/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಿರುತ್ತದೆ
- ಹಣವಿದ್ದರೂ ಖರ್ಚು ಮಾಡದೆ ಕೆಲಸ ಸ್ಥಗಿತ ಆಗಬಹುದು
- ಸರ್ಕಾರದಿಂದ ಹಣ ಸಹಾಯ ಆಗಲಿದೆ
- ಕಟ್ಟಡ ನಿರ್ಮಾಣ ಅಥವಾ ಭೂ ಸಂಬಂಧಿ ಖರೀದಿ ನಡೆಯಬಹುದು
- ವಿದೇಶದಿಂದ ಮಕ್ಕಳಿಗೆ ಸಹಾಯ ಸಿಗಲಿದೆ
- ಮಾಡುವ ಕೆಲಸಕ್ಕೆ ಗ್ರಹಗತಿಯಿಂದ ಅನೇಕ ಅಡ್ಡಿ ಆಗಲಿದೆ
- ಕುಬೇರಲಕ್ಷ್ಮೀ ಪ್ರಾರ್ಥನೆ ಮಾಡಿ
ವೃಷಭ
- ನೀವು ದುರ್ಬಲರಾಗಿರುವ ವಿಚಾರದಲ್ಲಿ ರಾಜಿಮಾಡಿಕೊಳ್ಳಿ
- ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆಯಾಗಬಹುದು
- ಲಕ್ಷ್ಮೀ ಪ್ರಾಪ್ತಿಯಿದೆ, ಖರ್ಚಿನ ವಿಚಾರದಲ್ಲಿ ಅಪಮಾನ
- ಕೋಪ, ಉತ್ಸಾಹಗಳೆರಡನ್ನೂ ಕಡಿಮೆ ಮಾಡಿಕೊಳ್ಳಬೇಕಾಗಿದೆ
- ನಿಮಗೆ ಬರಬೇಕಾಗಿರುವ ಹಣಕ್ಕೆ ಅಡ್ಡಿಯಾಗಲಿದೆ
- ಬೇರೆಯವರಿಂದ ಏನನ್ನೂ ನಿರೀಕ್ಷಿಸಬೇಡಿ
- ಗಣಪತಿಗೆ ಹಾಲು, ಜೇನುತುಪ್ಪ ಅರ್ಪಿಸಿ
ಮಿಥುನ
- ಸರಿಯಾದ ತಿಳುವಳಿಕೆ ಇಲ್ಲದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ
- ಅತಿಯಾದ ಶಿಸ್ತನ್ನು ತೋರಿಸುತ್ತಾ ತೊಂದರೆಗೆ ಸಿಲುಕಬಹುದು
- ತಾಯಿಯವರಿಗೆ ಮತ್ತು ಹೆಂಡತಿಗೆ ಸಮಸ್ಯೆಯಾಗಬಹುದು
- ಮನೆ ಮತ್ತು ಸಾಮಾಜಿಕ ವ್ಯವಹಾರ ಉತ್ತಮವಾಗಿರುತ್ತದೆ
- ವ್ಯವಹಾರದಲ್ಲಿ ದೊಡ್ಡ ಕಾರ್ಯಕ್ಕೆ ಈ ದಿನ ಚಾಲನೆ ಸಿಗಬಹುದು
- ರಾಜಕೀಯ ವಿಚಾರಕ್ಕೆ ಉತ್ತಮ ದಿನ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪಾರ್ಥಿಸಿ
ಕಟಕ
- ಪ್ರೇಮಿಗಳಿಗೆ ತುಂಬಾ ತೊಂದರೆಯಾಗಬಹುದು
- ಮನೆಯಲ್ಲಿ ನಿಮ್ಮಿಂದ ನಿರೀಕ್ಷೆಗಳು ಹೆಚ್ಚಾಗಬಹುದು
- ಇಂದು ಹೊಸ ಕೆಲಸದ ಪ್ರಾರಂಭ ಬೇಡ
- ಇಂದು ನಿಮಗೆ ಹೆದರಿಕೆ ಆಗಬಹುದು
- ನಿಮ್ಮ ಆಸೆಗಳನ್ನು ವ್ಯಕ್ತಪಡಿಸಬೇಡಿ ಈಡೇರುವುದಿಲ್ಲ
- ಈ ದಿನ ವಾಹನ ಚಾಲನೆ, ಪ್ರಯಾಣ ಅಪಾಯಕಾರಿ
- ವನದುರ್ಗಾ ದೇವಿಯನ್ನು ಪ್ರಾರ್ಥಿಸಿ
ಸಿಂಹ
- ಕೆಟ್ಟ ಜನರ ಸಹವಾಸ ಹಾಗೂ ಅವರ ಜೊತೆ ವ್ಯವಹರಿಸುವುದನ್ನು ಬಿಡಿ
- ಅತಿಯಾದ ಆತಂಕದಿಂದ ಸಮಸ್ಯೆಗಳು ಎದುರಾಗಬಹುದು
- ಸಣ್ಣ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಡಿ
- ಅನುಮಾನಾಸ್ಪದ ವರ್ತನೆಯಿಂದ ಅವಮಾನ
- ಹೃದ್ರೋಗಿಗಳಿಗೆ ತೊಂದರೆ ಎಚ್ಚರಿಕೆಯಿರಲಿ
- ಕಮೀಶನ್ ಏಜೆಂಟ್ಸ್ಗಳಿಗೆ ಹಣ ನಷ್ಟ ಆಗಬಹುದು
- ಕುಬೇರನನ್ನು ಪ್ರಾರ್ಥಿಸಿ
ಕನ್ಯಾ
- ಯೋಚಿಸದೇ ಯಾವುದೇ ಕಾರ್ಯ ಮಾಡಬೇಡಿ
- ಮನೆಯಲ್ಲಿ ಧಾರ್ಮಿಕ ಕಾರ್ಯಾಚರಣೆಗೆ ಚಿಂತನೆ ನಡೆಸುತ್ತೀರಿ
- ಹೊಸ ಪರಿಚಯದವರಿಂದ ಮೋಸ ಹೋಗುತ್ತೀರಿ
- ದೊಡ್ಡ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ
- ಪೂರ್ವಿಕರ ವೃತ್ತಿಯಿಂದ ಹಣಗಳಿಸಬಹುದು ತಾಳ್ಮೆ ಇರಲಿ
- ನಿಮ್ಮ ವೃತ್ತಿಯಲ್ಲಿ ಕಷ್ಟದ ವಾತಾವರಣ ಆದಾಯವಿರುತ್ತದೆ
- ಶ್ರೀಕೃಷ್ಣನನ್ನು ಪ್ರಾರ್ಥಿಸಿ
ತುಲಾ
- ಗಂಡ ಹೆಂಡತಿ ಮಧ್ಯೆ ಪರಸ್ಪರ ಅನುಮಾನ
- ಮನಸ್ಸಿನಿಂದ ಯಾವುದೇ ಕೆಲಸ ಮಾಡಿ ಶುಭವಿದೆ
- ಹಣದ ವಿಚಾರದಲ್ಲಿ ಗೊಂದಲ ಲೆಕ್ಕಾಚಾರ ಸರಿಯಾಗಿರುವುದಿಲ್ಲ
- ಹಿರಿಯರ, ಸ್ನೇಹಿತರ ಸಲಹೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
- ಈ ದಿನ ನಿವೃತ್ತ ನೌಕರರಿಗೆ ಶುಭವಿಲ್ಲ
- ಹೊಸ ಜನರ ಸಂಪರ್ಕ ಮಾಡುತ್ತೀರಿ
- ಶಿವಾರಾಧನೆ ಮಾಡಿ
ವೃಶ್ಚಿಕ
- ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ
- ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡ ತೆರಬೇಕಾಗಬಹುದು
- ಈ ದಿನ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
- ಇಂದು ನೀವು ಸಮಯೋಚಿತವಾಗಿ ಮಾತಾನಾಡಬೇಕು
- ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಬೇಕಾಗಬಹುದು
- ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಿ ವ್ಯತ್ಯಾಸಗಳಾಗಬಹುದು
- ಚಂಡಿಕಾಪಾರಾಯಣ ಮಾಡಿಸಿ
ಧನುಸ್ಸು
- ಈ ದಿನ ಮನೆಯಲ್ಲಿ ಭಿನ್ನಾಭಿಪ್ರಾಯ ಇರಲಿದೆ
- ಪ್ರಯಾಣದಲ್ಲಿ ಸಮಸ್ಯೆಯಿದೆ ಎಚ್ಚರಿಕೆ
- ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಗಣನೆಗೆ ಬರುವುದಿಲ್ಲ
- ಕಷ್ಟಪಟ್ಟು ಕೆಲಸ ಮಾಡಿದರೂ ಒಳ್ಳೆಯ ಫಲಿತಾಂಶವಿಲ್ಲ
- ಇಂದು ಯಾರಿಗೂ ಸಾಲ ಕೊಡಬೇಡಿ, ಕೇಳಬೇಡಿ
- ಹಣದ ವಿಚಾರಕ್ಕೆ ಕಲಹವಾಗಬಹುದು
- ದುರ್ಗಾರಾಧನೆ ಮಾಡಿ
ಮಕರ
- ಸಮಾಜ ಸೇವೆ ಮಾಡಲು ಮನಸ್ಸು ಬರಬಹುದು
- ಮನೆಯವರ ಯೋಗಕ್ಷೇಮದಲ್ಲಿ ವೃತ್ಯಯ ಆಗಲಿದೆ
- ಹಿರಿಯರ ಮಾರ್ಗದರ್ಶನ ಮಾತು ಫಲಿಸುವುದಿಲ್ಲ
- ನವವಿವಾಹಿತರಲ್ಲಿ ದಾಂಪತ್ಯದ ವಿಚಾರಕ್ಕೆ ಬಿರುಕು ಉಂಟಾಗಬಹುದು
- ಸ್ಥಿರಾಸ್ತಿಗಳ ವಿಚಾರಕ್ಕೆ ಕಲಹ ಉಂಟಾಗಬಹುದು
- ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಪಠಿಸಿ
ಕುಂಭ
- ಇಂದು ಮಧ್ಯಾಹ್ನದ ನಂತರ ಸಮಯ ಚೆನ್ನಾಗಿಲ್ಲ
- ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದರಿಂದ ಬೇಸರ ಆಗಲಿದೆ
- ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರಬಹುದು
- ವಿದ್ಯಾರ್ಥಿಗಳು ಸಂಬಂಧಪಡದ ಚಟುವಟಿಕೆಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಾರೆ
- ಬೇರೆಯವರಿಗೆ ಸಹಾಯ ಮಾಡಿ ಹೆಸರು ಮಾಡುತ್ತೀರಿ
- ಸರಸ್ವತೀ ದೇವಿಯ ಆರಾಧನೆ ಮಾಡಿ
ಮೀನ
- ತಂದೆ-ತಾಯಿಯ ಜೊತೆಯಲ್ಲಿ ವಾದ-ವಿವಾದ ಮಾಡಬೇಡಿ
- ಈ ದಿನ ಅನಗತ್ಯ ಪ್ರಯಾಣ ಮಾಡುತ್ತೀರಿ
- ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ ಎಚ್ಚರಿಕೆ
- ಇಂದು ತುಂಬಾ ಆಯಾಸದ ದಿನ
- ವಿದ್ಯಾರ್ಥಿಗಳು ಬೇಸರದಿಂದ, ಬಲವಂತದಿಂದ ಓದಬಾರದು
- ಶೀತ ಸಂಬಂಧವಾದ ಆರೋಗ್ಯ ಸಮಸ್ಯೆ ಕಾಡಬಹುದು
- ಅಘೋರ ಮೃತ್ಯುಂಜಯನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ