ಅನಗತ್ಯ ಸಲಹೆ, ಮಾತಿನಿಂದ ಅವಮಾನ, ಈ ರಾಶಿ ನರಸಿಂಹ ಸ್ವಾಮಿ ಪ್ರಾರ್ಥಿಸಿ; ಇಲ್ಲಿದೆ ಇಂದಿನ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು ಎಚ್ಚರಿಕೆಯಿರಲಿ 
  • ಬೇರೆಯವರಿಗೆ ಸಹಾಯ ಮಾಡಿದ ದಿನಗಳನ್ನು ಜ್ಞಾಪಿಸಿಕೊಳ್ಳಬಹುದು 
  • ವೈವಾಹಿಕ ವಿಚಾರದಲ್ಲಿ ಗೊಂದಲ ಇರುವವರಿಗೆ ಸಮಸ್ಯೆ ತಿಳಿಯಾಗುವ ದಿನ 
  • ಇಂದು ದಂಪತಿಗಳಲ್ಲಿ ಜಗಳ ಬೇಡ 
  • ನಿಮ್ಮ ದಿನಚರಿಯಲ್ಲಿ ಬದಲಾವಣೆ, ಬೇಸರ ಆಗಬಹುದು
  • ಯಾವುದೇ ಒತ್ತಡಗಳಲ್ಲದ ಮನಸ್ಸು ನಿಮಗೆ ಶಾಂತತೆ ನೀಡಲಿ 
  • ಬೇರೆಯವರ ವಿಚಾರಕ್ಕೆ ಹೋಗಬಾರದು 
  • ಸ್ವಯಂವರ ಪಾರ್ವತಿ ಜಪ  ಮಾಡಿ

ವೃಷಭ

RASHI_BHAVISHA_VRSHABA

  • ನಿಮ್ಮ ಬಂಧುಗಳಲ್ಲಿ ಆತ್ಮೀಯತೆ ಬೆಳೆಸಿಕೊಳ್ಳಬೇಕು 
  • ಆರೋಗ್ಯದ ಬಗ್ಗೆ, ಹಳೆಯ ನೋವಿನ ಬಗ್ಗೆ ಹೆಚ್ಚು ಗಮನವಿರಲಿ
  • ವ್ಯಾವಹಾರಿಕ ಫಲಿತಾಂಶ ಉತ್ತಮವಾಗಿರುತ್ತದೆ 
  • ಆತ್ಮವಿಶ್ವಾಸ ಶಕ್ತಿಯಿಂದ ನಿಮ್ಮ ಇರುವಿಕೆ ಎಂದೇ ಹೇಳಬೇಕು 
  • ದೂರದ ಪ್ರಯಾಣಕ್ಕೆ ತೊಂದರೆಯಾಗಬಹುದು 
  • ಹೊಸ ಆಲೋಚನೆಗಳಲ್ಲಿ ಯಶಸ್ಸಿದೆ 
  • ಆಂಜನೇಯ ಸ್ವಾಮಿಯನ್ನು ಪೂಜಿಸಿ

ಮಿಥುನ

RASHI_BHAVISHA_MITHUNA

  • ವೃತ್ತಿ ಜೀವನದಲ್ಲಿ ತುಂಬಾ ಉತ್ಸುಕರಾಗಿರುವ ನಿಮಗೆ ಹಿನ್ನಡೆ ಭಯವಿರುತ್ತದೆ 
  • ಬೇರೆಯವರನ್ನು ಅನುಸರಿಸಿ, ಅನುಕರಿಸಬೇಡಿ 
  • ಕೆಲವು ವಿಚಾರಗಳಲ್ಲಿ ಹಿಂಜರಿಕೆಯ ಭಾವನೆ ಕಾಡಬಹುದು 
  • ಸ್ವಂತಿಕೆಯಿಂದ ಯೋಚಿಸಿ ನಿರ್ಧಾರಮಾಡಿ ಯಶಸ್ಸಿದೆ 
  • ನಿಮ್ಮ ಪ್ರಾಮಾಣಿಕತೆ, ದಕ್ಷತೆ ಗಟ್ಟಿಯಾಗಬೇಕು 
  • ನಿಮ್ಮ ತಪ್ಪುಗಳೇ ನಿಮಗೆ ಶತ್ರುಗಳಾಗಬಹುದು
  • ತಾಪಸ ಮನ್ಯುವನ್ನು ಉಪಾಸನೆ ಮಾಡಿ 

ಕಟಕ

RASHI_BHAVISHA_KATAKA

  • ಕುಟುಂಬದ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರೈಸಬೇಕು 
  • ಸಂಬಂಧಿಕರ ಮನೆಯ ಮದುವೆ ವಿಚಾರಕ್ಕೆ ಮಾತನಾಡಬೇಡಿ, ಅವಮಾನ ಆಗಬಹುದು
  • ಋಣಾತ್ಮಕ ವಿಷಯಗಳಿಂದ ದುಃಖ ಇರಬಹುದು  
  • ಅನಗತ್ಯ ಸಲಹೆ, ಮಾತಿನಿಂದ ಅವಮಾನಿತರಾಗಬಹುದು
  • ಉನ್ನತ ಶಿಕ್ಷಣ ಪಡೆಯಲು ಸಮಸ್ಯೆಗಳು ಆಗಬಹುದು
  • ನಿಮ್ಮ ಉದಾರಭಾವ ಬೇರೆಯವರಿಗೆ ಅನುಕೂಲವಿರುತ್ತದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ವೈಯಕ್ತಿಕ ವಿಚಾರದಲ್ಲಿ ಕೆಲವು ಸುಧಾರಣೆಯ ಅಗತ್ಯ ಕಾಣಬಹುದು
  • ಈ ದಿನ ಬೇರೆಯವರ ತಪ್ಪನ್ನು ಹೇಳಬೇಡಿ 
  • ಮನಸ್ಸಿನ ಗೊಂದಲಗಳು ದೂರವಾದರೆ ನಿಂತ ಕೆಲಸಗಳು ಚಾಲನೆ ಪಡೆಯುತ್ತದೆ 
  • ಅನೇಕ ಕೆಲಸಗಳಲ್ಲಿ ತುಂಬಾ ಗಮನಕೊಟ್ಟು ವ್ಯವಹರಿಸಬೇಕು 
  • ನಾಟಕೀಯ ಬುದ್ಧಿಯಿಂದ ನಿಮಗೆ ಹಿನ್ನಡೆಯಾಗಬಹುದು
  • ಎದುರಾಳಿಗಳ, ಶತ್ರುಗಳ ಬಲ ತಿಳಿದು ವ್ಯವಹರಿಸಿ 
  • ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಚಂದ್ರಗ್ರಹವನ್ನು ಪ್ರಾರ್ಥಿಸಿ

ಕನ್ಯಾ

RASHI_BHAVISHA_KANYA

  • ಪ್ರೇಮ ವಿವಾಹದ ವಿಚಾರಕ್ಕೆ ಮನೆಯಲ್ಲಿ  ಜಗಳ ಉಂಟಾಗಬಹುದು
  • ಇಂದು ಮಾನಸಿಕ ಸಮಾಧಾನವಿಲ್ಲದಿರುವುದು 
  • ಏನು ಮಾಡಿದರೂ, ಎಷ್ಟು ಗಳಿಸಿದರೂ ತೃಪ್ತಿಯಿರದ ದಿನ 
  • ಮನೆಗೆ ಹೊಸ ವಸ್ತು ತಂದು ನಷ್ಟವಾಗಬಹುದು 
  • ಬೇರೆ ಉಪಯುಕ್ತ ಯೋಜನೆಗಳ ಬಗ್ಗೆ ಚಿಂತೆ ಮಾಡುತ್ತೀರಿ
  • ಮನೆಗೆ ಬಂಧುಗಳ ಆಗಮನ ಆಗಲಿದೆ
  • ಶ್ರೀಸೂಕ್ತದ  ಮಂತ್ರವನ್ನು ಪಠನೆ ಮಾಡಿ  

ತುಲಾ

RASHI_BHAVISHA_TULA

  • ನಿಮ್ಮ ತಪ್ಪು ಗ್ರಹಿಕೆಯಿಂದ ಜನರ ಕೋಪಕ್ಕೆ ಗುರಿಯಾಗುತ್ತೀರಿ 
  • ಏಕನಕ್ಷತ್ರ, ಏಕರಾಶಿಯ ದಂಪತಿಗಳ ವೈಯಕ್ತಿಕ ವಿಚಾರ ಕಹಿಯಾಗಿರುತ್ತದೆ
  • ಯಾವುದೇ ವಿಚಾರದಲ್ಲಿ ಅನುಮಾನ ಬೇಡ, ಪರಾಮರ್ಶಿಸಿ 
  • ಅಹಂಕಾರದ ಭಾವನೆಯನ್ನು ತ್ಯಜಿಸಿ 
  • ನಿಮ್ಮ ಮಾತು ಕೆಟ್ಟ ಪರಿಣಾಮ ಬೀರುತ್ತದೆ 
  • ಕುಟುಂಬ ಕಲಹ ಮಿತಿಮೀರಬಹುದು 
  • ಜಾತಕ ಪರೀಕ್ಷಿಸಿಕೊಳ್ಳಿ

ವೃಶ್ಚಿಕ

RASHI_BHAVISHA_VRUSHCHIKA

  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಬೆಲೆ ಎಂಬುದನ್ನು ಅರಿಯಬೇಕು 
  • ಪರೀಕ್ಷಾ ದೃಷ್ಠಿಯಿಂದ ಅಧ್ಯಯನ ಮಾಡಿದವರಿಗೆ ಹಿನ್ನಡೆಯಾಗಬಹುದು
  • ಬೇರೆ ಮಾರ್ಗದಲ್ಲಿ ಆಲೋಚಿಸುವವರಿಗೆ ತುಂಬಾ ಹಿನ್ನಡೆ ಕಾಣಬಹುದು
  • ಇಂದು ಪ್ರಯಾಣದಲ್ಲಿ ವ್ಯತ್ಯಯ ಆಗಬಹುದು
  • ಭಾವನೆಗಳು ಕೆಲಸಕ್ಕೆ ಬರುವುದಿಲ್ಲ 
  • ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಮನಸ್ಸಿರುವುದಿಲ್ಲ ಆದರೆ ಅನಿವಾರ್ಯ 
  • ಪಾರಿಜಾತ ಸರಸ್ವತಿಯನ್ನು ಆರಾಧಿಸಿ 

ಧನುಸ್ಸು

RASHI_BHAVISHA_DHANASU

  • ನಿಮ್ಮ ಆಸಕ್ತಿ ಹೆಚ್ಚಿದಷ್ಟು ಕೆಲಸದಿಂದ ಆದಾಯವಿದೆ 
  • ಮನೆಯವರ ಪ್ರೀತಿ, ಅಭಿಮಾನಕ್ಕೆ ಪ್ರಯತ್ನಿಸಿ ವಿಫಲರಾಗುತ್ತೀರಿ
  • ಕೆಲಸ ಮಾಡುತ್ತೀರಿ ಆದರೆ ಧೈರ್ಯ ಕಡಿಮೆ ಇರಬಹುದು 
  • ಬೇರೆ ದಿನಕ್ಕಿಂತ ಇಂದು ನಿಮ್ಮ ವೃತ್ತಿಯಲ್ಲಿ ಪ್ರಗತಿ ಹೊಂದುತ್ತೀರಿ
  • ಸಹೋದ್ಯೋಗಿಗಳನ್ನು ಪೂರ್ಣವಾಗಿ ಅವಲಂಬಿಸಬೇಡಿ 
  • ಭಾವನಾತ್ಮಕ ವಿಷಯ ಚರ್ಚೆಯಾಗಬಹುದು
  • ಮಾರುತಿಯನ್ನು ಉಪಾಸನೆ ಮಾಡಿ 

ಮಕರ

RASHI_BHAVISHA_MAKARA

  • ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳು ಬಂದಾಗ ತಾತ್ಸಾರವಾಗಿ ನೋಡಬಹುದು 
  • ಮನೆಯಲ್ಲಿಯ ವಾತಾವರಣ ಹಾಸ್ಯಾಸ್ಪದವಾಗಬಹುದು 
  • ಮಕ್ಕಳೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಅನಗತ್ಯ ವಿಚಾರ ಚರ್ಚೆ 
  • ನಿಮ್ಮ ಆಲೋಚನೆ ಬೇರೆ,ನಡೆಯುವುದೇ ಬೇರೆ 
  • ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭವಿದೆ 
  • ಬೇರೆಯವರ ಬೇಡದ ವಿಚಾರದಿಂದ ನಿಮಗೆ ಸಂತೋಷ 
  • ಅನುಕೂಲವಾದಾಗ ಪುಣ್ಯಕ್ಷೇತ್ರಗಳ ದರ್ಶನ ಮಾಡಿ

ಕುಂಭ

RASHI_BHAVISHA_KUMBHA

  • ಆತುರದ ಕೆಲಸದಿಂದ ವಸ್ತು ನಷ್ಟ ಆಗಲಿದೆ
  • ಹೊಸವಾಹನ ಖರೀದಿಯ ಮಾತು ಬರುತ್ತದೆ
  • ಸುಮಾರು 2 ವರ್ಷಗಳಿಂದ ಅನುಭವಿಸುತ್ತಿರುವ ಕಾಲು ನೋವು ತೊಂದರೆ ಮಾಡಬಹುದು 
  • ಇಂದು ಆರೋಗ್ಯದ ಬಗ್ಗೆ ಗಮನಿಸಿ 
  • ನಿಮ್ಮ ಕೋಪ ಮಕ್ಕಳ ಮೇಲೆ ತೋರಿಸಬೇಡಿ 
  • ಸಣ್ಣ ಪುಟ್ಟ ವಿಚಾರಗಳಿಗೆ ಮನೆಯಲ್ಲಿ ಕಲಹ 
  • ಇಂದ್ರಾಕ್ಷೀ ಸ್ತೋತ್ರ ಪಠಿಸಿ 

ಮೀನ

RASHI_BHAVISHA_MEENA

  • ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ 
  • ಮನೆಯವರ ಸಲಹೆ ಉಪಯುಕ್ತ ಎಂಬುದನ್ನು ಅರಿಯಬೇಕಾಗುತ್ತದೆ
  • ದಾಂಪತ್ಯ ಜೀವನದಲ್ಲಿ ಕೋಪ ಬೇಡ 
  • ಶಾಂತ ಮನಸ್ಥಿತಿಯಲ್ಲಿರಬೇಕೆಂದು ಯೋಚಿಸಿದರೂ ಆಗುವುದಿಲ್ಲ 
  • ನಿಮ್ಮ ಕಿರಿಯರು ನಿಮನ್ನು ಗೌರವಿಸಬಹುದು   
  • ವ್ಯಾಪಾರ ವ್ಯವಹಾರದಲ್ಲಿ ಲಾಭ  ಸಿಗಲಿದೆ
  • ಧ್ಯಾನದ ಮೊರೆ ಹೋಗಿ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment