/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರ್ಥಿಕ ಸಮಸ್ಯೆಯನ್ನು ಎದುರಿಸಲು ಪರಿಪೂರ್ಣ ಶಕ್ತಿಯಿರುತ್ತದೆ
- ಹೊಟ್ಟೆಗೆ ಸಂಬಂಧಿಸಿದ ತೊಂದರೆಯಿಂದ ಒದ್ದಾಡುತ್ತೀರಿ
- ಆಹಾರ ವಿಚಾರದಲ್ಲಿ ಗಮನವಿರಲಿ
- ನಿದ್ದೆಯ ಅಭಾವದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯ ಕಾಣಬಹುದು
- ಇಂದು ಎಲ್ಲಾ ಕೆಲಸಗಳಲ್ಲಿ ನಿಮ್ಮ ನಿರ್ಧಾರ ಸ್ಪಷ್ಟವಾಗಿರಲಿ
- ಸರಿಯಾದ ವಿಶ್ರಾಂತಿಯ ಅಗತ್ಯವಿರುತ್ತದೆ ಮಾನಸಿಕವಾದ ಸುಸ್ತು ಕಾಡಬಹುದು
- ಅಗ್ನಿ ದೇವತಾ ಶಕ್ತಿಯನ್ನು ಉಪಾಸನೆ ಮಾಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಉತ್ತಮರ ಸಂಗ ಮಾಡಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು
- ಮನೆಯ ಹಿರಿಯರ ಆಶೀರ್ವಾದ ಪ್ರೀತಿ ವಿಶ್ವಾಸ ದೊರೆಯುವ ದಿನ
- ಅಲಂಕಾರ ವಸ್ತುಗಳ ಖರೀದಿಗೆ ಮುಂದಾಗಬಹುದು
- ನವದಂಪತಿಗಳಿಗೆ ಶುಭವಾದ ದಿನ
- ಉತ್ತಮವಾದ ಆಹಾರ ಮನಸ್ಸಿಗೆ ಸಂತೋಷ ಸಿಗುವ ದಿನ
- ಸ್ನೇಹಿತರು ಬಂಧುಗಳು ನಿಮ್ಮ ಜೊತೆ ಸಂತೋಷ ಹಂಚಿಕೊಳ್ಳಲು ಇರ್ತಾರೆ
- ಕುಲದೇವತಾ ಪ್ರಾರ್ಥನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳಿಂದ ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ
- ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರುವುದಿಲ್ಲ
- ಅನಗತ್ಯ ಖರ್ಚುಗಳಿಂದ ಸ್ವಲ್ಪ ತೊಂದರೆಯಾಗಬಹುದು
- ಕುಟುಂಬದ ಸ್ನೇಹಿತರು ಹಾಗೂ ಬಂಧುಗಳು ನಿಮ್ಮನ್ನು ಟೀಕಿಸಬಹುದು
- ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು ಗಮನಿಸಿ ತಾತ್ಸಾರ ಮಾಡಬೇಡಿ
- ಐಶ್ವರ್ಯ ಲಕ್ಷ್ಮಿಯನ್ನು ಆರಾಧಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗಿ ಕಾಣಬಹುದು
- ಅಕ್ಕ-ತಂಗಿಯರು ಆಸ್ತಿಯ ವಿಚಾರವಾಗಿ ತಕರಾರು ಮಾಡಬಹುದು
- ಬೇರೆಯವರ ವ್ಯವಹಾರದಲ್ಲಿ ನೀವು ಹಸ್ತಕ್ಷೇಪ ಮಾಡಬೇಡಿ
- ಕಲಿಯುವ ಹಂಬಲವಿರುವವರು ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಿದೆ
- ಇಂದು ನಿಮ್ಮ ಮನಸ್ಸು ನಿರ್ಮಲವಾಗಿರುತ್ತದೆ
- ಭವಿಷ್ಯದ ಬಗ್ಗೆ ಸರಿಯಾದ ತೀರ್ಮಾನಕ್ಕೆ ಯೋಗ್ಯದಿನ
- ಸದ್ಗುರುಗಳನ್ನು ಪಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಹೋದ್ಯೋಗಿಗಳ ಸಹಾಯ ಪಡೆದು ನಿಮ್ಮ ಕೆಲಸ ಪೂರ್ಣ ಮಾಡಿ
- ಇಂದು ವ್ಯಾಪಾರ ವ್ಯವಹಾರಕ್ಕಾಗಿ ಸಾಲ ಮಾಡುವ ಸಾಧ್ಯತೆಯಿದೆ
- ಕೆಲಸದಲ್ಲಿ ದೊಡ್ಡ ಜವಾಬ್ದಾರಿಯಿಂದ ಬೇಸರವಾಗಬಹುದು ಆದರೆ ಅನಿವಾರ್ಯವಾಗಿರುತ್ತದೆ
- ಇತರರಿಗೆ ಉಪಕಾರ ಮಾಡಲು ಹೋಗಿ ತೊಂದರೆ ಅನುಭವಿಸಬಹುದು
- ಸುಲಭವಾಗಿ ಸಾಲ ದೊರಕಬಹುದು ಆದರೆ ಮುಂದೆ ತೊಂದರೆಯಾಗುವ ಸಾಧ್ಯತೆ ಹೆಚ್ಚು
- ಋಣಮೋಚನ ಅಂಗಾರಕ ಸ್ತೋತ್ರ ಪಠಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಮನಸ್ಸಿಗೆ ಸಂತೋಷ ಕೆಲಸಗಳಲ್ಲಿ ಉತ್ಸಾಹ ಇರುವ ದಿನ
- ಸಹೋದ್ಯೋಗಿಗಳಿಗೆ ಶುಭವಾರ್ತೆ ಸಿಗಲಿದೆ
- ಮನೆಯ ಸದಸ್ಯರೆಲ್ಲರ ಜೊತೆಯಲ್ಲಿ ಬಿಡುವಿಲ್ಲದ ಮಾತು ನಡೆಯುತ್ತದೆ
- ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಸರಳವಾಗಿ ಆಚರಿಸಿಕೊಳ್ಳಿ
- ವಿದ್ಯಾರ್ಥಿಗಳಿಗೆ ಅನಾರೋಗ್ಯದ ಬೇಸರ ಉಂಟಾಗಬಹುದು
- ಇಡೀ ವರ್ಷದ ಎಲ್ಲಾ ಕೆಲಸದ ಬಗ್ಗೆ ಯೋಜನೆಯನ್ನು ಈ ದಿನ ಮಾಡುವಂತಹುದು
- ಅಲಂಕಾರದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ
- ಕುಲದೇವತಾ ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮಗಿಂತ ಕಿರಿಯರು ಉತ್ತಮ ಪದವಿ ಪಡೆದು ಯಶ್ವಸಿಗಳಾಗುತ್ತಾರೆ
- ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾಗಬಹುದು
- ಹಳೆಯ ವಿಚಾರಗಳು ಮುನ್ನಲೆಗೆ ಬರುವಂತ ಸೂಚನೆಗಳಿವೆ
- ಇದು ನಿಮ್ಮ ಅಸಮಾಧಾನಕ್ಕೆ ಕಾರಣ ಆಗುತ್ತದೆ
- ನಿಮ್ಮ ಸ್ವಭಾವದಿಂದ ಸ್ವರ್ಧಾತ್ಮಕವಾದ ಜೀವನದಲ್ಲಿ ಹಿನ್ನಡೆಯಾಗುವ ಸಾಧ್ಯತೆ
- ಹೊರಗೆ ತಿರುಗುವ ಮನಸ್ಸು ಹೆಚ್ಚಾಗಿ ಕಾಣುತ್ತದೆ
- ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಉಂಟಾಗುತ್ತದೆ
- ಗುರು ದಕ್ಷಿಣ ಮೂರ್ತಿಯನ್ನು ಆರಾಧಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಒಳ್ಳೆಯ ಕಾರ್ಯಕ್ಕೆ ಸಮಯವನ್ನು ಉಪಯೋಗಿಸಿಕೊಳ್ಳಬೇಕು
- ಇಂದು ಮಕ್ಕಳಿಗೆ ಬಹಳ ಸಂತೋಷದ ದಿನ
- ಕೋಪ ಹೆಚ್ಚಾಗಿ ಕಾಣುತ್ತದೆ ಕೋಪನ್ನು ಯಾರ ಮೇಲೂ ತೀರಿಸಿಕೊಳ್ಳಬಾರದು
- ಸ್ಪರ್ಧಾತ್ಮಕ ಪರೀಕ್ಷೆಗಳ ವಿಚಾರದಲ್ಲಿ ಸ್ವಲ್ಪ ಗೊಂದಲವಿರುತ್ತದೆ
- ಆಸ್ತಿ ವಿವಾದ ಇತ್ಯರ್ಥ ಆಗಲಿದೆ
- ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಒಂದು ಹಂತ ಮೇಲೆಕ್ಕೇರುವ ದಿನ
- ಆಂಜನೇಯನಿಗೆ ಬೆಣ್ಣೆ ಅಲಂಕಾರ ಮಾಡಿಸಿ
ಧನುಸ್
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ರಂಗ ಕಲಾವಿದರಿಗೆ ಗೌರವ ಸನ್ಮಾನ ದೊರೆಯಲಿದೆ
- ನಿಮ್ಮ ಕೆಲವು ಸಣ್ಣ ಪುಟ್ಟ ಕೆಲಸಗಳಿಗೂ ಬೇರೆಯವರನ್ನು ಅವಲಂಬಿಸುತ್ತೀರಿ
- ಹಿರಿಯರು ಮತ್ತು ಮಕ್ಕಳಿಗೆ ಮಾನಸಿಕವಾಗಿ ಸಮಾಧಾನ ಇಲ್ಲದೆ ಇರುವ ದಿನ
- ಅಕ್ಕಪಕ್ಕದವರ ಜೊತೆ ಜಗಳದ ಸಾಧ್ಯತೆಯಿದೆ ಜಾಗ್ರತೆವಹಿಸಿ
- ಅಹಂಕಾರ ಬೇಡ ಹೊಂದಿಕೊಂಡು ಹೋಗುವುದು ಬಹಳ ಮುಖ್ಯ
- ಕಾರ್ಯಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಲು ಹೋಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ
- ತಂದೆ ತಾಯಿಯರಿಗೆ ಗೌರವವನ್ನು ನೀಡಿ
- ಗಣಪತಿಯ ಆರಾಧನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಗುರವಾಗಿ ಮಾತನಾಡುವುದರಿಂದ ನಿಮ್ಮ ಗೌರವ ಕಡಿಮೆಯಾಗುವ ಸೂಚನೆ ಇದೆ
- ಹೊಸ ಕೆಲಸ ಹೊಸ ಜೀವನವನ್ನು ಪ್ರಾರಂಭ ಮಾಡಲು ಶುಭದಿನ
- ನಿಮ್ಮ ಮಾತಿನ ಬಗ್ಗೆ ಹಿಡಿತವಿರಲಿ
- ಬಹಳ ದಿನದಿಂದ ಮದುವೆಗೆ ಕಾಯುತ್ತಿದ್ದ ಪ್ರೇಮಿಗಳಿಗೆ ಶುಭದಿನ
- ಪ್ರಯಾಣ ಮಾಡುವಾಗ ಜಾಗ್ರತೆಯಿರಲಿ ತೊಂದರೆಯ ಸೂಚನೆಗಳಿವೆ
- ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುವವರಿಗೆ ತೊಂದರೆಯಿಲ್ಲ
- ಗೋಮಾತೆಯನ್ನು ಪೂಜಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಯಂಕಾಲದ ವೇಳೆಗೆ ಸ್ತ್ರೀಯರಿಗೆ ಎದೆನೋವು ಕಾಣಿಸಬಹುದು ಎಚ್ಚರಿಕೆವಹಿಸಿ
- ಅನಗತ್ಯ ಖರ್ಚು ಚಿಂತೆಗೀಡು ಮಾಡುತ್ತದೆ
- ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಿನ್ನಡೆ ಆಗುವ ಸಾಧ್ಯತೆ
- ಈ ದಿನ ಮಾನಸಿಕ ಸಮಾಧಾನವಿರುವುದಿಲ್ಲ
- ನೀವು ಕೋಪವನ್ನು ಕಡಿಮೆ ಮಾಡಿಕೊಳ್ಳಿ
- ಮಾತಿನ ಭರದಲ್ಲಿ ಅನಗತ್ಯ ವಿಚಾರಗಳಲ್ಲಿ ಸಿಲುಕಿಕೊಳ್ಳಬಹುದು
- ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಣವನ್ನು ಹೂಡಿಕೆ ಮಾಡಲು ಸಕಾಲ
- ಸಣ್ಣ ಪುಟ್ಟ ವಿಚಾರಗಳಿಗೆ ಹೆಚ್ಚಿನ ಕೋಪ ಬರುತ್ತದೆ
- ರುದ್ರಮಂತ್ರವನ್ನು ಶ್ರವಣಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯ ಕ್ಷೇತ್ರದಲ್ಲಿ ಮಾತನಾಡುವಾಗ ಮಕ್ಕಳ ವಿವಾಹದ ವಿಚಾರ ಬರಬಹುದು
- ವಿದ್ಯಾರ್ಥಿಗಳಿಗೆ ಮುಖ್ಯವಾದ ತಿರುವು ಸಿಗಲಿದೆ
- ಹಿಂದೆ ಆರ್ಥಿಕವಾಗಿ ನಷ್ಟ ಅನುಭವಿಸಿದ್ದರೆ ಇಂದು ಅದನ್ನು ಸರಿದೂಗಿಸಿಕೊಳ್ಳುವ ಅವಕಾಶವಿದೆ
- ಮನಸ್ಸು ಹಾಳಾಗದೆ ಒಂದೇ ರೀತಿಯಲ್ಲಿರಬೇಕು
- ಈ ದಿನ ನೌಕರಿಯಲ್ಲಿರುವ ಮಹಿಳೆಯರಿಗೆ ಶುಭಫಲ
- ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ ಇದೆ
- ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯುವ ಸೂಚನೆಗಳಿವೆ
- ಚೌಡೇಶ್ವರಿಯನ್ನು ಆರಾಧಿಸಿ
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us