Advertisment

ದಾಂಪತ್ಯದಲ್ಲಿ ಸಣ್ಣ ಪುಟ್ಟ ಕಿರಿಕಿರಿ, ಮನೆಗೆ ಹೊಸ ಅತಿಥಿ ನಿರೀಕ್ಷೆ -ನಿಮ್ಮ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಿತೀಯಾ ತಿಥಿ(ಬಿದಿಗೆ), ಮೃಗಶಿರಾ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಯೋಚನೆಯಲ್ಲಿಯೇ ನೀವು ಹೆಚ್ಚು ಮಗ್ನರಾಗಿರುತ್ತೀರಿ
  • ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಕಿರಿಕಿರಿಯಾಗಬಹುದು
  • ಅನಗತ್ಯ ವಾದ-ವಿವಾದಗಳಲ್ಲಿ ಭಾಗಿಯಾಗಬಾರದು
  • ಈ ದಿನ ಪೂರ್ತಿ ಕುಟುಂಬದ ಸದಸ್ಯರೊಂದಿಗೆ ವಿರಸ ಮುಂದುವರೆಯುವ ಸಾಧ್ಯತೆ
  • ಅವರನ್ನು ಸಮಾಧಾನ ಮಾಡಲು ನಿಮ್ಮ ಬಳಿ ಸಮಯವಿರುವುದಿಲ್ಲ
  • ನೀವು ಮನೆಯಿಂದ ಹೊರಗೆ ಹೋಗುವುದರಿಂದ ಮನೆಯವರಿಗೆ ಬೇಸರವಾಗುವ ಸಾಧ್ಯತೆ
  • ಪ್ರಭಾವಿ ವ್ಯಕ್ತಿಗಳು ನಿಮ್ಮ ಮನೆಗೆ ಬರಬಹುದು
  • ವೃಥಾ ಹಣದ ಖರ್ಚು ಮಾನಸಿಕ ಸಮಾಧಾನವಿರುವುದಿಲ್ಲ
  • ಐಕ್ಯಮತ್ಯ ಮಂತ್ರ ಶ್ರವಣ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದ ಸದಸ್ಯರಿಗಾಗಿ ಹಣವ್ಯಯ ಮಾಡುವ ಸಾಧ್ಯತೆ
  • ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯದಿಂದಲೇ ಎಲ್ಲ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆ
  • ಇಂದು ದೂರದಿಂದ ಬರುವ ಅತಿಥಿಗಳ ಬಗ್ಗೆ ತುಂಬಾ ಜಾಗ್ರತೆವಹಿಸಿ
  • ಭೂಮಿ ಅಥವಾ ಜಮೀನಿಗೆ ಸಂಬಂಧಿಸಿದ ಹಳೆಯ ವಿವಾದಗಳಿದ್ದರೆ ಮುಕ್ತಿ ಸಿಗುವ ಸಾಧ್ಯತೆ
  • ವ್ಯವಹಾರದ ದೃಷ್ಟಿಯಿಂದ ಉ್ತತಮ ದಿನ ಪ್ರಗತಿ ಸಾಧ್ಯತೆ
  • ಆಂಜನೇಯ ಅಷ್ಟೋತ್ತರವನ್ನು ಪಠಿಸಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ದೂರದ ಪ್ರಯಾಣಕ್ಕೆ ಅವಕಾಶ ಸಿಗುವ ಸೂಚನೆಯಿದೆ
  • ಉದ್ಯೋಗದಲ್ಲಿ ನಿರೀಕ್ಷಿತ ಫಲತಾಂಶಗಳಿಂದ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ
  • ಈ ದಿನ ಲಾಭದ ಅವಕಾಶಗಳು ಹೆಚ್ಚಾಗುವ ಸಾಧ್ಯತೆಗಳಿವೆ
  • ಇಂದು ಮನೆಗೆ ಹೊಸ ಅತಿಥಿ ಬರುವ ಸಾಧ್ಯತೆಯಿದೆ
  • ಕುಟುಂಬದ ಸದಸ್ಯರು ಬಂಧುಗಳು ಸೌಹಾರ್ದಯುತವಾಗಿ ಮಾತುಕತೆ ನಡೆಸುವ ಉತ್ತಮ ವಾತಾವರಣವಿರುತ್ತದೆ
  • ವೈವಾಹಿಕ ಜೀವನದ ಒತ್ತಡ ದೂರವಾಗುವ ಸಾಧ್ಯತೆಯಿದೆ
  • ಮೂಲದೇವರನ್ನು ಪ್ರಾರ್ಥಿಸಿ
Advertisment

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಇಂದು ಅನಗತ್ಯ ಗೊಂದಲಗಳಲ್ಲಿ ಸಿಲುಕಬಹುದು
  • ಸ್ಥಿರ ಮನಸ್ಸಿನಿಂದ ಎಲ್ಲವನ್ನು ನೀವು ಎದುರಿಸುತ್ತೀರಿ
  • ನೌಕರಿಯ ವಿಚಾರದಲ್ಲಿ ಹಲವಾರು ಸವಾಲುಗಳು ಎದುರಾಗಬಹುದು
  • ನಾನು ಎಂಬ ಅಹಂಕಾರ ನಿಮಗೆ ಹಿನ್ನಡೆ ಉಂಟುಮಾಡಬಹುದು ಜಾಗ್ರತೆ
  • ಅಹಂಕಾರವು ನಿಮ್ಮ ಕೆಲಸಗಳಿಗೆ ಅಡಚಣೆಯಾಗಬಹುದು ಎಚ್ಚರ
  • ಮಹಾವಿಷ್ಣುವನ್ನು ಸ್ಮರಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದವರು ಬೇಸರವನ್ನು ವ್ಯಕ್ತಪಡಿಸಬಹುದು
  • ಕ್ಷೇತ್ರಗಳಿಗೆ ಹೋದಾಗ ನಿಮ್ಮ ಮನಸ್ಸು ಶುದ್ಧವಾಗಿರಲಿ
  • ನಿಮ್ಮ ವ್ಯಾಪಾರಿ ಬುದ್ಧಿಯಿಂದ ಹೊರಬಂದು ಮಾನಸಿಕ ಸಮಾಧಾನ ಪಡೆದುಕೊಳ್ಳಿ
  • ಇಂದು ಕುಟುಂಬದವರ ಜೊತೆಯಲ್ಲಿ ಸಮಯ ಕಳೆಯಿರಿ
  • ವ್ಯವಹಾರ ವಿಷಯವನ್ನು ಬದಿಗಿಟ್ಟು ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳಿ
  • ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತೀರಿ
  • ಕ್ಷೇತ್ರ ದೇವತೆಗೆ ನಿಮ್ಮ ಶಕ್ತಿಗೆ ಅನುಸಾರವಾಗಿ ಸೇವೆ ಮಾಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆಲಸ್ಯವನ್ನು ದೂರಮಾಡಿ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ
  • ಕ್ರಿಕೆಟ್​ ಆಟಗಾರರಿಗೆ ತುಂಬಾ ಒಳ್ಳೆಯ ದಿನ
  • ಅಪರಿಚಿತರು ನಿಮ್ಮ ವಿಷಯದಲ್ಲಿ ತಲೆ ಹಾಕಿ ಮಾನಸಿಕ ಬೇಸರ ಉಂಟು ಮಾಡಬಹುದು
  • ನಿಮ್ಮ ಕೌಶಲ್ಯ ಹೊರಗಡೆ ಪ್ರಚಾರ ಆಗದೆ ಇರೋಕ್ಕೆ ನಿಮ್ಮ ಆಲಸ್ಯ ಕಾರಣ
  • ಕೆಲಸದಲ್ಲಿ ಹಲವು ಅಡಚಣೆ ತೋರಬಹುದು
  • ರಸ್ತೆ ಬದಿಯಲ್ಲಿನ ವ್ಯಾಪಾರಸ್ಥರಿಗೆ ಲಾಭದ ದಿನ
  • ತಾಪಸ ಮನ್ಯುವನ್ನು ಸ್ಮರಿಸಿ
Advertisment

ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಂಬಂಧಿಕರು ಹಾಗೂ ಸ್ನೇಹಿತರೊಂದಿಗಿನ ಸಂಬಂಧವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ
  • ಮಾನಸಿಕ ಬೇಸರವು ನಿಮಗೆ ದಿನಪೂರ್ತಿ ಕಾಡುವ ಸಂದರ್ಭಗಳಿವೆ 
  • ನಿಮ್ಮ ಹಠದ ಸ್ವಭಾವದಿಂದ ವೃತ್ತಿ ನೌಕರಿ ವಿದ್ಯಾಕ್ಷೇತ್ರದಲ್ಲಿ ಹಿನ್ನಡೆ ಸಾಧ್ಯತೆ
  • ಪ್ರೇಮಿಗಳಿಗೆ ಉತ್ತಮ ದಿನವಾಗಿದ್ದರು ಮನಸ್ಸು ನಿಮ್ಮ ಹಿಡಿತಕ್ಕೆ ಸಿಗದೆ ಹಲವು ತೊಂದರೆಗಳಿಗೆ ನೀವೇ ಕಾರಣರಾಗಬಹುದು
  • ರಾಜಕೀಯ ವ್ಯಕ್ತಿಗಳಿಗೆ ಶುಭದಿನ
  • ಆದಿತ್ಯ ಹೃದಯ ಸ್ತೋತ್ರವನ್ನು ಪಠಣೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಮಕ್ಕಳು ಸಲಹೆ ಕೊಟ್ಟರೆ ಅದನ್ನು  ಸ್ವೀಕರಿಸಿ ನಿರ್ಲಕ್ಷಿಸಬೇಡಿ
  • ವಿವಾದಿತ ವಿಷಯಗಳು ಇತ್ಯರ್ಥವಾಗುತ್ತವೆ
  • ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಹಾಗೂ ತಾವು ಆಲೋಚಿಸಿರುವ ವಿಚಾರಗಳು ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ
  • ವ್ಯರ್ಥವಾಗಿ ಸಮಯ ಹೋಗಲು ಬಿಡಬೇಡಿ
  • ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಿ
  • ಕುಟುಂಬ ಸದಸ್ಯರ ನಿರೀಕ್ಷೆಗಳನ್ನು ಆಸೆಗಳನ್ನು ಪೂರೈಸಲು ಉತ್ತಮ ಅವಕಾಶವಿದೆ
  • ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ಧನುಸ್​

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿರುವುದಿಲ್ಲ ಎಚ್ಚರವಹಿಸಿ
  • ಹಳೆಯ ಕೇಸುಗಳಿದ್ದರೆ ತೀರ್ಮಾನವಾಗಿ ಜಯಶೀಲರಾಗುವ ಯೋಗವಿದೆ
  • ಕಾನೂನಿನ ದೃಷ್ಟಿಯಿಂದ ಮಾನಸಿಕವಾಗಿ ಬೇಸತ್ತವರಿಗೆ ಸಣ್ಣದೊಂದು ತಿರುವು ಸಮಾಧಾನ ನೀಡಬಹುದು
  • ಅಗತ್ಯವಾಗಿ ಬೇರೆ ವ್ಯವಹಾರಗಳನ್ನು ಬದಿಗಿಟ್ಟು ಕಾನೂನಿನ ಚೌಕಟ್ಟಿನೊಳಗೆ ಬರುವ ಕೆಲಸಕ್ಕೆ ಹೆಚ್ಚು ಗಮನಕೊಡಿ
  • ನಿಮ್ಮ ಕೋರ್ಟ್​ ಕೆಲಸಕ್ಕೆ ಇಂದು ವಿಶೇಷ ತಿರುವು ಸಿಗುವ ಸಾಧ್ಯತೆ 
  • ದುರ್ಗಾ ದೇವಿಯನ್ನು ಆರಾಧಿಸಿ
Advertisment

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಯಾವುದೇ ಒಪ್ಪಂದಗಳಿಗೆ ಸಹಿ ಮಾಡುವ ಸನ್ನಿವೇಶ ಬಂದರೆ ಸ್ವಲ್ಪ ಆಲೋಚಿಸಿ ತೀರ್ಮಾನ ಮಾಡಿ 
  • ಕುಟುಂಬದ ಜವಾಬ್ದಾರಿಗಳು ಹೆಚ್ಚಿನ ಒತ್ತಡ ತರಬಹುದು
  • ಸಕಾಲಕ್ಕೆ ಸೂಕ್ತ ಔಷಧೋಪಚಾರ ಮಾಡಿಕೊಂಡರೆ ಒಳ್ಳೆಯದು
  • ನಿಮ್ಮ ಆರೋಗ್ಯದ ವಿಚಾರದಲ್ಲಿ ಗಮನ ಕೊಡಿ
  • ವ್ಯಾಪಾರ ವ್ಯವಹಾರ ಉದ್ಯೋಗ  ವಿದ್ಯೆ ವಿಚಾರಗಳಲ್ಲಿ ಮಂದಗತಿಯಿರುತ್ತದೆ
  • ಇಂದು ಹಣಕಾಸಿನ ವಿಚಾರದಲ್ಲಿ ಏರುಪೇರಾಗಬಹುದು
  • ಗಂಟಲಿಗೆ ಸಂಬಂಧಿಸಿದ ಸೋಂಕು ತಗಲುವ ಸಾಧ್ಯತೆಯಿದೆ
  • ಅಧಿಕಾರಿ ವರ್ಗದಿಂದ ಕೆಲವು ತೊಂದರೆಗಳಾಗಬಹುದು ತಾತ್ಸಾರ ಮಾಡಬೇಡಿ
  • ಈಶ್ವರನ ದೇವಸ್ಥಾನಕ್ಕೆ ಬಿಲ್ವಪತ್ರೆಯನ್ನು ನೀಡಿ ಅರ್ಚನೆ ಮಾಡಿಸಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದಲ್ಲಿ ಉತ್ತಮ ಸಮಯ ಕಳೆಯುತ್ತೀರಿ
  • ಬೇರೆಡೆ ಉದ್ಯೋಗ ಅವಕಾಶ ದೊರಕಬಹುದು
  • ಜಟಿಲ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಬಹುದು
  • ನೌಕರರು ತಮ್ಮ ಉದ್ಯೋಗವನ್ನು ಬದಲಾಯಿಸಲು ಶುಭದಿನ
  • ನಿಮ್ಮ ದಿನಚರಿ ಈ ದಿನ ಬಹಳ ವ್ಯವಸ್ಥಿತವಾಗಿರುತ್ತದೆ ಅದನ್ನೇ ಪಾಲಿಸಿ ಯಶಸ್ಸು ಸಿಗಲಿದೆ
  • ನಿಮ್ಮ ಉಪಕಾರ ಪಡೆದವರು ಸದಾ ನಿಮ್ಮನ್ನು ಗೌರವಿಸುತ್ತಾರೆ
  • ನಿಮ್ಮ ಮಾರ್ಗದರ್ಶನ ಪಡೆಯುವ ಹಲವರ ಸಮಸ್ಯೆಗಳು ಬಗೆಹರಿಯುತ್ತವೆ
  • ಹಿರಿಯರ ಆಶೀರ್ವಾದ ಪಡೆಯಿರಿ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಸಂಪೂರ್ಣ ಪ್ರಯತ್ನವಿರಲಿ
  • ನಿಮ್ಮ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸಬೇಡಿ
  • ಯಾವುದಾದರು ವ್ಯವಹಾರದಿಂದ ಬರಬೇಕಾದ ಬಾಕಿ ಹಣ ಇಂದು ನಿಮ್ಮ ಕೈ ಸೇರಬಹುದು
  • ನಿಮ್ಮ ಪ್ರತಿಭೆ ಮತ್ತು ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಉತ್ತಮ ದಿನ
  • ಭವಿಷ್ಯದ ಯೋಜನೆಗಳನ್ನು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾ ತುಂಬಾ ಆಕರ್ಷಿತರಾಗಬಹುದು
  • ವಿದೇಶ ಪ್ರಯಾಣವು ಕೂಡ ಸಂತೋಷ ತರಲಿದೆ
  • ವ್ಯಾಪಾರ ಮತ್ತು ವ್ಯವಹಾರ ದೃಷ್ಟಿಯಿಂದ ಪ್ರಯಾಣಕ್ಕೆ ಅನುಕೂಲಕರ ದಿನ
  • ನಾಗದೇವತೆಗಳನ್ನು ಆರಾಧಿಸಿ
Advertisment

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Rashi Bhavishya
Advertisment
Advertisment
Advertisment