/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು ಎಚ್ಚರಿಕೆಯಿರಲಿ
- ಬೇರೆಯವರಿಗೆ ಸಹಾಯ ಮಾಡಿದ ದಿನಗಳನ್ನು ಜ್ಞಾಪಿಸಿಕೊಳ್ಳಬಹುದು
- ವೈವಾಹಿಕ ವಿಚಾರದಲ್ಲಿ ಗೊಂದಲ ಇರುವವರಿಗೆ ಸಮಸ್ಯೆ ತಿಳಿಯಾಗುವ ದಿನ
- ಇಂದು ದಂಪತಿಗಳಲ್ಲಿ ಜಗಳ ಬೇಡ
- ನಿಮ್ಮ ದಿನಚರಿಯಲ್ಲಿ ಬದಲಾವಣೆ, ಬೇಸರ ಆಗಬಹುದು
- ಯಾವುದೇ ಒತ್ತಡಗಳಲ್ಲದ ಮನಸ್ಸು ನಿಮಗೆ ಶಾಂತತೆ ನೀಡಲಿ
- ಬೇರೆಯವರ ವಿಚಾರಕ್ಕೆ ಹೋಗಬಾರದು
- ಸ್ವಯಂವರ ಪಾರ್ವತಿ ಜಪ ಮಾಡಿ
ವೃಷಭ
- ನಿಮ್ಮ ಬಂಧುಗಳಲ್ಲಿ ಆತ್ಮೀಯತೆ ಬೆಳೆಸಿಕೊಳ್ಳಬೇಕು
- ಆರೋಗ್ಯದ ಬಗ್ಗೆ, ಹಳೆಯ ನೋವಿನ ಬಗ್ಗೆ ಹೆಚ್ಚು ಗಮನವಿರಲಿ
- ವ್ಯಾವಹಾರಿಕ ಫಲಿತಾಂಶ ಉತ್ತಮವಾಗಿರುತ್ತದೆ
- ಆತ್ಮವಿಶ್ವಾಸ ಶಕ್ತಿಯಿಂದ ನಿಮ್ಮ ಇರುವಿಕೆ ಎಂದೇ ಹೇಳಬೇಕು
- ದೂರದ ಪ್ರಯಾಣಕ್ಕೆ ತೊಂದರೆಯಾಗಬಹುದು
- ಹೊಸ ಆಲೋಚನೆಗಳಲ್ಲಿ ಯಶಸ್ಸಿದೆ
- ಆಂಜನೇಯ ಸ್ವಾಮಿಯನ್ನು ಪೂಜಿಸಿ
ಮಿಥುನ
- ವೃತ್ತಿ ಜೀವನದಲ್ಲಿ ತುಂಬಾ ಉತ್ಸುಕರಾಗಿರುವ ನಿಮಗೆ ಹಿನ್ನಡೆ ಭಯವಿರುತ್ತದೆ
- ಬೇರೆಯವರನ್ನು ಅನುಸರಿಸಿ, ಅನುಕರಿಸಬೇಡಿ
- ಕೆಲವು ವಿಚಾರಗಳಲ್ಲಿ ಹಿಂಜರಿಕೆಯ ಭಾವನೆ ಕಾಡಬಹುದು
- ಸ್ವಂತಿಕೆಯಿಂದ ಯೋಚಿಸಿ ನಿರ್ಧಾರಮಾಡಿ ಯಶಸ್ಸಿದೆ
- ನಿಮ್ಮ ಪ್ರಾಮಾಣಿಕತೆ, ದಕ್ಷತೆ ಗಟ್ಟಿಯಾಗಬೇಕು
- ನಿಮ್ಮ ತಪ್ಪುಗಳೇ ನಿಮಗೆ ಶತ್ರುಗಳಾಗಬಹುದು
- ತಾಪಸ ಮನ್ಯುವನ್ನು ಉಪಾಸನೆ ಮಾಡಿ
ಕಟಕ
- ಕುಟುಂಬದ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರೈಸಬೇಕು
- ಸಂಬಂಧಿಕರ ಮನೆಯ ಮದುವೆ ವಿಚಾರಕ್ಕೆ ಮಾತನಾಡಬೇಡಿ, ಅವಮಾನ ಆಗಬಹುದು
- ಋಣಾತ್ಮಕ ವಿಷಯಗಳಿಂದ ದುಃಖ ಇರಬಹುದು
- ಅನಗತ್ಯ ಸಲಹೆ, ಮಾತಿನಿಂದ ಅವಮಾನಿತರಾಗಬಹುದು
- ಉನ್ನತ ಶಿಕ್ಷಣ ಪಡೆಯಲು ಸಮಸ್ಯೆಗಳು ಆಗಬಹುದು
- ನಿಮ್ಮ ಉದಾರಭಾವ ಬೇರೆಯವರಿಗೆ ಅನುಕೂಲವಿರುತ್ತದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ಸಿಂಹ
- ವೈಯಕ್ತಿಕ ವಿಚಾರದಲ್ಲಿ ಕೆಲವು ಸುಧಾರಣೆಯ ಅಗತ್ಯ ಕಾಣಬಹುದು
- ಈ ದಿನ ಬೇರೆಯವರ ತಪ್ಪನ್ನು ಹೇಳಬೇಡಿ
- ಮನಸ್ಸಿನ ಗೊಂದಲಗಳು ದೂರವಾದರೆ ನಿಂತ ಕೆಲಸಗಳು ಚಾಲನೆ ಪಡೆಯುತ್ತದೆ
- ಅನೇಕ ಕೆಲಸಗಳಲ್ಲಿ ತುಂಬಾ ಗಮನಕೊಟ್ಟು ವ್ಯವಹರಿಸಬೇಕು
- ನಾಟಕೀಯ ಬುದ್ಧಿಯಿಂದ ನಿಮಗೆ ಹಿನ್ನಡೆಯಾಗಬಹುದು
- ಎದುರಾಳಿಗಳ, ಶತ್ರುಗಳ ಬಲ ತಿಳಿದು ವ್ಯವಹರಿಸಿ
- ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಚಂದ್ರಗ್ರಹವನ್ನು ಪ್ರಾರ್ಥಿಸಿ
ಕನ್ಯಾ
- ಪ್ರೇಮ ವಿವಾಹದ ವಿಚಾರಕ್ಕೆ ಮನೆಯಲ್ಲಿ ಜಗಳ ಉಂಟಾಗಬಹುದು
- ಇಂದು ಮಾನಸಿಕ ಸಮಾಧಾನವಿಲ್ಲದಿರುವುದು
- ಏನು ಮಾಡಿದರೂ, ಎಷ್ಟು ಗಳಿಸಿದರೂ ತೃಪ್ತಿಯಿರದ ದಿನ
- ಮನೆಗೆ ಹೊಸ ವಸ್ತು ತಂದು ನಷ್ಟವಾಗಬಹುದು
- ಬೇರೆ ಉಪಯುಕ್ತ ಯೋಜನೆಗಳ ಬಗ್ಗೆ ಚಿಂತೆ ಮಾಡುತ್ತೀರಿ
- ಮನೆಗೆ ಬಂಧುಗಳ ಆಗಮನ ಆಗಲಿದೆ
- ಶ್ರೀಸೂಕ್ತದ ಮಂತ್ರವನ್ನು ಪಠನೆ ಮಾಡಿ
ತುಲಾ
- ನಿಮ್ಮ ತಪ್ಪು ಗ್ರಹಿಕೆಯಿಂದ ಜನರ ಕೋಪಕ್ಕೆ ಗುರಿಯಾಗುತ್ತೀರಿ
- ಏಕನಕ್ಷತ್ರ, ಏಕರಾಶಿಯ ದಂಪತಿಗಳ ವೈಯಕ್ತಿಕ ವಿಚಾರ ಕಹಿಯಾಗಿರುತ್ತದೆ
- ಯಾವುದೇ ವಿಚಾರದಲ್ಲಿ ಅನುಮಾನ ಬೇಡ, ಪರಾಮರ್ಶಿಸಿ
- ಅಹಂಕಾರದ ಭಾವನೆಯನ್ನು ತ್ಯಜಿಸಿ
- ನಿಮ್ಮ ಮಾತು ಕೆಟ್ಟ ಪರಿಣಾಮ ಬೀರುತ್ತದೆ
- ಕುಟುಂಬ ಕಲಹ ಮಿತಿಮೀರಬಹುದು
- ಜಾತಕ ಪರೀಕ್ಷಿಸಿಕೊಳ್ಳಿ
ವೃಶ್ಚಿಕ
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಬೆಲೆ ಎಂಬುದನ್ನು ಅರಿಯಬೇಕು
- ಪರೀಕ್ಷಾ ದೃಷ್ಠಿಯಿಂದ ಅಧ್ಯಯನ ಮಾಡಿದವರಿಗೆ ಹಿನ್ನಡೆಯಾಗಬಹುದು
- ಬೇರೆ ಮಾರ್ಗದಲ್ಲಿ ಆಲೋಚಿಸುವವರಿಗೆ ತುಂಬಾ ಹಿನ್ನಡೆ ಕಾಣಬಹುದು
- ಇಂದು ಪ್ರಯಾಣದಲ್ಲಿ ವ್ಯತ್ಯಯ ಆಗಬಹುದು
- ಭಾವನೆಗಳು ಕೆಲಸಕ್ಕೆ ಬರುವುದಿಲ್ಲ
- ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಮನಸ್ಸಿರುವುದಿಲ್ಲ ಆದರೆ ಅನಿವಾರ್ಯ
- ಪಾರಿಜಾತ ಸರಸ್ವತಿಯನ್ನು ಆರಾಧಿಸಿ
ಧನುಸ್ಸು
- ನಿಮ್ಮ ಆಸಕ್ತಿ ಹೆಚ್ಚಿದಷ್ಟು ಕೆಲಸದಿಂದ ಆದಾಯವಿದೆ
- ಮನೆಯವರ ಪ್ರೀತಿ, ಅಭಿಮಾನಕ್ಕೆ ಪ್ರಯತ್ನಿಸಿ ವಿಫಲರಾಗುತ್ತೀರಿ
- ಕೆಲಸ ಮಾಡುತ್ತೀರಿ ಆದರೆ ಧೈರ್ಯ ಕಡಿಮೆ ಇರಬಹುದು
- ಬೇರೆ ದಿನಕ್ಕಿಂತ ಇಂದು ನಿಮ್ಮ ವೃತ್ತಿಯಲ್ಲಿ ಪ್ರಗತಿ ಹೊಂದುತ್ತೀರಿ
- ಸಹೋದ್ಯೋಗಿಗಳನ್ನು ಪೂರ್ಣವಾಗಿ ಅವಲಂಬಿಸಬೇಡಿ
- ಭಾವನಾತ್ಮಕ ವಿಷಯ ಚರ್ಚೆಯಾಗಬಹುದು
- ಮಾರುತಿಯನ್ನು ಉಪಾಸನೆ ಮಾಡಿ
ಮಕರ
- ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳು ಬಂದಾಗ ತಾತ್ಸಾರವಾಗಿ ನೋಡಬಹುದು
- ಮನೆಯಲ್ಲಿಯ ವಾತಾವರಣ ಹಾಸ್ಯಾಸ್ಪದವಾಗಬಹುದು
- ಮಕ್ಕಳೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಅನಗತ್ಯ ವಿಚಾರ ಚರ್ಚೆ
- ನಿಮ್ಮ ಆಲೋಚನೆ ಬೇರೆ,ನಡೆಯುವುದೇ ಬೇರೆ
- ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭವಿದೆ
- ಬೇರೆಯವರ ಬೇಡದ ವಿಚಾರದಿಂದ ನಿಮಗೆ ಸಂತೋಷ
- ಅನುಕೂಲವಾದಾಗ ಪುಣ್ಯಕ್ಷೇತ್ರಗಳ ದರ್ಶನ ಮಾಡಿ
ಕುಂಭ
- ಆತುರದ ಕೆಲಸದಿಂದ ವಸ್ತು ನಷ್ಟ ಆಗಲಿದೆ
- ಹೊಸವಾಹನ ಖರೀದಿಯ ಮಾತು ಬರುತ್ತದೆ
- ಸುಮಾರು 2 ವರ್ಷಗಳಿಂದ ಅನುಭವಿಸುತ್ತಿರುವ ಕಾಲು ನೋವು ತೊಂದರೆ ಮಾಡಬಹುದು
- ಇಂದು ಆರೋಗ್ಯದ ಬಗ್ಗೆ ಗಮನಿಸಿ
- ನಿಮ್ಮ ಕೋಪ ಮಕ್ಕಳ ಮೇಲೆ ತೋರಿಸಬೇಡಿ
- ಸಣ್ಣ ಪುಟ್ಟ ವಿಚಾರಗಳಿಗೆ ಮನೆಯಲ್ಲಿ ಕಲಹ
- ಇಂದ್ರಾಕ್ಷೀ ಸ್ತೋತ್ರ ಪಠಿಸಿ
ಮೀನ
- ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ
- ಮನೆಯವರ ಸಲಹೆ ಉಪಯುಕ್ತ ಎಂಬುದನ್ನು ಅರಿಯಬೇಕಾಗುತ್ತದೆ
- ದಾಂಪತ್ಯ ಜೀವನದಲ್ಲಿ ಕೋಪ ಬೇಡ
- ಶಾಂತ ಮನಸ್ಥಿತಿಯಲ್ಲಿರಬೇಕೆಂದು ಯೋಚಿಸಿದರೂ ಆಗುವುದಿಲ್ಲ
- ನಿಮ್ಮ ಕಿರಿಯರು ನಿಮನ್ನು ಗೌರವಿಸಬಹುದು
- ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗಲಿದೆ
- ಧ್ಯಾನದ ಮೊರೆ ಹೋಗಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ