/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ತುಂಬಾ ದಿನಗಳ ನಂತರ ಪುಣ್ಯಕ್ಷೇತ್ರಕ್ಕೆ ಹೋಗುವ ಆಲೋಚನೆ ಮಾಡುತ್ತೀರಿ
- ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿ ಮಾಡಬೇಕಾಗುತ್ತದೆ
- ಕೆಟ್ಟವರ ಜೊತೆಯಲ್ಲಿ ಅಂತರ ಕಾಯ್ದುಕೊಳ್ಳಿ
- ವಿರೋಧಿಗಳ ಜೊತೆ ವಾಗ್ವಾದ ನಡೆಯುವ ಸಾಧ್ಯತೆ ಹೆಚ್ಚು
- ಹಣದ ವಿಚಾರ ಬಂದಾಗ ನಿಮಗೆ ತೃಪ್ತಿ ಇರುವುದಿಲ್ಲ
- ಆದಾಯದ ಮೂಲ ಚೆನ್ನಾಗಿರುವುದರಿಂದ ಮನಸ್ಸಿಗೆ ಸಂತೋಷವಿರಲಿದೆ
- ಉಗ್ರ ನರಸಿಂಹನನ್ನು ಪ್ರಾರ್ಥಿಸಿ
ವೃಷಭ
- ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ದಿನವನ್ನು ಕಳೆಯುತ್ತೀರಿ
- ದಿನಚರಿ ಸ್ವಲ್ಪ ಅಸ್ತವ್ಯಸ್ತವಾಗಬಹುದು ಸರಿಪಡಿಸಿಕೊಳ್ಳಿ
- ಹಲವಾರು ಕೆಲಸಗಳು ನಿಮ್ಮ ಮುಂದಿರುತ್ತದೆ
- ಮುಖ್ಯವಾದ ಕೆಲಸಕ್ಕೆ ಅಡ್ಡಿಯಾಗಬಹುದು
- ವಿದೇಶ ಪ್ರಯಾಣ ಮಾಡುವವರಿಗೆ ಶುಭವಿದೆ
- ವಿದೇಶದಿಂದ ಇಲ್ಲಿಗೆ ಬರುವವರಿಗೆ ಯೋಗ ಸಿಗುವಂತಹದ್ದು
- ಬಂಧುಗಳಲ್ಲಿ ನಿಮ್ಮ ಬಗ್ಗೆ ಅಭಿಪ್ರಾಯ ಒಳ್ಳೆಯದಿರುತ್ತದೆ
- ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ
ಮಿಥುನ
- ಇಂದು ಆರ್ಥಿಕವಾಗಿ ಸುಧಾರಣೆಯಾಗುವ ದಿನ
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ವಿದೇಶದಿಂದ ಧನಲಾಭವಾಗುವ ಯೋಗವಿದೆ
- ವಿರೋಧಿಗಳಿಗೆ ಉತ್ತರ ನೀಡಲು ಸಿದ್ಧರಾಗಿರುತ್ತೀರಿ
- ಬೇಸರ ಅನುಭವಿಸುತ್ತಿರುತ್ತೀರಿ ಆದರೆ ಸಾಯಂಕಾಲದ ಹೊತ್ತಿಗೆ ಜಿಗುಪ್ಸೆ ಕಾಡಲಿದೆ
- ಮನಸ್ಸಿಗೆ ಏನೋ ಸಮಾಧಾನ ಉಂಟಾಗಲಿದೆ
- ಗಂಟಲಿನ ಸಮಸ್ಯೆ ಕಾಡಬಹುದು
- ವಿಷ್ಣು ಸಹಸ್ರನಾಮ ಪಠಣೆ ಮಾಡಿ
ಕಟಕ
- ತರಕಾರಿ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ಲಾಭ ಸಿಗುವ ದಿನ
- ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸದಾವಕಾಶ
- ಇಂದು ಪ್ರೇಮಿಗಳಿಗೆ ಶುಭದಿನ
- ಸ್ವಾರ್ಥಕ್ಕೋಸ್ಕರ ಬೇರೆಯವರ ಸಹಾಯ ಕೇಳಬಾರದು
- ನಿಮಗಿರುವ ಸಂಪರ್ಕವು ಉತ್ತಮ ಕಾರ್ಯಗಳಿಗೆ ವಿನಿಯೋಗವಾಗಲಿ
- ನಿಮ್ಮ ಮಾತಿನಿಂದ ಹಲವರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ
- ಶಾಕಾಂಬರಿ ದೇವತೆಯನ್ನು ಆರಾಧನೆ ಮಾಡಿ
ಸಿಂಹ
- ನಿಮ್ಮ ಪ್ರತಿಭೆ, ವರ್ತನೆ, ಸ್ವಭಾವ ಎಲ್ಲವೂ ಕೂಡ ಹಿರಿಯರಿಗೆ ಬಹಳ ಸಂತೋಷವನ್ನುಂಟು ಮಾಡುತ್ತದೆ
- ಈ ದಿನ ಹಿರಿಯರ ಪ್ರೀತಿಗೆ ಪಾತ್ರರಾಗುತ್ತೀರಿ
- ಸ್ನೇಹಿತರೊಂದಿಗೆ ಗಹನವಾದ ವಿಚಾರವನ್ನ ಚರ್ಚಿಸುತ್ತೀರಿ
- ಸಣ್ಣ-ಪುಟ್ಟ ವಿಚಾರಗಳನ್ನು ತಾತ್ಸಾರ ಮಾಡಬೇಡಿ
- ನಿಮ್ಮ ಕೆಲಸವೆ ನಿಮಗೆ ತೃಪ್ತಿ ಕೊಡುವುದಿಲ್ಲ
- ಇಂದು ಆದಾಯದಷ್ಟೇ ಖರ್ಚಿರುತ್ತದೆ
- ಹಳೆಯ ಸಾಲ ತೀರಿಸಲು ಮತ್ತೆ ಸಾಲ ಮಾಡಬಹುದು
- ಕುಲದೇವತಾ ಆರಾಧನೆ ಮಾಡಿ
ಕನ್ಯಾ
- ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಶುಭ ಲಾಭಗಳಿರುತ್ತದೆ
- ನಕರಾತ್ಮಕವಾದ ಚಿಂತನೆಗಳು ಮನಸ್ಸಿನಲ್ಲಿ ಭಯವನ್ನು ಹುಟ್ಟಿಸುತ್ತದೆ
- ಹಲವರಿಗೆ ನಿಮ್ಮ ಮೇಲೆ ಕೋಪವಿರುತ್ತದೆ
- ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಕಾಡಬಹುದು
- ಈ ದಿನ ಮಾನಸಿಕವಾಗಿ ಭಯ ಕಾಡಲಿದೆ
- ಸ್ನೇಹಿತರು ಮತ್ತು ಬಂಧುಗಳೊಂದಿಗೆ ವಿಶೇಷವಾದ ಬಾಂಧವ್ಯವನ್ನು ಉಳಿಸಿಕೊಳ್ಳುತ್ತೀರಿ
- ಸರ್ಕಾರಿ ಕೆಲಸಕ್ಕೆ ಅಡಚಣೆ ಆಗಬಹುದು
- ಕುಲದೇವತಾ ಆರಾಧನೆ ಮಾಡಿ
ತುಲಾ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
- ಆಹಾರ ಮಿತವಾಗಿರಲಿ ಅಲರ್ಜಿ ಸಮಸ್ಯೆಯಾಗಬಹುದು
- ಪ್ರೀತಿ ಪಾತ್ರರ ಮೇಲೆ ಅತಿಯಾದ ಅವಲಂಬನೆ ಬೇಡ
- ಕಾರ್ಯಕ್ಷೇತ್ರದಲ್ಲಿ ನಿಮಗೆ ಒಳ್ಳೆಯ ಹೆಸರು ಬರುತ್ತದೆ
- ಇಂದು ಸಿಟ್ಟಿನಿಂದ ಯಾರೊಂದಿಗೂ ಮಾತನಾಡಬಾರದು
- ಹವ್ಯಾಸಿ ಕಲಾವಿದರು ವಸ್ತುವಿನ ಖರೀದಿಗೆ ಹೆಚ್ಚು ಹಣ ಖರ್ಚು ಮಾಡುತ್ತೀರಿ
- ಧನ್ವಂತರಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ಇಂದು ಆರ್ಥಿಕ ಲಾಭವಿರುವ ದಿನ
- ವಿನಾಕಾರಣ ಹಣವನ್ನು ವಸ್ತು ಖರೀದಿಗೋಸ್ಕರ ವ್ಯಯ ಮಾಡುತ್ತೀರಿ
- ಸಣ್ಣ ಪುಟ್ಟ ತಪ್ಪಿಗೋಸ್ಕರ ಹಣ ವ್ಯಯವಾಗಬಹುದು
- ಕುಟುಂಬದ ವಾತಾವರಣ ಚೆನ್ನಾಗಿರುವಂತೆ ಕಾಪಾಡುವ ಜವಾಬ್ದಾರಿ ನಿಮ್ಮದು
- ಮನೆಯವರಿಗಾಗಿ ಸ್ವಲ್ಪ ಸಮಯ ಮೀಸಲಿಡಿ
- ಎಲ್ಲಾ ಕೆಲಸಗಳು ಕೂಡ ತುಂಬಾ ಆತುರವಾಗಿ ನಡೆಯಲಿದೆ
- ಸಂಪತ್ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ನಿಮ್ಮ ಜೀವನದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ
- ಮಾತು ಮತ್ತು ಅಭಿಪ್ರಾಯ ದ್ವೇಷಕ್ಕೆ ಕಾರಣವಾಗುತ್ತದೆ
- ಆರೋಗ್ಯ ಸಮಸ್ಯೆ ಇದ್ದರೆ ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬೇಡಿ
- ನಿರ್ಲಕ್ಷ್ಯದಿಂದ ಮುಖ್ಯ ಕೆಲಸಗಳನ್ನು ಕೈ ಬಿಡುವ ಸಾಧ್ಯತೆ ಇದೆ
- ಶ್ರಮದಿಂದ ಕಾರ್ಯ ಮುಗಿಸಲು ಪ್ರಯತ್ನಿಸುತ್ತೀರಿ
- ಹಣದ ಕೊರತೆ ನಿಮಗೆ ಕಾಡಬಹುದು
- ನಿಮ್ಮ ಸ್ವಭಾವ ಅನುಮಾನಾಸ್ಪದವಾಗಿ ಕಾಣುತ್ತದೆ
- ಕುಲದೇವತೆಯನ್ನು ಪ್ರಾರ್ಥಿಸಿ
ಮಕರ
- ಯಾವುದೇ ಹೊಸ ಕೆಲಸಗಳನ್ನ ಪ್ರಾರಂಭಿಸಬೇಡಿ
- ಮಕ್ಕಳಿಂದ ಚಿಂತೆ, ಹಣದ ಖರ್ಚು ನಿಮ್ಮ ಮುಂದೆ ಸವಾಲಾಗಿ ಕಾಣುವಂತಹದ್ದು
- ಬೇರೆಯವರು ನಿಮಗೆ ತಿಳುವಳಿಕೆ ಹೇಳುವಂತೆ ಮಾಡಿಕೊಳ್ಳಬೇಡಿ
- ಇಂದು ಹಣ ಹೂಡಿಕೆಗೆ ಒಳ್ಳೆಯ ದಿನ
- ಆರೋಗ್ಯದ ವಿಚಾರಕ್ಕೆ ಒಮ್ಮೆ ಜಾತಕವನ್ನ ಪರಿಶೀಲಿಸಿಕೊಳ್ಳುವುದು ಒಳ್ಳೆಯದು
- ಇಂದು ಹಳೆಯ ರೋಗ ಮತ್ತೆ ಕಾಡಬಹುದು
- ವ್ಯಾವಹಾರಿಕವಾಗಿ ಸ್ವಲ್ಪ ದುರ್ಬಲರಾಗುತ್ತೀರಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕುಂಭ
- ಸ್ತ್ರೀಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ
- ಒತ್ತಡಕ್ಕೆ ಮಣಿದು ಕೆಲವು ಕೆಲಸಗಳನ್ನು ಮಾಡಬೇಕಾಗತ್ತದೆ
- ಈ ದಿನ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಬಹುದು
- ನಿಮ್ಮ ಜವಾಬ್ದಾರಿ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ
- ಸತ್ಸಂಗ, ಸಭೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ
- ಆತ್ಮ ಸಾಕ್ಷಿಗೆ ಸರಿ ಅನಿಸಿದ ಕೆಲಸವನ್ನು ಮಾತ್ರ ಮಾಡಿ
- ದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
- ಶೀತ ಸಂಬಂಧಿ ತೊಂದರೆ ನಿಮ್ಮನ್ನು ಕಾಡಬಹುದು
- ಸಹೋದರರು ಜಗಳಕ್ಕೆ ಒಳಗಾಗುವಂತೆ ಅವಕಾಶ ಮಾಡಿಕೊಡುತ್ತೀರಿ
- ಕುಟುಂಬದ ಕಿರಿಕಿರಿಗಳನ್ನು ದೂರಮಾಡಿಕೊಂಡು ಮನಸ್ಸನ್ನ ಪ್ರಶಾಂತವಾಗಿಟ್ಟುಕೊಳ್ಳಬೇಕು
- ಇಂದು ಕೈ ಹಾಕಿದ ಕೆಲಸದಲ್ಲಿ ಯಶಸ್ಸಿದೆ
- ಚಲನಚಿತ್ರ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾದ ದಿನ
- ಸಾಯಂಕಾಲದ ಸಮಯದಲ್ಲಿ 108 ಬಾರಿ ಚಂದ್ರಾಯ ನಮಃ ಅಂತ ಪಠಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ