ವ್ಯವಹಾರದಲ್ಲಿ ಅಧಿಕ ಲಾಭ; ಸರ್ಕಾರಿ ಕೆಲಸಗಳಲ್ಲಿದ್ದ ಅಡೆತಡೆ ನಿವಾರಣೆ; ಇಲ್ಲಿದೆ ಇಂದಿನ ಭವಿಷ್ಯ ವ್ಯಾಪಾರ

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ನಿಮ್ಮ ಮಧ್ಯಸ್ಥಿಕೆಯಲ್ಲಿ ನಡೆಯುವ ವ್ಯವಹಾರಗಳು ಸುಖಾಂತ್ಯವಾಗುತ್ತವೆ
  • ಕೆಲವರು ನಿಮಗೆ ಧನ್ಯವಾದಗಳನ್ನು ಹೇಳಿ ನಿಮ್ಮ ಉಪಕಾರ ಸ್ಮರಣೆ ಮಾಡುತ್ತಾರೆ
  • ಯಾವುದೇ ನಿರೀಕ್ಷೆಯಿಲ್ಲದೆ ಬೇರೆಯವರಿಗೆ ಸಹಾಯ ಮಾಡಿ ಗೌರವ ಹೆಚ್ಚಾಗುತ್ತದೆ
  • ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗಬಹುದು 
  • ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭ ಸಾಧ್ಯತೆ
  • ಸರ್ಕಾರಿ ಕೆಲಸಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗುವ ಸಾಧ್ಯತೆ
  • ಉಪಕೃತರು ನಿಮ್ಮನ್ನು ಮನಸಾರೆ ಗೌರವಿಸುವ ಸಾಧ್ಯತೆಯಿದೆ
  • ಮಹಾಗಣಪತಿಯನ್ನು ಆರಾಧಿಸಿ, ಬಿಳಿ ಎಕ್ಕದ ಹೂ, ಗರಿಕೆ ಸಮರ್ಪಿಸಿ

ವೃಷಭ

RASHI_BHAVISHA_VRSHABA

  • ವಿದ್ಯಾರ್ಥಿಗಳಿಗೆ ಅಲ್ಪ ಸಂತೋಷ ಸಾಧ್ಯತೆ, ಬೇಸರ ಮಾಡಿಕೊಳ್ಳಬಾರದು
  • ಇಂದು ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ
  • ಹೊಸ ವ್ಯಾಪಾರ, ಉದ್ಯೋಗ ಆರಂಭಿಸಲು ಶುಭ ದಿನ
  • ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು, ಹಿರಿಯರ ಆರೋಗ್ಯದಲ್ಲಿ ತೊಂದರೆ ಸಾಧ್ಯತೆ
  • ಏಕಾಗ್ರತೆಯಿಂದ ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿ
  • ನಿಮಗಿರುವ ಹಲವು ಸವಾಲುಗಳನ್ನು ಈ ದಿನ ಎದುರಿಸಿ ಜಯಶೀಲರಾಗುತ್ತೀರಿ 
  • ಈಶ್ವರ ಆರಾಧನೆ ಮಾಡಿ

ಮಿಥುನ

RASHI_BHAVISHA_MITHUNA

  • ಕೋರ್ಟ್​ ಕೆಲಸಗಳಲ್ಲಿ ಹಿನ್ನಡೆ ಸಾಧ್ಯತೆ 
  • ಮನೆಯಲ್ಲಿ ಅನೇಕ ವಿಚಾರಗಳಲ್ಲಿ ಗೊಂದಲ ಏರ್ಪಡುವ ಸಾಧ್ಯತೆ
  • ಕಷ್ಟಪಟ್ಟು ಹೋರಾಟ ಮಾಡಿದಂತಹ ಕೆಲಸಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ
  • ನಿಮ್ಮ ಸ್ವಭಾವದಿಂದ ಹಲವರು ನಿಮ್ಮ ಬಗ್ಗೆ ಕೋಪಗೊಳ್ಳಬಹುದು
  • ಈ  ರಾಶಿಯ ಚಿಕ್ಕ ಮಕ್ಕಳಿಗೆ ತೊಂದರೆ ಸಾಧ್ಯತೆ, ಜಾಗ್ರತೆಯಿರಲಿ
  • ಯಾರ ಬಗ್ಗೆ ನಿಮಗೆ ಅನುಮಾನವಿರುತ್ತೋ ಅಂತಹ ವ್ಯಕ್ತಿಗಳಿಂದ ಸ್ವಲ್ಪ ದೂರವಿರಿ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ

ಕಟಕ

RASHI_BHAVISHA_KATAKA

  • ವಿದ್ಯಾರ್ಥಿಗಳು ಸಂತಸದಿಂದ ತಮ್ಮ ಶೈಕ್ಷಣಿಕ ಕ್ಷೇತ್ರವನ್ನು ಸ್ವೀಕರಿಸಿ ಮುಂದುವರೆಯಿರಿ
  • ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ
  • ವಿದ್ಯಾರ್ಥಿಗಳಿಗೆ ಶುಭ ದಿನ, ಓದಿನ ಜೊತೆ ಬೇರೆ ಬೇರೆ ಹವ್ಯಾಸಗಳನ್ನು ರೂಢಿಸಿಕೊಳ್ಳಿ
  • ಪ್ರೇಮಿಗಳು ಜಾಗರೂಕರಾಗಿರಿ ತೊಂದರೆಯಾಗುವ ಸಾಧ್ಯತೆಗಳಿವೆ
  • ಇಂದು ನಿಮ್ಮ ಕೈ ಭಾಗದಲ್ಲಿ ಪೆಟ್ಟಾಗುವ ಸಾಧ್ಯತೆಯಿದೆ
  • ನಿಮ್ಮ ಉದ್ಯೋಗದಲ್ಲಿ ಸಮಾಧಾನ, ತೃಪ್ತಿ ಸಿಗುವ ದಿನ
  • ಮೃತ್ಯುಂಜಯನನ್ನು ಪಾರ್ಥನೆ ಮಾಡಿ

ಸಿಂಹ 

RASHI_BHAVISHA_SIMHA

  • ಈ ದಿನ ಕೋಪದ ಮೇಲೆ ಹಿಡಿತವಿರಲಿ
  • ಅಧಿಕಾರಕ್ಕಾಗಿ ಪ್ರಯತ್ನ ಪಡುವಿರಿ ಆದರೆ ಪ್ರಯೋಜನವಾಗುವುದಿಲ್ಲ
  • ಇಂದು ಸರಿಯಾದ ಅನುಭವಿಗಳಿಂದ ಮಾರ್ಗದರ್ಶನ ಪಡೆಯಿರಿ
  • ವ್ಯಾಪಾರದಲ್ಲಿ ಹಲವು ವರ್ಷಗಳ ಅನುಭವ ಇದ್ದರು ಮೋಸ, ನಷ್ಟ ಸಾಧ್ಯತೆ
  • ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ
  • ಅಸ್ತಮ ರೋಗಿಗಳಿಗೆ ಆರೋಗ್ಯದಲ್ಲಿ ತೊಂದರೆಗಳಾಗಬಹುದು ಎಚ್ಚರಿಕೆವಹಿಸಿ
  • ಇಂದ್ರನನ್ನು ಪ್ರಾರ್ಥನೆ ಮಾಡಿ

ಕನ್ಯಾ

RASHI_BHAVISHA_KANYA

  • ಇಂದು ಯೋಗ್ಯವಲ್ಲದ ಕಾರ್ಯಗಳಲ್ಲಿ ಭಾಗವಹಿಸಬೇಡಿ
  • ನಂಬಿ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ
  • ದೇವರ ಬಗ್ಗೆ  ನಂಬಿಕೆ ಇರಲಿ ಅಪನಂಬಿಕೆ ಬೇಡ
  • ಹಣ ಉಳಿಸಲು ಪ್ರಯತ್ನಿಸಿ, ವಿನಾಕಾರಣ ಖರ್ಚು ಬೇಡ
  • ಸರ್ಕಾರಿ ಉದ್ಯೋಗಿಗಳಿಗೆ ಕಟ್ಟುಪಾಡು, ನಿಯಮಗಳು ಹೆಚ್ಚಾಗಿ ಬೇಸರವಾಗಬಹುದು
  • ನೀವು ಮಾಡುವ ಕೆಲಸದಲ್ಲಿ ನಿಮಗೆ ಸಮಾಧಾನವಿರುವುದಿಲ್ಲ
  • ಬೇರೆ ಕೆಲಸಕ್ಕೆ ಈ ದಿನ ಪ್ರಯತ್ನ ಪಡಬಹುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ತುಲಾ

RASHI_BHAVISHA_TULA

  • ದೇವರಿಗೆ ಹಳೆಯ ಹರಕೆಯನ್ನು ತೀರಿಸುವುದರಿಂದ ಒಳ್ಳೆಯದಾಗುತ್ತದೆ
  • ಈ ರಾಶಿಯಲ್ಲಿ ಹುಟ್ಟಿದವರಿಗೆ ಸಂಪತ್ತು ನಷ್ಟವಾಗುವ ಸಾಧ್ಯತೆಯಿದೆ ಎಚ್ಚರ
  • ತಾತ್ಸಾರ ಮಾಡದೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ
  • ಕಷ್ಟ ಬಂದಾಗ ಮಾತ್ರ ದೇವರನ್ನು ಸ್ಮರಿಸುವ ಕೆಲಸ ಮಾಡಬೇಡಿ
  • ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗುವ ದಿನವಾಗಿರುತ್ತದೆ
  • ಯಾವುದೇ ಸೂಚನೆಗಳಿಲ್ಲದೆ ಆರೋಗ್ಯದಲ್ಲಿ ಏರುಪೇರಾಗಬಹುದು
  • ಕುಲದೇವರನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಯೋಚನೆಗಳು ಮತ್ತು ಯೋಜನೆಗಳು ಫಲಪ್ರದವಾಗುವಂತಹ ದಿನ
  • ಬೇರೆಯವರಿಗೆ ಸಹಾಯ ಮಾಡುವುದರಿಂದ ನೀವು ದಂಡ ತೆರಬೇಕಾಗಬಹುದು ಎಚ್ಚರಿಕೆ
  • ಆದರೆ ಕೆಲಸದ ಒತ್ತಡದಿಂದ ಯಾವುದಕ್ಕೂ ಅವಕಾಶ ಆಗುವುದಿಲ್ಲ
  • ನಿಮಗೂ ಮನೆಯವರಿಗೂ ಬೇಸರವಾಗುವ ದಿನ
  • ಕುಟುಂಬದ ಸದಸ್ಯರ ಜೊತೆ ಸಂತೋಷವಾಗಿರಲು ಬಯಸುತ್ತೀರಿ
  • ಆಸ್ತಿಯ ವಿಚಾರ ಪ್ರಸ್ತಾಪ ಆಗುವ ಸಾಧ್ಯತೆಗಳಿವೆ
  • ಗಂಡ ಹೆಂಡತಿ ನಡುವೆ ಜಗಳ ಆಗುವ ಸಂಭವ
  • ಕುಲದೇವರನ್ನು ಪ್ರಾರ್ಥಿಸಿ 

ಧನುಸ್ಸು

RASHI_BHAVISHA_DHANASU

  • ನಿಮ್ಮ ವಿರೋಧಿಗಳೂ ನಿಮ್ಮ ಕಾರ್ಯ ವೈಖರಿ ನೋಡಿ ಹೊಗಳುತ್ತಾರೆ
  • ಮನೆ ಮತ್ತು ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಾಗುತ್ತದೆ
  • ಸಾಯಂಕಾಲದ ಹೊತ್ತಿಗೆ ಅಶುಭ ವಾರ್ತೆಯಿಂದ ಬೇಸರವಾಗಬಹುದು
  • ಸೇವಾ ಮನೋಭಾವನೆಯನ್ನು ಮನಸ್ಸಲ್ಲಿ ಬೆಳೆಸಿಕೊಳ್ಳಿ
  • ಹಿರಿಯರಿಗೆ ಅಗತ್ಯವಿರುವ ಸೇವೆಯನ್ನು ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಿ
  • ನಿಮ್ಮ ಕೆಲಸವನ್ನು ನೋಡಿ ಎಲ್ಲರೂ ಸಹ ಆಕರ್ಷಿತರಾಗುತ್ತಾರೆ
  • ನಿಮ್ಮ ಆತ್ಮ ವಿಶ್ವಾಸದ ಬಗ್ಗೆ ನಿಮಗೆ ನಿರ್ದಿಷ್ಟವಾದ ನಂಬಿಕೆ ಇರಬೇಕು 
  • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಮಕರ

RASHI_BHAVISHA_MAKARA

  • ಇಂದು ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳಾಗಬಹುದು
  • ನಿಮ್ಮನ್ನು ಎಲ್ಲರೂ ಮೆಚ್ಚಿಕೊಂಡು, ಅಭಿಮಾನದಿಂದ ಕಾಣ್ತಾರೆ
  • ನಿಮ್ಮ ಕುಟುಂಬದವರ ನಡವಳಿಕೆ, ಸ್ವಭಾವದಿಂದ ನಿಮ್ಮ ಗೌರವ ಹೆಚ್ಚಾಗುವ ದಿನ
  • ನಿಮ್ಮನ್ನು ಎಲ್ಲರೂ ಮೆಚ್ಚಿಕೊಂಡು, ಅಭಿಮಾನದಿಂದ ಕಾಣ್ತಾರೆ
  • ನಿಮ್ಮ ಸಣ್ಣ-ಪುಟ್ಟ ಬದಲಾವಣೆಗಳನ್ನು ಜನರು ಮೆಚ್ಚಿ ಅಭಿನಂದಿಸುತ್ತಾರೆ
  • ನಿಮ್ಮ ಕೆಲಸದಲ್ಲಿ ತುಂಬಾ ಪರಿಶ್ರಮ ಪಡುತ್ತೀರಿ ಇದಕ್ಕೆ ಪ್ರತಿಫಲ ಸಿಗುವ ದಿನ
  • ನಿಮ್ಮ ಚುರುಕುತನ,ಬುದ್ಧಿವಂತಿಕೆ ನಿಮ್ಮ ಗೌರವ,ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ
  • ರಾಜಕೀಯ ವ್ಯಕ್ತಿಗಳಿಗೆ ಶುಭದಿನ
  • ನವದುರ್ಗೆಯರನ್ನು ಆರಾಧಿಸಿ

ಕುಂಭ

RASHI_BHAVISHA_KUMBHA

  • ಸ್ಥಿರವಾದ ಮನಸ್ಸಿನಿಂದ ಮುಂದುವರೆದರೆ ಒಳ್ಳೆಯದು 
  • ನೀವು ಲಾಭದ ದೃಷ್ಠಿಯಿಂದ ಯಾವುದೇ ಕೆಲಸ ಮಾಡಿದರು ಅದು ನಿಮಗೆ ಶುಭವಾಗುತ್ತದೆ
  • ಸಹೋದ್ಯೋಗಿಗಳು  ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ ಜಾಗ್ರತೆವಹಿಸಿ
  • ಯಾವುದೇ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲಕ್ಕೀಡಾಗುತ್ತೀರಿ
  • ಬೇರೆಯವರನ್ನು ವಿನಾಕಾರಣ ನಂಬುವುದು ಒಳ್ಳೆಯದಲ್ಲ
  • ಮನೆಯವರೆಲ್ಲ ನಿಮ್ಮ ವಿಚಾರಕ್ಕೆ ಆತಂಕಕ್ಕೆ ಒಳಗಾಗುತ್ತಾರೆ
  • ಇಂದು ಹಣದ ಹೂಡಿಕೆಯನ್ನು ಮಾಡಿದರೆ ಒಳಿತು
  • ಮಾನಸಿಕವಾಗಿ ತುಂಬಾ ಆಯಾಸವಾಗುವ ದಿನ
  • ಶ್ರೀರಾಮದೂತ ಆಂಜನೇಯನನ್ನು ಸ್ಮರಿಸಿ

ಮೀನ

RASHI_BHAVISHA_MEENA

  • ಪದವೀಧರರಿಗೆ ಉತ್ತಮ ನೌಕರಿಯ ಅವಕಾಶಗಳು ಸಿಗುವ ಯೋಗವಿದೆ
  • ಈ ದಿನ ನಿಮಗೆ ಹಳೆಯ ನೆನಪುಗಳು ಕಾಡಬಹುದು
  • ವಿದ್ಯಾರ್ಥಿಗಳು ಅಧ್ಯಯನದ ದೃಷ್ಠಿಯಿಂದ ತೀವ್ರವಾಗಿ ಪರಿಶ್ರಮ ಪಡುವ ಸಾಧ್ಯತೆ
  • ಸಮಾಜದ ಹಿತದೃಷ್ಟಿಯಿಂದ ಮುಂದಾಲೋಚನೆ ಮಾಡಿ ಅಧ್ಯಯನ ಮಾಡಿದರೆ ಒಳಿತು
  • ಗಂಭೀರವಾದ ಚಿಂತನೆಗಳನ್ನು ವಿದ್ಯಾರ್ಥಿಗಳು ನಡೆಸಬೇಕಾಗುತ್ತದೆ
  • ಮಧ್ಯಾಹ್ನದ ನಂತರ ಹಲವು ಕೆಲಸಗಳು ಶುಭವಾಗಲಿದೆ
  • ಪ್ರತಿಫಲ ನಿರೀಕ್ಷೆಯಲ್ಲಿ ಪರಿಶ್ರಮ ಪಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ
  • ಅನಗತ್ಯ ಖರ್ಚನ್ನು ಕಡಿಮೆ ಮಾಡಿಕೊಂಡರೆ ಒಳ್ಳೆಯದು
  • ಇಂದು ಆದಾಯ ಬರುವಂತ ದಿನವಾಗಿದೆ
  • ಹಸಿದವರಿಗೆ ಅನ್ನವನ್ನು ದಾನ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment