Advertisment

ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ, ಯಾರಿಂದಲೂ ಸಾಂತ್ವನ ಇಲ್ಲ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಭರಣೀ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಈ ದಿನ ಚೆನ್ನಾಗಿದೆ ಅಂದುಕೊಳ್ಳುವ ಹೊತ್ತಿಗೆ ಮಾನಸಿಕ ಬೇಸರ ಸಮಸ್ಯೆ
  • ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಇರುವಂತಹ ದಿನ
  • ಶಕ್ತಿಮೀರಿ ಕೆಲಸ ಮಾಡಬೇಕಾದ ಅಗತ್ಯತೆ ಕಾಣುತ್ತದೆ
  • ಕುಟುಂಬದಲ್ಲಿ ವಾಗ್ವಾದ ನಡೆಯುತ್ತದೆ, ಬೇಸರ ಉಂಟಾಗಬಹುದು
  • ಮಾತಿನ ಸರಮಾಲೆಯಿಂದ ನಿಮ್ಮ ನಂಬಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತೀರಿ
  • ಮಾತಿನ ಬಗ್ಗೆ ನಿಗಾ ಇದ್ದರೆ ಒಳ್ಳೆಯದು
  • ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ಚಿಂತನೆ ಮಾಡಿ 
  • ಮಕ್ಕಳನ್ನು ಬಯಸುವವರಿಗೆ ಉತ್ತಮವಾದ ದಿನ
  • ಪಂಚಮುಖಿ ಆಂಜನೇಯನನ್ನು ಪ್ರಾರ್ಥಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ರಾಜಕೀಯ ವ್ಯಕ್ತಿಗಳಿಗೆ ಶುಭವಾಗುವ ದಿನವೆಂದು ಹೇಳಬಹುದು
  • ಕುಂಭರಾಶಿಯ ಶಿಕ್ಷಕರಿಗೆ ಅಪವಾದ ಬರುವಂತಹ ದಿನ
  • ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು ತಾಳ್ಮೆ ಇರಲಿ
  • ರಸ್ತೆ ಬದಿಯ ವ್ಯಾಪಾರಿಗಳಿಗೆ ಲಾಭವಿದೆ, ಹಣವನ್ನು ಜಾಗ್ರತೆಯಿಂದ ಇಟ್ಟುಕೊಳ್ಳಿ
  • ಮನೆಯ ಹೊರಗೆ ಮತ್ತು ಒಳಗೆ ನೆಮ್ಮದಿ ಕಡಿಮೆಯಿರುವ ದಿನವಾಗಿದೆ 
  • ಮಹಾಶೂಲಿನಿಯನ್ನು ಪ್ರಾರ್ಥಿಸಿ

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ನೇಹಿತರು ಮತ್ತು ಸಂಬಂಧಿಕರ ಮಧ್ಯೆ ಜಗಳ ಉಂಟಾಗುವ ಸಾಧ್ಯತೆ
  • ರಾಜಕಾರಣಿಗಳಿಗೆ ಹಿನ್ನೆಡೆಯಾಗುವ ದಿನವಾಗಿದೆ
  • ಮನಸ್ಸಿನ ಉದ್ವೇಗ ನಿಮ್ಮೆಲ್ಲಾ ಕೆಲಸಗಳನ್ನು ಹಾಳು ಮಾಡಬಹುದು
  • ಮಹಿಳೆಯರಿಗೆ ಸಿಹಿ ಸುದ್ದಿ ಸಿಗುವ ದಿನವಾಗಿದೆ
  •  ಮರಣದ ವಾರ್ತೆ ಕೇಳಿ ಮನಸ್ಸಿನ ಮೇಲೆ ಪ್ರಭಾವ ಬೀರುವಂತದಾಗಿರುತ್ತದೆ
  • ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಿ 
Advertisment

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸರ್ಕಾರಿ ನೌಕರರಿಗೆ ಸಿಹಿಸುದ್ದಿ
  • ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಈ ದಿನ ಜಯ ಸಿಗಲಿದೆ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ವಸ್ತು ರೂಪದಲ್ಲಿ ಉಡುಗೊರೆ ಸಿಗಬಹುದು
  • ಹಳದಿ ಬಟ್ಟೆಯನ್ನು ಧರಿಸಿ ಪ್ರಯಾಣ ಮಾಡಿ ಶುಭವಿದೆ
  • ಮಕ್ಕಳಿಗೆ ಮಧ್ಯಾಹ್ನದ ನಂತರ ಕಿರಿಕಿರಿಯಾಗಬಹುದು
  • ಅಲುಪ್ತ ಶಕ್ತಿಯನ್ನು ಆರಾಧಿಸಿ

ಸಿಂಹ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಕೆಲಸದ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ
  • ಆಡಳಿತ ವರ್ಗ ಮತ್ತು ಪ್ರಬಲ ವ್ಯಕ್ತಿಗಳ ಮನಸ್ಸಿಗೆ ಬೇಸರ ಉಂಟಾಗಬಹುದು
  • ಜೊತೆಯಲ್ಲಿ ಕೆಲಸ ಮಾಡುವವರ ಸಹಕಾರ ದೊರೆಯುತ್ತದೆ
  • ಆಹಾರದ ಬಗ್ಗೆ ಗಮನವಿರಲಿ, ಶೀತ ಸಂಬಂಧಿ ತೊಂದರೆ ಕಾಣಬಹುದು
  • ಕೋಪ ಅನರ್ಥಕ್ಕೆ ಕಾರಣವಾಗುತ್ತೆ ಕೋಪದ ಕೈಗೆ ಬುದ್ಧಿಯನ್ನು ಕೊಡಬೇಡಿ 
  • ಸ್ನೇಹಿತರೊಂದಿಗೆ ಜಗಳ ಆಗುವ ಸಂದರ್ಭವಿದೆ
  • ನಾರಾಯಣೇ ದುರ್ಗಾ ಶಕ್ತಿಯನ್ನು ಆರಾಧಿಸಿ

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ನೌಕರಿಯ ಚಿಂತೆ ಕಾಡಬಹುದು
  • ಇಂದು ಅಜೀರ್ಣ ಸಮಸ್ಯೆ ಅಥವಾ ಹೊಟ್ಟೆ ನೋವು ಕಾಣಬಹುದು
  • ನಿಮ್ಮ ಕೆಟ್ಟ ಅಭ್ಯಾಸಗಳಿದ್ದರೆ ನಿಧಾನವಾಗಿ ಬಿಡುವುದು ಒಳಿತು
  • ರಹಸ್ಯ ಶತ್ರುಗಳ ಬಗ್ಗೆ ಎಚ್ಚರವಿರಲಿ
  • ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಚ್ಚರಿಕೆ 
  • ವಾಹನ ಚಾಲನೆ ಮತ್ತು ಪ್ರಯಾಣ ಬೇಡ
  • ವಾಯುವ್ಯಾಸ್ತ ಮಂತ್ರ ಶ್ರವಣ ಮಾಡಿ
Advertisment

ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹೊಸ ಹೊಸ ವಿಚಾರಕ್ಕಾಗಿ ಹಣವನ್ನು ಕೂಡಿಡುವ ಆಲೋಚನೆ ನಿಮ್ಮ ಮನಸ್ಸಿಗೆ ಬರುತ್ತದೆ
  • ವಿರೋಧಿಗಳು ನಿಮ್ಮನ್ನು ಸೋಲಿಸಲು ಬಹಳ ಕಾತುರವಾಗಿ ಕಾಯ್ತಾ ಇರುತ್ತಾರೆ ಜಾಗ್ರತೆ
  • ಗಮನವಿಲ್ಲದೆ ಮಾಡಿರುವ ಕೆಲಸಗಳಿಂದ ತಪ್ಪಿಗೆ ಸಿಲುಕುವ ಸಾಧ್ಯತೆಗಳಿವೆ 
  • ಇಂದು ಆಕಾಶಮಾರ್ಗದಲ್ಲಿ ಹೋಗುವ ಪ್ರಯಾಣಕ್ಕೆ ಶುಭವಲ್ಲ 
  • ಸೋದರ ಮಾವನಿಗೆ ತೊಂದರೆ ಕಾಣಬಹುದು ಜಾಗ್ರತೆವಹಿಸಿ    
  • ವೈರೋಚಿನೀ ಶಕ್ತಿಯನ್ನು ಆರಾಧಿಸಿ 

ವೃಶ್ಚಿಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಶುಭ ವಾರ್ತೆಗಳನ್ನು ಕೇಳಬಹುದು
  • ಮನಸ್ಸಿಗೆ ಮತ್ತು ವ್ಯವಹಾರದಲ್ಲಿ ಬಹಳ ಸಂತೋಷ ಸಿಗುವ ದಿನ
  • ಸ್ನೇಹಿತರ ಸಂಬಂಧಗಳು ಹೆಚ್ಚಾಗಬಹುದು ಅವರ ಜೊತೆ ಬಹಳ ಜಾಗರೂಕರಾಗಿ ವರ್ತಿಸಿ
  • ಸಾಯಂಕಾಲಕ್ಕೆ ಹೊಸ ಸಂಬಂಧದಲ್ಲಿ ಮಾನಸಿಕ ಬೇಸರ ಕಾಣುವ ಸಾಧ್ಯತೆ
  •  ಶಾಂತಿಪ್ರದ ದುರ್ಗಾದೇವಿಯನ್ನು ಆರಾಧಿಸಿ - ಕಪ್ಪು ಬಟ್ಟೆ ಧರಿಸಬಾರದು

ಧನುಸ್

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮಗಿರುವ ಗೌರವ ಸ್ಥಾನ ದುರುಪಯೋಗವಾಗುವ ಸಾಧ್ಯತೆ
  • ಯಾವುದಾದರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಕೆ ಸಾಧ್ಯತೆ
  • ಬೆಲೆಬಾಳುವ ಪದಾರ್ಥಗಳು ನಷ್ಟವಾಗಬಹುದು
  • ಮಾತೆಯರೊಂದಿಗೆ ಸಭ್ಯವಾಗಿ ವರ್ತಿಸಿ ಇಲ್ಲದಿದ್ದರೆ ಅವಮಾನ ಸಾಧ್ಯತೆ
  • ದೀರ್ಘಕಾಲದ ಅನಾರೋಗ್ಯದ ಸೂಚನೆಯಿದೆ, ವೈದ್ಯರ ಸಲಹೆ ಪಡೆಯಿರಿ
  • ಭಗವತಿ ದುರ್ಗೆಯನ್ನು ನೀಲಿ ಹೂಗಳಿಂದ ಅರ್ಚಿಸಿ
Advertisment

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವ್ಯಾಪಾರ-ವ್ಯವಹಾರ, ನೌಕರಿ ಮತ್ತು ವಿದ್ಯಾರ್ಥಿ ವರ್ಗದವರು ಹೆಚ್ಚು ಶ್ರಮ ಪಡಬೇಕಾದ ದಿವಸ
  • ಖರ್ಚು ಹೆಚ್ಚಾಗಿ ಕೆಲವು ದುಷ್ಪರಿಣಾಮಗಳು ನಿಮ್ಮ ಮೇಲೆ ಬೀರುವ ಸಾಧ್ಯತೆ
  • ಸ್ವಲ್ಪ ಮಟ್ಟಿಗೆ ನಿಮ್ಮ ದುರಾಸೆಯನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು
  • ಸಂಬಂಧಿಕರ, ಸ್ನೇಹಿತರ ಸಂಬಂಧ ಚೆನ್ನಾಗಿದ್ದರು ಬೆಂಬಲ ದೊರೆಯುವುದು ಕಷ್ಟ ಸಾಧ್ಯ
  • ಪ್ರೇಮಿಗಳಿಗೆ ಉತ್ತಮ ದಿನ, ಪ್ರೇಮ ವಿಚಾರ ಕುಟುಂಬಕ್ಕೆ ತಿಳಿಸಲು ಉತ್ತಮ ದಿನ
  • ನಿಮ್ಮ ಸಹೋದರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಜಾಗ್ರತೆ
  • ಮೂಲ ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ 

ಕುಂಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರಯಾಣದಿಂದ ಲಾಭ ಸಾಧ್ಯತೆ ಆದರೆ ದೂರದ ಪ್ರಯಾಣ ಬೇಡ
  • ಸಹೋದ್ಯೋಗಿಗಳ ಜೊತೆಯಲ್ಲಿ ಸೌಹಾರ್ದಯುತ ಮನೋಭಾವವಿರುತ್ತದೆ
  • ನಿಮ್ಮ ತತ್ವ ಸಿದ್ಧಾಂತಗಳಿಂದ ಬೇರೆಯವರು ಪ್ರಭಾವಿತರಾಗುವ ಸಾಧ್ಯತೆ 
  • ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಕಾಣುವ ಸಾಧ್ಯತೆ
  • ಆಸ್ತಿ ವಿವಾದಗಳೇನೆ ಇದ್ದರು ಈ ದಿನ ಬಗೆಹರಿಯುವ ಸಾಧ್ಯತೆಗಳಿವೆ
  • ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದ ಮಾತೆಯರಿಗೆ, ಹೆಣ್ಣು ಮಕ್ಕಳಿಗೆ ಅಗ್ನಿಯಿಂದ ತೊಂದರೆಯಾಗುವ ಸಾಧ್ಯತೆ ಎಚ್ಚರ
  • ಜಾತವೇದಾಗ್ನಿಯನ್ನು ಪ್ರಾರ್ಥಿಸಿ

ಮೀನ

ಪ್ರಯಾಣಕ್ಕೆ ಒಳ್ಳೆಯದು.. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡೋರಿಗೆ ಗೌರವ, ಸನ್ಮಾನ; ಇಲ್ಲಿದೆ ರಾಶಿ ಭವಿಷ್ಯ!

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಗುರಿ ಸಾಧಿಸುವ ಮೂಲಕ ಮನಸ್ಸಿಗೆ ಸಂತೋಷ
  • ವ್ಯಾಪಾರ, ವ್ಯವಹಾರದಲ್ಲಿ ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ
  • ಎಲ್ಲ ಕೆಲಸ ಕಾರ್ಯಗಳಲ್ಲಿ ಉತ್ಸಾಹ, ಬಿಡುವಿಲ್ಲದ ಕಾರ್ಯಗೌರವ 
  • ಹಿರಿಯರು ಮತ್ತು ಸಹೋದರರು ಮಾತಿನ ವೈಮನಸ್ಯ ಬೆಳಸಿಕೊಳ್ಳಬಹುದು
  • ಸಮಾಜದಲ್ಲಿ ಹಲವರಿಗೆ ನಿಮ್ಮ ಕಾರ್ಯದಕ್ಷತೆ ಬಗ್ಗೆ ಉತ್ತಮ ಅಭಿಪ್ರಾಯವಿರುತ್ತದೆ
  • ನಿಮ್ಮ ಖುಷಿಗಾಗಿ ಹೆಚ್ಚು ಹಣ ಖರ್ಚು ಮಾಡುವ ದಿನ
  • ಇಂದು ಕುಲದೇವರನ್ನು ಸ್ಮರಿಸಿ
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment