ಮಾನಸಿಕ, ಕೆಲಸದ ಒತ್ತಡಗಳಿಂದ ತೊಂದರೆಗೆ ಸಿಲುಕುತ್ತೀರಿ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ವಿದ್ಯಾರ್ಥಿಗಳಿಗೆ ವಿರಾಮವಿದ್ದರೂ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಚಿಂತಿಸಿ ಆಯಾಸರಾಗುತ್ತೀರಿ
ನಿದ್ದೆ ಮತ್ತು ಆಹಾರದಿಂದ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು 
ಕಣ್ಣು ಮತ್ತು ಕಿವಿಗೆ ಹಾನಿಯಾಗುವ ಸೂಚನೆಗಳಿವೆ ಎಚ್ಚರಿಕೆ
ಮಾನಸಿಕವಾಗಿ ಮತ್ತು ಕೆಲಸದ ಒತ್ತಡಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಾಯಂಕಾಲ ಸಂಬಂಧಿಕರ ಮನೆಗೆ ಭೇಟಿ ನೀಡಬೇಕಾದ ಅನಿವಾರ್ಯತೆ  ಉಂಟಾಗುತ್ತದೆ
ಇಷ್ಟ ದೇವತೆಯನ್ನು ಸ್ಮರಣೆ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೀತಿ ಪಾತ್ರರ ಜೊತೆಯಲ್ಲಿ ಕಾಲ ಕಳೆಯಲು ಹೋಗಿ ಅವಮಾನವಾಗಬಹುದು ಜಾಗ್ರತೆ
  • ಆದರೆ ನಿಮ್ಮ ಮರೆವಿನಿಂದ ನಿಮ್ಮೆಲ್ಲಾ ಕಾರ್ಯಗಳು ಅಸ್ತವ್ಯಸ್ತವಾಗಬಹುದು
  • ಬಹಳ ಸಂತೋಷವಾಗಿ ಈ ದಿನ ಕಳೆಯಲು ಪ್ಲಾನ್ ಮಾಡಿರುತ್ತೀರಿ
  • ಆದಾಯದ ಮೂಲಗಳು ನಿಮ್ಮಲಿಗೆ ಹುಡುಕಿಕೊಂಡು ಬರಬಹುದು
  • ತಾಯಿಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
  • ತ್ರ್ಯಂಬಕರುದ್ರ ಮಂತ್ರ ಜಪ ಮಾಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬಹಳ ಸಂತೋಷವಾಗಿ ಈ ದಿನ ಕಳೆಯಲು ಪ್ಲಾನ್ ಮಾಡಿರುತ್ತೀರಿ
  • ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮನ್ನು ಗುರುತಿಸಿಕೊಂಡಿರುವುದು ತೊಂದರೆಯಾಗಬಹುದು
  • ನೀವು ಕೂಡ ಹೊಸ ಆಸ್ತಿ ಖರೀದಿಯ ಚಿಂತನೆ ಮಾಡಬಹುದು
  • ಜಾಹೀರಾತುದಾರರಿಗೆ ಹಿನ್ನಡೆ ನಷ್ಟ ಆಗುವ ಸಾಧ್ಯತೆಯಿದೆ
  •  ವ್ಯಾಪಾರದಲ್ಲಿ ಅತಿ ಬೇಡಿಕೆ ಅವಕಾಶಗಳು ನಿಮ್ಮದಾಗುವ ಸಾಧ್ಯತೆಯಿದೆ
  • ಕಟ್ಟಡ ಸಾಮಾಗ್ರಿಗಳನ್ನು ಮಾರುವವರಿಗೆ ಹಾಗೇ ಕಟ್ಟಡ ಕಾರ್ಯನಿರ್ವಹಣೆ ಮಾಡುವವರಿಗೆ ಶುಭ - ಲಾಭವಿದೆ
  • ಮಹಾದೇವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದವರ ಸಹಮತದಿಂದ ನೀವು ಪಾರಾಗಬಹುದು
  • ಮನಸ್ಸಿಗೆ ಬಂದಂತೆ ವರ್ತಿಸಿದ್ರೆ ಅನಾಹುತವಾಗಬಹುದು ಎಚ್ಚರ
  • ಪ್ರಯಾಣ ಅಥವಾ ಪ್ರವಾಸದಿಂದ ಪ್ರಯಾಸವಾಗುವ ಸಾಧ್ಯತೆ ಇದೆ 
  • ಮಕ್ಕಳ ಮಾತು ಈ ದಿನ ನಿಮ್ಮ ಶುಭಫಲ ನೀಡಬಹುದು ತಾತ್ಸಾರ ಮಾಡಬೇಡಿ
  • ಸಾಕು ಪ್ರಾಣಿಗಳು ಅಥವಾ ಕಾಡು ಪ್ರಾಣಿಗಳಿಂದ ದೂರವಿರಿ
  • ಚಾಮುಂಡೇಶ್ವರಿಯನ್ನು ಕೆಂಪು ಹೂವಿನಿಂದ ಆರ್ಚಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಿಟ್ಟಿಗೆ ಯಾವುದೇ ಕಾರಣಕ್ಕೂ ಬುದ್ಧಿ ಕೊಡಬಾರದು
  • ಮನಸ್ಸು ಕೋಪ ನಿಮ್ಮ ಹಿಡಿತದಲ್ಲಿರಲಿ
  • ಆಯಸ್ಸು ಮತ್ತು ಆರೋಗ್ಯದ ಬಗ್ಗೆ ಪ್ರಶ್ನೆ ಮಾಡಬಾರದು
  • ನಿಮಗಿಂತ ಬಲಶಾಲಿಗಳೊಂದಿಗೆ ಸ್ಪರ್ಧೆ, ವಾಗ್ವಾದಗಳು ಬೇಡ
  • ಪ್ರಕೃತ ನಿಮ್ಮ ಆರೋಗ್ಯ ಚೆನ್ನಾಗಿದೆ ಹಾಗೆ ಮುಂದುವರಿಸಿಕೊಂಡು ಹೋಗಿ
  • ರಾಜಕಾರಣಿಗಳಿಂದ ಭಯ ಏರ್ಪಡಬಹುದು ಅಗತ್ಯವಾಗಿ ರಾಜಿಮಾಡಿಕೊಳ್ಳುವ ಪರಿಸ್ಥಿತಿ ಬರುಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮ ಸಂಬಂಧ ವಿಚಾರದಲ್ಲಿ ಜಗಳ, ವಿರಸ ಸಾಧ್ಯತೆ
  • ಬಂಧುತ್ವದಲ್ಲಿ ಬಿರುಕು, ವಿನಾಕಾರಣ ಮಾತಿನ ಸುರಿಮಳೆ ಮನಸ್ಸಿಗೆ ಅಸಹ್ಯ ಸಾಧ್ಯತೆ
  • ಹೊಸ ಸಂಬಂಧಗಳಲ್ಲಿ ನಿಮ್ಮ ಗೌರವ ಕಾಪಾಡಿಕೊಳ್ಳಬೇಕು
  • ಕಹಿ ಮಾತುಗಳಿಂದ ಮನಸ್ಸಿನ ಮೇಲೆ ಪರಿಣಾಮ ಸಾಧ್ಯತೆ ಹಗುರವಾಗಿ ತೆಗೆದುಕೊಳ್ಳಿ
  • ಕೆಲಸದ ಜಾಗದಲ್ಲಿ ವೃತ್ತಿಯಲ್ಲಿ ಋಣಾತ್ಮಕ ವಾತಾವರಣ ಮಾನಸಿಕ ಬೇಸರ ಸಾಧ್ಯತೆ
  • ಮಾತೆ ಸೀತೆಯನ್ನು ಆರಾಧನೆ ಮಾಡಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆ ಇರಲಿ
  • ಸಂಬಂಧಿಕರಿಂದ ಧನಲಾಭ, ದ್ರವ್ಯಲಾಭ ಯೋಗವಿದೆ
  •  ನಿಮ್ಮದಲ್ಲದ ತಪ್ಪಿಗೆ ನೀವು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ
  • ಅತಿಯಾದ ಉತ್ಸಾಹ ಆತುರದಿಂದ ಮಾಡಿದ ಕೆಲಸಗಳಿಂದ ನಷ್ಟ ಸಾಧ್ಯತೆ
  • ಪೋಷಕರಿಗೆ ದುಃಖದಾಯಕವಾದ ದಿನ, ದೊಡ್ಡವರ ವಿಚಾರದಲ್ಲಿ ಕಾಳಜಿ ವಹಿಸಿ
  • ಶಾರೀರಿಕವಾಗಿ ಸುಖವಿರುವುದಿಲ್ಲ ನರದೌರ್ಬಲ್ಯ ಕಾಡಬಹುದು
  • ಈಶ್ವರಾರಾಧನೆ ಮಾಡಿ, ಗೋವಿಗೆ ಅಕ್ಕಿಬೆಲ್ಲ ಕೊಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಗೆ  ಉಸಿರಾಟದ  ಅಥವಾ ಶ್ವಾಸಕೋಶದ ಸಮಸ್ಯೆ ಕಾಣಬಹುದು
  • ರಾಜಕಾರಣಿಗಳು ತಮ್ಮ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಬಹುದು ಎಚ್ಚರಿಕೆಯಿರಲಿ
  • ಪ್ರಯಾಣ -ಪ್ರವಾಸದ ಬಗ್ಗೆ ಚರ್ಚೆ ನಡೆದು ಕೊನೆಗೆ ಬೇಡವೆಂದು ಬೇಸರವಾಗಬಹುದು
  • ವಿದ್ಯಾರ್ಥಿಗಳು ತಮ್ಮ ಗುರಿಯನ್ನ ತಲುಪುವ ವಿಚಾರದಲ್ಲಿ ಹೆಚ್ಚು ಗಮನಹರಿಸಿ
  • ಹೆಚ್ಚು ಹೆಚ್ಚು ಖರ್ಚಿನ ಪಟ್ಟಿ ನೋಡಿ ನಿರಾಶೆಯಾಗಬಹುದು
  • ಅಶ್ವಿನಿ ದೇವತೆಗಳನ್ನು ಆರಾಧಿಸಿ

ಧನುಸ್

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯಲ್ಲಿ ಕಳ್ಳತನದ ಹೆದರಿಕೆ ಕಾಡಬಹುದು ಎಚ್ಚರಿಕೆವಹಿಸಿ
  • ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಗಮನವಿರಲಿ ಗಾಬರಿ ಬೇಡ
  • ಹೊಸ ವಾಹನ ಖರೀದಿ ಮಾಡುವ ಸಾಧ್ಯತೆಯಿದೆ
  • ಪತಿ-ಪತ್ನಿಯರ ಮಧ್ಯೆ ವಿರಸ ದೂರವಾಗಿ ಅನ್ಯೋನ್ಯವಾಗಿರುವ ಸಮಯ
  • ಕೆಲಸಗಾರರಿಂದ ತೊಂದರೆ ಕಾಣಬಹುದು ಆದರೆ ಗಾಬರಿ ಬೇಡ
  • ಹಣ ಹೂಡಿಕೆಗೆ ಮಾತುಕತೆ ನಡೆಯಬಹುದು 
  • ಸುಖವಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
  • ಮಾನಸಿಕ ಕಿರಿಕಿರಿಯೊಂದಿಗೆ ದಿನ ಮುಕ್ತಾಯವಾಗುತ್ತದೆ 
  • ನರಸಿಂಹನನ್ನು ಪ್ರಾರ್ಥಿಸಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಮಾಜದಲ್ಲಿ ಹೆಸರು ಕೆಡುವಂತಹ ಸಂದರ್ಭಗಳೇ ಹೆಚ್ಚಾಗಿವೆ ಜಾಗ್ರತೆಯಿರಲಿ
  • ಅತಿಯಾದ ನಂಬಿಕೆ ವಿಶ್ವಾಸ ನಿಮಗೆ ತೊಂದರೆ ಮಾಡಬಹುದು
  • ನಿಮ್ಮ ಅಭಿವೃದ್ಧಿಯನ್ನು, ಬೆಳವಣಿಗೆಯನ್ನ ಸಹಿಸದವರು ನಿಮ್ಮ ವಿರುದ್ಧ ನಿಲ್ಲುತ್ತಾರೆ ಎಚ್ಚರ
  • ಕೋರ್ಟ್​ ಕಚೇರಿಯ ಹಳೆಯ ಕೇಸ್​ಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ
  • ಪರೀಕ್ಷಾ ಫಲಿತಾಂಶಗಳು ಬರುವುದಿದ್ದರೆ ನಿಮ್ಮ ಪರವಾಗಬಹುದು
  • ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ

ಕುಂಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಅಭಿವೃದ್ಧಿಯನ್ನು, ಬೆಳವಣಿಗೆಯನ್ನ ಸಹಿಸದವರು ನಿಮ್ಮ ವಿರುದ್ಧ ನಿಲ್ಲುತ್ತಾರೆ ಎಚ್ಚರ
  • ವೈದ್ಯರಿಗೆ ಬಿಡುವಿಲ್ಲದ ಕೆಲಸ ತುಂಬಾ ಆಯಾಸ ಹೊಂದಬಹುದು
  • ಈ ಹಿಂದೆ ಆಪರೇಶನ್​ ಆಗಿರುವವರಿಗೆ ಸ್ವಲ್ಪ ಸಮಸ್ಯೆ ಕಾಡಬಹುದು ಜಾಗ್ರತೆಯಿರಲಿ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆ ಮಾನಸಿಕವಾಗಿ ಬೇಸರ ಬೇಡ
  • ನಿಮಗೆ ಸಂಬಂಧ ಪಡದೆಯಿರುವ ವಿಚಾರಗಳಿಂದ ದೂರವಿದ್ದರೆ ಒಳ್ಳೆಯದು
  • ಅನಗತ್ಯ ವಿಚಾರಗಳಿಗಾಗಿ ಚಿಂತಿಸಿ ಬೇಸರಗೊಳ್ಳುತ್ತೀರಿ
  • ಷೇರು ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ ಸಾಧ್ಯತೆ ಹೂಡಿಕೆ ಮುಂದೂಡಿದರೆ ಒಳ್ಳೆಯದು
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ 

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕೆಲಸದ ಒತ್ತಡದಿಂದಾಗಿ ಕಚೇರಿಯಲ್ಲಿ ಅನಿವಾರ್ಯವಾಗಿ ಇರಬೇಕಾಗಬಹುದು
  • ನಿಮ್ಮ ಸಂಶೋಧನೆ ಮತ್ತು ಸಾಧನೆ ಸಮಾಜದಲ್ಲಿ ಆಕರ್ಷಣೀಯವಾಗಿರುತ್ತದೆ
  • ಇಂದು ಮನೆಯಲ್ಲಿರುವುದು ಕಷ್ಟಕರ ಕೆಲಸವಾಗಬಹುದು
  • ಇಂದು ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭ ಏರ್ಪಡಬಹುದು
  • ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣಿತಿ ಇರುವವರಿಗೆ ಪುರಸ್ಕಾರ, ಗೌರವ ಸಿಗಬಹುದು
  • ದೀರ್ಘಕಾಲದ ರೋಗಗಳು ಉಲ್ಬಣವಾಗುವ ಸೂಚನೆಯಿದೆ
  • ಪರಮೇಶ್ವರಿಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment