ಹಣಕಾಸಿನ ಸಮಸ್ಯೆ, ಹೊಸ ಕೆಲಸ ಆರಂಭಕ್ಕೆ ಶುಭ ದಿನ; ಇಲ್ಲಿದೆ ಇಂದಿನ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಅಕ್ಕಪಕ್ಕದವರ ಸಹಾಯ, ಸಹಕಾರ ದುರುಪಯೋಗ ಆಗಬಾರದು
  • ಬೇರೆಯವರ ಹಣದಿಂದ ನೀವು ವ್ಯವಹಾರ ನಡೆಸಬಹುದು
  • ನಿಮ್ಮ ಸಾಧನೆ ನಿಮ್ಮ ಅನುಭವ ಉತ್ಕೃಷ್ಟವಾದಂತಹದ್ದು
  • ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಲೆಕ್ಕದ ವಿಚಾರದಲ್ಲಿ ಗೊಂದಲವಿರುತ್ತದೆ
  • ಇಂದು ಆರೋಗ್ಯ ಚೆನ್ನಾಗಿದೆ ಹಾಗೇ ಕಾಪಾಡಿಕೊಳ್ಳಿ
  • ಸುಲಭ ಎಂದು ಭಾವಿಸಿದ ಕೆಲಸಗಳಿಂದ ಸಮಸ್ಯೆ ಉಂಟಾಗಲಿದೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

RASHI_BHAVISHA_VRSHABA

  • ಜಮೀನಿನ ವಿಚಾರದಲ್ಲಿ ದೃಢವಾದ ನಿರ್ಧಾರವನ್ನು ಮಾಡಿ
  • ಬಂಧುಗಳು, ಸ್ನೇಹಿತರ ಜೊತೆ ಉತ್ತಮ ಬಾಂಧವ್ಯ,ಮಾತುಕತೆಯನ್ನು ಮುಂದುವರೆಸಿಕೊಂಡು ಹೋಗಿ
  • ಹಳೆಯ ನೆನಪುಗಳು ಕಾಡಲಿದೆ ಅದರಲ್ಲಿ ಕೆಲವೊಂದು ಸಮಾಧಾನ ನೀಡಬಹುದು
  • ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ಇಂದು ಪ್ರೇಮಿಗಳಿಗೆ ಶುಭದಿನ
  • ಇಂದು ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ
  • ಈ ದಿನ ನಿಮಗೆ ಉತ್ತಮವಾಗಿದೆ
  • ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

RASHI_BHAVISHA_MITHUNA

  • ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ವಿವಾದಗಳು ಏರ್ಪಟಾಗುತ್ತದೆ
  • ಗ್ರಹಗತಿಯಿಂದ ಎಲ್ಲವೂ ಶುಭವಾಗಲಿದೆ
  • ಸಭ್ಯವಾಗಿ ವರ್ತಿಸಬೇಕು ಜೊತೆಗೆ ಮಾನಸಿಕ ಧ್ಯೆರ್ಯವಿರಬೇಕು 
  • ಧಾರ್ಮಿಕ ಮುಖಂಡರಿಗೆ ಭಯ ಅಥವಾ ಅವಮಾನ ಆಗುವ ಸಾಧ್ಯತೆ ಇದೆ
  • ನಿಮ್ಮ ವೃತ್ತಿ, ಕೆಲಸಕ್ಕೆ ಆದ್ಯತೆ ಕೊಡಿ ಅನಗತ್ಯ ವಿಚಾರಗಳನ್ನು ದೂರ ಮಾಡಿ
  • ರಕ್ತದೊತ್ತಡ ಇರುವವರಿಗೆ ಆರೋಗ್ಯದಲ್ಲಿ  ಸಮಸ್ಯೆ ಹೆಚ್ಚಾಗಬಹುದು
  • ಧರ್ಮವನ್ನು ಮೀರಿ ವರ್ತಿಸುವವರಿಗೆ ತೊಂದರೆಯಿದೆ
  • ಧರ್ಮಗ್ರಂಥಾವಲೋಕನ ಮಾಡಿ

ಕಟಕ

RASHI_BHAVISHA_KATAKA

  • ಹಣಕಾಸಿನ ಸಮಸ್ಯೆ ಸ್ವಲ್ಪ ಕಾಡಬಹುದು
  • ಕುಟುಂಬ ಸದಸ್ಯರ ಆಗಮನದಿಂದ ಸಂತೋಷವಿದ್ದು ನಂತರ ಜಗಳ ಆಗಬಹುದು
  • ಧಾರ್ಮಿಕ ಕಾರ್ಯಕ್ರಮಗಳು ಹಣದ ಕೊರತೆಯಿಂದ ರದ್ದಾಗಬಹುದು
  • ಧಾರಾಳವಾಗಿ ಖರ್ಚು ಮಾಡಿದ ನಿಮ್ಮ ಕೈ, ಇಂದು ಕಟ್ಟಿಹಾಕಿದಂತಾಗಿರುತ್ತದೆ
  • ಸ್ವಯಂಕೃತ ಅಪರಾಧಗಳನ್ನು ಕಡಿಮೆ ಮಾಡಬೇಕು
  • ಮಕ್ಕಳ ಪ್ರಗತಿಯಿಂದ ಸಮಾಧಾನವಾಗಲಿದೆ
  • ನಿಮ್ಮ ಗುರುಗಳನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ಯಾವುದೇ ವಿಚಾರವಿದ್ದರೂ ತಾರ್ಕಿಕವಾಗಿ ಚಿಂತನೆ ಮಾಡಬೇಡಿ ಹೊಂದಾಣಿಕೆ ಇರಲಿ
  • ಜೀವನದ ಬಗ್ಗೆ ನಿರ್ಧಾರ ಮಾಡುತ್ತೀರಿ
  • ಮಾನಸಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೆಚ್ಚಾಗಲಿದೆ 
  • ಉತ್ತಮ ಆಹಾರ ಲಭ್ಯವಾಗಲಿದೆ
  • ನ್ಯಾಯಾಲಯದ ವಿಚಾರದಲ್ಲಿ ಜಯ ಸಿಗಲಿದೆ
  • ಹಳೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೀರಿ
  • ಹಿರಿಯರ ಆಶೀರ್ವಾದ ಪಡೆಯಿರಿ

ಕನ್ಯಾ

RASHI_BHAVISHA_KANYA

  • ಸಾಯಂಕಾಲದ ಹೊತ್ತಿಗೆ  ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ
  • ಕುಟುಂಬದಲ್ಲಿ ಸಂತೋಷ, ನೆಮ್ಮದಿ ವಾತಾವರಣ ಇರುತ್ತದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆಯಲಿದೆ
  • ಕೆಲಸ ಕಾರ್ಯ ಒತ್ತಡದ ಮಧ್ಯೆಯು ಮನೆಯಲ್ಲಿ ಹಬ್ಬದ ವಾತಾವರಣವಿರಲಿದೆ
  • ಹಿರಿಯರು ಹಿಂದೆ ಆಡಿದ ಮಾತನ್ನು ಇಂದು ಸತ್ಯವೆಂದು ತಿಳಿಯುವ ದಿನ 
  • ಮೃತ್ಯುಂಜಯ ಮಂತ್ರವನ್ನು ಪಠಿಸಿ

ತುಲಾ

RASHI_BHAVISHA_TULA

  • ಮಕ್ಕಳಿಗೆ ಚಂಚಲ ಮನಸ್ಸಿನಿಂದ ಓದಿಗೆ ಸಮಸ್ಯೆ ಉಂಟಾಗಲಿದೆ
  • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ 
  • ಚರ್ಮ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗಬಹುದು
  • ಹಲವು ಭಿನ್ನಾಭಿಪ್ರಾಯಗಳು,ನಿಮ್ಮ ಮಾತು ಸಾಂಸಾರಿಕ ಸಮಸ್ಯೆಗಳನ್ನ ಹೆಚ್ಚಿಸಬಹುದು
  • ಪ್ರೇಮಿಗಳಿಗೆ ಮತ್ತು ಸಂಬಂಧಿಕರನ್ನೇ ವಿವಾಹವಾದವರಿಗೆ ತೊಂದರೆಯಿದೆ 
  • ಕೆಲಸದ ಸ್ಥಳದಲ್ಲಿ ಅನೇಕ ಸವಾಲುಗಳು ಎದುರಾಗಬಹುದು 
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಆತ್ಮ ವಿಶ್ವಾಸದ ಕೊರತೆ ಕಾಡಲಿದೆ
  • ಕೆಲಸದ ಗುಣಮಟ್ಟ ಕಡಿಮೆಯಾಗಿ ನಿಂದನೆಗೆ ಒಳಗಾಗುತ್ತೀರಿ 
  • ಮನಸ್ಸನ್ನ ಕೇಂದ್ರಿಕರಿಸಲಾಗದೆ ಒದ್ದಾಡಬಹುದು 
  • ಇಂದು ಮದುವೆ ವಿಚಾರ ಪ್ರಸ್ತಾಪ ಆಗಲಿದೆ
  • ಬೇರೆಯವರಿಗೆ ವಿನಾಕಾರಣ ಸಲಹೆ ನೀಡಬೇಡಿ 
  • ನೌಕರಿಯಲ್ಲಿ ಹಿರಿಯರ ಸಲಹೆ ಪಡೆಯಿರಿ 
  • ಗಣಪತಿಗೆ  21  ಗರಿಕೆಯಿಂದ ಪೂಜಿಸಿ

ಧನುಸ್ಸು

RASHI_BHAVISHA_DHANASU

  • ಸಂದರ್ಭಗಳು ಕಾಲಕ್ರಮೇಣ ನಿಮ್ಮ ಪರವಾಗಿರಬಹುದು 
  • ದಾಂಪತ್ಯದಲ್ಲಿ ಸುಖ ಸಂತೋಷವಿರುತ್ತದೆ ಆದರೆ ಅನುಭವಿಸುವ ಯೋಗ ಕಡಿಮೆ 
  • ಹೊಸ ವ್ಯವಹಾರ, ಹಿಂದೆ ಮಾಡಿದ ವ್ಯವಹಾರ ಬೇಸರವನ್ನುಂಟು ಮಾಡುವ ಸಾಧ್ಯತೆ 
  • ಕೆಲಸ ಕಾರ್ಯಗಳಲ್ಲಿ ಹಲವಾರು ಜನರ ಸಹಾಯ ಪಡೆಯುತ್ತೀರಿ
  • ನೀವು ಬೇರೆಯವರಿಗೆ ಸಹಾಯ ಮಾಡುವ ಅವಕಾಶವಿದೆ
  • ದಾನ ಧರ್ಮದ ಆಲೋಚನೆ ಮಾಡಿ ಭವಿಷ್ಯದಲ್ಲಿ ಕಾಪಾಡುತ್ತದೆ
  • ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ
  • ಇಂದು ಸ್ವಲ್ಪ ಉದಾರತೆಯ ದಿನ 
  • ಶ್ರೀ ರಾಮನನ್ನು ಪ್ರಾರ್ಥಿಸಿ 

ಮಕರ

RASHI_BHAVISHA_MAKARA

  • ವೃತ್ತಿ ಜೀವನಕ್ಕೆ ಯಾವುದೇ ಕೊರತೆಯಿರುವುದಿಲ್ಲ
  • ಇಂಜಿನಿಯರ್ ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
  • ಕುಟುಂಬದ ಸಂತೋಷವನ್ನು ಹಾಗೆ ಕಾಪಾಡಿಕೊಳ್ಳಿ
  • ನಿಮ್ಮ ವೃತ್ತಿಗೆ ಸಂಬಂಧಪಟ್ಟ ಹಾಗೆ ಕೆಲಸಗಳು ನಿಮ್ಮ ಕೈ ಸೇರಿ ಆದಾಯ ಸಿಗಲಿದೆ
  • ವಿದ್ಯಾರ್ಥಿಗಳಿಗೆ ಬಹಳ ಶುಭದಿನ
  • ಬುದ್ದಿವಂತರ ಸಹವಾಸದಿಂದ ನಿಮಗೆ ಅನುಕೂಲವಿದೆ
  • ಪಾರ್ವತಿ ದೇವಿಯನ್ನು ಆರಾಧಿಸಿ 

ಕುಂಭ

RASHI_BHAVISHA_KUMBHA

  • ವಿಕಲ ಚೇತನರು ಅದರಲ್ಲೂ ಕಾಲಿನ ಸಮಸ್ಯೆ ಇರುವವರಿಗೆ ತೊಂದರೆ ಆಗಬಹುದು
  • ಅನಪೇಕ್ಷಿತ ಪ್ರಯಾಣಕ್ಕೆ ಸಿದ್ದರಾಗಬೇಕಾಗುತ್ತದೆ
  • ಕತ್ತರಿ ಅಥವಾ ಚಾಕು ಇತ್ಯಾದಿಗಳಿಂದ ಗಾಯವಾಗಬಹುದು ಎಚ್ಚರಿಕೆವಹಿಸಿ
  • ಹೊಸ ಕೆಲಸ ಆರಂಭ ಮಾಡಲು ಈ ದಿನ ಶುಭಕರವಾಗಿಲ್ಲ 
  • ಮನೆ ಕಟ್ಟುವ ವಿಚಾರ ಮನಸ್ಸಿಗೆ ಬರಬಹುದು
  • ಬಡ್ಡಿ ವ್ಯವಹಾರ ಮಾಡುವವರಿಗೆ ಸಮಸ್ಯೆಗಳು ಉಂಟಾಗಲಿದೆ
  • ಸಂಪತ್ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ 

ಮೀನ

RASHI_BHAVISHA_MEENA

  • ಮನೆಗೆ ಬಂದ ಅತಿಥಿಗಳಿಗೆ ಅವಮಾನ ಆಗುವ ಸಾಧ್ಯತೆ ಇದೆ
  • ವೈದ್ಯಕೀಯ ಕ್ಷೇತ್ರದವರಿಗೆ ಅನಾನುಕೂಲವಿರುತ್ತದೆ 
  • ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸುಳ್ಳು ಮಾಡಬೇಡಿ
  • ಭೂ ಸಂಬಂಧಿಯಾದ ವಿಚಾರದಲ್ಲಿ ನಷ್ಟ ಆಗುವ ದಿನ
  • ಕುಟುಂಬದ ಹಿತಾಸಕ್ತಿಗೆ ಬೇರೆಯವರು ನಿಮ್ಮನ್ನ ವಂಚನೆ ಮಾಡಬಹುದು
  • ನಿಮ್ಮ ಕೆಲಸದಲ್ಲಿ ದೃಢ ನಿರ್ಧಾರವಿರಬೇಕು
  • ಇಷ್ಟದೇವತಾ ಪ್ರಾರ್ಥನೆ ಮಾಡಿ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment