ಉದ್ಯೋಗ ಆಕಾಂಕ್ಷಿಗಳಿಗೆ ಯಶಸ್ಸು, ಪ್ರೇಮಿಗಳಿಗೆ ಅಡ್ಡಿಯಾಗುವ ದಿನ; ಇಲ್ಲಿದೆ ಇಂದಿನ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ  4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಯಾವುದೇ ಒತ್ತಡಗಳಿಲ್ಲದೆ ತುಂಬ ವಿರಾಮವಾದ ದಿನ
  • ವ್ಯಾವಹಾರಿಕವಾಗಿ ಎಲ್ಲಾ ದೌರ್ಬಲ್ಯಗಳನ್ನ ದೂರ ಮಾಡಿಕೊಳ್ಳಲು ಇದೊಂದು ಅವಕಾಶ 
  • ಸಾರ್ವಜನಿಕ ಕೆಲಸಗಳಲ್ಲಿ ಭಾಗವಹಿಸುವ ಅವಕಾಶವಿದೆ
  • ನಿತ್ಯದ ಎಲ್ಲಾ ಕೆಲಸಗಳು ಕೂಡ ಸಕಾಲದಲ್ಲಿ ಆಗಲಿದೆ
  • ಸರ್ಕಾರಿ ಕೆಲಸಗಳು ನಿಮಗೆ ಸಿಗುವಂತ ಅನುಕೂಲವಿದೆ
  • ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಶೈಲಿಯನ್ನು  ಬದಲಿಸಿಕೊಳ್ಳಬೇಕು
  • ಕುಲದೇವತೆಯನ್ನು ಪ್ರಾರ್ಥನೆ ಮಾಡಿ

ವೃಷಭ

RASHI_BHAVISHA_VRSHABA

  • ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತೀರಿ
  • ವೃತ್ತಿಗೆ ಸಂಬಂಧಿಸಿದಂತೆ ವಿಷಯ ಸಂಗ್ರಹ ಮಾಡುವ ಅವಕಾಶವಿದೆ
  • ಕಾರ್ಯಕ್ಷೇತ್ರದಲ್ಲಿ ಹಲವಾರು ವಿಷಯಗಳಲ್ಲಿ ನಿಯಂತ್ರಣ ಕಾರ್ಯ ನಡೆಯುತ್ತದೆ
  • ಸ್ನೇಹಿತರೊಂದಿಗಿನ  ವ್ಯವಹಾರ ವೃದ್ಧಿಯಾಗಲಿದೆ
  • ಶತ್ರು ಜಯ ಅನ್ನೋದು ಉತ್ತಮವಾದ ಫಲ ಕೊಡುತ್ತದೆ
  • ಉದಾರ ವರ್ತನೆಯಿಂದ ಜನಪ್ರಿಯತೆಗಳಿಸುತ್ತೀರಿ
  • ಕಾರ್ತಿಕೇಯನ ಆರಾಧನೆ ಮಾಡಿ

ಮಿಥುನ

RASHI_BHAVISHA_MITHUNA

  • ಹೊಸ ಉದ್ಯೋಗ ಆಕಾಂಕ್ಷಿಗಳಿಗೆ ಯಶಸ್ಸು ಸಿಗಲಿದೆ
  • ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
  • ಮನೆಯಲ್ಲಿ ಹಣದ ಸಮಸ್ಯೆಯಾಗಬಹುದು
  • ಬೇರೆಯವರ ತಪ್ಪು ತಿದ್ದಲು ಹೋಗಬೇಡಿ ಅವಮಾನ ಆಗಬಹುದು
  • ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಗಮನಹರಿಸಬೇಕು
  • ಕೇಳಿದರೆ ಮಾತ್ರ ಬೇರೆಯವರಿಗೆ ಸಲಹೆ ಕೊಡಿ
  • ಉಮಾಮಹೇಶ್ವರರನ್ನು ಪ್ರಾರ್ಥಿಸಿ

ಕಟಕ

RASHI_BHAVISHA_KATAKA

  • ಈ ದಿನ ಕಾನೂನಿನ ಹೋರಾಟದಲ್ಲಿ ಅಪಜಯ
  • ಇಂದು ಆದಾಯ ಕಡಿಮೆ, ಕೆಲಸ ಹೆಚ್ಚು
  • ಹಿರಿಯರು ನಿಮ್ಮಿಂದ ಪ್ರಭಾವಿತರಾಗುತ್ತಾರೆ
  • ಉದ್ಯೋಗದಲ್ಲಿ ನಿಮ್ಮ ಸೇವೆ ಬೇರೆಯವರಿಗೆ ಮಾದರಿಯಾಗಲಿದೆ
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲದ ಮಾತು
  • ತಾರ್ಕಿಕ ನಿಲುವು ಯಶಸ್ಸಿಗೆ ಕಾರಣವಾಗುತ್ತದೆ
  • ವರಾಹ ಸ್ವಾಮಿಯನ್ನು ಅರ್ಚಿಸಿ

ಸಿಂಹ 

RASHI_BHAVISHA_SIMHA

  • ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಆಗಿ ಕಿರಿ ಕಿರಿ ಉಂಟಾಗಬಹುದು
  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಮಾನಸಿಕ ಒತ್ತಡದಿಂದ ತೊಂದರೆಯಾಗಬಹುದು
  • ಅತಿಯಾದ ಕೋಪ ಮಾಡಿಕೊಳ್ಳುತ್ತೀರಿ
  • ಇಂದು ಹೊಸ ಕೆಲಸ ಪ್ರಾರಂಭಿಸಬೇಡಿ
  • ಬದಲಾಗುತ್ತಿರುವ ಹವಾಮಾನದಿಂದ ಶೀತ, ಜ್ವರದ ಸಮಸ್ಯೆ ಕಾಡಬಹುದು
  • ಅಮೃತ ಮೃತ್ಯುಂಜಯ ಜಪ ಮಾಡಿಸಿ

ಕನ್ಯಾ

RASHI_BHAVISHA_KANYA

  • ಹಣಕಾಸಿನ ವಿಚಾರ ಗಂಭೀರವಾಗಲಿದೆ
  • ಹೊಸ ಕೆಲಸಗಳಲ್ಲಿ ಆಸಕ್ತಿ ಇರಲಿದೆ
  • ಜವಾಬ್ದಾರಿ ಹೆಚ್ಚಾಗಿ, ಆತಂಕ ಉಂಟಾಗಬಹುದು
  • ವೈಯಕ್ತಿಕ ಸಂಬಂಧಗಳಲ್ಲಿ ಗಟ್ಟಿತನ ಇರಬೇಕು
  • ಕುಟುಂಬಕ್ಕೆ ಸಮಯ ನೀಡಲು ಅವಕಾಶ ಕಡಿಮೆ
  • ವ್ಯಾಪಾರ, ವ್ಯವಹಾರದವರಿಗೆ ದೊಡ್ಡ ಮೊತ್ತದ ಲಾಭ ಸಿಗಲಿದೆ
  • ಐಶ್ವರ್ಯ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ತುಲಾ

RASHI_BHAVISHA_TULA

  • ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ವಿಶ್ರಾಂತಿಯ ಅಗತ್ಯ ತುಂಬಾ ಕಾಡುತ್ತದೆ
  • ಈ ದಿನ ಯಾವುದೇ ಹೊಸ ಕೆಲಸ ಮಾಡಬೇಡಿ
  • ಇಂದು ಸಮಯಾಭಾವ ಅನಿಸಬಹುದು
  • ಕೆಲಸದ ಒತ್ತಡ ಹೆಚ್ಚಾಗಿ ಇರಲಿದೆ
  • ಸಹೋದ್ಯೋಗಿಗಳೊಂದಿಗೆ ಶಿಸ್ತನ್ನು ಕಾಪಾಡಿಕೊಳ್ಳಿ
  • ಸೂರ್ಯ ನಾರಾಯಣನನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಮನೆಯ ಜವಾಬ್ದಾರಿಯಲ್ಲಿ ಸಕ್ರಿಯರಾಗಿರುತ್ತೀರಿ
  • ದೃಢ ವಿಶ್ವಾಸದಿಂದ ಬೇರೆಯವರನ್ನು ಗೆಲ್ಲುತ್ತೀರಿ
  • ಬೇರೆಯವರು ನಿಮ್ಮ ಆಶ್ರಯವನ್ನು ಅಪೇಕ್ಷಿಸುತ್ತಾರೆ ನಿರಾಕರಿಸಬೇಡಿ
  • ಜೀವನ ಸಾಮರಸ್ಯದಿಂದ ಕೂಡಿರುತ್ತದೆ
  • ಇಂದು ಆತ್ಮ ವಿಶ್ವಾಸ ಚೆನ್ನಾಗಿರುತ್ತದೆ
  • ಈ ದಿನ ಪುಣ್ಯಕ್ಷೇತ್ರವನ್ನು ದರ್ಶನ ಮಾಡಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ಧನುಸ್ಸು

RASHI_BHAVISHA_DHANASU

  • ಹೊಸಬರ ಪರಿಚಯದಿಂದ ಸಂತೋಷ ಇರಲಿದೆ
  • ಈ ದಿನ ಬುದ್ದಿವಂತಿಕೆಯಿಂದ ಕೆಲಸ ಮಾಡಿ
  • ವಾಹನ ಅಪಘಾತವಾಗಬಹುದು ಎಚ್ಚರಿಕೆವಹಿಸಿ
  • ಆರೋಗ್ಯದಲ್ಲಿ ಸಮಸ್ಯೆ ಆಗಬಹುದು
  • ದಾಂಪತ್ಯದಲ್ಲಿ ಒತ್ತಡ ಉಂಟಾಗಲಿದೆ
  • ಇಂದು ಭವಿಷ್ಯದ ಬಗ್ಗೆ ಚಿಂತಿಸಿ
  • ಲಕ್ಷ್ಮೀನಾರಾಯಣರ ಅನುಗ್ರಹ ಪಡೆಯಿರಿ

ಮಕರ

RASHI_BHAVISHA_MAKARA

  • ಅನುಭವಿಗಳಿಂದ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು
  • ಕಲಾಕ್ಷೇತ್ರದಲ್ಲಿದವರಿಗೆ  ಪುರಸ್ಕಾರ ಸಿಗಲಿದೆ
  • ಪಿತೃ ಸಂಪತ್ತು ವೃದ್ದಿಯಾಗಲಿದೆ
  • ನಿಮ್ಮ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಲು ಅವಕಾಶ
  • ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ನಿರಾಶೆ ಆಗಬಹುದು
  • ವ್ಯವಹಾರದಲ್ಲಿ ಹೊಸ ಸಿಬ್ಬಂದಿಯ ನೇಮಕಾತಿ ಆಗಲಿದೆ
  • ಶಾರದಾ ಪರಮೇಶ್ವರಿಯನ್ನು ಆರಾಧಿಸಿ

ಕುಂಭ

RASHI_BHAVISHA_KUMBHA

  • ಆರೋಗ್ಯ ಸೇವೆ ಮಾಡುವವರಿಗೆ ಶುಭದಿನ
  • ಇಂದು ಯಾವುದೇ ಒತ್ತಡಗಳಿರುವುದಿಲ್ಲ
  • ಭವಿಷ್ಯದಲ್ಲಿ ಮುಂದುವರಿಯುವ ಬಗ್ಗೆ ಚಿಂತನೆ ಮಾಡಿ
  • ವ್ಯಾಪಾರದಲ್ಲಿ, ವ್ಯವಹಾರದಲ್ಲಿ ಸ್ವಲ್ಪ ನಷ್ಟ ಉಂಟಾಗಬಹುದು
  • ಸ್ನೇಹಿತರೊಂದಿಗೆ ಕಾಲಾಹರಣ ಮಾಡುತ್ತೀರಿ
  • ನಿಮ್ಮ ವರ್ತನೆಯಿಂದ ಹಲವರು ದೂರವಾಗಬಹುದು
  • ಸಂಪತ್ ಲಕ್ಷ್ಮೀಯನ್ನು ಪ್ರಾರ್ಥಿಸಿ 

ಮೀನ

RASHI_BHAVISHA_MEENA

  • ನಿಧಾನವಾಗಿ ನಡೆಯುತ್ತಿರುವ ಕಾರ್ಯಗಳು ತಕ್ಷಣ ನಿಲ್ಲಬಹುದು
  • ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ
  • ತಂದೆಯವರ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
  • ಇಂದು ಅತಿಯಾದ ಶಿಸ್ತು, ಕೋಪ ಬೇಡ
  • ಒಟ್ಟಾರೆ ಈ ದಿನ ಚೆನ್ನಾಗಿರುವುದಿಲ್ಲ 
  • ಭಾವನೆಗಳಿಗೆ ಒಳಗಾಗಿ ಕೆಲಸವನ್ನು ಹಾಳು ಮಾಡಿಕೊಳ್ಳಬೇಡಿ
  • ಹಿರಿಯರ ಆಶೀರ್ವಾದ ಪಡೆಯಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment