ನಿರ್ಲಕ್ಷ್ಯದಿಂದ ಪ್ರಾಣಕ್ಕೆ ಕುತ್ತು, ಇಂದು ಪ್ರೇಮಿಗಳು ಎಚ್ಚರದಿಂದಿರಿ ; ಇಲ್ಲಿದೆ ಇಂದಿನ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಆರ್ಥಿಕವಾಗಿ ತೊಂದರೆ ಇಲ್ಲ ಹಣವನ್ನು ಉಳಿಸುವಿಕೆಯ ಬಗ್ಗೆ ಚಿಂತೆ ಮಾಡುತ್ತೀರಿ
  • ಸಾಧನೆ ಮತ್ತು ಅನುಭವದ ಬಗ್ಗೆ ಹೆಮ್ಮೆ ತರಲಿದೆ
  • ಆರೋಗ್ಯದ ವಿಚಾರದಲ್ಲಿ ಸಮಾಧಾನ ಇರುತ್ತದೆ
  • ಸರಳವಾದ ಕೆಲಸಗಳು ಪ್ರಯಾಸವನ್ನುಂಟುಮಾಡಲಿದೆ
  • ಎಲ್ಲರೂ ನನ್ನ ಅಂಕೆ ಶಂಕೆಯಲ್ಲಿ ಇರಬೇಕೆಂಬುದು ನಿಮಗೆ ಹೆಚ್ಚಾಗಿ ಅನಿಸುತ್ತದೆ
  • ನೆರೆ ಹೊರೆಯವರಿಂದ ಕೆಲ ಸಹಾಯವು ಸಿಗಲಿದೆ
  • ದುರ್ಗಾರಾಧನೆ ಮಾಡಿ   

ವೃಷಭ

RASHI_BHAVISHA_VRSHABA

  • ಇಂದು ಮನೆಯಲ್ಲಿ ಒಂಟಿತನ ಕಾಡಲಿದೆ
  • ಈ ದಿನ ಉತ್ತಮವಾಗಿದೆ, ನಿಮ್ಮ ಖರ್ಚನ್ನು ನಿಯಂತ್ರಿಸಿ 
  • ಸಂಶೋಧನೆಗೆ ಆತ್ಮಾವಲೋಕನಕ್ಕೆ ಸುಸಮಯ 
  • ಹಳೆಯ ಸಮಸ್ಯೆಗಳಿಗೆ ಮಂಗಳವಾಗುವ ದಿನ
  • ಹಳೆಯ ನೆನಪುಗಳು ಕಾಡುವುದರಿಂದ ಬೇಸರವಾಗಲಿದೆ
  • ಸ್ನೇಹಿತರೊಂದಿಗೆ ಉತ್ತಮವಾದ ಸಮಯ ಕಳೆಯುತ್ತೀರಿ
  • ಸಾಲಿಗ್ರಾಮ ಮಹಾವಿಷ್ಣುವನ್ನು ಸ್ಮರಣೆ ಮಾಡಿ

ಮಿಥುನ

RASHI_BHAVISHA_MITHUNA

  • ಶೀತ ಸಂಬಂಧವಾದ ಕಾಯಿಲೆ ಇರುವವರಿಗೆ ಸ್ವಲ್ಪ ತೊಂದರೆ ಇದೆ
  • ಹಣ ಮತ್ತು ದಾಖಲಾತಿ ನಷ್ಟವಾಗುವ ಸಾಧ್ಯತೆ ಇದೆ
  • ರಿಯಲ್ ಎಸ್ಟೇಟ್ ನವರಿಗೆ ಎಚ್ಚರಿಕೆಯ ಸೂಚನೆಗಳು ಕಾಣುತ್ತವೆ
  • ಸರ್ಕಾರಿ ಕೆಲಸಕ್ಕೆ ಹೋಗಿ ವಾಪಸ್ಸು ಬರುವ ಸಾಧ್ಯತೆಯಿಂದಾಗಿ ಬೇಸರವಾಗಲಿದೆ
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ ಎಚ್ಚರಿಕೆವಹಿಸಿ
  • ಅಧಿಕಾರ, ಅಹಂಭಾವ ಜೀವಕ್ಕೆ ಕುತ್ತು ತರಬಹುದು 
  • ಇಂದ್ರಾಕ್ಷೀ ದೇವಿಯ ಆರಾಧನೆ ಮಾಡಿ

ಕಟಕ

RASHI_BHAVISHA_KATAKA

  • ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಫಲಿತಾಂಶ ಮನಸ್ಸಿಗೆ ಸಂತಸವನ್ನುಂಟು ಮಾಡುತ್ತದೆ
  • ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಈ ಯಶಸ್ಸನ್ನು ಕಾಣಲು ಸಾಧ್ಯ 
  • ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಬರುವಂತಹದ್ದು
  • ಮಕ್ಕಳ ಚಟುವಟಿಕೆಯಿಂದ ನಿಮಗೆ ಸಿಹಿ ಸುದ್ದಿ  ಸಿಗಲಿದೆ
  • ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತೀರಿ
  • ಹಣಕಾಸಿನ ನಮಸ್ಯೆ ಬಗೆಹರಿಯಲಿದೆ
  • ಮಾನಸಿಕವಾಗಿ ತುಂಬಾ ಸಂತೋಷವಾಗಿರುತ್ತೀರಿ
  • ಮಹಾವಿಷ್ಣುವಿನ ಸ್ಮರಣೆ ಮಾಡಿ

ಸಿಂಹ 

RASHI_BHAVISHA_SIMHA

  • ಹಣದ ಖರ್ಚಿನಿಂದ ಬೇಸರವನ್ನುಂಟು ಮಾಡಲಿದೆ
  • ಬೇರೆಯವರ ಭೇಟಿಯೂ ಉತ್ತಮ ಫಲ ಕೊಡಬಹುದು 
  • ಹಳೆಯ ಸಮಸ್ಯೆಗಳು ಇತ್ಯರ್ಥವಾಗಲಿದೆ
  • ನಿಮ್ಮ ತಾರ್ಕಿಕ ನಿಲುವಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ
  • ಉತ್ತಮವಾದ ಆಹಾರ ಸೇವಿಸುತ್ತೀರಿ ಉತ್ತಮವಾದ ಮಾತು ಆಡುತ್ತೀರಿ
  • ತುಂಬಾ ಮಾನಸಿಕ, ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ
  • ನ್ಯಾಯಾಲಯದ ವಿಚಾರದಲ್ಲಿ ಯಶಸ್ಸು ಸಿಗಲಿದೆ
  • ಈಶ್ವರನ ಆರಾಧನೆ ಮಾಡಿ 

ಕನ್ಯಾ

RASHI_BHAVISHA_KANYA

  • ಇಂದು ಸಕಾಲಕ್ಕೆ ನಿಮ್ಮ ಕೆಲಸಗಳಾಗಲಿದೆ
  • ಸ್ನೇಹಿತರಿಂದ ನಿಮಗೆ ಬೇಸರವಾಗಲಿದೆ
  • ಹಿಂದೆ ಮಾಡಿದ ವ್ಯವಹಾರದಿಂದ ಇಂದು ಲಾಭ ಕಾಣುತ್ತೀರಿ
  • ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ
  • ದಾಂಪತ್ಯದಲ್ಲಿ ಪರಸ್ಪರ ಹೊಗಳುವಿಕೆ ಇರುವುದರಿಂದ ಸಂತೋಷವಾಗಿರುತ್ತೀರಿ
  • ಈ ದಿನ ಧನಾತ್ಮಕ ಆತ್ಮವಿಶ್ವಾಸವಿರುತ್ತದೆ 
  • ಇಷ್ಟದೇವತಾ ಆರಾಧನೆ ಮಾಡಿ 

ತುಲಾ

RASHI_BHAVISHA_TULA

  • ಏಕನಕ್ಷತ್ರದ ದಂಪತಿಗಳಿಗೆ ದೀರ್ಘಕಾಲದ ದಾಂಪತ್ಯ ಸಮಸ್ಯೆ ಕಾಡುವಂತಹದ್ದು
  • ಈ ದಿನ ಅನಾರೋಗ್ಯ ಕಾಡಲಿದೆ, ಎಚ್ಚರಿಕವಹಿಸಿ
  • ಇಂದು ಮಕ್ಕಳಿಗೆ ಬೇಸರ ಆಗಲಿದೆ
  • ಕೆಲಸದಲ್ಲಿ ಅನೇಕ ಸವಾಲುಗಳು ಎದುರಾಗುತ್ತದೆ
  • ಈ ರಾಶಿಯ ಪ್ರೇಮಿಗಳಿಗೆ ಶುಭವಲ್ಲ 
  • ಅಸಭ್ಯ ಮಾತುಗಳಿಂದ ಜನರು ದೂರವಾಗುತ್ತಾರೆ
  • ವಿದ್ಯಾರ್ಥಿಗಳಿಗೆ ಮನಸ್ಸು ಬೇರೆ ಕಡೆ ಹೋಗುವಂತಹದ್ದು
  • ಏಕನಕ್ಷತ್ರ ಶಾಂತಿ ಮಾಡಿಸಬೇಕು 

ವೃಶ್ಚಿಕ

RASHI_BHAVISHA_VRUSHCHIKA

  • ಆತ್ಮವಿಶ್ವಾಸದ ಕೊರತೆಯೂ ಇರಬಹುದು
  • ನಿರ್ಲಕ್ಷ್ಯದಿಂದ ಕೆಲಸದ ಗುಣಮಟ್ಟ ತಗ್ಗಬಹುದು 
  • ಬೇರೆಯವರಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ
  • ಇಂದು ನಿಮಗೆ ಮಾನಸಿಕ ಸ್ಥಿಮಿತತೆ ಇರುವುದಿಲ್ಲ 
  • ಚಾಲ್ತಿಯಲ್ಲಿದ್ದ ಕೆಲಸ ಸ್ಥಗಿತವಾಗಬಹುದು 
  • ಹಿರಿಯರ ಸಲಹೆ ಅಗತ್ಯವಿದೆ 
  • ಅಶ್ವತ್ಥ ಮರಕ್ಕೆ 12 ಬಾರಿ ಪ್ರದಕ್ಷಿಣೆ ಮಾಡಿ

ಧನುಸ್ಸು

RASHI_BHAVISHA_DHANASU

  • ಆಧ್ಯಾತ್ಮಿಕವಾಗಿ ಚಿಂತನೆ ಮಾಡಿ  
  • ತಂದೆಯವರೊಂದಿಗೆ ವ್ಯವಹಾರಿಕ ಚರ್ಚೆ ನಡೆಯಬಹುದು
  • ವಿಚಾರಗಳು, ಸಂದರ್ಭಗಳು ಕಾಲ ಕ್ರಮೇಣ ನಿಮ್ಮ ಪರವಾಗಿ ಆಗಬಹುದು
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಲಾಭದ ಸೂಚನೆಯಿದೆ
  • ಉದಾರತೆ, ದಾನಶೀಲತೆ ನಿಮ್ಮ ಗೌರವವನ್ನು ಹೆಚ್ಚು ಮಾಡಬಹುದು
  • ದಾಂಪತ್ಯದಲ್ಲಿ ಸ್ವಲ್ಪ ವಾದ-ವಿವಾದ ಸಾಧ್ಯತೆ
  • ಮಹಾಲಕ್ಷ್ಮೀಯನ್ನ ಪ್ರಾರ್ಥನೆ ಮಾಡಿ

ಮಕರ

RASHI_BHAVISHA_MAKARA

  • ಮಕ್ಕಳ ಬಗ್ಗೆ ಚಿಂತಿಸುವುದರಿಂದ ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು
  • ಸಾಯಂಕಾಲ ಹೊತ್ತಿಗೆ ಮಾನಸಿಕ ಬೇಸರ ಕಾಡಬಹುದು
  • ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಕಡಿಮೆ ಸಾಧ್ಯತೆ 
  • ಕಾರ್ಯಕ್ರಮಗಳ ಮಧ್ಯೆಯೂ ಕೂಡ ಸಾಮಾಜ ಸೇವೆ ಮಾಡುವ ಅವಕಾಶ ಸಿಗಬಹುದು
  • ಮನೆಯಲ್ಲಿ ಶಾಂತಿಯ ವಾತಾವರಣ ಇರಬಹುದು
  • ಪ್ರಭಾವಿ ವ್ಯಕ್ತಿಗಳ ಪರಿಚಯ ಅಥವಾ ಸಂಪರ್ಕವಾಗುವ ದಿನ 
  • ದುರ್ಗಾಸಪ್ತಶತಿ  ಪಾರಾಯಣ ಮಾಡಿ

ಕುಂಭ

RASHI_BHAVISHA_KUMBHA

  • ಕಟ್ಟಡ ನಿರ್ಮಾಣದಿಂದ ಕಾರ್ಮಿಕರಿಗೆ ಸಮಸ್ಯೆಯಾಗಬಹುದು
  • ದೈಹಿಕ ಮತ್ತು ಮಾನಸಿಕ ಒತ್ತಡ ಸಾಧ್ಯತೆ
  • ಧಾರ್ಮಿಕ ವಿಚಾರದಲ್ಲಿ ಯಾವುದೇ ರೀತಿಯ ತಾತ್ಸಾರ ಬೇಡ
  • ಅನಪೇಕ್ಷಿತ ಕೆಲಸಗಳು, ಪ್ರಯಾಣ ಎದುರಾಗಬಹುದು
  • ಕಾರ್ಯದ ಒತ್ತಡ ತುಂಬಾ ಹೆಚ್ಚಾಗಿರುವ ಸಾಧ್ಯತೆಯಿದೆ
  • ಯಾವುದೇ ರೀತಿಯ ಶುಭ ಕೆಲಸಗಳಿಗೆ ದಿನ ಚೆನ್ನಾಗಿಲ್ಲ
  • ಹನುಮಂತನನ್ನು ಆರಾಧನೆ ಮಾಡಿ

ಮೀನ

RASHI_BHAVISHA_MEENA

  • ಇಂದು ಕುಟುಂಬದ ಬಗ್ಗೆ ಜವಾಬ್ದಾರಿ ತೋರಿಸಬೇಕು
  • ಜನ ಮನೆಯವರೆಗೆ ಹುಡುಕಿಕೊಂಡು ಸಹಾಯಕ್ಕಾಗಿ ಬರಬಹುದು 
  • ಸಾಮಾಜಿಕವಾದ ಸ್ಥಾನ ಮಾನ ಹೆಚ್ಚಾಗಲಿದೆ
  • ಹಣದ ಲಾಭ ಕೂಡ ಇರುವ ದಿನ
  • ವ್ಯವಹಾರದಲ್ಲಿ ಗಟ್ಟಿಯಾದ ನಿರ್ಧಾರ ಮಾಡಬಹುದು 
  • ಜನರಿಗೆ ನಿಮ್ಮಿಂದ ನಿರೀಕ್ಷೆಗಳು ಈಡೇರಬಹುದು 
  • ಕುಲದೇವತೆಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment