Advertisment

ರೈತರ ಮೇಲೆ ಹುಲಿ ದಾಳಿ ಹೆಚ್ಚಾದ ಹಿನ್ನಲೆ : ಇಂದಿನಿಂದ ಬಂಡಿಪುರ, ನಾಗರಹೊಳೆ ಸಫಾರಿ ಬಂದ್‌

ಮೈಸೂರು ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ರೈತರ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮೂವರು ರೈತರು ಹುಲಿ ದಾಳಿಯಿಂದ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಇಂದಿನಿಂದಲೇ ಬಂಡಿಪುರ, ನಾಗರಹೊಳೆ ಸಫಾರಿ ಬಂದ್ ಮಾಡಲಾಗಿದೆ.

author-image
Chandramohan
BANDIPURA SAFARI CLOSED FROM TODAY

ಬಂಡಿಪುರ, ನಾಗರಹೊಳೆ ಸಫಾರಿ ಇಂದಿನಿಂದ ಬಂದ್‌

Advertisment
  • ಬಂಡಿಪುರ, ನಾಗರಹೊಳೆ ಸಫಾರಿ ಇಂದಿನಿಂದ ಬಂದ್‌
  • ಹುಲಿ ದಾಳಿ ಹೆಚ್ಚಾದ ಹಿನ್ನಲೆಯಲ್ಲಿ ಸಫಾರಿ ಬಂದ್‌
  • ಅರಣ್ಯ ಸಿಬ್ಬಂದಿಯನ್ನು ಹುಲಿ ಕಾರ್ಯಾಚರಣೆಗೆ ಬಳಕೆಗೆ ನಿರ್ಧಾರ

ಹುಲಿ ದಾಳಿಯಿಂದ ಮೈಸೂರು ಜಿಲ್ಲೆಯಲ್ಲಿ ಮೂವರು ರೈತರು ಸಾವನ್ನಪ್ಪಿದ್ದಾರೆ. ಹುಲಿಗಳು ಕಾಡಿನಿಂದ ನಾಡಿಗೆ ಬಂದು ರೈತರ ಮೇಲೆ ದಾಳಿ ನಡೆಸಿ ಕೊಂದು ಹಾಕಿವೆ. ಇದರಿಂದಾಗಿ ಕಾಡಂಚಿನ ಗ್ರಾಮಗಳ ರೈತರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
ಬಂಡಿಪುರ, ನಾಗರಹೊಳೆಯಲ್ಲಿ ಸಫಾರಿ ನಡೆಸುತ್ತಿರುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ ಎಂಬ ಅಭಿಪ್ರಾಯವನ್ನು ವನ್ಯಜೀವಿ ತಜ್ಞರು ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಇಂದಿನಿಂದಲೇ ಬಂಡೀಪುರ, ನಾಗರಹೊಳೆ ಸಫಾರಿಯನ್ನು  ಸಂಪೂರ್ಣ ಬಂದ್ ಮಾಡಲಾಗಿದೆ. 

Advertisment

BANDIPURA SAFARI CLOSED order copy


ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಫಾರಿ ಬಂದ್ ಮಾಡಿ ಹೊರಡಿಸಿದ ಆದೇಶದ ಪ್ರತಿ


ಹುಲಿ ದಾಳಿ ಹೆಚ್ಚಾದ ಹಿನ್ನಲೆಯಲ್ಲಿ  ಸಫಾರಿ ಬಂದ್ ಮಾಡಿ ಆದೇಶ ಮಾಡಲಾಗಿದೆ. ಅರಣ್ಯ ಇಲಾಖೆಯಿಂದ ಸಫಾರಿ ಬಂದ್ ಮಾಡಿ ಆದೇಶ ಮಾಡಲಾಗಿದೆ.  ಎಲ್ಲಾ ಸಿಬ್ಬಂದಿಗಳನ್ನು ಹುಲಿ ಕಾರ್ಯಾಚರಣೆ ಮಾಡಲು ಬಳಸಲು ನಿರ್ಧರಿಸಲಾಗಿದೆ. 

BANDIPURA SAFARI CLOSED FROM TODAY (1)

BANDIPURA NAGARAHOLE TIGER SAFARI CLOSED
Advertisment
Advertisment
Advertisment