ಆತುರದ ಮಾತು ಬೇಡ, ಕುಟುಂಬದಲ್ಲಿ ಅಶಾಂತಿ -ಹೇಗಿದೆ ನಿಮ್ಮ ಭವಿಷ್ಯ..?

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಮೃಗಶಿರಾ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ

  • ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆ  ಅನಾನುಕೂಲ 
  • ನಕಾರತ್ಮಕ ವಿಚಾರಗಳಿಗೆ ಸಮಯ ವ್ಯರ್ಥ 
  • ವಸ್ತು ಖರೀದಿಯಲ್ಲಿ ಚರ್ಚೆ ಅವಮಾನ ಕಲಹ ಆಗಬಹುದು
  • ಬೇರೆಯವರನ್ನು ಯಾವಾಗಲೂ ಮಾತಿನಿಂದ ಅವಮಾನಿಸುವ ಅಭ್ಯಾಸ ದೂರಮಾಡಿ 
  • ಕುಟುಂಬದಲ್ಲಿ ಆಶಾಂತಿ ವಾತಾವರಣ 
  • ಆತುರದ ಮಾತು ತಪ್ಪಾಗಬಹುದು 
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ   

ವೃಷಭ

  • ಸತ್ಯಕ್ಕೆ ಹತ್ತಿರವಾದ ಉಪಯುಕ್ತವಾದ ಚರ್ಚೆ ಮಾಡುವುದು ಉತ್ತಮ 
  • ಇಂದು ಸಹೋದರರಲ್ಲಿ ಭಿನ್ನಾಭಿಪ್ರಾಯದ ಮಾತುಗಳಿರಬಹುದು 
  • ಕುಟುಂಬದ ಮೂಲವನ್ನು ಸರಿಯಾಗಿ ಹುಡುಕಿ ಸರಿಪಡಿಸಬೇಕಾಗಬಹುದು
  • ದೀರ್ಘಕಾಲದ ತೊಂದರೆಯಿರುವವರಿಗೆ ಸ್ವಲ್ಪ ಚೇತರಿಕೆ ಆಗಬಹುದು
  • ಅನಗತ್ಯ ವಸ್ತು ವಿಷಯಗಳಿಗೆ ಕಲಹವಾಗಬಹುದು 
  • ನಿಮ್ಮ ಮೊಂಡು ಸ್ವಭಾವವನ್ನು ಪರಿವರ್ತಿಸಿಕೊಳ್ಳಲು ಪ್ರಯತ್ನಿಸಿ
  • ಸಾಲಗ್ರಾಮ ರೂಪೀ ವಿಷ್ಣುವಿನ ಆರಾಧನೆ ಮಾಡಿ 

ಮಿಥುನ

  • ಸಾಯಂಕಾಲದ ಚರ್ಚೆ ನಿಮಗೆ ಅನುಕೂಲಕರವಾಗಲಿದೆ
  • ಸ್ಥಿರ ಮನಸ್ಸಿಲ್ಲದೆ ಅನೇಕ ಗೊಂದಲಗಳಿಗೆ ಸಿಲುಕಬಹುದು 
  • ನೀವು ಎಷ್ಟು ನಯವಾಗಿರುತ್ತಿರೋ ಅಷ್ಟು ಗೌರವ ನಿಮ್ಮದಾಗುತ್ತದೆ 
  • ಜೊತೆಗಿದ್ದ ಸ್ನೇಹತರು ನಿಮ್ಮ ಸ್ವಭಾವದಿಂದ ದೂರವಾಗಬಹುದು 
  • ದಿನದ ಆರಂಭದಲ್ಲಿ ನಿಮಗೆ ತೊಂದರೆ ಬೇಸರದ ಸೂಚನೆಯಿರಬಹುದು 
  • ನಿಮ್ಮ ಮನಸ್ಸು ಅಧೈರ್ಯದಿಂದ ಕೂಡಿರುತ್ತದೆ 
  • ಭಗವದ್ಗೀತಾ ಶ್ಲೋಕ ಪಠಿಸಿ 

ಕಟಕ

  • ಕೆಲವು ವಿಚಾರಗಳಲ್ಲಿ ಮನೆಯಲ್ಲಿ ನಿಮ್ಮನ್ನು ಪರಿಗಣಿಸುವುದಿಲ್ಲ
  • ಬೇರೆಯವರ ವಿಚಾರಕ್ಕೆ ತಲೆಹಾಕಿ ಅವಮಾನವಾಗಬಹುದು
  • ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
  • ಮದುವೆ ವಿಚಾರ ಚರ್ಚೆಯಾಗಲಿದೆ
  • ಮಹಿಳೆಯರು ಸೌಂದರ್ಯವರ್ಧಕ ವಸ್ತು ಖರೀದಿಯಲ್ಲಿ ಆಸಕ್ತಿ ತೋರಬಹುದು
  • ನಿಮ್ಮ ಕೆಲಸ ಒತ್ತಡವನ್ನು ಬೇರೆಯವರಿಗೆ ವಹಿಸಬೇಡಿ
  • ಮನೋಭವ ಮಂತ್ರ ಉಪಾಸನೆ ಮಾಡಿ

ಸಿಂಹ

  • ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಬಹುದು
  • ಸಾಯಂಕಾಲದಲ್ಲಿ ವ್ಯಾವಹಾರಿಕ ಹಣದ ವಿಚಾರಕ್ಕೆ ಕಲಹ ಜಗಳಬೇಡ
  • ಮನೆಯಲ್ಲಿ ಗಾಜಿನ ಪದಾರ್ಥ ಒಡೆಯಬಹುದು ಎಚ್ಚರವಹಿಸಿ
  • ನಿಮ್ಮ ಮನಸ್ಸಿಗೆ ಸಮಾಧಾನವಾಗುವಂತೆ ಕೆಲಸ ಮಾಡಿ
  • ವ್ಯಕ್ತಿತ್ವ  ಸ್ವಭಾವದಲ್ಲಿ ಕೆಲವು ಬದಲಾವಣೆಗಳಾಗಬಹುದು
  • ಆರೋಗ್ಯದಲ್ಲಿ ತುಂಬಾ ಏರು ಪೇರು ಕಾಣಬಹುದು
  • ರುದ್ರ ಮಂತ್ರ ಶ್ರವಣ ಮಾಡಿ

ಕನ್ಯಾ

  • ಸಾಕು ಪ್ರಾಣಿಯ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ  
  • ಸರ್ಕಾರಿ ಕೆಲಸ ಮಾಡುವವರಿಗೆ ಬಡ್ತಿ ಸಿಗಲಿದೆ
  • ಮುದ್ರಕರಿಗೆ ಶುಭ ದಿನ
  • ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೆಲವು ಗೊಂದಲಗಳು ಕಾಡಬಹುದು
  • ಅರಿಯದ ವಿಚಾರಗಳಲ್ಲಿ ಸಿಲುಕಬಹುದು
  • ಬಂಧುಗಳಲ್ಲಿದ್ದ ವಿರಸ  ಭಿನ್ನಾಭಿಪ್ರಾಯ  ದೂರವಾಗುತ್ತದೆ
  • ಮನೆಯಲ್ಲಿ ಮಂಗಳಕಾರ್ಯದ ವಿಚಾರ ಪ್ರಸ್ತಾಪಿಸಬಹುದು
  • ಈಶ್ವರನ ಆರಾಧನೆ ಮಾಡಿ

ತುಲಾ

  • ಆಯಾಸದಿಂದ ಕಿರಿಕಿರಿ ಆಗಬಹುದು
  • ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ದಾಂಪತ್ಯದಲ್ಲಿ ವಿರಸ ಬಿರುಕು ತೋರುತ್ತದೆ ಹೊಂದಾಣಿಕೆ ಅಗತ್ಯ
  • ಮನೆಯಲ್ಲಿ ಕಹಿವಿಚಾರಗಳನ್ನು ಮಾತನಾಡಬೇಡಿ
  • ನಿಗೂಢ ವಿಷಯಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ
  • ಉದ್ಯಮಿಗಳಿಗೆ ಹಣದ ಏರುಪೇರಿನಿಂದ ತೊಂದರೆ
  • ಐಕ್ಯಮತ್ಯ ಮಂತ್ರ ಶ್ರವಣ ಮಾಡಿ

ವೃಶ್ಚಿಕ

  • ಶುಭಕಾರ್ಯಕ್ಕೆ ಹೋಗಲು ಮನಸ್ಸಿರುವುದಿಲ್ಲ
  • ನೌಕರಿಯ ಬಗ್ಗೆ ಸ್ನೇಹಿತರಿಂದ ತೊಂದರೆಯಿದೆ
  • ಕುಟುಂಬದ ನಿರ್ವಹಣೆ ಹಣದ ದೃಷ್ಟಿಯಿಂದ ಕಷ್ಟವಾಗಬಹುದು
  • ವಸ್ತು ಖರೀದಿ ಅಥವಾ ವ್ಯಾಪಾರದಲ್ಲಿ ಲಾಭವಿದೆ
  • ಸಾಯಂಕಾಲದ ವೇಳೆಗೆ ಅಶುಭವಾರ್ತೆ ಮನೆಯಲ್ಲಿ ಆತಂಕ
  • ತಂದೆಯವರ ಸಂಪೂರ್ಣ ಸಹಾಯ ಸಹಕಾರ ಸಿಗಲಿದೆ
  • ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ

ಧನಸ್ಸು

  • ಪ್ರಯಾಣದಲ್ಲಿ ತೊಂದರೆಯಿದೆ - ಎಚ್ಚರಿಕೆ
  • ನಿಮ್ಮ ಪರಿಶ್ರಮವು ಲೆಕ್ಕಕ್ಕೆ ಬರುವುದಿಲ್ಲ ಉದ್ಯೋಗ + ಮನೆ
  • ಉದ್ಯೋಗದಲ್ಲಿ ಸ್ಥಾನ ಮಾನಗಳು ಸಿಗಬಹುದು
  • ಮನಸ್ಸಿನಿಂದ ವೃತ್ತಿ ಉದ್ಯೋಗದ ಚಿಂತೆ ದೂರವಾಗುತ್ತದೆ
  • ಬರಬೇಕಾದ ಬಾಕಿ ಹಣವಿದ್ದರೆ ಇಂದು ಯೋಗವಿದೆ
  • ವಿದ್ಯಾರ್ಥಿಗಳಿಗೆ ಯಶಸ್ಸಿದೆ
  • ಕುಲದೇವತಾ ಆರಾಧನೆ ಮಾಡಿ

ಮಕರ 

  • ತಲೆ ನೋವಿನ ಸಮಸ್ಯೆ ಕಾಡಬಹುದು
  • ಮೇಲಾಧಿಕಾರಿಗಳಿಂದ ನಿಂದನೆಗೊಳಗಾಗುತ್ತೀರಿ
  • ಮಾನಸಿಕ ಒತ್ತಡ-ಕೋಪ ಕಾಣಬಹುದು
  • ನಕಾರಾತ್ಮಕ ಆಲೋಚನೆಗಳು ಬರದಂತೆ ತಡೆಯಿರಿ
  • ಎಲ್ಲಾ ಅನುಕೂಲಗಳಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
  • ಏನೋ ನಿಮಗಾಗದ ಮಾತು ಕೇಳಿ ಬೇಸರವಾಗಬಹುದು
  • ನವಗ್ರಹ ಪೀಟಾ ಪರಿಹಾರ ಸ್ತೋತ್ರ ಪಠಿಸಿ

ಕುಂಭ 

  • ದೈಹಿಕ ತೊಂದರೆಯಿದೆ ಚಿಕಿತ್ಸೆ ಅಗತ್ಯ
  • ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಬಹುದು
  • ವ್ಯಾಪಾರದಾರರಿಗೆ ಲಾಭವಿದೆ
  • ಉದ್ಯೋಗ ಹುಡುಕುತ್ತಿರುವವರಿಗೆ ಅನುಕೂಲ
  • ಶತ್ರುಗಳ ಕಾಟ ಉಂಟಾಗಬಹುದು
  • ಈ ದಿನ ಧನಲಾಭ 
  • ಪ್ರತ್ಯಂಗಿರಾ ದೇವಿ ಉಪಾಸನೆ ಮಾಡಿ

ಮೀನ 

  • ನಿಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು
  • ಹಳೆಯ ರೋಗಗಳಿಂದ ಮುಕ್ತಿ ಸಿಗಲಿದೆ
  • ಇಷ್ಟಾರ್ಥಗಳು ಈಡೇರುತ್ತವೆ ದುರಾಸೆ ತಪ್ಪಿದ್ದಲ್ಲ
  • ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಲು ಪ್ರಯತ್ನಿಸಿ ವಿಫಲರಾಗುತ್ತೀರಿ
  • ಬೇಕಾದವರಿಗಾಗಿ ಸ್ವಲ್ಪ ಸಮಯ ಮೀಸಲಾಗಿಡುತ್ತೀರಿ
  • ಭಾವನೆಗಳನ್ನು ನಿಯಂತ್ರಿಸಿ
  • ಬಂಡಿಕೇಶ್ವರನನ್ನು ಪ್ರಾರ್ಥಿಸಿ

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment