/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಅತಿಯಾದ ಕೋಪದಿಂದ ಸಂಬಂಧಿಕರು ದೂರವಾಗುವ ಸಾಧ್ಯತೆ
- ನಿಮ್ಮ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತೀರಿ
- ವಿಶೇಷವಾದ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ
- ಚಿಕ್ಕ ಮಕ್ಕಳ ಜೊತೆ ಯಾವುದೇ ಗೌಪ್ಯ ವಿಚಾರಗಳನ್ನು ಮಾತನಾಡಬೇಡಿ
- ಇಂದು ನಿಮಗೆ ಗೌರವ, ಸನ್ಮಾನಗಳು ಸಿಗುವ ದಿನ
- ಚಲನಚಿತ್ರದಲ್ಲಿ ಕೆಲಸ ಮಾಡುವವರಿಗೆ ಶುಭದಿನ
- ರುದ್ರಮನ್ಯುವನ್ನು ಪ್ರಾರ್ಥಿಸಿ
ವೃಷಭ
- ಆರೋಗ್ಯದಲ್ಲಿ ಏರುಪೇರು ಆಗಬಹುದು ಜಾಗ್ರತೆವಹಿಸಿ
- ಖಾಸಗಿ ಉದ್ಯೋಗಿಗಳಿಗೆ ಕೆಲಸದಲ್ಲಿ ಕಿರಿಕಿರಿ ಸಾಧ್ಯತೆ
- ಎಲ್ಲಾ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಒಳಿತು
- ಅಗತ್ಯಬಿದ್ದರೆ ಕೆಲಸವನ್ನು ಬಿಡುತ್ತೇನೆಂಬ ಮಾತು ಬರಬಹುದು
- ಯುವಕರು ತಮ್ಮ ಕೆಲಸದ ವಿಚಾರದಲ್ಲಿ ತಾಳ್ಮೆವಹಿಸಿ
- ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗಬಹುದು
- ಪಾರ್ವತಿ ದೇವಿಯನ್ನು ಆರಾಧಿಸಿ
ಮಿಥುನ
- ಇಂದು ಕೆಲಸಗಳಲ್ಲಿ ಕಿರಿಕಿರಿ ಆಗುವ ಸಾಧ್ಯತೆ
- ನೀವು ತಲೆ ನೋವಿನಿಂದ ತೊಂದರೆ ಅನುಭವಿಸುತ್ತೀರಿ
- ಮಧ್ಯಾಹ್ನದ ನಂತರ ನಿಮ್ಮ ಕೆಲಸಗಳು ಚುರುಕುಗೊಳ್ಳಬಹುದು
- ಇಂದು ಬೇರೆಯವರಿಗೆ ಸಲಹೆ ಸೂಚನೆ ಕೊಡಬೇಡಿ
- ಮನೆಯಲ್ಲಿಯೇ ಉಳಿಯುವುದರಿಂದ ಕೆಲಸದ ಒತ್ತಡ ಹೆಚ್ಚಾಗಬಹುದು
- ಸಂಬಂಧಿಕರು ಮನೆಗೆ ಬರುವುದರಿಂದ ನಿಮಗೆ ಕಿರಿಕಿರಿಯಾಗಬಹುದು
- ಸಾಯಿಬಾಬಾರನ್ನು ಪ್ರಾರ್ಥಿಸಿ
ಕಟಕ
- ಇಂದು ಪಿತ್ರಾರ್ಜಿತ ಆಸ್ತಿ ಲಭಿಸುವ ಸಾಧ್ಯತೆ ಇದೆ
- ನಿಮ್ಮ ಸಾಮಾಜಿಕ ವಲಯವು ವಿಸ್ತಾರವಾಗಬಹುದು
- ನಿಮ್ಮ ವೈಯಕ್ತಿಕ ಸೌಲಭ್ಯಗಳಿಗಾಗಿ ತುಂಬಾ ಹಣವ್ಯಯವಾಗಬಹುದು
- ಈ ದಿನ ಪಿತ್ರಾರ್ಜಿತ ಆಸ್ತಿ ನಿಮಗೆ ಲಭಿಸಬಹುದು
- ವ್ಯವಹಾರದಲ್ಲಿ ಲಾಭ-ನಷ್ಟ ಉಂಟಾಗಲಿದೆ
- ಈ ದಿನ ಹಿರಿಯರ ಆರ್ಶೀವಾದವನ್ನು ಪಡೆಯಿರಿ
- ಇಂದು ನಿಮ್ಮ ಮಾತು ಸ್ಪಷ್ಟವಾಗಿ ಮಿತವಾಗಿರಲಿ
- ಗ್ರಾಮದೇವತೆಯನ್ನು ಪ್ರಾರ್ಥಿಸಿ
ಸಿಂಹ
- ಕುಟುಂಬದ ವಾತಾವರಣವು ಮನಸ್ಸಿಗೆ ಸಮಾಧಾನ ನೀಡಬಹುದು
- ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
- ನೌಕರಿ ದೃಷ್ಟಿಯಿಂದ ವಿದೇಶ ಪ್ರಯಾಣ ಮಾಡುತ್ತೀರಿ
- ವಿದೇಶದಲ್ಲಿರುವವರು ಇಲ್ಲಿಗೆ ಬರಲು ಈ ದಿನ ಅನುಕೂಲಕರವಾಗಿದೆ
- ಇಂದು ಕುಟುಂಬದ ಸಾಮರಸ್ಯ ಕಾಪಾಡಿಕೊಳ್ಳಿ
- ಕುಲದೇವರನ್ನು ಪೂಜಿಸಿ
ಕನ್ಯಾ
- ನಿಮ್ಮ ಈ ದಿನದ ಎಲ್ಲಾ ಕೆಲಸ ಕಾರ್ಯಗಳಿಗೆ ಅಡಚಣೆ ಅಥವಾ ವಿಘ್ನ ಸಾಧ್ಯತೆ
- ಪ್ರಯಾಣಕ್ಕೆ ಈ ದಿನ ಶುಭವಲ್ಲ, ಪ್ರಯಾಣ ಮುಂದೂಡಿದರೆ ಒಳ್ಳೆಯದು
- ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
- ಹೊಟ್ಟೆಗೆ ಸಂಬಂಧಿಸಿದ ತೊಂದರೆ ಹೆಚ್ಚಾಗಿ ಕಾಡಬಹುದು ಜಾಗ್ರತೆಯಿರಲಿ
- ಗಣಪತಿ ಆರಾಧನೆ ಮಾಡಿ
ತುಲಾ
- ಬೇರೆಯವರನ್ನು ಟೀಕಿಸಲು ಹೋಗಿ ನಿಮ್ಮ ವೈಯಕ್ತಿಕ ವಿಚಾರದಿಂದ ಅವಮಾನ ಸಾಧ್ಯತೆ
- ಪ್ರೇಮಿಗಳ ನಡುವೆ ಜಗಳ, ಮಾನಸಿಕ ಹಿಂಸೆಯಾಗಬಹುದು
- ಕುಟುಂಬದವರು ನಿಮ್ಮ ಪರವಾಗಿ ಮಾತನಾಡಿ ನಿಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ
- ಪ್ರೇಮ ವಿಚಾರವನ್ನ ಕುಟುಂಬದಲ್ಲಿ ತಿಳಿಸಿದರೆ ಒಳ್ಳೆಯದು
- ಲಕ್ಷ್ಮೀನಾರಾಯಣನನ್ನು ಪ್ರಾರ್ಥಿಸಿ
ವೃಶ್ಚಿಕ
- ಇಂದು ಹಣ ಖರ್ಚು ಮಾಡಲು ಯೋಚನೆ ಮಾಡಿ
- ನಿಮ್ಮ ನಿರೀಕ್ಷೆಗಿಂತ ಅಧಿಕ ಹಣವ್ಯಯವಾಗಬಹುದು
- ರಹಸ್ಯ ಶತ್ರುಗಳು ಸಮಸ್ಯೆಯನ್ನು ಉಂಟು ಮಾಡಬಹುದು ಗಮನವಿರಲಿ
- ಮಕ್ಕಳ ಚಟುವಟಿಕೆ, ಅವರ ವಿದ್ಯಾಭ್ಯಾಸದ ಕಡೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು
- ಸ್ನೇಹಿತರ ಜೊತೆಯ ಭಿನ್ನಾಭಿಪ್ರಾಯಗಳು ಶತ್ರುತ್ವಕ್ಕೆ ತಿರುಗಬಹುದು
- ತಾಪಸಮನ್ಯುವನ್ನು ಪ್ರಾರ್ಥಿಸಿ
ಧನುಸ್ಸು
- ದಲ್ಲಾಳಿಗಳು ಮತ್ತು ನಿತ್ಯ ಬಡ್ಡಿ ವ್ಯವಹಾರ ಮಾಡುವವರಿಗೆ ಹಿನ್ನಡೆ ಸಾಧ್ಯತೆ
- ಇಂದು ನಿಮ್ಮ ಹಣಕ್ಕಾಗಿ ಕಾಯಬೇಕಾಗಬಹುದು
- ಈ ದಿನ ಕುಟುಂಬದಲ್ಲಿ ಸಾಮರಸ್ಯವಿರುತ್ತದೆ
- ನಿಮ್ಮ ವ್ಯವಹಾರದಿಂದ ಮನೆಯ ವಾತಾವರಣ ಹದಗೆಡಬಹುದು ಎಚ್ಚರ
- ಇಂದು ಸ್ನೇಹಿತರ ಸಹಾಯ ಬೇಕಾಗಬಹುದು
- ನಿಮ್ಮ ಪ್ರೀತಿ-ಪ್ರೇಮದ ಬಗ್ಗೆ ತಿಳಿಸಲು ಶುಭದಿನ
- ಚಂಡಿಕಾ ಪರಮೇಶ್ವರಿಯನ್ನು ಆರಾಧಿಸಿ
ಮಕರ
- ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರಿಂದ ನಿಮಗೆ ಅವಮಾನ ಸಾಧ್ಯತೆ
- ತುಂಬಾ ಮುಖ್ಯವಾದ ವಿಷಯ ಅಥವಾ ವಸ್ತುವನ್ನ ಮರೆತುಬಿಡಬಹುದು ಗಮನವಿರಲಿ
- ನಿಮ್ಮ ಕೈಕೆಳಗೆ ಕೆಲಸ ಮಾಡುವವರನ್ನ ಚೆನ್ನಾಗಿ ನೋಡಿಕೊಳ್ಳಿ
- ಇಂದು ನೀವು ನಿಂದನೆಗೆ ಒಳಗಾಗಬಹುದು
- ಈ ದಿನ ಆರೋಗ್ಯದ ಸಮಸ್ಯೆ ಕಾಡಬಹುದು
- ಈ ದಿನ ಆಸ್ತಿ ವಿಚಾರ ಇತ್ಯರ್ಥ ಆಗಲಿದೆ
- ಶ್ರೀರಾಮನನ್ನು ಆರಾಧಿಸಿ
ಕುಂಭ
- ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುವ ದಿನ
- ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಒಳ್ಳೆಯ ತೀರ್ಮಾನಗಳನ್ನು ಕೈಗೊಳ್ಳಬಹುದು
- ಕಠಿಣ ಪರಿಶ್ರಮದಿಂದ, ಬುದ್ಧಿವಂತಿಕೆಯಿಂದ ಕಷ್ಟದ ಕೆಲಸಗಳನ್ನು ಸುಲಭವಾಗಿ ನಿಭಾಯಿಸುತ್ತೀರಿ
- ಇಂದು ಕ್ರೀಡಾಪಟುಗಳಿಗೆ ಶುಭ ದಿನ
- ಲಕ್ಷ್ಮಿದೇವಿಯನ್ನು ಪ್ರಾರ್ಥಿಸಿ
ಮೀನ
- ಇಂದು ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
- ಮಧುಮೇಹಿಗಳಿಗೆ ಶುಗರ್ ಲೆವೆಲ್ ಕಡಿಮೆಯಾಗಿ ತೊಂದರೆಯಾಗಬಹುದು ಎಚ್ಚರಿಕೆ
- ಸ್ನೇಹಿತರ, ಕುಟುಂಬಸ್ಥರ ಸಲಹೆಗಳನ್ನ ನಿರ್ಲಕ್ಷ್ಯ ಮಾಡಬೇಡಿ
- ಮಕ್ಕಳಿಗಾಗಿ ವಸ್ತ್ರಗಳನ್ನು, ಉಡುಗೊರೆಗಳನ್ನು ಖರೀದಿಸಬಹುದು
- ನಿಮ್ಮ ಕೆಲಸದ ಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು
- ಧನ್ವಂತರಿಯನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ