ಹುಣಸೂರಿನಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿ 5 ಕೋಟಿ ಮೌಲ್ಯದ ಆಭರಣ ದರೋಡೆ..!

ಹುಣಸೂರು ಬಸ್​​ ನಿಲ್ದಾಣದ ಹಿಂದಿರುವ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಮಳಿಗೆ’ಯಲ್ಲಿದ್ದ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ದರೋಡೆ ಮಾಡಲಾಗಿದೆ. ಬೈಕಲ್ಲಿ ಬಂದ ಐವರು ಮುಸುಕುದಾರಿಗಳು ಅಂಗಡಿ ಮ್ಯಾನೇಜರ್ ಅಜ್ಗರ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

author-image
Ganesh Kerekuli
Mysore robbary
Advertisment

ಹುಣಸೂರು ಬಸ್​​ ನಿಲ್ದಾಣದ ಹಿಂದಿರುವ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಮಳಿಗೆ’ಯಲ್ಲಿದ್ದ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ದರೋಡೆ ಮಾಡಲಾಗಿದೆ. ಬೈಕಲ್ಲಿ ಬಂದ ಐವರು ಮುಸುಕುದಾರಿಗಳು ಅಂಗಡಿ ಮ್ಯಾನೇಜರ್ ಅಜ್ಗರ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.  ಇದರಿಂದ ಮಳಿಗೆಯಲ್ಲಿದ್ದ ಇತರ ಸಿಬ್ಬಂದಿ ಗಾಬರಿಯಾಗಿದ್ದಾರೆ. 

Mysore robbary (1)

ನಂತರ ಅಲ್ಲಿದ್ದ ಚಿನ್ನಾಭರಣ, ವಜ್ರಾಭರಣ ಜೊತೆಗೆ ಮೌಲ್ಯಯುತ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಐವರಲ್ಲಿ ಓರ್ವ ದರೋಡೆಕೋರ ಅಲ್ಲಿಂದ ಪರಾರಿ ಆಗುವ ವೇಳೆ ಹೆಲ್ಮೆಟ್ ಬಿಟ್ಟು ಹೋಗಿದ್ದಾನೆ. 

ಗುಂಡಿನ ದಾಳಿಯಲ್ಲಿ ಮ್ಯಾನೇಜರ್​ ಅಸ್ಗರ್​​ಗೆ ಗಾಯವಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಹುಣಸೂರು ಪೊಲೀಸರು ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ. 

ಇದನ್ನೂ ಓದಿ:‘ಟಾಕ್ಸಿಕ್’ ಹುಮಾ ಖುರೇಷಿ ಫಸ್ಟ್​ ಲುಕ್ ಔಟ್! ಹೆಂಗಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

7 crore Robbery hunsur robbery
Advertisment