/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಮಧ್ಯಸ್ಥಿಕೆಯಲ್ಲಿ ನಡೆಯುವ ವ್ಯವಹಾರಗಳು ಸುಖಾಂತ್ಯವಾಗುತ್ತವೆ
- ಕೆಲವರು ನಿಮಗೆ ಧನ್ಯವಾದಗಳನ್ನು ಹೇಳಿ ನಿಮ್ಮ ಉಪಕಾರ ಸ್ಮರಣೆ ಮಾಡುತ್ತಾರೆ
- ಯಾವುದೇ ನಿರೀಕ್ಷೆಯಿಲ್ಲದೆ ಬೇರೆಯವರಿಗೆ ಸಹಾಯ ಮಾಡಿ ಗೌರವ ಹೆಚ್ಚಾಗುತ್ತದೆ
- ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗಬಹುದು
- ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭ ಸಾಧ್ಯತೆ
- ಸರ್ಕಾರಿ ಕೆಲಸಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗುವ ಸಾಧ್ಯತೆ
- ಉಪಕೃತರು ನಿಮ್ಮನ್ನು ಮನಸಾರೆ ಗೌರವಿಸುವ ಸಾಧ್ಯತೆಯಿದೆ
- ಮಹಾಗಣಪತಿಯನ್ನು ಆರಾಧಿಸಿ, ಬಿಳಿ ಎಕ್ಕದ ಹೂ, ಗರಿಕೆ ಸಮರ್ಪಿಸಿ
ವೃಷಭ
- ವಿದ್ಯಾರ್ಥಿಗಳಿಗೆ ಅಲ್ಪ ಸಂತೋಷ ಸಾಧ್ಯತೆ, ಬೇಸರ ಮಾಡಿಕೊಳ್ಳಬಾರದು
- ಇಂದು ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ
- ಹೊಸ ವ್ಯಾಪಾರ, ಉದ್ಯೋಗ ಆರಂಭಿಸಲು ಶುಭ ದಿನ
- ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು, ಹಿರಿಯರ ಆರೋಗ್ಯದಲ್ಲಿ ತೊಂದರೆ ಸಾಧ್ಯತೆ
- ಏಕಾಗ್ರತೆಯಿಂದ ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿ
- ನಿಮಗಿರುವ ಹಲವು ಸವಾಲುಗಳನ್ನು ಈ ದಿನ ಎದುರಿಸಿ ಜಯಶೀಲರಾಗುತ್ತೀರಿ
- ಈಶ್ವರ ಆರಾಧನೆ ಮಾಡಿ
ಮಿಥುನ
- ಕೋರ್ಟ್ ಕೆಲಸಗಳಲ್ಲಿ ಹಿನ್ನಡೆ ಸಾಧ್ಯತೆ
- ಮನೆಯಲ್ಲಿ ಅನೇಕ ವಿಚಾರಗಳಲ್ಲಿ ಗೊಂದಲ ಏರ್ಪಡುವ ಸಾಧ್ಯತೆ
- ಕಷ್ಟಪಟ್ಟು ಹೋರಾಟ ಮಾಡಿದಂತಹ ಕೆಲಸಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ
- ನಿಮ್ಮ ಸ್ವಭಾವದಿಂದ ಹಲವರು ನಿಮ್ಮ ಬಗ್ಗೆ ಕೋಪಗೊಳ್ಳಬಹುದು
- ಈ ರಾಶಿಯ ಚಿಕ್ಕ ಮಕ್ಕಳಿಗೆ ತೊಂದರೆ ಸಾಧ್ಯತೆ, ಜಾಗ್ರತೆಯಿರಲಿ
- ಯಾರ ಬಗ್ಗೆ ನಿಮಗೆ ಅನುಮಾನವಿರುತ್ತೋ ಅಂತಹ ವ್ಯಕ್ತಿಗಳಿಂದ ಸ್ವಲ್ಪ ದೂರವಿರಿ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ
ಕಟಕ
- ವಿದ್ಯಾರ್ಥಿಗಳು ಸಂತಸದಿಂದ ತಮ್ಮ ಶೈಕ್ಷಣಿಕ ಕ್ಷೇತ್ರವನ್ನು ಸ್ವೀಕರಿಸಿ ಮುಂದುವರೆಯಿರಿ
- ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ
- ವಿದ್ಯಾರ್ಥಿಗಳಿಗೆ ಶುಭ ದಿನ, ಓದಿನ ಜೊತೆ ಬೇರೆ ಬೇರೆ ಹವ್ಯಾಸಗಳನ್ನು ರೂಢಿಸಿಕೊಳ್ಳಿ
- ಪ್ರೇಮಿಗಳು ಜಾಗರೂಕರಾಗಿರಿ ತೊಂದರೆಯಾಗುವ ಸಾಧ್ಯತೆಗಳಿವೆ
- ಇಂದು ನಿಮ್ಮ ಕೈ ಭಾಗದಲ್ಲಿ ಪೆಟ್ಟಾಗುವ ಸಾಧ್ಯತೆಯಿದೆ
- ನಿಮ್ಮ ಉದ್ಯೋಗದಲ್ಲಿ ಸಮಾಧಾನ, ತೃಪ್ತಿ ಸಿಗುವ ದಿನ
- ಮೃತ್ಯುಂಜಯನನ್ನು ಪಾರ್ಥನೆ ಮಾಡಿ
ಸಿಂಹ
- ಈ ದಿನ ಕೋಪದ ಮೇಲೆ ಹಿಡಿತವಿರಲಿ
- ಅಧಿಕಾರಕ್ಕಾಗಿ ಪ್ರಯತ್ನ ಪಡುವಿರಿ ಆದರೆ ಪ್ರಯೋಜನವಾಗುವುದಿಲ್ಲ
- ಇಂದು ಸರಿಯಾದ ಅನುಭವಿಗಳಿಂದ ಮಾರ್ಗದರ್ಶನ ಪಡೆಯಿರಿ
- ವ್ಯಾಪಾರದಲ್ಲಿ ಹಲವು ವರ್ಷಗಳ ಅನುಭವ ಇದ್ದರು ಮೋಸ, ನಷ್ಟ ಸಾಧ್ಯತೆ
- ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ
- ಅಸ್ತಮ ರೋಗಿಗಳಿಗೆ ಆರೋಗ್ಯದಲ್ಲಿ ತೊಂದರೆಗಳಾಗಬಹುದು ಎಚ್ಚರಿಕೆವಹಿಸಿ
- ಇಂದ್ರನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಇಂದು ಯೋಗ್ಯವಲ್ಲದ ಕಾರ್ಯಗಳಲ್ಲಿ ಭಾಗವಹಿಸಬೇಡಿ
- ನಂಬಿ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ
- ದೇವರ ಬಗ್ಗೆ ನಂಬಿಕೆ ಇರಲಿ ಅಪನಂಬಿಕೆ ಬೇಡ
- ಹಣ ಉಳಿಸಲು ಪ್ರಯತ್ನಿಸಿ, ವಿನಾಕಾರಣ ಖರ್ಚು ಬೇಡ
- ಸರ್ಕಾರಿ ಉದ್ಯೋಗಿಗಳಿಗೆ ಕಟ್ಟುಪಾಡು, ನಿಯಮಗಳು ಹೆಚ್ಚಾಗಿ ಬೇಸರವಾಗಬಹುದು
- ನೀವು ಮಾಡುವ ಕೆಲಸದಲ್ಲಿ ನಿಮಗೆ ಸಮಾಧಾನವಿರುವುದಿಲ್ಲ
- ಬೇರೆ ಕೆಲಸಕ್ಕೆ ಈ ದಿನ ಪ್ರಯತ್ನ ಪಡಬಹುದು
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ತುಲಾ
- ದೇವರಿಗೆ ಹಳೆಯ ಹರಕೆಯನ್ನು ತೀರಿಸುವುದರಿಂದ ಒಳ್ಳೆಯದಾಗುತ್ತದೆ
- ಈ ರಾಶಿಯಲ್ಲಿ ಹುಟ್ಟಿದವರಿಗೆ ಸಂಪತ್ತು ನಷ್ಟವಾಗುವ ಸಾಧ್ಯತೆಯಿದೆ ಎಚ್ಚರ
- ತಾತ್ಸಾರ ಮಾಡದೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ
- ಕಷ್ಟ ಬಂದಾಗ ಮಾತ್ರ ದೇವರನ್ನು ಸ್ಮರಿಸುವ ಕೆಲಸ ಮಾಡಬೇಡಿ
- ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗುವ ದಿನವಾಗಿರುತ್ತದೆ
- ಯಾವುದೇ ಸೂಚನೆಗಳಿಲ್ಲದೆ ಆರೋಗ್ಯದಲ್ಲಿ ಏರುಪೇರಾಗಬಹುದು
- ಕುಲದೇವರನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಯೋಚನೆಗಳು ಮತ್ತು ಯೋಜನೆಗಳು ಫಲಪ್ರದವಾಗುವಂತಹ ದಿನ
- ಬೇರೆಯವರಿಗೆ ಸಹಾಯ ಮಾಡುವುದರಿಂದ ನೀವು ದಂಡ ತೆರಬೇಕಾಗಬಹುದು ಎಚ್ಚರಿಕೆ
- ಆದರೆ ಕೆಲಸದ ಒತ್ತಡದಿಂದ ಯಾವುದಕ್ಕೂ ಅವಕಾಶ ಆಗುವುದಿಲ್ಲ
- ನಿಮಗೂ ಮನೆಯವರಿಗೂ ಬೇಸರವಾಗುವ ದಿನ
- ಕುಟುಂಬದ ಸದಸ್ಯರ ಜೊತೆ ಸಂತೋಷವಾಗಿರಲು ಬಯಸುತ್ತೀರಿ
- ಆಸ್ತಿಯ ವಿಚಾರ ಪ್ರಸ್ತಾಪ ಆಗುವ ಸಾಧ್ಯತೆಗಳಿವೆ
- ಗಂಡ ಹೆಂಡತಿ ನಡುವೆ ಜಗಳ ಆಗುವ ಸಂಭವ
- ಕುಲದೇವರನ್ನು ಪ್ರಾರ್ಥಿಸಿ
ಧನುಸ್ಸು
- ನಿಮ್ಮ ವಿರೋಧಿಗಳೂ ನಿಮ್ಮ ಕಾರ್ಯ ವೈಖರಿ ನೋಡಿ ಹೊಗಳುತ್ತಾರೆ
- ಮನೆ ಮತ್ತು ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಾಗುತ್ತದೆ
- ಸಾಯಂಕಾಲದ ಹೊತ್ತಿಗೆ ಅಶುಭ ವಾರ್ತೆಯಿಂದ ಬೇಸರವಾಗಬಹುದು
- ಸೇವಾ ಮನೋಭಾವನೆಯನ್ನು ಮನಸ್ಸಲ್ಲಿ ಬೆಳೆಸಿಕೊಳ್ಳಿ
- ಹಿರಿಯರಿಗೆ ಅಗತ್ಯವಿರುವ ಸೇವೆಯನ್ನು ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಿ
- ನಿಮ್ಮ ಕೆಲಸವನ್ನು ನೋಡಿ ಎಲ್ಲರೂ ಸಹ ಆಕರ್ಷಿತರಾಗುತ್ತಾರೆ
- ನಿಮ್ಮ ಆತ್ಮ ವಿಶ್ವಾಸದ ಬಗ್ಗೆ ನಿಮಗೆ ನಿರ್ದಿಷ್ಟವಾದ ನಂಬಿಕೆ ಇರಬೇಕು
- ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ
ಮಕರ
- ಇಂದು ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳಾಗಬಹುದು
- ನಿಮ್ಮನ್ನು ಎಲ್ಲರೂ ಮೆಚ್ಚಿಕೊಂಡು, ಅಭಿಮಾನದಿಂದ ಕಾಣ್ತಾರೆ
- ನಿಮ್ಮ ಕುಟುಂಬದವರ ನಡವಳಿಕೆ, ಸ್ವಭಾವದಿಂದ ನಿಮ್ಮ ಗೌರವ ಹೆಚ್ಚಾಗುವ ದಿನ
- ನಿಮ್ಮನ್ನು ಎಲ್ಲರೂ ಮೆಚ್ಚಿಕೊಂಡು, ಅಭಿಮಾನದಿಂದ ಕಾಣ್ತಾರೆ
- ನಿಮ್ಮ ಸಣ್ಣ-ಪುಟ್ಟ ಬದಲಾವಣೆಗಳನ್ನು ಜನರು ಮೆಚ್ಚಿ ಅಭಿನಂದಿಸುತ್ತಾರೆ
- ನಿಮ್ಮ ಕೆಲಸದಲ್ಲಿ ತುಂಬಾ ಪರಿಶ್ರಮ ಪಡುತ್ತೀರಿ ಇದಕ್ಕೆ ಪ್ರತಿಫಲ ಸಿಗುವ ದಿನ
- ನಿಮ್ಮ ಚುರುಕುತನ,ಬುದ್ಧಿವಂತಿಕೆ ನಿಮ್ಮ ಗೌರವ,ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ
- ರಾಜಕೀಯ ವ್ಯಕ್ತಿಗಳಿಗೆ ಶುಭದಿನ
- ನವದುರ್ಗೆಯರನ್ನು ಆರಾಧಿಸಿ
ಕುಂಭ
- ಸ್ಥಿರವಾದ ಮನಸ್ಸಿನಿಂದ ಮುಂದುವರೆದರೆ ಒಳ್ಳೆಯದು
- ನೀವು ಲಾಭದ ದೃಷ್ಠಿಯಿಂದ ಯಾವುದೇ ಕೆಲಸ ಮಾಡಿದರು ಅದು ನಿಮಗೆ ಶುಭವಾಗುತ್ತದೆ
- ಸಹೋದ್ಯೋಗಿಗಳು ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ ಜಾಗ್ರತೆವಹಿಸಿ
- ಯಾವುದೇ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲಕ್ಕೀಡಾಗುತ್ತೀರಿ
- ಬೇರೆಯವರನ್ನು ವಿನಾಕಾರಣ ನಂಬುವುದು ಒಳ್ಳೆಯದಲ್ಲ
- ಮನೆಯವರೆಲ್ಲ ನಿಮ್ಮ ವಿಚಾರಕ್ಕೆ ಆತಂಕಕ್ಕೆ ಒಳಗಾಗುತ್ತಾರೆ
- ಇಂದು ಹಣದ ಹೂಡಿಕೆಯನ್ನು ಮಾಡಿದರೆ ಒಳಿತು
- ಮಾನಸಿಕವಾಗಿ ತುಂಬಾ ಆಯಾಸವಾಗುವ ದಿನ
- ಶ್ರೀರಾಮದೂತ ಆಂಜನೇಯನನ್ನು ಸ್ಮರಿಸಿ
ಮೀನ
- ಪದವೀಧರರಿಗೆ ಉತ್ತಮ ನೌಕರಿಯ ಅವಕಾಶಗಳು ಸಿಗುವ ಯೋಗವಿದೆ
- ಈ ದಿನ ನಿಮಗೆ ಹಳೆಯ ನೆನಪುಗಳು ಕಾಡಬಹುದು
- ವಿದ್ಯಾರ್ಥಿಗಳು ಅಧ್ಯಯನದ ದೃಷ್ಠಿಯಿಂದ ತೀವ್ರವಾಗಿ ಪರಿಶ್ರಮ ಪಡುವ ಸಾಧ್ಯತೆ
- ಸಮಾಜದ ಹಿತದೃಷ್ಟಿಯಿಂದ ಮುಂದಾಲೋಚನೆ ಮಾಡಿ ಅಧ್ಯಯನ ಮಾಡಿದರೆ ಒಳಿತು
- ಗಂಭೀರವಾದ ಚಿಂತನೆಗಳನ್ನು ವಿದ್ಯಾರ್ಥಿಗಳು ನಡೆಸಬೇಕಾಗುತ್ತದೆ
- ಮಧ್ಯಾಹ್ನದ ನಂತರ ಹಲವು ಕೆಲಸಗಳು ಶುಭವಾಗಲಿದೆ
- ಪ್ರತಿಫಲ ನಿರೀಕ್ಷೆಯಲ್ಲಿ ಪರಿಶ್ರಮ ಪಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ
- ಅನಗತ್ಯ ಖರ್ಚನ್ನು ಕಡಿಮೆ ಮಾಡಿಕೊಂಡರೆ ಒಳ್ಳೆಯದು
- ಇಂದು ಆದಾಯ ಬರುವಂತ ದಿನವಾಗಿದೆ
- ಹಸಿದವರಿಗೆ ಅನ್ನವನ್ನು ದಾನ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ