/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೇ ನಿರೀಕ್ಷೆಯಿಲ್ಲದೆ ಬೇರೆಯವರಿಗೆ ಸಹಾಯ ಮಾಡಿ ಗೌರವ ಹೆಚ್ಚಾಗುತ್ತದೆ
- ಇಂದು ಉಪಕೃತರು ನಿಮ್ಮನ್ನು ಮನಸಾರೆ ಗೌರವಿಸುವ ಸಾಧ್ಯತೆಯಿದೆ
- ನಿಮ್ಮ ಮಧ್ಯಸ್ಥಿಕೆಯಲ್ಲಿ ನಡೆಯುವ ವ್ಯವಹಾರಗಳು ಸುಖಾಂತ್ಯವಾಗುತ್ತವೆ
- ಸರ್ಕಾರಿ ಕೆಲಸಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗುವ ಸಾಧ್ಯತೆ
- ಇಂದು ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗಬಹುದು
- ನಿಮ್ಮ ಮಧ್ಯಸ್ಥಿಕೆಯಲ್ಲಿ ನಡೆಯುವ ವ್ಯವಹಾರಗಳು ಸುಖಾಂತ್ಯವಾಗುತ್ತವೆ
- ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭ ಸಾಧ್ಯತೆ
- ಹಲವರು ನಿಮಗೆ ಧನ್ಯವಾದಗಳನ್ನು ಹೇಳುತ್ತಾ ನಿಮ್ಮ ಉಪಕಾರ ಸ್ಮರಣೆ ಮಾಡುತ್ತಾರೆ
- ಮಹಾಗಣಪತಿಯನ್ನು ಆರಾಧಿಸಿ, ಬಿಳಿ ಎಕ್ಕದ ಹೂ, ಗರಿಕೆ ಸಮರ್ಪಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಏಕಾಗ್ರತೆಯಿಂದ ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿ
- ಇಂದು ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ
- ವಿದ್ಯಾರ್ಥಿಗಳಿಗೆ ಅಲ್ಪ ಸಂತೋಷ ಸಾಧ್ಯತೆ ಬೇಸರ ಮಾಡಿಕೊಳ್ಳಬಾರದು
- ಹೊಸ ವ್ಯಾಪಾರ ಉದ್ಯೋಗ ಆರಂಭಿಸಲು ಶುಭ ದಿನ
- ನಿಮಗಿರುವ ಹಲವು ಸವಾಲುಗಳನ್ನು ಈ ದಿನ ನೀವು ಎದುರಿಸಿ ಜಯಶೀಲರಾಗುತ್ತೀರಿ
- ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು, ಹಿರಿಯರ ಆರೋಗ್ಯದಲ್ಲಿ ತೊಂದರೆ ಸಾಧ್ಯತೆ
- ಈಶ್ವರ ಆರಾಧನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ಅನೇಕ ವಿಚಾರಗಳಲ್ಲಿ ಗೊಂದಲ ಏರ್ಪಡುವ ಸಾಧ್ಯತೆ
- ಕೋರ್ಟ್​ ಕೆಲಸಗಳಲ್ಲಿ ಹಿನ್ನೆಡೆ ಸಾಧ್ಯತೆ
- ಕಷ್ಟ ಪಟ್ಟು ಹೋರಾಟ ಮಾಡಿದಂತಹ ಕೆಲಸಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ
- ಈ ರಾಶಿಯ ಚಿಕ್ಕ ಮಕ್ಕಳಿಗೆ ತೊಂದರೆ ಸಾಧ್ಯತೆ ಜಾಗ್ರತೆಯಿರಲಿ
- ನಿಮ್ಮ ಸ್ವಭಾವದಿಂದ ಇಂದು ಹಲವರು ನಿಮ್ಮ ಬಗ್ಗೆ ಕೋಪಗೊಳ್ಳಬಹುದು
- ಯಾರ ಬಗ್ಗೆ ನಿಮಗೆ ಅನುಮಾನವಿರುತ್ತೋ ಅಂತಹ ವ್ಯಕ್ತಿಗಳಿಂದ ಸ್ವಲ್ಪ ದೂರವಿರಿ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೈ ಭಾಗದಲ್ಲಿ ಪೆಟ್ಟಾಗುವ ಸಾಧ್ಯತೆಯಿದೆ ರಕ್ತದ ಬಗ್ಗೆ ಗಮನವಿರಲಿ
- ವಿದ್ಯಾರ್ಥಿಗಳು ಸಂತಸದಿಂದ ತಮ್ಮ ಶೈಕ್ಷಣಿಕ ಕ್ಷೇತ್ರವನ್ನು ಸ್ವೀಕರಿಸಿ ಮುಂದುವರೆಯಿರಿ
- ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ
- ಪ್ರೇಮಿಗಳು ತುಂಬಾ ಜಾಗರೂಕರಾಗಿರಿ ತೊಂದರೆಯಾಗುವ ಸಾಧ್ಯತೆಗಳಿವೆ
- ವಿದ್ಯಾರ್ಥಿಗಳಿಗೆ ಶುಭ ದಿನ, ಓದಿನ ಜೊತೆ ಬೇರೆ ಬೇರೆ ಹವ್ಯಾಸಗಳನ್ನು ರೂಢಿಸಿಕೊಳ್ಳಿ
- ನಿಮ್ಮ ಉದ್ಯೋಗದಲ್ಲಿ ಸಮಾಧಾನ, ತೃಪ್ತಿ ಸಿಗುವ ದಿನ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಸ್ತಮ ರೋಗಿಗಳಿಗೆ ಇಂದು ಆರೋಗ್ಯ ತುಂಬಾ ತೊಂದರೆ ಕೊಡುವ ಸಾಧ್ಯತೆಗಳಿವೆ ಜಾಗ್ರತೆ
- ನೀವು ಸರಿಯಾದ ಅನುಭವಿಗಳಿಂದ ಮಾರ್ಗದರ್ಶನ ಪಡೆಯಿರಿ
- ನಿಮ್ಮ ಕೋಪದ ಮೇಲೆ ಹಿಡಿತವಿರಲಿ
- ಅಧಿಕಾರಕ್ಕಾಗಿ ಪ್ರಯತ್ನ ಪಡುವಿರಿ ಆದರೆ ಪ್ರಯೋಜನವಾಗುವುದಿಲ್ಲ
- ವ್ಯಾಪಾರದಲ್ಲಿ ಹಲವು ವರ್ಷಗಳ ಅನುಭವವಿದ್ದರೂ ಮೋಸ ನಷ್ಟ ಸಾಧ್ಯತೆ ಎಚ್ಚರ
- ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ
- ಇಂದ್ರನನ್ನು ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಯೋಗ್ಯವಲ್ಲದ ಕಾರ್ಯಗಳಲ್ಲಿ ಭಾಗವಹಿಸಬೇಡಿ
- ಸರ್ಕಾರಿ ಉದ್ಯೋಗಿಗಳಿಗೆ ಕಟ್ಟುಪಾಡು, ನಿಯಮಗಳು ಹೆಚ್ಚಾಗಿ ಬೇಸರವಾಗಬಹುದು
- ಹಣ ಉಳಿಸಲು ಪ್ರಯತ್ನಿಸಿ, ವಿನಾಕಾರಣ ಖರ್ಚು ಬೇಡ
- ನೀವು ಮಾಡುವ ಕೆಲಸದಲ್ಲಿ ನಿಮಗೆ ಸಮಾಧಾನವಿರುವುದಿಲ್ಲ
- ಬೇರೆ ಕೆಲಸಕ್ಕೆ ಈ ದಿನ ಪ್ರಯತ್ನ ಪಡಬಹುದು
- ನಂಬಿ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ
- ಈ ರಾಶಿಯಲ್ಲಿ ಹುಟ್ಟಿದವರಿಗೆ ಸಂಪತ್ತು ನಷ್ಟವಾಗಬಹುದು ಎಚ್ಚರವಹಿಸಿ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೇ ಸೂಚನೆಗಳಿಲ್ಲದೆ ಆರೋಗ್ಯದಲ್ಲಿ ಏರುಪೇರಾಗಬಹುದು
- ಕಷ್ಟ ಬಂದಾಗ ಮಾತ್ರ ದೇವರನ್ನು ಸ್ಮರಿಸುವ ಕೆಲಸ ಮಾಡಬೇಡಿ
- ದೇವರ ಬಗ್ಗೆ ನಂಬಿಕೆ ಇರಲಿ ಅಪನಂಬಿಕೆ ಬೇಡ
- ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗುವ ದಿನವಾಗಿರುತ್ತದೆ
- ದೇವರಿಗೆ ಹಳೆಯ ಹರಕೆಯನ್ನು ತೀರಿಸುವುದರಿಂದ ಒಳ್ಳೆಯದಾಗುತ್ತದೆ
- ತಾತ್ಸಾರ ಮಾಡದೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ
- ಕುಲದೇವರನ್ನ ಪ್ರಾರ್ಥನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದ ಸದಸ್ಯರ ಜೊತೆ ಸಂತೋಷವಾಗಿರಲು ಬಯಸುತ್ತೀರಿ
- ಬೇರೆಯವರಿಗೆ ಸಹಾಯ ಮಾಡುವುದರಿಂದ ನೀವು ದಂಡ ತೆರಬೇಕಾಗಬಹುದು ಎಚ್ಚರಿಕೆ
- ಆಸ್ತಿಯ ವಿಚಾರ ಪ್ರಸ್ತಾಪ ಆಗುವ ಸಾಧ್ಯತೆಗಳಿವೆ
- ಆದರೆ ಕೆಲಸದ ಒತ್ತಡದಿಂದ ಯಾವುದಕ್ಕೂ ಅವಕಾಶ ಆಗುವುದಿಲ್ಲ
- ನಿಮಗೂ ಮನೆಯವರಿಗೂ ಬೇಸರವಾಗುವ ದಿನ
- ಯೋಚನೆಗಳು ಮತ್ತು ಯೋಜನೆಗಳು ಫಲಪ್ರದವಾಗುವಂತಹ ದಿನ
- ಕುಲದೇವರನ್ನು ಪ್ರಾರ್ಥಿಸಿ
ಧನುಸ್
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಹಿರಿಯರಿಗೆ ಅಗತ್ಯವಿರುವ ಸೇವೆಯನ್ನು ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಿ
- ಸೇವಾ ಮನೋಭಾವನೆಯನ್ನು ಮನಸ್ಸಲ್ಲಿ ಬೆಳೆಸಿಕೊಳ್ಳಿ
- ಮನೆ ಮತ್ತು ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಾಗುತ್ತದೆ
- ನಿಮ್ಮ ಕೆಲಸವನ್ನು ನೋಡಿ ಎಲ್ಲರೂ ಸಹ ಆಕರ್ಷಿತರಾಗುತ್ತಾರೆ
- ಸಾಯಂಕಾಲದ ಹೊತ್ತಿಗೆ ಅಶುಭ ವಾರ್ತೆಯಿಂದ ಬೇಸರವಾಗಬಹುದು
- ನಿಮ್ಮ ಆತ್ಮ ವಿಶ್ವಾಸದ ಬಗ್ಗೆ ನಿಮಗೆ ನಿರ್ದಿಷ್ಟವಾದ ನಂಬಿಕೆ ಇರಬೇಕು
- ನಿಮ್ಮ ವಿರೋಧಿಗಳೂ ನಿಮ್ಮ ಕಾರ್ಯ ವೈಖರಿ ನೋಡಿ ಹೊಗಳುತ್ತಾರೆ
- ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮನ್ನು ಎಲ್ಲರೂ ಮೆಚ್ಚಿಕೊಂಡು ಅಭಿಮಾನದಿಂದ ಕಾಣ್ತಾರೆ
- ಇಂದು ರಾಜಕೀಯ ವ್ಯಕ್ತಿಗಳಿಗೆ ಶುಭದಿನ
- ನಿಮ್ಮ ಸಣ್ಣ-ಪುಟ್ಟ ಬದಲಾವಣೆಗಳನ್ನು ಜನರು ಮೆಚ್ಚಿ ಅಭಿನಂದಿಸುತ್ತಾರೆ
- ನಿಮ್ಮ ಕೆಲಸದಲ್ಲಿ ತುಂಬಾ ಪರಿಶ್ರಮ ಪಡುತ್ತೀರಿ ಇದಕ್ಕೆ ಪ್ರತಿಫಲ ಸಿಗುವ ದಿನ
- ನಿಮ್ಮ ಕುಟುಂಬದವರ ನಡವಳಿಕೆ ಸ್ವಭಾವದಿಂದ ನಿಮ್ಮ ಗೌರವ ಹೆಚ್ಚಾಗುವ ದಿನ
- ನಿಮ್ಮ ಚುರುಕುತನ ಬುದ್ಧಿವಂತಿಕೆ ನಿಮಗೆ ಗೌರವ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ
- ಇಂದು ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳಾಗಬಹುದು
- ನವದುರ್ಗೆಯರನ್ನು ಆರಾಧಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರನ್ನು ವಿನಾಕಾರಣ ನಂಬುವುದು ಒಳ್ಳೆಯದಲ್ಲ
- ಮಾನಸಿಕವಾಗಿ ತುಂಬಾ ಆಯಾಸವಾಗುವ ದಿನ
- ಇಂದು ಹಣದ ಹೂಡಿಕೆಯನ್ನು ಮಾಡಬಹುದು
- ಯಾವುದೇ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲಕ್ಕೀಡಾಗುತ್ತೀರಿ
- ಸ್ಥಿರವಾದ ಮನಸ್ಸಿನಿಂದ ಮುಂದುವರೆದರೆ ಒಳ್ಳೆಯದು
- ನೀವು ಲಾಭದ ದೃಷ್ಠಿಯಿಂದ ಯಾವುದೇ ಕೆಲಸ ಮಾಡಿದರು ಅದು ನಿಮಗೆ ಶುಭವಾಗುತ್ತದೆ
- ಮನೆಯವರೆಲ್ಲ ನಿಮ್ಮ ವಿಚಾರಕ್ಕೆ ಆತಂಕಕ್ಕೆ ಒಳಗಾಗುತ್ತಾರೆ
- ಸಹೋದ್ಯೋಗಿಗಳು ಮೋಸ ಮಾಡಬಹುದು ಜಾಗ್ರತೆ ಇರಲಿ
- ಇಂದು ನೀವು ಅವಕಾಶ ವಂಚಿತರಾಗುತ್ತೀರಿ
- ಶ್ರೀರಾಮದೂತ ಆಂಜನೇಯನನ್ನು ಸ್ಮರಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ಅಧ್ಯಯನದ ದೃಷ್ಠಿಯಿಂದ ತೀವ್ರವಾಗಿ ಪರಿಶ್ರಮ ಪಡುವ ಸಾಧ್ಯತೆ
- ಇಂದು ಆದಾಯ ಬರುವಂತ ದಿನವಾಗಿದೆ
- ಪದವೀಧರರಿಗೆ ಉತ್ತಮ ನೌಕರಿಯ ಅವಕಾಶಗಳು ಸಿಗುವ ಯೋಗವಿದೆ
- ಈ ದಿನ ನಿಮಗೆ ಹಳೆಯ ನೆನಪುಗಳು ಕಾಡಬಹುದು
- ಅನಗತ್ಯ ಖರ್ಚನ್ನು ಕಡಿಮೆ ಮಾಡಿಕೊಂಡರೆ ಒಳ್ಳೆಯದು
- ಸಮಾಜದ ಹಿತದೃಷ್ಟಿಯಿಂದ ಮುಂದಾಲೋಚನೆ ಮಾಡಿ ಅಧ್ಯಯನ ಮಾಡಿದರೆ ಒಳಿತು
- ಗಂಭೀರವಾದ ಚಿಂತನೆಗಳನ್ನು ವಿದ್ಯಾರ್ಥಿಗಳು ನಡೆಸಬೇಕಾಗುತ್ತದೆ
- ಪ್ರತಿಫಲ ನಿರೀಕ್ಷೆಯಲ್ಲಿ ಪರಿಶ್ರಮ ಪಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ
- ಮಧ್ಯಾಹ್ನದ ನಂತರ ಹಲವು ಕೆಲಸಗಳು ಶುಭವಾಗಲಿದೆ
- ಹಸಿದವರಿಗೆ ಅನ್ನವನ್ನು ದಾನ ಮಾಡಿ
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us