Advertisment

ಜನರಿಗೆ ನಿಮ್ಮಿಂದ ಸಹಾಯ ಆಗುತ್ತದೆ.. ಇಂದು ವ್ಯಾಪಾರದಲ್ಲಿ ಅನುಕೂಲವಿದೆ; ಇಲ್ಲಿದೆ ಇಂದಿನ ಭವಿಷ್ಯ!

ಕುಟುಂಬದಲ್ಲಿ ಅನ್ಯೋನ್ಯತೆಯಿರುತ್ತದೆ. ಮನೆಗೆ ಬಂದ ಅತಿಥಿಗಳಿಂದ ಕಿರಿಕಿರಿಯಾಗಬಹುದು. ಹಣಕಾಸಿನ ವಿಚಾರದಲ್ಲಿ ಗಲಾಟೆ ಜಗಳ. ನಿಮ್ಮ ನಡವಳಿಕೆ ಸ್ವಾಭಾವಿಕವಾಗಿದ್ದರೂ ಜನ ನಿಮ್ಮನ್ನು ಕೆಣಕಬಹುದು. ಅವಕಾಶಕ್ಕೆ ಕಾದಿರುವ ನಿಮಗೆ ಉತ್ತಮ ವಾರ್ತೆ ಸಿಗುತ್ತದೆ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಕಾರ್ತಿಕ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಧರ್ಮ ಗ್ರಂಥಗಳ ಅಧ್ಯಯನದಿಂದ ವಿಷಯಾಸಕ್ತಿ ಕುತೂಹಲ
  • ಕ್ರೀಡಾಪಟುಗಳಿಗೆ ಸಮಸ್ಯೆಯಾಗಬಹುದು
  • ಈ ದಿನ ವಿದ್ಯಾರ್ಥಿಗಳಿಗೆ ಅನುಕೂಲವಿದೆ  
  • ಜನರ ಮಾತಿಗೆ ಮರುಳಾಗಬೇಡಿ
  • ಪ್ರೇಮಿಗಳಿಗೆ ಅನುಕೂಲವಿದೆ  ಸ್ವಯಂಕೃತ ಅಪರಾಧ ಬೇಡ
  • ಜನರೊಂದಿಗೆ ವಿಶ್ವಾಸಾರ್ಹ ಮಾತಗಳನ್ನಾಡಿ
  • ಸರಸ್ವತಿಯನ್ನು ಪ್ರಾರ್ಥಿಸಿ
     

ವೃಷಭ

RASHI_BHAVISHA_VRSHABA

  • ಅಂದುಕೊಂಡ ಕೆಲಸದಲ್ಲಿ ಶುಭವಿದೆ
  • ಪ್ರಯಾಣದಲ್ಲಿ ಆಲಸ್ಯ ಸುಸ್ತು ವಿಶ್ರಾಂತಿಯ ಅಗತ್ಯ
  • ಸ್ನೇಹಿತರ ಭೇಟಿಯಿಂದ ಸಮಯ ವ್ಯರ್ಥ ಆಗಬಹುದು
  • ಉದ್ಯೋಗದಲ್ಲಿ ಹಿನ್ನಡೆಯಾಗಬಹುದು
  • ಬೇರೆಯವರ ವಿಷಯಾಸಕ್ತಿ ಬೇಕಿರುವುದಿಲ್ಲ
  • ಸಾಯಂಕಾಲದ ಹೊತ್ತಿಗೆ ತುಂಬಾ ಆತಂಕ
  • ಹಸುವಿಗೆ ಆಹಾರ ಕೊಡಿ
Advertisment

ಮಿಥುನ

RASHI_BHAVISHA_MITHUNA

  • ಮೇಲಾಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ
  • ಮಕ್ಕಳಿಗೆ ಉಜ್ವಲ ಭವಿಷ್ಯದ ಬಗ್ಗೆ ಮಾರ್ಗದರ್ಶನ
  • ಕುಟುಂಬದಲ್ಲಿ ಬಂಧುಗಳಿಂದ ದ್ರೋಹದ ಚಿಂತನೆ
  • ಇಂದು ವ್ಯಾಪಾರದಲ್ಲಿ ಅನುಕೂಲವಿದೆ
  • ಮಾನಸಿಕ ಒತ್ತಡ ಭಯದ ವಾತಾವರಣ
  • ನಿಮ್ಮ ಕಾರ್ಯಕ್ಷೇತ್ರದ ವಿಸ್ತಾರಗಳಿಗೆ ಅವಕಾಶವಿದೆ
  • ಲಲಿತಾ ಪರಮೇಶ್ವರಿಯನ್ನು ಉಪಾಸನೆ ಮಾಡಿ 

ಕಟಕ

RASHI_BHAVISHA_KATAKA

  • ಕಾರ್ಯ ವೈಖರಿಯನ್ನು ಬದಲಿಸಿಕೊಳ್ಳಿ
  • ಆಹಾರ ಮಿತವಾಗಿದ್ದು ಶುದ್ಧವಾಗಿರಲಿ ಆರೋಗ್ಯ ಮುಖ್ಯ
  • ನಿಮ್ಮ ಅಭಿಪ್ರಾಯ ಜನರಿಗೆ ಇಷ್ಟವಾಗುವುದಿಲ್ಲ
  • ಹೊಸ ವಿಚಾರ ಕಲಿಯಲು ಅವಕಾಶವಿದೆ
  • ಈ ದಿನ ವಿದ್ಯಾರ್ಥಿಗಳಿಗೆ ಯಶಸ್ಸಿದೆ
  • ಅಪರಿಚಿತರ ನಂಬಿಕೆಯಿಂದ ದ್ರೋಹವಾಗಬಹುದು
  • ನರಸಿಂಹನನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ಸಹೋದ್ಯೋಗಿಗಳ ಜೊತೆ ತಾಳ್ಮೆಯಿಂದ ವರ್ತಿಸಿ
  • ಯಾವುದೇ ಕೆಲಸದಲ್ಲಿ ಸ್ಪರ್ಧೆ ಬೇಡ
  • ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
  • ಅನಗತ್ಯ ಪ್ರಯಾಣ ರದ್ದು ಮಾಡಿ
  • ಕುಟುಂಬದ ಜೊತೆ ಸಮಯ ಕಳೆಯಿರಿ
  • ಬೇರೆಯವರ ಆಗಮನದಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು
  • ದುರ್ಗಾ ಪ್ರಾರ್ಥನೆ ಮಾಡಿ
Advertisment

ಕನ್ಯಾ

RASHI_BHAVISHA_KANYA

  • ಜವಾಬ್ದಾರಿ ಕೆಲಸಗಳಲ್ಲಿ  ಸವಾಲು ಕಾಣುತ್ತದೆ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾನ್ಯತೆ ಉಪಯೋಗ ಸಿಗಲಿದೆ
  • ಜನರಿಗೆ ನಿಮ್ಮಿಂದ ಸಹಾಯವಾಗುವ ದಿನ
  • ಕೆಲಸದ ಒತ್ತಡ  ಮಾನಸಿಕ ಹಿಂಸೆಯಾಗಬಹುದು
  • ವಿದೇಶೀ ಸಂಪರ್ಕವಿರುವವರಿಗೆ ಶುಭವಿದೆ
  • ಸಾಯಂಕಾಲಕ್ಕೆ ಶುಭ ವಾರ್ತೆ ಕೇಳುತ್ತೀರಿ
  • ಸುಬ್ರಹ್ಮಣ್ಯನ ಆರಾಧನೆ ಮಾಡಿ

ತುಲಾ

RASHI_BHAVISHA_TULA

  • ಕುಟುಂಬದಲ್ಲಿ ಅನ್ಯೋನ್ಯತೆಯಿರುತ್ತದೆ
  • ಮನೆಗೆ ಬಂದ ಅತಿಥಿಗಳಿಂದ ಕಿರಿಕಿರಿಯಾಗಬಹುದು
  • ಹಣಕಾಸಿನ ವಿಚಾರದಲ್ಲಿ ಗಲಾಟೆ ಜಗಳ
  • ನಿಮ್ಮ ನಡವಳಿಕೆ ಸ್ವಾಭಾವಿಕವಾಗಿದ್ದರೂ ಜನ ನಿಮ್ಮನ್ನು ಕೆಣಕಬಹುದು
  • ಅವಕಾಶಕ್ಕೆ ಕಾದಿರುವ ನಿಮಗೆ ಉತ್ತಮ ವಾರ್ತೆ
  • ಸಾಲದ ಹಣ ವಾಪಸ್ಸು ಬರಬಹುದು 
  • ಈ ದಿನ ಅನಿರೀಕ್ಷಿತ ಲಾಭವಿದೆ
  • ಐಶ್ವರ್ಯ ಲಕ್ಷ್ಮೀ ಆರಾಧನೆ

ವೃಶ್ಚಿಕ

RASHI_BHAVISHA_VRUSHCHIKA

  • ನಿಮ್ಮ ಸ್ವಭಾವವನ್ನು ವರ್ತನೆಗೋಸ್ಕರ ಜನರು ಟೀಕಿಸುತ್ತಾರೆ 
  • ನಿಮ್ಮ ವರ್ತನೆ ವ್ಯಕ್ತಿತ್ವ ಕಾಪಾಡಿಕೊಳ್ಳಬೇಕು
  • ಮಹಿಳೆಯರಿಗೆ ಆರೋಗ್ಯದಲ್ಲಿ ತೊಂದರೆಯಾಗಬಹುದು
  • ಈ ದಿನ ಮಕ್ಕಳ ಬಗ್ಗೆ ಕಾಳಜಿವಹಿಸಿ
  • ನಿರ್ದಿಷ್ಟ ಗುರಿಯಿರಲಿ ದುರಾಲೋಚನೆ ಬೇಡ
  • ಅತಿಯಾದ ಗಳಿಕೆಗೆ ಮನಸ್ಸು ಕೊಡದಿರಿ
  • ಧನ್ವಂತರಿ ಉಪಾಸನೆ ಮುಖ್ಯ
Advertisment

ಧನುಸ್ಸು

RASHI_BHAVISHA_DHANASU

  • ಹಳೆಯ ಸಾಲಕ್ಕೆ ಇಂದು ಮುಕ್ತಿ ಸಿಗಲಿದೆ
  • ಮನೆಯವರು ನಿಮ್ಮಿಂದ ಉಡುಗೊರೆಯನ್ನು ನಿರೀಕ್ಷಿಸುತ್ತಾರೆ
  • ಸ್ನೇಹಿತರ ಸಲಹೆ ನಿಮಗೆ ಉತ್ತಮವಾದ ಫಲ ಕೊಡಲಿದೆ
  • ಪ್ರಯೋಜನವಾಗುವ ಯೋಜನೆಯಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುತ್ತೀರಿ
  • ಇಂದು ವೃತ್ತಿಯಲ್ಲಿ ಅಭಿವೃದ್ಧಿ ಕಾಣುತ್ತೀರಿ
  • ಒಳ್ಳೆಯ ಸುದ್ಧಿಯಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಇಷ್ಟದೇವತಾ ಆರಾಧನೆ ಮಾಡಿ

ಮಕರ

RASHI_BHAVISHA_MAKARA

  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುತ್ತೀರಿ
  • ದಾಂಪತ್ಯದಲ್ಲಿ ಸಾಮರಸ್ಯವಿದೆ
  • ಹಣದ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸ ಬದಲಾವಣೆಗಳಾಗುತ್ತದೆ
  • ಉದಾರ ಸ್ವಭಾವದಿಂದ ಜನರು ಪ್ರಭಾವಿತರಾಗಬಹುದು
  • ಮಧ್ಯಾಹ್ನದ ನಂತರ ಕೆಲವು ಸಮಸ್ಯೆಗಳು ಉಂಟಾಗಲಿದೆ
  • ಬುದ್ಧಿವಂತಿಕೆಯಿಂದ ವ್ಯವಹರಿಸಬೇಕಾಗುತ್ತದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

RASHI_BHAVISHA_KUMBHA

  • ರಾಜಕೀಯ ವ್ಯಕ್ತಿಗಳಿಗೆ ಶುಭವಿರುವ ದಿನ
  • ಮನೆಗೆ ಅತಿಥಿಗಳ ಆಗಮನದಿಂದ ಸಂತೋಷ ಮತ್ತು ಬೇಸರ ಆಗಲಿದೆ
  • ಸಾಮಾಜಿಕ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತೀರಿ
  • ವ್ಯಾಪಾರದಲ್ಲಿ ಲಾಭ ಸಿಗಲಿದೆ
  • ಪ್ರೇಮಿಗಳಿಗೆ ಪ್ರೇಮ ವಿಚಾರದಲ್ಲಿ ಸಮಸ್ಯೆ ಕಾಣಲಿದೆ
  • ಅಕ್ಕಪಕ್ಕದ ವಾತಾವರಣ ಚೆನ್ನಾಗಿರುತ್ತದೆ
  • ಗಣಪತಿಯ ಆರಾಧನೆ ಮಾಡಿ
Advertisment

ಮೀನ

RASHI_BHAVISHA_MEENA

  •  ಹೊಸ ವ್ಯಾಪಾರ ಮತ್ತು ವ್ಯವಹಾರವನ್ನು ಈ ದಿನ ಮಾಡಬೇಡಿ
  • ನಿರಾಶಾದಾಯಕ ವಿಚಾರಗಳಿಂದ ಬೇಸರ ಆಗಲಿದೆ
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
  •  ಗಂಟಲಿನ ಸಮಸ್ಯೆಯಿಂದ ಜ್ವರ ಕಾಣಬಹುದು
  • ವಿರೋಧಿಗಳನ್ನು ಎದುರಿಸಲು ಅಸಮರ್ಥರಾಗಬಹುದು
  • ಮಾನಸಿಕ ಚಿಂತೆ ಕಾಡುವಂತಹದ್ದು
  • ಮೃತ್ಯುಂಜಯನ ಆರಾಧನೆ ಮಾಡಿ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

News First Web News First Kannada
Advertisment
Advertisment
Advertisment