/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಆರ್ಥಿಕವಾಗಿ ತೊಂದರೆ ಇಲ್ಲ ಹಣವನ್ನು ಉಳಿಸುವಿಕೆಯ ಬಗ್ಗೆ ಚಿಂತೆ ಮಾಡುತ್ತೀರಿ
- ಸಾಧನೆ ಮತ್ತು ಅನುಭವದ ಬಗ್ಗೆ ಹೆಮ್ಮೆ ತರಲಿದೆ
- ಆರೋಗ್ಯದ ವಿಚಾರದಲ್ಲಿ ಸಮಾಧಾನ ಇರುತ್ತದೆ
- ಸರಳವಾದ ಕೆಲಸಗಳು ಪ್ರಯಾಸವನ್ನುಂಟುಮಾಡಲಿದೆ
- ಎಲ್ಲರೂ ನನ್ನ ಅಂಕೆ ಶಂಕೆಯಲ್ಲಿ ಇರಬೇಕೆಂಬುದು ನಿಮಗೆ ಹೆಚ್ಚಾಗಿ ಅನಿಸುತ್ತದೆ
- ನೆರೆ ಹೊರೆಯವರಿಂದ ಕೆಲ ಸಹಾಯವು ಸಿಗಲಿದೆ
- ದುರ್ಗಾರಾಧನೆ ಮಾಡಿ
ವೃಷಭ
- ಇಂದು ಮನೆಯಲ್ಲಿ ಒಂಟಿತನ ಕಾಡಲಿದೆ
- ಈ ದಿನ ಉತ್ತಮವಾಗಿದೆ, ನಿಮ್ಮ ಖರ್ಚನ್ನು ನಿಯಂತ್ರಿಸಿ
- ಸಂಶೋಧನೆಗೆ ಆತ್ಮಾವಲೋಕನಕ್ಕೆ ಸುಸಮಯ
- ಹಳೆಯ ಸಮಸ್ಯೆಗಳಿಗೆ ಮಂಗಳವಾಗುವ ದಿನ
- ಹಳೆಯ ನೆನಪುಗಳು ಕಾಡುವುದರಿಂದ ಬೇಸರವಾಗಲಿದೆ
- ಸ್ನೇಹಿತರೊಂದಿಗೆ ಉತ್ತಮವಾದ ಸಮಯ ಕಳೆಯುತ್ತೀರಿ
- ಸಾಲಿಗ್ರಾಮ ಮಹಾವಿಷ್ಣುವನ್ನು ಸ್ಮರಣೆ ಮಾಡಿ
ಮಿಥುನ
- ಶೀತ ಸಂಬಂಧವಾದ ಕಾಯಿಲೆ ಇರುವವರಿಗೆ ಸ್ವಲ್ಪ ತೊಂದರೆ ಇದೆ
- ಹಣ ಮತ್ತು ದಾಖಲಾತಿ ನಷ್ಟವಾಗುವ ಸಾಧ್ಯತೆ ಇದೆ
- ರಿಯಲ್ ಎಸ್ಟೇಟ್ ನವರಿಗೆ ಎಚ್ಚರಿಕೆಯ ಸೂಚನೆಗಳು ಕಾಣುತ್ತವೆ
- ಸರ್ಕಾರಿ ಕೆಲಸಕ್ಕೆ ಹೋಗಿ ವಾಪಸ್ಸು ಬರುವ ಸಾಧ್ಯತೆಯಿಂದಾಗಿ ಬೇಸರವಾಗಲಿದೆ
- ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ ಎಚ್ಚರಿಕೆವಹಿಸಿ
- ಅಧಿಕಾರ, ಅಹಂಭಾವ ಜೀವಕ್ಕೆ ಕುತ್ತು ತರಬಹುದು
- ಇಂದ್ರಾಕ್ಷೀ ದೇವಿಯ ಆರಾಧನೆ ಮಾಡಿ
ಕಟಕ
- ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶ ಮನಸ್ಸಿಗೆ ಸಂತಸವನ್ನುಂಟು ಮಾಡುತ್ತದೆ
- ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಈ ಯಶಸ್ಸನ್ನು ಕಾಣಲು ಸಾಧ್ಯ
- ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಬರುವಂತಹದ್ದು
- ಮಕ್ಕಳ ಚಟುವಟಿಕೆಯಿಂದ ನಿಮಗೆ ಸಿಹಿ ಸುದ್ದಿ ಸಿಗಲಿದೆ
- ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತೀರಿ
- ಹಣಕಾಸಿನ ನಮಸ್ಯೆ ಬಗೆಹರಿಯಲಿದೆ
- ಮಾನಸಿಕವಾಗಿ ತುಂಬಾ ಸಂತೋಷವಾಗಿರುತ್ತೀರಿ
- ಮಹಾವಿಷ್ಣುವಿನ ಸ್ಮರಣೆ ಮಾಡಿ
ಸಿಂಹ
- ಹಣದ ಖರ್ಚಿನಿಂದ ಬೇಸರವನ್ನುಂಟು ಮಾಡಲಿದೆ
- ಬೇರೆಯವರ ಭೇಟಿಯೂ ಉತ್ತಮ ಫಲ ಕೊಡಬಹುದು
- ಹಳೆಯ ಸಮಸ್ಯೆಗಳು ಇತ್ಯರ್ಥವಾಗಲಿದೆ
- ನಿಮ್ಮ ತಾರ್ಕಿಕ ನಿಲುವಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ
- ಉತ್ತಮವಾದ ಆಹಾರ ಸೇವಿಸುತ್ತೀರಿ ಉತ್ತಮವಾದ ಮಾತು ಆಡುತ್ತೀರಿ
- ತುಂಬಾ ಮಾನಸಿಕ, ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ
- ನ್ಯಾಯಾಲಯದ ವಿಚಾರದಲ್ಲಿ ಯಶಸ್ಸು ಸಿಗಲಿದೆ
- ಈಶ್ವರನ ಆರಾಧನೆ ಮಾಡಿ
ಕನ್ಯಾ
- ಇಂದು ಸಕಾಲಕ್ಕೆ ನಿಮ್ಮ ಕೆಲಸಗಳಾಗಲಿದೆ
- ಸ್ನೇಹಿತರಿಂದ ನಿಮಗೆ ಬೇಸರವಾಗಲಿದೆ
- ಹಿಂದೆ ಮಾಡಿದ ವ್ಯವಹಾರದಿಂದ ಇಂದು ಲಾಭ ಕಾಣುತ್ತೀರಿ
- ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ
- ದಾಂಪತ್ಯದಲ್ಲಿ ಪರಸ್ಪರ ಹೊಗಳುವಿಕೆ ಇರುವುದರಿಂದ ಸಂತೋಷವಾಗಿರುತ್ತೀರಿ
- ಈ ದಿನ ಧನಾತ್ಮಕ ಆತ್ಮವಿಶ್ವಾಸವಿರುತ್ತದೆ
- ಇಷ್ಟದೇವತಾ ಆರಾಧನೆ ಮಾಡಿ
ತುಲಾ
- ಏಕನಕ್ಷತ್ರದ ದಂಪತಿಗಳಿಗೆ ದೀರ್ಘಕಾಲದ ದಾಂಪತ್ಯ ಸಮಸ್ಯೆ ಕಾಡುವಂತಹದ್ದು
- ಈ ದಿನ ಅನಾರೋಗ್ಯ ಕಾಡಲಿದೆ, ಎಚ್ಚರಿಕವಹಿಸಿ
- ಇಂದು ಮಕ್ಕಳಿಗೆ ಬೇಸರ ಆಗಲಿದೆ
- ಕೆಲಸದಲ್ಲಿ ಅನೇಕ ಸವಾಲುಗಳು ಎದುರಾಗುತ್ತದೆ
- ಈ ರಾಶಿಯ ಪ್ರೇಮಿಗಳಿಗೆ ಶುಭವಲ್ಲ
- ಅಸಭ್ಯ ಮಾತುಗಳಿಂದ ಜನರು ದೂರವಾಗುತ್ತಾರೆ
- ವಿದ್ಯಾರ್ಥಿಗಳಿಗೆ ಮನಸ್ಸು ಬೇರೆ ಕಡೆ ಹೋಗುವಂತಹದ್ದು
- ಏಕನಕ್ಷತ್ರ ಶಾಂತಿ ಮಾಡಿಸಬೇಕು
ವೃಶ್ಚಿಕ
- ಆತ್ಮವಿಶ್ವಾಸದ ಕೊರತೆಯೂ ಇರಬಹುದು
- ನಿರ್ಲಕ್ಷ್ಯದಿಂದ ಕೆಲಸದ ಗುಣಮಟ್ಟ ತಗ್ಗಬಹುದು
- ಬೇರೆಯವರಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ
- ಇಂದು ನಿಮಗೆ ಮಾನಸಿಕ ಸ್ಥಿಮಿತತೆ ಇರುವುದಿಲ್ಲ
- ಚಾಲ್ತಿಯಲ್ಲಿದ್ದ ಕೆಲಸ ಸ್ಥಗಿತವಾಗಬಹುದು
- ಹಿರಿಯರ ಸಲಹೆ ಅಗತ್ಯವಿದೆ
- ಅಶ್ವತ್ಥ ಮರಕ್ಕೆ 12 ಬಾರಿ ಪ್ರದಕ್ಷಿಣೆ ಮಾಡಿ
ಧನುಸ್ಸು
- ಆಧ್ಯಾತ್ಮಿಕವಾಗಿ ಚಿಂತನೆ ಮಾಡಿ
- ತಂದೆಯವರೊಂದಿಗೆ ವ್ಯವಹಾರಿಕ ಚರ್ಚೆ ನಡೆಯಬಹುದು
- ವಿಚಾರಗಳು, ಸಂದರ್ಭಗಳು ಕಾಲ ಕ್ರಮೇಣ ನಿಮ್ಮ ಪರವಾಗಿ ಆಗಬಹುದು
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಲಾಭದ ಸೂಚನೆಯಿದೆ
- ಉದಾರತೆ, ದಾನಶೀಲತೆ ನಿಮ್ಮ ಗೌರವವನ್ನು ಹೆಚ್ಚು ಮಾಡಬಹುದು
- ದಾಂಪತ್ಯದಲ್ಲಿ ಸ್ವಲ್ಪ ವಾದ-ವಿವಾದ ಸಾಧ್ಯತೆ
- ಮಹಾಲಕ್ಷ್ಮೀಯನ್ನ ಪ್ರಾರ್ಥನೆ ಮಾಡಿ
ಮಕರ
- ಮಕ್ಕಳ ಬಗ್ಗೆ ಚಿಂತಿಸುವುದರಿಂದ ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು
- ಸಾಯಂಕಾಲ ಹೊತ್ತಿಗೆ ಮಾನಸಿಕ ಬೇಸರ ಕಾಡಬಹುದು
- ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಕಡಿಮೆ ಸಾಧ್ಯತೆ
- ಕಾರ್ಯಕ್ರಮಗಳ ಮಧ್ಯೆಯೂ ಕೂಡ ಸಾಮಾಜ ಸೇವೆ ಮಾಡುವ ಅವಕಾಶ ಸಿಗಬಹುದು
- ಮನೆಯಲ್ಲಿ ಶಾಂತಿಯ ವಾತಾವರಣ ಇರಬಹುದು
- ಪ್ರಭಾವಿ ವ್ಯಕ್ತಿಗಳ ಪರಿಚಯ ಅಥವಾ ಸಂಪರ್ಕವಾಗುವ ದಿನ
- ದುರ್ಗಾಸಪ್ತಶತಿ ಪಾರಾಯಣ ಮಾಡಿ
ಕುಂಭ
- ಕಟ್ಟಡ ನಿರ್ಮಾಣದಿಂದ ಕಾರ್ಮಿಕರಿಗೆ ಸಮಸ್ಯೆಯಾಗಬಹುದು
- ದೈಹಿಕ ಮತ್ತು ಮಾನಸಿಕ ಒತ್ತಡ ಸಾಧ್ಯತೆ
- ಧಾರ್ಮಿಕ ವಿಚಾರದಲ್ಲಿ ಯಾವುದೇ ರೀತಿಯ ತಾತ್ಸಾರ ಬೇಡ
- ಅನಪೇಕ್ಷಿತ ಕೆಲಸಗಳು, ಪ್ರಯಾಣ ಎದುರಾಗಬಹುದು
- ಕಾರ್ಯದ ಒತ್ತಡ ತುಂಬಾ ಹೆಚ್ಚಾಗಿರುವ ಸಾಧ್ಯತೆಯಿದೆ
- ಯಾವುದೇ ರೀತಿಯ ಶುಭ ಕೆಲಸಗಳಿಗೆ ದಿನ ಚೆನ್ನಾಗಿಲ್ಲ
- ಹನುಮಂತನನ್ನು ಆರಾಧನೆ ಮಾಡಿ
ಮೀನ
- ಇಂದು ಕುಟುಂಬದ ಬಗ್ಗೆ ಜವಾಬ್ದಾರಿ ತೋರಿಸಬೇಕು
- ಜನ ಮನೆಯವರೆಗೆ ಹುಡುಕಿಕೊಂಡು ಸಹಾಯಕ್ಕಾಗಿ ಬರಬಹುದು
- ಸಾಮಾಜಿಕವಾದ ಸ್ಥಾನ ಮಾನ ಹೆಚ್ಚಾಗಲಿದೆ
- ಹಣದ ಲಾಭ ಕೂಡ ಇರುವ ದಿನ
- ವ್ಯವಹಾರದಲ್ಲಿ ಗಟ್ಟಿಯಾದ ನಿರ್ಧಾರ ಮಾಡಬಹುದು
- ಜನರಿಗೆ ನಿಮ್ಮಿಂದ ನಿರೀಕ್ಷೆಗಳು ಈಡೇರಬಹುದು
- ಕುಲದೇವತೆಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ