ
- ಈಶ್ವರನನ್ನ ಆರಾಧಿಸಿ
ಮಕರ
- ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯತೆಯನ್ನ ಪೂರೈಸುವ ದಿನ
- ಬೆಲೆ ಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ
- ಅನುಭವಿಗಳ ಉಚಿತವಾದ ಸಲಹೆ ಧೈರ್ಯವನ್ನು ತರಬಹುದು
- ಕುಟುಂಬದಲ್ಲಿ ಸಂತಸದ ವಾತಾವರಣ ಇದ್ದರೂ ಸಮಾಧಾನವಿರುವುದಿಲ್ಲ
- ಗುರುವಾರ ತಮ್ಮ ಕರ್ತವ್ಯವನ್ನು ಬಹಳ ನಿಷ್ಠೆಯಿಂದ ಮಾಡುವಂತದ್ದು
- ಉದ್ಯೋಗಿಗಳಿಗೆ ವ್ಯಾವಹಾರಿಕವಾಗಿ ಲಾಭವಿದೆ ಆದರೆ ಪ್ರಾಮಾಣಿಕವಾಗಿರಬೇಕು
- ಸ್ನೇಹಿತರ ಭೇಟಿಯಿಂದ ಮೋಜು, ಮಸ್ತಿಗೆ ಹಣ ಹೆಚ್ಚಾಗಿ ಖರ್ಚು ಮಾಡುತ್ತೀರಿ
- ಮಹಾಲಕ್ಷ್ಮೀಯನ್ನು ತಾವರೆ ಹೂವಿನಿಂದ ಅರ್ಚನೆ ಮಾಡಿ
ಕುಂಭ
- ಈ ದಿನ ಉತ್ತಮವಾಗಿದೆ ಅಂತ ಭಾವಿಸಿ ಕಾರ್ಯಪ್ರವುತ್ತರಾಗಿ ಕೆಲಸದಲ್ಲಿ ಯಶಸ್ಸು ಸಿಗಲಿದೆ
- ಕೆಲಸಗಳಲ್ಲಿ ಸಣ್ಣ ಪುಟ್ಟ ಕಿರಿಕಿರಿ ಕಾಡಬಹುದು
- ನಿಮ್ಮ ಮನಸ್ಸು ಹತೋಟಿಯಲ್ಲಿರಬೇಕು
- ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ
- ಹಳೆಯ ವಾಹನದಲ್ಲಿ ಪ್ರಯಾಣಿಸುವಾಗ ತುಂಬಾ ಎಚ್ಚರವಹಿಸಿ
- ಅಸಂಬದ್ಧ ಚಟುವಟಿಕೆಗಳತ್ತ ಮನಸ್ಸು ಹೋಗಬಹುದು
- ಮಹಾವಿಷ್ಣುವನ್ನು ಆರಾಧಿಸಿ
ಮೀನ
- ಮನೆಯಲ್ಲಿ ಸಂತೃಪ್ತಿಯ ವಾತಾವರಣವಿರುತ್ತದೆ
- ಆತ್ಮವಿಶ್ವಾಸ ಹೆಚ್ಚಿಸುವ ದಿನವಾಗಿರುತ್ತದೆ
- ಇಂದು ಮತ್ತು ಮುಂದಿನ ಯೋಚನೆಗಳ ಫಲ ನಿಮಗೆ ಯಶಸ್ಸಿನ ಗುಟ್ಟು ತಿಳಿಯುವಂತ ದಿವಸ
- ಸ್ನೇಹಿತರ ಮನೆಯಲ್ಲಿ ಮಂಗಳ ಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ
- ಆಕಸ್ಮಿಕವಾಗಿ ವಾಹನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಚ್ಚರವಿರಲಿ
- ನಿಮ್ಮ ಇಚ್ಛೆಯಂತೆ ಕೆಲಸ ಮಾಡಿ ಯಶಸ್ಸನ್ನು ಹೊಂದಬಹುದು
- ಗಣಪತಿಯ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ