ಪ್ರಯಾಣಕ್ಕೆ ಈ ದಿನ ಶುಭವಲ್ಲ, ಕೆಲಸಗಳಲ್ಲಿ ಕಿರಿಕಿರಿ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ  1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ನಿಮ್ಮ ಅತಿಯಾದ ಕೋಪದಿಂದ ಸಂಬಂಧಿಕರು ದೂರವಾಗುವ ಸಾಧ್ಯತೆ
  • ನಿಮ್ಮ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತೀರಿ
  • ವಿಶೇಷವಾದ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ 
  • ಚಿಕ್ಕ ಮಕ್ಕಳ ಜೊತೆ ಯಾವುದೇ ಗೌಪ್ಯ ವಿಚಾರಗಳನ್ನು ಮಾತನಾಡಬೇಡಿ
  • ಇಂದು ನಿಮಗೆ ಗೌರವ, ಸನ್ಮಾನಗಳು ಸಿಗುವ ದಿನ
  • ಚಲನಚಿತ್ರದಲ್ಲಿ ಕೆಲಸ ಮಾಡುವವರಿಗೆ ಶುಭದಿನ
  • ರುದ್ರಮನ್ಯುವನ್ನು ಪ್ರಾರ್ಥಿಸಿ

ವೃಷಭ

RASHI_BHAVISHA_VRSHABA

  • ಆರೋಗ್ಯದಲ್ಲಿ ಏರುಪೇರು ಆಗಬಹುದು ಜಾಗ್ರತೆವಹಿಸಿ
  • ಖಾಸಗಿ ಉದ್ಯೋಗಿಗಳಿಗೆ ಕೆಲಸದಲ್ಲಿ ಕಿರಿಕಿರಿ ಸಾಧ್ಯತೆ
  • ಎಲ್ಲಾ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಒಳಿತು
  • ಅಗತ್ಯಬಿದ್ದರೆ ಕೆಲಸವನ್ನು ಬಿಡುತ್ತೇನೆಂಬ ಮಾತು ಬರಬಹುದು
  • ಯುವಕರು ತಮ್ಮ ಕೆಲಸದ ವಿಚಾರದಲ್ಲಿ ತಾಳ್ಮೆವಹಿಸಿ 
  • ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗಬಹುದು
  • ಪಾರ್ವತಿ ದೇವಿಯನ್ನು ಆರಾಧಿಸಿ

ಮಿಥುನ

RASHI_BHAVISHA_MITHUNA

  • ಇಂದು ಕೆಲಸಗಳಲ್ಲಿ ಕಿರಿಕಿರಿ ಆಗುವ ಸಾಧ್ಯತೆ
  • ನೀವು ತಲೆ ನೋವಿನಿಂದ ತೊಂದರೆ ಅನುಭವಿಸುತ್ತೀರಿ
  • ಮಧ್ಯಾಹ್ನದ ನಂತರ ನಿಮ್ಮ ಕೆಲಸಗಳು ಚುರುಕುಗೊಳ್ಳಬಹುದು
  • ಇಂದು ಬೇರೆಯವರಿಗೆ ಸಲಹೆ ಸೂಚನೆ ಕೊಡಬೇಡಿ
  • ಮನೆಯಲ್ಲಿಯೇ ಉಳಿಯುವುದರಿಂದ ಕೆಲಸದ ಒತ್ತಡ ಹೆಚ್ಚಾಗಬಹುದು
  • ಸಂಬಂಧಿಕರು ಮನೆಗೆ ಬರುವುದರಿಂದ ನಿಮಗೆ ಕಿರಿಕಿರಿಯಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥಿಸಿ

ಕಟಕ

RASHI_BHAVISHA_KATAKA

  • ಇಂದು ಪಿತ್ರಾರ್ಜಿತ ಆಸ್ತಿ ಲಭಿಸುವ ಸಾಧ್ಯತೆ ಇದೆ
  • ನಿಮ್ಮ ಸಾಮಾಜಿಕ ವಲಯವು ವಿಸ್ತಾರವಾಗಬಹುದು
  • ನಿಮ್ಮ ವೈಯಕ್ತಿಕ ಸೌಲಭ್ಯಗಳಿಗಾಗಿ ತುಂಬಾ ಹಣವ್ಯಯವಾಗಬಹುದು
  • ಈ ದಿನ ಪಿತ್ರಾರ್ಜಿತ ಆಸ್ತಿ ನಿಮಗೆ ಲಭಿಸಬಹುದು
  • ವ್ಯವಹಾರದಲ್ಲಿ ಲಾಭ-ನಷ್ಟ ಉಂಟಾಗಲಿದೆ
  • ಈ ದಿನ  ಹಿರಿಯರ ಆರ್ಶೀವಾದವನ್ನು ಪಡೆಯಿರಿ
  • ಇಂದು ನಿಮ್ಮ ಮಾತು ಸ್ಪಷ್ಟವಾಗಿ ಮಿತವಾಗಿರಲಿ
  • ಗ್ರಾಮದೇವತೆಯನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ಕುಟುಂಬದ ವಾತಾವರಣವು ಮನಸ್ಸಿಗೆ ಸಮಾಧಾನ ನೀಡಬಹುದು
  • ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ 
  • ನೌಕರಿ ದೃಷ್ಟಿಯಿಂದ ವಿದೇಶ ಪ್ರಯಾಣ ಮಾಡುತ್ತೀರಿ
  • ವಿದೇಶದಲ್ಲಿರುವವರು ಇಲ್ಲಿಗೆ ಬರಲು ಈ ದಿನ ಅನುಕೂಲಕರವಾಗಿದೆ
  • ಇಂದು ಕುಟುಂಬದ ಸಾಮರಸ್ಯ ಕಾಪಾಡಿಕೊಳ್ಳಿ
  • ಕುಲದೇವರನ್ನು ಪೂಜಿಸಿ 

ಕನ್ಯಾ

RASHI_BHAVISHA_KANYA

  • ನಿಮ್ಮ ಈ ದಿನದ ಎಲ್ಲಾ ಕೆಲಸ ಕಾರ್ಯಗಳಿಗೆ ಅಡಚಣೆ ಅಥವಾ ವಿಘ್ನ ಸಾಧ್ಯತೆ
  • ಪ್ರಯಾಣಕ್ಕೆ ಈ ದಿನ ಶುಭವಲ್ಲ, ಪ್ರಯಾಣ ಮುಂದೂಡಿದರೆ ಒಳ್ಳೆಯದು
  • ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ 
  • ಹೊಟ್ಟೆಗೆ ಸಂಬಂಧಿಸಿದ ತೊಂದರೆ ಹೆಚ್ಚಾಗಿ ಕಾಡಬಹುದು ಜಾಗ್ರತೆಯಿರಲಿ
  • ಗಣಪತಿ ಆರಾಧನೆ ಮಾಡಿ

ತುಲಾ

RASHI_BHAVISHA_TULA

  • ಬೇರೆಯವರನ್ನು ಟೀಕಿಸಲು ಹೋಗಿ ನಿಮ್ಮ ವೈಯಕ್ತಿಕ ವಿಚಾರದಿಂದ ಅವಮಾನ ಸಾಧ್ಯತೆ
  • ಪ್ರೇಮಿಗಳ ನಡುವೆ ಜಗಳ, ಮಾನಸಿಕ ಹಿಂಸೆಯಾಗಬಹುದು
  • ಕುಟುಂಬದವರು ನಿಮ್ಮ ಪರವಾಗಿ ಮಾತನಾಡಿ ನಿಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ
  • ಪ್ರೇಮ ವಿಚಾರವನ್ನ ಕುಟುಂಬದಲ್ಲಿ ತಿಳಿಸಿದರೆ ಒಳ್ಳೆಯದು
  • ಲಕ್ಷ್ಮೀನಾರಾಯಣನನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಇಂದು ಹಣ ಖರ್ಚು ಮಾಡಲು ಯೋಚನೆ ಮಾಡಿ
  • ನಿಮ್ಮ ನಿರೀಕ್ಷೆಗಿಂತ ಅಧಿಕ ಹಣವ್ಯಯವಾಗಬಹುದು
  • ರಹಸ್ಯ ಶತ್ರುಗಳು ಸಮಸ್ಯೆಯನ್ನು ಉಂಟು ಮಾಡಬಹುದು ಗಮನವಿರಲಿ 
  • ಮಕ್ಕಳ ಚಟುವಟಿಕೆ, ಅವರ ವಿದ್ಯಾಭ್ಯಾಸದ ಕಡೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು
  • ಸ್ನೇಹಿತರ ಜೊತೆಯ ಭಿನ್ನಾಭಿಪ್ರಾಯಗಳು ಶತ್ರುತ್ವಕ್ಕೆ ತಿರುಗಬಹುದು 
  • ತಾಪಸಮನ್ಯುವನ್ನು ಪ್ರಾರ್ಥಿಸಿ

ಧನುಸ್ಸು

RASHI_BHAVISHA_DHANASU

  • ದಲ್ಲಾಳಿಗಳು ಮತ್ತು ನಿತ್ಯ ಬಡ್ಡಿ ವ್ಯವಹಾರ ಮಾಡುವವರಿಗೆ ಹಿನ್ನಡೆ ಸಾಧ್ಯತೆ 
  • ಇಂದು ನಿಮ್ಮ ಹಣಕ್ಕಾಗಿ ಕಾಯಬೇಕಾಗಬಹುದು 
  • ಈ ದಿನ ಕುಟುಂಬದಲ್ಲಿ ಸಾಮರಸ್ಯವಿರುತ್ತದೆ 
  • ನಿಮ್ಮ ವ್ಯವಹಾರದಿಂದ ಮನೆಯ ವಾತಾವರಣ ಹದಗೆಡಬಹುದು ಎಚ್ಚರ
  • ಇಂದು ಸ್ನೇಹಿತರ ಸಹಾಯ ಬೇಕಾಗಬಹುದು
  • ನಿಮ್ಮ ಪ್ರೀತಿ-ಪ್ರೇಮದ ಬಗ್ಗೆ ತಿಳಿಸಲು ಶುಭದಿನ
  • ಚಂಡಿಕಾ ಪರಮೇಶ್ವರಿಯನ್ನು ಆರಾಧಿಸಿ

ಮಕರ

RASHI_BHAVISHA_MAKARA

  • ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರಿಂದ ನಿಮಗೆ ಅವಮಾನ ಸಾಧ್ಯತೆ
  • ತುಂಬಾ ಮುಖ್ಯವಾದ ವಿಷಯ ಅಥವಾ ವಸ್ತುವನ್ನ ಮರೆತುಬಿಡಬಹುದು ಗಮನವಿರಲಿ
  • ನಿಮ್ಮ ಕೈಕೆಳಗೆ ಕೆಲಸ ಮಾಡುವವರನ್ನ ಚೆನ್ನಾಗಿ ನೋಡಿಕೊಳ್ಳಿ
  • ಇಂದು ನೀವು ನಿಂದನೆಗೆ ಒಳಗಾಗಬಹುದು
  • ಈ ದಿನ ಆರೋಗ್ಯದ ಸಮಸ್ಯೆ ಕಾಡಬಹುದು
  • ಈ ದಿನ  ಆಸ್ತಿ ವಿಚಾರ ಇತ್ಯರ್ಥ ಆಗಲಿದೆ
  • ಶ್ರೀರಾಮನನ್ನು ಆರಾಧಿಸಿ

ಕುಂಭ

RASHI_BHAVISHA_KUMBHA

  • ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುವ ದಿನ
  • ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಒಳ್ಳೆಯ ತೀರ್ಮಾನಗಳನ್ನು ಕೈಗೊಳ್ಳಬಹುದು
  • ಕಠಿಣ ಪರಿಶ್ರಮದಿಂದ, ಬುದ್ಧಿವಂತಿಕೆಯಿಂದ ಕಷ್ಟದ ಕೆಲಸಗಳನ್ನು ಸುಲಭವಾಗಿ ನಿಭಾಯಿಸುತ್ತೀರಿ
  • ಇಂದು ಕ್ರೀಡಾಪಟುಗಳಿಗೆ ಶುಭ ದಿನ
  • ಲಕ್ಷ್ಮಿದೇವಿಯನ್ನು ಪ್ರಾರ್ಥಿಸಿ

ಮೀನ

RASHI_BHAVISHA_MEENA

  • ಇಂದು ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
  • ಮಧುಮೇಹಿಗಳಿಗೆ ಶುಗರ್​ ಲೆವೆಲ್​ ಕಡಿಮೆಯಾಗಿ ತೊಂದರೆಯಾಗಬಹುದು ಎಚ್ಚರಿಕೆ
  • ಸ್ನೇಹಿತರ, ಕುಟುಂಬಸ್ಥರ ಸಲಹೆಗಳನ್ನ ನಿರ್ಲಕ್ಷ್ಯ ಮಾಡಬೇಡಿ
  • ಮಕ್ಕಳಿಗಾಗಿ ವಸ್ತ್ರಗಳನ್ನು, ಉಡುಗೊರೆಗಳನ್ನು ಖರೀದಿಸಬಹುದು
  • ನಿಮ್ಮ ಕೆಲಸದ ಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು
  • ಧನ್ವಂತರಿಯನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment