/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲವಾಗಲಿದೆ
- ತಂದೆಯವರ ಸಲಹೆಯಂತೆ ನಡೆದುಕೊಳ್ಳಿ ಒಳ್ಳೆಯದು
- ಪರೀಕ್ಷೆಗಳಲ್ಲಿ ಯಶಸ್ಸು ಕಾಣುವಂತ ದಿನ
- ಒಳ್ಳೆಯ ಕೆಲಸಗಳನ್ನು ಮುಂದೂಡದೆ ಸರಿಯಾದ ಸಮಯಕ್ಕೆ ಮಾಡಿ
- ಅಧಿಕಾರಿಗಳೊಂದಿಗೆ ಮಾತುಕತೆ ಮಾಡಬೇಕಾದರೆ ಎಚ್ಚರವಿರಲಿ
- ಬೇರೆಯವರ ವಸ್ತುಗಳ ಬಗ್ಗೆ ಆಸಕ್ತಿ ತೋರಿಸಬಾರದು
- ಧನಾತ್ಮಕವಾಗಿ ಚಿಂತನೆಯಲ್ಲಿರಬೇಕು ಅನ್ನೋ ಯೋಚನೆ ನಿಮ್ಮ ಮನಸ್ಸಲ್ಲಿ ಬರಬೇಕು
- ಹಿರಿಯರ ಆಶೀರ್ವಾದ ಪಡೆಯಿರಿ
ವೃಷಭ
- ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆಲಸ್ಯ ಮಾಡಬಾರದು
- ನಿಮ್ಮ ಶಿಸ್ತು ಅಥವಾ ಸ್ವಭಾವ ಹೊಸಬರಿಗೆ ಮಾದರಿಯಾಗಬಹುದು
- ಈ ದಿನ ಮಕ್ಕಳ ಪ್ರಗತಿಯ ಬಗ್ಗೆ ಚಿಂತನೆ ನಡೆಸಿ
- ವಿವಾಹಿತರು ಜಗಳ ಮಾಡಿಕೊಳ್ಳುವ ಸಾಧ್ಯತೆ ಇದೆ
- ಇಂದು ಹಿರಿಯರ ಬೆಂಬಲ ದೊರಕುತ್ತದೆ
- ಪ್ರೇಮಿಗಳಿಗೆ ಅವಮಾನ ಆಗುವುದು, ಬೇರೆಯವರಿಂದ ಬೆದರಿಕೆ ಬರಬಹುದು
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ
ಮಿಥುನ
- ಕೆಟ್ಟ ಕನಸುಗಳು ಈ ದಿನ ನಿಮ್ಮನ್ನು ಕಾಡಬಹುದು
- ಕುಟುಂಬದ ವಾತಾವರಣ ಶಾಂತಿಯುತವಾಗಿರುತ್ತದೆ
- ಆಯ್ಕೆಗಳು ಹೆಚ್ಚಾಗಿದ್ದರೆ ಗೊಂದಲ ಉಂಟಾಗಬಹುದು
- ಆದಾಯವನ್ನ ಗಮನಿಸದೆ ಖರ್ಚಿಗೆ ಮುಂದಾಗಬಾರದು
- ಸಾಯಂಕಾಲದ ಹೊತ್ತಿಗೆ ಸಮಾಧಾನದ ಸೂಚನೆ ಇದೆ
- ಹೆಚ್ಚು ಹಣ ಖರ್ಚಾಗುವ ದಿನ
- ಕುಬೇರ ಲಕ್ಷ್ಮಿಯನ್ನು ಆರಾಧಿಸಿ
ಕಟಕ
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ ಮತ್ತು ಅದಾಯವಿರುವ ದಿನ
- ಕುಟುಂಬದಲ್ಲಿ ಗೌರವ ಹೆಚ್ಚಾಗಲಿದೆ
- ನೀರಿನ ಭಯ ಅಥವಾ ಜಲಕಂಟಕ ಕಾಡಬಹುದು ಗಮನಹರಿಸಿ
- ಸಣ್ಣ ಪುಟ್ಟ ವಿಚಾರಗಳಿಗೆ ನೀವು ಗೊಂದಲವನ್ನು ಉಂಟು ಮಾಡಿಕೊಳ್ಳುತ್ತೀರಿ
- ಸಮಸ್ಯೆಗೆ ಪರಿಹಾರ ದೊರಕುವುದು ತಡವಾಗಬಹುದು
- ವಾದ-ವಿವಾದವನ್ನ ಮಾಡುತ್ತೀರಿ, ಸಂತೋಷದ ಸಮಯ ಹಾಳಾಗಬಹುದು
- ನವದಂಪತಿಗಳಿಗೆ ಪ್ರವಾಸದ ಯೋಗವಿರುವ ದಿನ
- ವರುಣ ದೇವರನ್ನು ಪ್ರಾರ್ಥಿಸಿ
ಸಿಂಹ
- ನೌಕರರು ತಮ್ಮ ಮೇಲಾಧಿಕಾರಿಗಳಿಂದ ಹೊಗಳಿಕೆಯನ್ನ ನಿರೀಕ್ಷಿಸಬಹುದು
- ಸಂತೋಷವನ್ನು ಸರಿಯಾಗಿ ಅನುಭವಿಸಲು ಆಲಸ್ಯವನ್ನು ದೂರ ಮಾಡಿ
- ಇಂದಿನ ಕೆಲಸ ಇಂದೇ ಮಾಡಿದರೆ ಒಳ್ಳೆಯದು
- ತುಂಬಾ ಸೋಮಾರಿತನ, ಆಲಸ್ಯ ಕಾಡಬಹುದು
- ಅಂದುಕೊಂಡ ಕೆಲಸವನ್ನು ಸಾಧಿಸುವ ದಿನ
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆ
- ಮಾರುತಿಯನ್ನು ಆರಾಧನೆ ಮಾಡಿ
ಕನ್ಯಾ
- ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
- ವ್ಯಾಪಾರ ನಿಮಿತ್ತ ಪ್ರವಾಸವನ್ನು ಮಾಡಬಹುದು
- ಒಡ ಹುಟ್ಟಿದವರೊಡನೆ ಅನ್ಯೋನ್ಯತೆ ಹೆಚ್ಚಾಗುವ ದಿನ
- ನಾಯಕತ್ವದ ಗುಣ ನಿಮಗೆ ಗೌರವವನ್ನು ಹೆಚ್ಚಿಸುತ್ತದೆ
- ವೃತ್ತಿ, ನೌಕರಿ, ವಿದ್ಯಾರ್ಥಿಯರಿಗೆ ವಿದ್ಯಾಕ್ಷೇತ್ರದಲ್ಲಿ ಶ್ಲಾಘನೆ ಸಿಗಲಿದೆ
- ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುವುದರಿಂದ ಸಂತೋಷವಾಗಿ ಈ ದಿನ ಕಳೆಯುತ್ತೀರಿ
- ಗಣಪತಿಗೆ ಬಿಳಿ ಎಕ್ಕದ ಹೂ ಸಮರ್ಪಣೆ ಮಾಡಿ
ತುಲಾ
- ನಾಟಕ, ಚಲನಚಿತ್ರ ರಂಗದಲ್ಲಿ ಸಾಧನೆ ಮಾಡಿದವರಿಗೆ ಗೌರವ ಸಿಗುವಂತ ದಿನ
- ಮಾನಸಿಕವಾಗಿ ಹೆಚ್ಚು ಒತ್ತಡವಿರುವ ದಿನ
- ಮನೆಯ ಅಲಂಕಾರ ಅಥವಾ ನವೀಕರಣಕ್ಕೆ ಹೆಚ್ಚು ಹಣ ಖರ್ಚು ಮಾಡುವ ದಿನವಾಗಿದೆ
- ಅಗತ್ಯವಾಗಿ ಬೇರೆಯವರ ಕೆಲಸಗಳನ್ನು ನೀವು ಮಾಡಬೇಕಾಗಬಹುದು
- ಇಂದು ವೃತ್ತಿಯಲ್ಲಿ ಬಡ್ತಿ ಸಿಗಲಿದೆ
- ಕಲಾ ರಸಿಕರಿಗೆ, ಕಲಾವಿದರಿಗೆ ಉತ್ತಮವಾದ ಸಮಯ
- ಗಂಭೀರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಹೆಚ್ಚು ಗಮನ ಕೊಡಿ
- ಚಂಡಿಕೇಶ್ವರನ ಪ್ರಾರ್ಥನೆ ಮಾಡಿ
ವೃಶ್ಚಿಕ
- ವಿದ್ಯಾರ್ಥಿಗಳಿಗೆ ಬಹಳ ಕಠಿಣ ಪರಿಶ್ರಮದ ದಿನ
- ಬೆನ್ನು ನೋವು ಸಮಸ್ಯೆ ಕಾಡಬಹುದು
- ಇಂದು ದೂರದ ಪ್ರಯಾಣ ಮುಂದೂಡಿದರೆ ಒಳ್ಳೆಯದು
- ನಿಮ್ಮ ಹವ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬಹುದು
- ಅಜೀರ್ಣ ಸಮಸ್ಯೆ ತೊಂದರೆಯಾಗಿ ಪರಿಣಮಿಸಬಹುದು
- ಪ್ರೇಯಸಿ, ಪ್ರಿಯಕರನ ಬಗ್ಗೆ ನಂಬಿಕೆ ಇಡಬೇಕಾದ ದಿನ
- ನಿಮ್ಮ ವರ್ತನೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ
- ಶಿವಾರಾಧನೆ ಮಾಡಿ
ಧನುಸ್ಸು
- ಹಿರಿಯರ ಅಥವಾ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವ ಸಾಧ್ಯತೆ
- ಬೇರೆಯವರ ಸಹಾಯವನ್ನು ಇಂದು ನಿರೀಕ್ಷೆ ಮಾಡಬೇಡಿ
- ಮಾನಸಿಕವಾದ ಭಯ ಕಾಡುವ ಸಾಧ್ಯತೆಯಿದೆ
- ಸಮಯದ ದುರುಪಯೋಗವಾಗುವ ಸಾಧ್ಯತೆಯಿದೆ ಎಚ್ಚರ
- ಅಪೂರ್ಣವಾದ ಕಾರ್ಯಗಳ ಬಗ್ಗೆ ಚಿಂತನೆ ಮಾಡಿ ಶುಭವಾಗಬಹುದು
- ಇಂದು ಹೊಟ್ಟೆಯ ನೋವು, ಉರಿ ಕಾಣಬಹುದು
- ಕಮೀಷನ್ ಏಜೆಂಟ್ಗಳಿಗೆ ಲಾಭದ ದಿನ
- ಲಕ್ಷ್ಮೀನರಸಿಂಹ ಸ್ವಾಮಿಯನ್ನು ಉಪಾಸನೆ ಮಾಡಿ
ಮಕರ
- ಹಲವು ವಿಚಾರಗಳಿಗೆ ಕುಟುಂಬದವರ ಬೆಂಬಲ ಸಿಗುತ್ತದೆ
- ಹಳೆಯ ಸಮಸ್ಯೆ ಬಗೆಹರಿಯುವ ದಿನ
- ಹೆಣ್ಣು ಮಕ್ಕಳು ತಮ್ಮ ಆಭರಣಗಳ ಬಗ್ಗೆ ಹೆಚ್ಚು ಗಮನಹರಿಸಿ
- ಉದ್ಯೋಗ ಬದಲಾವಣೆಗೆ ಅವಕಾಶವಿದೆ
- ಮಡದಿ-ಮಕ್ಕಳೊಂದಿಗೆ ಸಮಯ ಕಳೆಯಬಹುದು
- ಸ್ನೇಹಿತರ ಆಕಸ್ಮಿಕ ಭೇಟಿ ಆಶ್ಚರ್ಯ ತರಬಹುದು
- ಕಾರ್ತವೀಱರ್ಜುನನ್ನು ಸ್ಮರಣೆ ಮಾಡಿ
ಕುಂಭ
- ಈ ದಿನ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ
- ಇಂದು ಬಿಳಿ ಬಟ್ಟೆ ಧರಿಸಿ ಮನಸ್ಸಿಗೆ ಸಂತೋಷ ಸಿಗುತ್ತದೆ
- ನಿಮ್ಮ ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ
- ಈ ದಿನ ನಿಮ್ಮ ಕಿರಿಯರನ್ನು ಗೌರವಿಸಿ
- ಇಂದು ನಿಮ್ಮ ಆತ್ಮೀಯರಿಂದ ಬೇಸರವಾಗಬಹುದು
- ವೈವಾಹಿಕ ವಿಚಾರ ಅಥವಾ ದಾಂಪತ್ಯದಲ್ಲಿ ಭಿನ್ನಾಬಿಪ್ರಾಯ, ಕಲಹ ಸಾಧ್ಯತೆ
- ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಮೀನ
- ಅಪರಿಚಿತರನ್ನು ನಂಬಿದರೆ ದ್ರೋಹವಾಗುವ ಸಾಧ್ಯತೆಯಿದೆ ಎಚ್ಚರಿಕೆ
- ಇಂದು ವಿಚಾರ ಮಾಡದೇ ಯಾರ ಜೊತೆಗೂ ಸ್ನೇಹ ಮಾಡಬೇಡಿ
- ಬಂಧುಗಳ ಮಾತಿನಿಂದ ಬೇಸರವಾಗಬಹುದು
- ಹಣ ಕಳೆದುಕೊಳ್ಳುವ ಅಥವಾ ಕಳ್ಳತನದ ಸೂಚನೆಯಿದೆ ಹೆಚ್ಚು ಗಮನವಿರಲಿ
- ವಿದೇಶ ಪ್ರವಾಸದಲ್ಲಿ ತೊಂದರೆ ಸಾಧ್ಯತೆ
- ಕಾನೂನಿನ ವಿಚಾರಗಳು ಬಹಳ ಜಟಿಲವಾಗಬಹುದು
- ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ