/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ಭಾನುವಾರ ಸಂಜೆ 4.30 ರಿಂದ 6.00 ಗಂಟೆವರೆಗೆ ಇರಲಿದೆ.
ಮೇಷ ರಾಶಿ
- ಇಂದಿನ ದಿನಮಾನಕ್ಕೆ ಅನುಗುಣವಾಗಿ ಹಿರಿಯರನ್ನು ನೀವು ಒಪ್ಪುವುದಿಲ್ಲ
- ಇವತ್ತಿನ ಕಾಲದ ಮಕ್ಕಳನ್ನು ಕೂಡ ಹಿರಿಯರು ಒಪ್ಪುವುದಿಲ್ಲ
- ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳು ಮತ್ತು ಶಿಕ್ಷಕರಿಂದ ಸಹಾಯ ಪಡೆಯುತ್ತಾರೆ
- ಸಾಯಂಕಾಲದಲ್ಲಿ ಅನಿರೀಕ್ಷಿತವಾದ ಭೇಟಿಯಿಂದ ಶುಭ ಸಮಾಚಾರ ಸಿಗುವಂತಹದ್ದು
- ಪ್ರಮುಖ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕ ಉಂಟಾಗುತ್ತದೆ
- ಪ್ರೇಮಿಗಳಿಗೆ ಶುಭ ದಿನವಾದರೂ ಸಮಸ್ಯೆ ಉಂಟಾಗಬಹುದು ಜಾಗ್ರತೆವಹಿಸಿ
- ಉದಾರ ಸ್ವಭಾವವನ್ನು ನೋಡಿ ಅಕ್ಕ-ಪಕ್ಕದವರು, ಬಂಧುಗಳು ಆಶ್ಚರ್ಯ ಪಡುತ್ತಾರೆ
- ಶ್ರೀರಾಮ ಪರಿವಾರ ದೇವತೆಯನ್ನು ಉಪಾಸನೆ ಮಾಡಿ
ವೃಷಭ
- ಮಂಗಳ ಕಾರ್ಯದ ಬಗ್ಗೆ ಚರ್ಚೆ ನಡೆಯಬಹುದು
- ಮನೆಯಲ್ಲಿ ಕಳೆಯುವ ಪ್ರತಿಯೊಂದು ಕ್ಷಣವು ಮೌಲ್ಯಯುತವಾಗಿರುತ್ತದೆ
- ವ್ಯಾಪಾರ, ವ್ಯವಹಾರ, ಬೇರೆ ಕಾರ್ಯ ಯೋಜನೆಯಿದ್ದರೆ ಅವೆಲ್ಲವೂ ಕೂಡಿ ಬರುವ ಸಮಯ
- ಈ ದಿನ ಚೆನ್ನಾಗಿದೆ ಅನಗತ್ಯ ಕೆಲಸಗಳಿಗೆ ಸಮಯ ವ್ಯರ್ಥ ಮಾಡಬೇಡಿ
- ಮಕ್ಕಳು ಮತ್ತು ವಿದ್ಯಾರ್ಥಿಗಳು ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ
- ಮನೆಯವರಿಗೆ ಬಹಳ ಸಂತೋಷ ಮತ್ತು ತೃಪ್ತಿ ಸಿಗಲಿದೆ
- ಮಹಾ ವಿಷ್ಣುವಿನ ಆರಾಧನೆ ಮಾಡಿ
ಮಿಥುನ
- ಇಂದು ಪ್ರೇಮಿಗಳಿಗೆ ಶುಭದಿನ
- ಸಮಸ್ಯೆ ಬಗೆಹರಿಸುವಲ್ಲಿ ನೀವು ಯಶಸ್ವಿಯಾಗುವಿರಿ
- ಮನೆಯಲ್ಲಿ ಮದುವೆ ವಿಚಾರ ಮುನ್ನೆಲೆಗೆ ಬಂದು ಶುಭವನ್ನು ಕೊಡುವಂತಹದ್ದು
- ಮನೆಯಲ್ಲಿ ನಿಮ್ಮ ಮಾತಿಗೆ ಬೇಸರ ವ್ಯಕ್ತವಾಗಬಹುದು
- ಬೇರೆ ಬೇರೆ ವಿಚಾರಗಳಲ್ಲಿ ಮನೆಯವರೆಲ್ಲ ನಿಷ್ಠೂರವಾಗುವ ಸಾಧ್ಯತೆಗಳಿವೆ
- ಯಾರು ವಿಶೇಷವಾದ ಪ್ರತಿಭೆಯನ್ನು ಹೊಂದಿರುವವರು ಪ್ರದರ್ಶಿಸಲು ಉತ್ತಮವಾದ ದಿನ
- ವೈಶ್ರವಣನ ಉಪಾಸನೆ ಮಾಡಿ
ಕಟಕ
- ಕಷ್ಟಪಟ್ಟು ದುಡಿದು ತಿನ್ನುವವರಿಗೆ ಈ ದಿನ ಒಳಿತಲ್ಲ
- ರಾತ್ರಿಯ ಹೊತ್ತಿಗೆ ಮನೆಯಲ್ಲಿ ಜಗಳವಾಗಬಹುದು
- ಹಣದ ವಿಚಾರದಲ್ಲಿ ಗೊಂದಲ,ದೋಷ, ನಷ್ಟ ಆಗುವ ಸಾಧ್ಯತೆ ಇದೆ
- ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತೊಂದರೆ ಅನುಭವಿಸುತ್ತೀರಿ
- ಆಹಾರ- ಔಷದೋಪಚಾರ ಇವೆರಡು ವ್ಯತ್ಯಾಸ ಆಗಿ ಆತಂಕವಾಗುತ್ತದೆ
- ತೆರೆದ ಮನಸ್ಸಿನಿಂದ ಮಾತನಾಡಬೇಕು ಇಲ್ಲ ಅಂದರೆ ತೊಂದರೆ ಆಗಬಹುದು
- ದುರ್ಗಾರಾಧನೆ ಮಾಡಿ
ಸಿಂಹ
- ಕೋಪ, ಅಸಹನೆ, ತಾಳ್ಮೆಯಿಲ್ಲದೆ ಇರುವುದು ಕೆಡಕನ್ನ ಉಂಟು ಮಾಡಬಹುದು
- ಮನಸ್ಸನ್ನ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ವಿಫಲ ಸಾಧ್ಯತೆ
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
- ಅಹಂಭಾವದ ಕಾರಣದಿಂದಾಗಿ ತುಂಬಾ ಸಮಸ್ಯೆಗಳು ಕಾಡಬಹುದು
- ವೈವಾಹಿಕ ಜೀವನದಲ್ಲಿ ವ್ಯತ್ಯಯ, ಗೊಂದಲ, ಗಲಾಟೆ ಸಾಧ್ಯತೆ
- ಆದರೆ ಹೊಂದಾಣಿಕೆ ಮಾಡಿಕೊಂಡರೆ ಒಳ್ಳೆಯದು
- ಉದ್ಯೋಗದಲ್ಲಿ ನಿಮ್ಮ ಗುರಿ ಸಾಧಿಸಲು ಹಲವಾರು ಸವಾಲುಗಳು ಎದುರಾಗಬಹುದು
- ಶ್ರೀ ಸೂಕ್ತಮಂತ್ರ ಪಠಿಸಿ
ಕನ್ಯಾ
- ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ ಗಮನವಿರಲಿ
- ನಿಮ್ಮ ವಿದ್ಯೆ, ಬುದ್ಧಿ ಮತ್ತು ಭಾವನಾತ್ಮಕವಾದಂತದ್ದು ನಿಮಗೆ ಗೆಲುವಾಗಿ ಪರಿಣಮಿಸಬಹುದು
- ಪೂರ್ವ ಜನ್ಮದ ಸುಕೃತ ನೆನೆದು ಬಹಳ ಬೇಸರ ಪಡಬಹುದು
- ಯೋಗ್ಯರಲ್ಲದವರ ಪರಿಚಯದವರ ಜೊತೆ ಅನಿವಾರ್ಯವಾಗಿ ಕೆಲಸ ಮಾಡಬೇಕಾಗಬಹುದು
- ಧನಾತ್ಮಕ ಚಿಂತನೆಯು ನಿಮಗೆ ಯಶಸ್ಸು ನೀಡಬಹುದು
- ನಿಮ್ಮ ವೃತ್ತಿಯಲ್ಲಿ ಕಿರಿಯರಿಂದ ತೊಂದರೆ, ಅಡ್ಡಿ-ಆತಂಕ ಸಾಧ್ಯತೆ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ, ಮೃತ್ಯುಂಜಯ ಮಂತ್ರ ಪಠಿಸಿ
ತುಲಾ
- ಹೊಸ ಯೋಜನೆಯನ್ನು ಪ್ರಾರಂಭಿಸಲು ಅವಕಾಶವಿದೆ
- ಸ್ವಂತ ಉದ್ದಿಮೆಯನ್ನು ಮಾಡುವವರಿಗೆ ಈ ದಿನ ಚೆನ್ನಾಗಿದೆ
- ನಿಮ್ಮ ಮೂಲ ಉದ್ದೇಶ ಏನಿದೆಯೋ ಅದನ್ನು ತಲುಪಲು ಅವಕಾಶವಿಲ್ಲ
- ವೈದ್ಯರಿಗೆ ಹಿನ್ನಡೆ ನಷ್ಟ ಆಗಬಹುದಾದ ದಿನವಾಗಿದೆ
- ನೌಕರಿ ಅಥವಾ ವೃತ್ತಿಯಲ್ಲಿ ಹೊಸ ಆಹ್ವಾನಗಳು ಬರಬಹುದು
- ಬೆನ್ನು ಮೂಳೆ ನೋವಿನಿಂದ ಬಳಲುತ್ತಿರುವವರಿಗೆ ತೊಂದರೆಯಿದೆ ಎಚ್ಚರಿಕೆ
- ನವಗ್ರಹರು ಅದರಲ್ಲೂ ಮಂಗಳಗ್ರಹ ಆರಾಧನೆ ಮಾಡಿ
ವೃಶ್ಚಿಕ
- ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲಗಳು ಉಂಟಾಗಬಹುದು
- ಕುಟುಂಬದವರ ವಿಶ್ವಾಸ ಚೆನ್ನಾಗಿರಬೇಕು ಇಲ್ಲದಿದ್ದರೆ ವ್ಯವಹಾರ ಸುಗಮವಾಗಿರುವುದಿಲ್ಲ
- ಮನೆ ಮತ್ತು ನಿವೇಶನ ಈ ದಿನ ಖರೀದಿಸಿದರೆ ನಷ್ಟ ಆಗಬಹುದು
- ಮನೆ, ನಿವೇಶನವನ್ನು ಮಾರುವವರಿಗೆ ಲಾಭ ಸಿಗುವ ದಿನ
- ಸರ್ಕಾರದ ನಿಯಮಗಳನ್ನ, ಕಾನೂನು ಕ್ರಮಗಳನ್ನ ಸರಿಯಾಗಿ ಪಾಲಿಸದೆ ನಿಮಗೆ ಅಡ್ಡಿಯಾಗಬಹುದು
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭವಿದೆ
- ಭೂ ವರಾಹಸ್ವಾಮಿಯನ್ನು ಪ್ರಾರ್ಥಿಸಿ
ಧನುಸ್ಸು
- ವೃತ್ತಿಪರ ಮಹಿಳೆಯರಿಗೆ ಆರ್ಥಿಕ ನೆರವು ಸಿಗಬಹುದು
- ದೈನಂದಿನ ದಿನಚರಿಯಲ್ಲಿ ಸ್ವಲ್ಪ ವ್ಯತ್ಯಯ ಕಾಣಬಹುದು
- ಯಾವುದೇ ವ್ಯವಹಾರ ಅಥವಾ ದುಡ್ಡಿನ ವಿಚಾರಗಳನ್ನು ಮನೆಯಲ್ಲಿ ತಿಳಿಸುವುದು ಉತ್ತಮ
- ಹಿಂದೆ ಮಾಡಿದ ಯಾವುದೊ ವ್ಯವಹಾರದ ದುಡ್ಡು ಈ ದಿನ ನಿಮ್ಮ ಕೈ ಸೇರಬಹುದು
- ವಿದ್ಯಾರ್ಥಿಗಳಿಗೆ ಕೆಲವು ವಿಚಾರಕ್ಕೆ ಜಗಳ ಆಗುವ ಸೂಚನೆ ಇದೆ
- ನೌಕರಿಯಲ್ಲಿ ಮತ್ತು ವೃತ್ತಿಯಲ್ಲಿ ಸಮಾಧಾನವಿರುತ್ತದೆ
- ಮಹಾಲಕ್ಷ್ಮಿಯನ್ನು ಆರಾಧಿಸಿ
ಮಕರ
- ಬೇರೆಯವರೊಂದಿಗೆ ಮಾತನಾಡುವಾಗ ಎಚ್ಚರಿಕೆಯನ್ನು ವಹಿಸಬೇಕು
- ಬೆಳಗ್ಗೆ ಶುಭ ಸುದ್ದಿ ಕೇಳಿ ಮನಸ್ಸು ಆನಂದದಾಯಕವಾಗಿರುತ್ತದೆ
- ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕಾಗುತ್ತದೆ ಮನೆ, ಭೂಮಿ ಮಾರುವವರಿಗೆ ಲಾಭ,
- ನವ ವಿವಾಹಿತರಿಗೆ ಪ್ರವಾಸದ ಖುಷಿ,ಸಂತೋಷ ಮನೆ ಮಾಡಿರುತ್ತದೆ
- ಅಪೂರ್ಣವಾದ ಕೆಲಸಗಳಿಂದ ಅವಮಾನವಾಗುವ ಸಾಧ್ಯತೆ
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೋನಸ್ ಸಿಗುವ ಸಾಧ್ಯತೆ ಇದೆ
- 11 ಬಾರಿ ಓಂ ನಮಃ ಶಿವಾಯ ಅಂತ ಪಠನೆ ಮಾಡಿ
ಕುಂಭ
- ತುಂಬಾ ಕೋಪ, ತಾಳ್ಮೆ ಕಳೆದುಕೊಳ್ಳುವ ಪ್ರಸಂಗ ಬರಬಹುದು ಜಾಗ್ರತೆ ವಹಿಸಿ
- ಆಂತರಿಕ ಶತ್ರುಗಳು ನಿಮಗೆ ಅವಮಾನಿಸಲು ಕಾಯುತ್ತಿರುತ್ತಾರೆ
- ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿ ತೊಂದರೆಯಾಗುವ ಸಾಧ್ಯತೆ ಇದೆ
- ನೀವು ಎಷ್ಟೇ ಪ್ರಯತ್ನಿಸಿದರೂ ಶತ್ರುಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ
- ನೀವು ಆಡಿದ ಮಾತುಗಳು ಹಲವರಿಗೆ ಮಾರ್ಗದರ್ಶನ ಆಗುತ್ತದೆ
- ಕುಟುಂಬದ ಸದಸ್ಯರು ನಿಮ್ಮ ಮಾತನ್ನು ಕೇಳುವಂತಹದ್ದು
- ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥಿಸಿ
ಮೀನ
- ಮಾನಸಿಕ ಒತ್ತಡ, ಖರ್ಚು ಎಲ್ಲವೂ ಒಟ್ಟಿಗೆ ಆಕ್ರಮಿಸಬಹುದು
- ತುಂಬಾ ಅನಗತ್ಯವಾದಂತಹ ಆಯೋಜಿಸಿದ್ದ ಕಾರ್ಯಕ್ರಮ ಸ್ಥಗಿತವಾಗಬಹುದು
- ಇಂದು ಅಧಿಕ ಖರ್ಚು ಇರುವಂತಹ ದಿನ
- ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷಾ ಸಿದ್ಧತೆಗೆ ಅವಕಾಶವಿದ್ದರೂ ಮನಸ್ಸಿರುವುದಿಲ್ಲ
- ಇದರ ಮಧ್ಯೆ ಬೇರೆ ಬೇರೆ ಕಿರಿಕಿರಿಗಳಿಂದ ದಿನ ಕಳೆಯುತ್ತದೆ
- ಆರೋಗ್ಯದಲ್ಲಿ ವ್ಯತ್ಯಾಸದಿಂದ ಕೆಲಸದಲ್ಲಿ ಅಡಚಣೆಯಾಗಬಹುದು
- ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಬಹುದು ಜಾಗ್ರತೆ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ