/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ
- ಮನೆಯಲ್ಲಿ ಪೂಜೆ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡುವ ಬಗ್ಗೆ ಚರ್ಚೆ
- ಹಲವಾರು ಸ್ನೇಹಿತರಿಗೆ, ಬಂಧುಗಳಿಗೆ ಉತ್ತಮ ಭೋಜನ ನೀಡುತ್ತೀರಿ
- ಈ ದಿವಸ ಅವಕಾಶವಾಗುವಂತಹ ಸೂಚನೆಗಳಿವೆ
- ಇಂತಹ ಮಾನಸಿಕ ಸಂತೋಷಕ್ಕೆ ಬೆಲೆ ಕಟ್ಟಲಾಗುವುದಿಲ್ಲ
- ಆಹಾರದ ಅಗತ್ಯವಿರುವವರಿಗೆ ಅನ್ನದಾನವನ್ನು ಮಾಡಿ ಪುಣ್ಯ ಲಭಿಸುತ್ತದೆ
- ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಸ್ವಲ್ಪ ಮನಸ್ಸಿಗೆ ಸಮಾಧಾನ ಸಿಗಲಿರುವ ಸಂದರ್ಭಗಳಿರುತ್ತದೆ
- ವೃತ್ತಿಗೆ ನೌಕರಿಗೆ ಸಂಬಂಧಿಸಿದಂತೆ ಬೇರೆ ಬೇರೆ ಆಲೋಚನೆಗಳು ಬರಬಹುದು
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ
- ದಿನದ ಕೊನೆಯಲ್ಲಿ ಸಾಲವನ್ನು ಮಾಡಬೇಕಾದ ಪರಿಸ್ಥಿತಿ ಒದಗಿಬರಬಹುದು
- ಮಕ್ಕಳ ವಿದ್ಯಾಭ್ಯಾಸ ಮತ್ತು ಬೇರೆ ಚಟುವಟಿಕೆಗಳಿಗೆ ಹಣವನ್ನು ಒದಗಿಸಬೇಕಾದ ಸವಾಲು ನಿಮ್ಮನ್ನು ಕಾಡಬಹುದು
- ಬೇಸರದಿಂದ ಕೂಡಿಟ್ಟಿದ್ದ ಹಣದ ಪ್ರಸ್ತಾಪ ಮಾಡಿ ನಿಷ್ಠೂರವಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತದೆ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಹಿ ಸನ್ನಿವೇಶಗಳು ಸಂಬಂಧಿಕರಲ್ಲಿ ಕಾಣಬಹುದು ಗಮನವಿರಲಿ
- ಈ ರಾಶಿಯ ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಜಾಗ್ರತೆವಹಿಸಿ
- ವ್ಯಾವಹಾರಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಬಂಧ ಕೆಡುವ ಸೂಚನೆ ಇದೆ ಸರಿಯಾಗಿ ನಿಭಾಯಿಸುವುದು ಒಳ್ಳೆಯದು
- ಸಂದರ್ಭ ತಾಳ್ಮೆ ಪರೀಕ್ಷೆಯೂ ಇರಬಹುದು ಅಂತ ನೀವು ಯೋಚಿಸಬೇಕಾಗುತ್ತದೆ
- ನಿಮ್ಮ ಮಾತುಗಳಲ್ಲಿ ಮೃದುತ್ವ ಇರಲಿ
- ಬಂಧುಗಳು ಹಳೆ ವಿಷಯವನ್ನು ಹೇಳಿ ನಿಮ್ಮ ಮನಸ್ಸನ್ನು ಕೆರಳಿಸಬಹುದು ಆದ್ರೆ ನೀವು ತಾಳ್ಮೆ ಕಳೆದುಕೊಳ್ಳುವುದು ಸೂಕ್ತವಲ್ಲ
- ಅದನ್ನು ಮರೆತರೆ ದೊಡ್ಡ ಗಲಾಟೆಯೇ ಆಗುವ ಸಾಧ್ಯತೆ ಕಾಣಬಹುದು
- ಆತಂಕ, ಕೋಪಗಳ ಮಧ್ಯೆ ಮನಸ್ಸನ್ನು ಶಾಂತ ಮಾಡಿಕೊಂಡು ಧ್ಯಾನಕ್ಕೆ ಶರಣು ಹೋಗಿ
- ಜೌದುಂಬರ ವೃಕ್ಷವನ್ನು ದರ್ಶನ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನೀವು ನಿಮ್ಮ ಹಳೆಯ ಖಾಯಿಲೆಯಿಂದ ಮುಕ್ತರಾಗುತ್ತೀರಿ
- ಹೊಸ ವಾಹನ ಖರೀದಿಗೆ ಅವಕಾಶವಿದೆ
- ವಿದ್ಯಾರ್ಥಿಗಳಿಗೆ ಬೇಸರವಾಗುವ ದಿನ
- ಪ್ರೀತಿ ಪ್ರೇಮ ವಿಚಾರದಲ್ಲಿ ತುಂಬಾ ಭಾವುಕರಾಗಿ ನೋವನ್ನು ಅನುಭವಿಸಬೇಕಾದ ದಿನ
- ಸಹೋದ್ಯೋಗಿಗಳು ಅಕ್ಕ ಪಕ್ಕದವರು ನಿಮಗೆ ಸಮಾಧಾನ ಹೇಳುವಂತಹ ಕೆಲಸ ಮಾಡುತ್ತಾರೆ
- ಇಂದು ಪ್ರಯಾಣವು ಅಷ್ಟು ಶುಭಕರವಾಗಿರುವುದಿಲ್ಲ
- ಮನೋರೋಗಕ್ಕೆ ಮದ್ದಿಲ್ಲ ಅನ್ನೊ ಹಾಗೆ ನೀವು ಮಾನಸಿಕ ಒತ್ತಡದಿಂದ ಹೊರಬಂದ್ರೆ ನಿಮ್ಮ ಸಮಸ್ಯೆ ದೂರವಾಗಬಹುದು
- ಮಹಾವಿಷ್ಣುವನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಜಾಗ್ರತೆ ವಹಿಸಿ
- ಸಂತೋಷದಿಂದ ಕಾಲ ಕಳೆಯಬೇಕಾದ ಈ ದಿನ ನಿಮ್ಮ ಪಾಲಿಗೆ ಬೇಸರ ಉಂಟಾಗಬಹುದು
- ಕುಟುಂಬದವರಿಗೆ ಸಂಬಂಧಿಕರಿಗೆ ನಿಮ್ಮ ಆರೋಗ್ಯದ ವಿಚಾರದಲ್ಲಿ ತುಂಬಾ ಆತಂಕ ಉಂಟಾಗಬಹುದು
- ನಿಮ್ಮ ಪರವಾಗಿ ಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆಯ ವ್ಯವಸ್ಥೆ ಮಾಡುವುದು ಒಳಿತು
- ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
- ಯಾರೂ ತಾಳ್ಮೆಯನ್ನು ಕಳೆದುಕೊಳ್ಳುವ ಅಗತ್ಯವಿಲ್ಲ
- ಕನ್ನಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಲದ ವಿಚಾರವಾಗಿ ಒಳ್ಳೆಯ ವಾತಾವರಣ ಇರುವುದಿಲ್ಲ
- ಕುಟುಂಬದಲ್ಲಿಯೂ ಅಸಮಾಧಾನ ವಾತಾವರಣ ಉಂಟಾಗಬಹುದು
- ದಿನಚರಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಬಹುದು
- ನಿರೀಕ್ಷಿತ ಸಾಧನೆ ಮಾಡಲು ಅವಕಾಶಗಳಿವೆ
- ನಿಮ್ಮ ಮನಸ್ಸು ಧೃತಿಗೆಡಬಹುದು ತಾಳ್ಮೆ ಇರಲಿ
- ದಕ್ಷಿಣಾಮೂರ್ತಿಯನ್ನು ಸ್ಮರಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದಲ್ಲಿ ಮಂಗಳ ಕಾರ್ಯದ ವಿಚಾರವನ್ನು ಪ್ರಸ್ತಾಪ ಮಾಡುತ್ತಾ ಬಹಳ ಸಂಭ್ರಮವನ್ನು ಆಚರಿಸುವ ದಿನವಾಗಿದೆ
- ಹೊಸ ಹೊಸ ವ್ಯಾಪಾರಗಳು ವ್ಯವಹಾರಗಳು ವಿಚಾರಗಳನ್ನ ಮಾಡುತ್ತಾ ಎಲ್ಲರೂ ಮನಸ್ಸಿಗೆ ಉತ್ಸಾಹವನ್ನು ತಂದುಕೊಳ್ಳುವ ಸಂದರ್ಭ
- ಸಂಬಂಧಿಕರು ಸ್ನೇಹಿತರು ತಮ್ಮ ಮನೆಗೆ ಬರಬಹುದು ಇದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ
- ತುಂಬಾ ದಿನದಿಂದ ಸಮಸ್ಯೆಯಾಗಿಯೇ ಉಳಿದಿದ್ದ ಯಾವುದೋ ಒಂದು ವ್ಯವಹಾರ ಇಂದು ಸುಖಾಂತ್ಯಗೊಳ್ಳಲಿದೆ
- ದೂರದ ಸಂಬಂಧಿಕರು ಜೊತೆಯಲ್ಲಿರುತ್ತಾರೆ
- ದೂರದಿಂದ ಶುಭ ಸುದ್ಧಿಯು ಬರುವಂತಹ ಸಾಧ್ಯತೆ
- ಕುಲದೇವರನ್ನ ಪ್ರಾರ್ಥನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೇಮಿಗಳಲ್ಲಿ ಜಗಳ ಆಗುವ ಸಾಧ್ಯತೆ ಇದೆ
- ವ್ಯವಹಾರದ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚು ಮಹತ್ವ ಪಡೆಯುವ ಸಾಧ್ಯತೆ
- ಭವಿಷ್ಯದ ಬಗ್ಗೆ ಯಾವ ಚಿಂತೆಯನ್ನು ಮಾಡದೆ ಇರುವ ದಿನವಾಗಿರುತ್ತದೆ
- ಆಕಸ್ಮಿಕವಾಗಿ ಸ್ನೇಹಿತರನ್ನ ಭೇಟಿ ಮಾಡುವ ಸಾಧ್ಯತೆಗಳಿವೆ
- ದಂಪತಿ ಸಂತೋಷದಿಂದ ಇರುವ ದಿನ
- ಸಾಮಾಜಿಕ ಮಟ್ಟದಲ್ಲಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಾಗಬಹುದು
- ಅವರೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಅವಕಾಶಗಳಿವೆ
- ಹಲವು ದಿವಸಗಳಿಂದ ನಿಮ್ಮನ್ನು ಕಾಡುತ್ತಿರುವ ಹಲವಾರು ಜಟಿಲ ಸಮಸ್ಯೆಗಳು ಪರಿಹಾರ ರೂಪವನ್ನು ಪಡೆದುಕೊಳ್ಳಬಹುದು
- ಶನೇಶ್ವರನನ್ನು ಪೂಜಿಸಿ
ಧನುಸ್​
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುವಂತಹ ಅವಕಾಶಗಳಿವೆ
- ಅಕಸ್ಮಾತ್ತಾಗಿ ಸಾಧುಗಳ ಅಥವಾ ಯೋಗಿಗಳ ದರ್ಶನವಾಗಬಹುದು
- ನಿಮ್ಮ ಆದಾಯ ಹೆಚ್ಚಾಗುವ ಸೂಚನೆಗಳಿವೆ
- ನಿಮ್ಮ ಮಗಳಿಗೆ ಮದುವೆ ಮಾಡಬೇಕು ಅನ್ನೋ ವಿಚಾರದಲ್ಲಿ ಅಡ್ಡಿಗಳು ಇದ್ದರೆ ಈ ದಿವಸ ಆ ಸಮಸ್ಯೆ ದೂರವಾಗುವ ಸಾಧ್ಯತೆಗಳಿವೆ
- ಅವರ ಶುಭದಾಯಕ ಮಾತಿನಿಂದ ನಿಮ್ಮ ಜೀವನದಲ್ಲಿ ಪರಿವರ್ತನೆ ಯಾಗುತ್ತದೆ
- ನಿಮ್ಮ ಗುರುಗಳನ್ನು ಸ್ಮರಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ಚಿಕ್ಕ ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಜಾಗ್ರತೆವಹಿಸಿ
- ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಶುಭದಾಯಕವಾಗಿ ಕಾಣುವುದಿಲ್ಲ
- ಕೆಲಸವನ್ನು ನಿರ್ಧಾರ ಮಾಡಬೇಕಾದರೆ ಬಹಳ ಯೋಚನೆ ಮಾಡಿ
- ಬಲವಂತವಾಗಿ ಮಾಡಿದ ಕೆಲಸಗಳಿಂದ ಯಶಸ್ಸಿರುವುದಿಲ್ಲ
- ನೀವು ಕೂಡಾ ಬೇಡದಿರುವ ಅಪವಾದಗಳಿಗೆ ಒಳಗಾಗುತ್ತೀರಿ
- ನಿಮ್ಮ ಸ್ವಭಾವ ಶಾಂತವಾಗಿರಬೇಕೆಂಬುದು ಮುಖ್ಯವಾದ ಸೂಚನೆ
- ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
- ಮೂಳೆ ಅಥವಾ ನರಗಳಿಗೆ ಸಂಬಂಧಿಸಿದ ತೊಂದರೆಗಳು ಕಾಣಬಹುದು ಜಾಗ್ರತೆ
- ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದರೆ, ಆ ಪ್ರಾಣಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಬಹುದು ಸೂಕ್ತ ಚಿಕಿತ್ಸೆಯನ್ನು ಕೊಡಿಸಿ
- ಇಂದು ನಿಮಗೆ ಹೊಟ್ಟೆನೋವಿನ ಸಮಸ್ಯೆ ಕಾಡಬಹುದು ಎಚ್ಚರಿಕೆ
- ಅಪರಿಚಿತ ವ್ಯಕ್ತಿಗಳ ಮೇಲೆ ನಂಬಿಕೆ ಇಟ್ಟರೆ ತೊಂದರೆ ಉಂಟಾಗುವ ಸಾಧ್ಯತೆ
- ನಿಮ್ಮ ಜೀವನದ ಶೈಲಿ ಭಾವವನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕಾಗಬಹುದು
- ಮಾತಿನಲ್ಲಿ ನಮ್ರತೆಯಿರಲಿ ನಿಮ್ಮ ಮಾತು ಗೌರವವನ್ನು ಹೆಚ್ಚಿಸಬಹುದು ಅಥವಾ ಅವಮಾನವನ್ನು ಮಾಡಬಹುದು ಎಚ್ಚರಿಕೆ
- ಬೇರೆಯವರು ಒಪ್ಪಿಕೊಳ್ಳುವ ಕೆಲಸವನ್ನು ನೀವು ಮಾಡಬಾರದು ಅಂದ್ರೆ ತೋರಿಕೆಯ ಕೆಲಸ ಆಗಬಾರದು
- ಕುಲದೇವತಾ ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ತಮ್ಮ ವಿದ್ಯೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ದಿನವಾಗಿರುತ್ತದೆ
- ಮನೆಯಲ್ಲಿ ಸ್ತ್ರೀಯರು ಮೋಸಕ್ಕೆ, ವಂಚನೆಗೆ ಒಳಗಾಗುವ ಸಂದರ್ಭಗಳು ಏರ್ಪಡುತ್ತದೆ ಜಾಗ್ರತೆ
- ವ್ಯವಹಾರ ಮಾಡುವಾಗ ಬಹಳ ಎಚ್ಚರಿಕೆಯಿಂದಿರಿ
- ಅಪರಿಚಿತ ವ್ಯಕ್ತಿಯು ನಿಮಗೆ ಮೋಸಮಾಡಲು ಕಾಯ್ತಾ ಇರುತ್ತಾರೆ ಎಚ್ಚರಿಕೆ
- ದುಬಾರಿ ವಸ್ತುಗಳ ಖರೀದಿಗೆ ಅವಕಾಶ ಒದಗಿ ಬರಲಿದೆ
- ಕುಟುಂಬದ ವಾತಾವರಣವು ಬಹಳ ಚೆನ್ನಾಗಿರುತ್ತದೆ
- ಹೆಚ್ಚು ಅನುಭವಿಗಳ ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಮಾಡಲು ಅವಕಾಶ ಸಿಗುತ್ತದೆ
- ಮಹಾವಿಷ್ಣುವನ್ನು ಪ್ರಾರ್ಥಿಸಿ
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us