/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಮಕ್ಕಳಿಗೆ ಉತ್ತಮವಾದ ತಿಳುವಳಿಕೆ ನೀಡಿ
- ಇಂದು ಕೋಪ ಮಾಡಿಕೊಳ್ಳಬೇಡಿ
- ಮನೆಯವರ, ಸಂಬಂಧಿಕರ ಜೊತೆ ವ್ಯವಹಾರ ಬೇಡ
- ಗಂಡ-ಹೆಂಡತಿಯ ನಡುವೆ ವಿರಸ ಮೂಡಬಹುದು
- ಇಂದು ತುಂಬಾ ಧನಾತ್ಮಕವಾದ ದಿನ
- ಈ ದಿನ ಆರೋಗ್ಯದ ಬಗ್ಗೆ ಚಿಂತೆ ಬೇಡ
- ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ವೃಷಭ
- ಯಾವುದೋ ಅಹಂಭಾವ ಎಲ್ಲದರಿಂದ ದೂರವಿರುವಂತೆ ಮಾಡಬಹುದು
- ಜನರಲ್ಲಿ, ಬಂಧುಗಳಲ್ಲಿ ಬೇಸರ ಉಂಟಾಗಬಹುದು
- ನಿಮ್ಮ ಕೈಯಲ್ಲಿ ಹಣ ಇರುವುದರಿಂದ ಒಳಿತಾಗಲಿದೆ
- ಕಾನೂನು ರೀತಿಯ ಕೆಲಸಕ್ಕೆ ಜಯವಿದೆ
- ಅನುಪಯುಕ್ತ ವಿಷಯದಲ್ಲಿ ನಿಮ್ಮ ಸಮಯ ವ್ಯರ್ಥವಾಗಬಹುದು
- ಇಂದು ಆತುರದ ನಿರ್ಧಾರ ಬೇಡ
- ಸಂತೋಷ ಮತ್ತು ನೆಮ್ಮದಿಯನ್ನು ಹುಡುಕುವ ದಿನ
- ತಾಪಸ ಮನ್ಯುವನ್ನು ಪ್ರಾರ್ಥಿಸಿ
ಮಿಥುನ
- ವಿದ್ಯಾವಂತರೊಂದಿಗೆ ವಾದ ಮಾಡಿ ತಪ್ಪಿಗೆ ಸಿಲುಕಬೇಡಿ
- ಸ್ವಂತ ಬುದ್ದಿ ಕೆಲಸಕ್ಕೆ ಬರಲಿದೆ
- ಇಂದು ಶಾಂತಿಯುತವಾಗಿ ದಿನ ಕಳೆಯಿರಿ
- ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ
- ನಿಮ್ಮ ತಪ್ಪುಗಳ ಅರಿವಾಗಲಿದೆ ಅದನ್ನ ಸರಿಪಡಿಸಿಕೊಳ್ಳಿ
- ನಿಮ್ಮ ಪ್ರೀತಿ ಪಾತ್ರರು, ಸಂಬಂಧಿಕರು ನಿಮ್ಮನ್ನು ಹೊಗಳುವುದಿಲ್ಲ
- ಈಶ್ವರನನ್ನು ಬಿಲ್ಪಪತ್ರೆಯಿಂದ ಅರ್ಚಿಸಿ
ಕಟಕ
- ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಗೊಂದಲವಿದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಹಣದ ಚಿಂತೆಯಿಂದ ಹೊರಬರುತ್ತೀರಿ
- ಪ್ರಯತ್ನ ಪೂರ್ವಕವಾಗಿ ಸಮಾಧಾನ ಇರಲಿದೆ
- ಈ ದಿನ ಬುದ್ದಿವಂತಿಕೆಯು ಕೆಲಸ ಮಾಡುವುದಿಲ್ಲ
- ವೃತ್ತಿ ಮತ್ತು ಉದ್ಯೋಗದಲ್ಲಿ ಆದಾಯ ಹೆಚ್ಚು
- ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗಲಿದೆ
- ಪಾರಿಜಾತ ಸರಸ್ವತಿಯನ್ನು ಮಲ್ಲಿಗೆ ಹೂಗಳಿಂದ ಅರ್ಚಿಸಿ
ಸಿಂಹ
- ನಿಮ್ಮ ತ್ಯಾಗ ಬುದ್ದಿ ಮನೆಯವರಿಗೆ ಸಂತೋಷ ತರಬಹುದು
- ವೃತ್ತಿಯ ಬಗ್ಗೆ ಎಚ್ಚರಿಕೆವಹಿಸಿ
- ದಾಂಪತ್ಯದಲ್ಲಿ ಹೊಸ ಚೈತನ್ಯ ಕಾಣಬಹುದು
- ಧರ್ಮಕಾರ್ಯದಲ್ಲಿ ಭಾಗಿಯಾಗಲು ಅವಕಾಶಗಳಿವೆ
- ದೈನಂದಿನ ಕೆಲಸಗಳಲ್ಲಿ ಸಮಸ್ಯೆ ಕಾಣಬಹುದು
- ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ಕನ್ಯಾ
- ತ್ವರಿತ ತೀರ್ಮಾನದಿಂದ ಆರ್ಥಿಕ ನಷ್ಟ ಉಂಟಾಗಬಹುದು
- ಪರಿಶ್ರಮದ ಫಲ ನಿಮ್ಮನ್ನು ಕಾಪಾಡುವ ತೃಪ್ತಿ ತರಬಹುದು
- ಕಲೆ-ಸಾಹಿತ್ಯ ವಿಚಾರಧಾರಿಗಳಿಗೆ ಸಮಸ್ಯೆ ಉಂಟಾಗಬಹುದು
- ಸಾಲ ಪ್ರಕ್ರಿಯ ಈ ದಿನ ಬೇಡ
- ಇಂದು ಬರಹಗಾರರಿಗೆ ಶುಭವಿದೆ
- ಅನಗತ್ಯ ಕೆಲಸಕ್ಕಾಗಿ ಸಮಯ ವ್ಯರ್ಥ ಆಗಲಿದೆ
- ಕುಲದೇವತಾ ಆರಾಧನೆ ಮಾಡಿ
ತುಲಾ
- ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ತೋರಬಹುದು
- ದಂಪತಿಗಳಲ್ಲಿ ಪರಸ್ಪರ ಶೀತಲ ಸಮರ ಆಗಬಹುದು
- ಸ್ವಂತ ಕಾರ್ಯಕ್ಕಾಗಿ ವಿಪರೀತ ಖರ್ಚು ಮಾಡುತ್ತೀರಿ
- ಕುಟುಂಬದವರ ತಿಳುವಳಿಕೆ ಕಹಿ ಎನಿಸಬಹುದು
- ನಿಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಹಿಂಸೆ ಬೇಸರ ಆಗಬಹುದು
- ನಿಮ್ಮ ಭಾವನೆಗಳು ತಪ್ಪಿನೆಡೆಗೆ ಕರೆದೊಯ್ಯಬಹುದು
- ಧ್ಯಾನಮಾಡಿ
ವೃಶ್ಚಿಕ
- ಅತ್ಯುನ್ನತ ಚಿಂತನೆ ಬೇರೆಯವರಿಗೆ ಅರ್ಥವಾಗುವುದಿಲ್ಲ ಬೇಸರ ಆಗಬಹುದು
- ವೈವಾಹಿಕ ವಿಚಾರದಲ್ಲಿ ಕಲಹ ಉಂಟಾಗಬಹುದು
- ಮಕ್ಕಳು ಪೋಷಕರಿಗೆ ದುಃಖದಾಯಕರು
- ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ
- ಇಂದು ವ್ಯವಸ್ಥಿತವಾದ ದಿನ
- ಕಠಿಣ ಪರಿಶ್ರಮವಿದ್ದರೂ ಸಾರ್ಥಕತೆ ಇಲ್ಲ
- ಹಿರಿಯರ ಮಾರ್ಗದರ್ಶನ, ಆಶೀರ್ವಾದ ಪಡೆಯಿರಿ
ಧನುಸ್ಸು
- ಹಿರಿಯರಿಂದ ಒಳ್ಳೆಯ ಸುದ್ದಿ ಸಿಗುವುದರಿಂದ ಸಂತೋಷವಿದೆ
- ಅಪೂರ್ಣವಾದ ಕಾರ್ಯಗಳು ಇಂದು ಪೂರ್ಣವಾಗಲಿದೆ
- ಇಂದು ನಿಮಗೆ ಉತ್ತಮವಾದ ದಿನ
- ಮನೆಯ ಕೆಲಸದಲ್ಲಿ ಹೆಚ್ಚು ಒತ್ತಡ ಇರಬಹುದು
- ಸಮಾಜದಲ್ಲಿ ಹೇಗಿರಬೇಕೆಂಬ ಗೊಂದಲ ಕಾಡಲಿದೆ
- ಪ್ರಾಮಾಣಿಕತೆಗೆ ಬೆಲೆಯಿಲ್ಲದ ದಿನ ಎನಿಸಬಹುದು
- ಇಷ್ಟದೇವತಾ ಆರಾಧನೆ ಮಾಡಿ
ಮಕರ
- ವಿದ್ಯುತ್ ಉಪಕರಣಗಳಿಂದ ತೊಂದರೆಯಾಗಬಹುದು
- ಸಣ್ಣ ಸಣ್ಣ ವಿಚಾರಗಳು ವಿವಾದವಾಗಬಹುದು ಎಚ್ಚರಿಕೆವಹಿಸಿ
- ನಿಮ್ಮ ಸಾಧನೆ ನಿಮಗೆ ಮುಖ್ಯ ಆದರೆ ಬೇರೆಯವರಿಗೆ ಒತ್ತಡ ಹಾಕಬೇಡಿ
- ನಿಮ್ಮ ವ್ಯವಹಾರದ ಬಗ್ಗೆ ಚಿಂತಿಸಿ
- ಖರ್ಚಿನ ಬಗ್ಗೆ ಮುಂದಾಲೋಚನೆ ಬೇಕು
- ಹಲವು ತಪ್ಪುಗಳಿಗೆ ನಿಮ್ಮ ವರ್ತನೆ ಕಾರಣವಾಗಬಹುದು
- ವಿಷ್ಣುವನ್ನು ತುಳಸಿಯಿಂದ ಅರ್ಚಿಸಿ
ಕುಂಭ
- ನಿಮ್ಮ ಜೀವನ ಶೈಲಿಯನ್ನು ಪರಾಮರ್ಶಿಸಿಕೊಳ್ಳಿ
- ಹೊಸ ಸಂಶೋಧನೆ, ಪ್ರಯತ್ನಕ್ಕೆ ಅವಕಾಶ ಸಿಗಲಿದೆ
- ನಿಮಗಿರುವ ಅನುಕೂಲವನ್ನು ಸದುಪಯೋಗ ಪಡಿಸಿಕೊಳ್ಳಿ
- ಹಣದ ಆಲೋಚನೆ ಬರುವುದರಿಂದ ಮುಂದೆ ಅನುಕೂಲವಿದೆ
- ಮಹಿಳೆಯರಿಗೆ ಇಂದು ಒತ್ತಡದ ದಿನ
- ನಿಮ್ಮ ಮತ್ತು ಮನೆಯವರ ಆರೋಗ್ಯ ಗಮನಿಸಿ
- ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ
ಮೀನ
- ಹಿರಿಯರೊಂದಿಗೆ ಚರ್ಚೆ ಬೇಡ ಶುಭವಿದೆ
- ಭೂ ವ್ಯವಹಾರದಲ್ಲಿ ಎಚ್ಚರಿಕೆವಹಿಸಿ
- ಮನೆ,ಮಡದಿ,ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು
- ಮನೆಕಟ್ಟುವ ವಿಚಾರ ಪ್ರಸ್ತಾಪ ಮಾಡುತ್ತೀರಿ
- ಮಹಿಳೆಯರು ವಸ್ತ್ರ ಖರೀದಿ ಮಾಡುವುದರಿಂದ ಸಂತೋಷ ಸಿಗಲಿದೆ
- ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಜಯವಿದೆ
- ಇಂದು ಮನೆಯವರೆಲ್ಲಾ ಪ್ರವಾಸಕ್ಕೆ ಹೋಗುತ್ತೀರಿ
- ದುರ್ಗಾಮಾತೆಯನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ