/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ಈ ದಿನ ಅನಗತ್ಯ ತಿರುಗಾಟ ಬೇಡ ನೀರಿನಿಂದ ದೂರವಿರಿ
- ನದಿ ಮತ್ತು ಸಮುದ್ರದ ಸಮೀಪಕ್ಕೆ ಹೋಗಬೇಡಿ
- ಕುಟುಂಬದಲ್ಲ್ಲಿ ಎಲ್ಲರ ಮನಸ್ಥಿತಿ ಮನೆಯ ವಾತಾವರಣ ಚೆನ್ನಾಗಿರುತ್ತದೆ
- ಇಂದು ವಾಹನ ಸವಾರರು ಎಚ್ಚರಿಕೆಯಿಂದಿರಿ
- ಗೊತ್ತಿಲ್ಲದೆ ತಾವೇ ಮಾಡಿಕೊಂಡ ತಪ್ಪಿನಿಂದ ತೊಂದರೆಯಿದೆ ಎಚ್ಚರಿಕೆ ಇರಲಿ
- ಗಣಪತಿಯನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ಬೇರೆಯವರ ವಾಹನದಲ್ಲಿ ಪ್ರಯಾಣ ಮಾಡಬೇಡಿ
- ಸ್ನೇಹಿತರೊಂದಿಗೆ ಕಾಲ ಕಳೆಯುತ್ತೀರಿ
- ನಿಮ್ಮ ಆಸಕ್ತಿಗನುಗುಣವಾಗಿ ಕೆಲಸದ ಆಯ್ಕೆ ಮಾಡಿಕೊಳ್ಳಿ
- ಮನೆಯಲ್ಲಿ ನಿಮ್ಮ ಮಾತೇ ಮುಖ್ಯವಾಗುತ್ತದೆ
- ಜೀವನಕ್ಕೆ ತೊಂದರೆಯಿಲ್ಲ ಎಂಬ ಮನದಾಳದ ಮಾತು ನಿಮ್ಮ ಆತ್ಮಸ್ಥೈರ್ಯಕ್ಕೆ ಸಾಕ್ಷಿಯಾಗುತ್ತದೆ
- ದುರ್ಗಾದೇವಿ ಪ್ರಾರ್ಥನೆ ಮಾಡಿ
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಹೊಸ ಹೊಸ ಆದಾಯದ ಮೂಲಗಳು ಸಿಗುತ್ತವೆ
- ಉದ್ಯೋಗದಲ್ಲಿ ಅನುಕೂಲವಿದೆ
- ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗುವ ಯೋಗವಿದೆ
- ನಿಮ್ಮ ಕೆಲಸ ಕಾರ್ಯಕ್ಕೆ ಸಹಕಾರಿಯಾಗಬಹುದು
- ನಿಮ್ಮ ಜೊತೆ ಕೆಲಸ ಮಾಡುವವರ ಬಗ್ಗೆ ವಿಶ್ವಾಸ ಉಳಿಸಿಕೊಳ್ಳಿ
- ಬೇರೆಯವರ ಮೇಲೆ ನಿಮ್ಮ ಹಿಡಿತವನ್ನು ಸಾಧಿಸಬೇಡಿ
- ಕುಲದೇವತೆ ಪ್ರಾರ್ಥನೆ ಮಾಡಿ
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ದುರಾಸೆಯಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
- ಇಂದು ಸಮಯ ವ್ಯರ್ಥ ಮಾಡಬೇಡಿ
- ಉದ್ಯೋಗದಲ್ಲಿ ಸ್ವಲ್ಪ ಅಡಚಣೆ ಸಾಧ್ಯತೆ ಇದೆ
- ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸದ ನೀವೇ ಮಾಡಿ
- ಬೇರೆಯವರಿಗೆ ಹಣ ನೀಡುವಾಗ ಎಚ್ಚರಿಕೆ ಇರಲಿ
- ದತ್ತಾತ್ರೇಯರನ್ನು ಆರಾಧಿಸಿ
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಸಣ್ಣ ತೊಂದರೆಗಳ ನಂತರ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ
- ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶವಿದೆ
- ಮದುವೆ ವಿಚಾರ ಮನೆಯಲ್ಲಿ ಪ್ರಸ್ತಾಪವಾಗಿ ಎಲ್ಲರೂ ಸಂಭ್ರಮಿಸುವ ವಾತಾವರಣ ಇರುತ್ತದೆ
- ಹಣಕಾಸಿನ ಲಾಭದಿಂದಾಗಿ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ
- ಕುಲದೇವತೆಯನ್ನು ಆರಾಧನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ಹಳೆಯ ಸ್ನೇಹಿತರ ಭೇಟಿಯಿಂದ ಮುಖ್ಯ ವಿಷಯಗಳ ಚರ್ಚೆಯಾಗುತ್ತದೆ
- ವೈವಾಹಿಕ ವಿಚಾರದಲ್ಲಿರುವವರಿಗೆ ಉತ್ತಮ ಫಲಿತಾಂಶ
- ರಹಸ್ಯ ಶತ್ರುಗಳ ಬಗ್ಗೆ ಹೆಚ್ಚು ಗಮನವಿರಲಿ
- ಬರಹಗಾರರಿಗೆ ಈ ದಿನ ಚೆನ್ನಾಗಿದೆ
- ದೂರದ ಪ್ರಯಾಣ ನಿಮಗೆ ತೊಂದರೆಯಾಗಬಹುದು
- ಶೂಲಿನೀ ದುರ್ಗಾದೇವಿ ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/media_files/2025/07/31/rashi_bhavisha_tula-2025-07-31-22-55-03.jpg)
- ನಿಮ್ಮ ಕಾರ್ಯಗಳಿಗೆ ಕುಟುಂಬದವರ ಸಹಕಾರ ಪೂರ್ಣವಾಗಿ ಸಿಗುತ್ತದೆ
- ಸರ್ಕಾರಿ ಕೆಲಸಗಳಿಂದ ಮನಸ್ಸಿಗೆ ಸಮಾಧಾನ
- ಉತ್ತಮ ಕಾರ್ಯಗಳಿಗಾಗಿ ಪ್ರಯಾಣ ಮಾಡುತ್ತೀರಿ
- ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷೆ ಮೀರಿದ ಪ್ರಗತಿ ಕಾಣುತ್ತೀರಿ
- ಆಸ್ತಿ ವಿವಾದಗಳಿದ್ದರೆ ಬಗೆ ಹರಿಯುವ ಸಾಧ್ಯತೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ಸಂಗೀತ ಆಸಕ್ತರಿಗೆ ಉತ್ತಮವಾದ ದಿನ
- ಹೊಸ ವಿಷಯ ಕಲಿಯಲು ಉತ್ಸುಕರಾಗಿರುತ್ತೀರಿ
- ನಿಮ್ಮ ಏಕಾಗ್ರತೆಗೆ ಅಡ್ಡಿಯಾಗುವ ಪ್ರಸಂಗಗಳೇ ಹೆಚ್ಚು
- ಮಾಡಿದ ಕೆಲಸವು ಸರಿಯಾಗದೆ ಮತ್ತೆ ಮಾಡಬೇಕಾಗಬಹುದು
- ತಾಯಿ, ಅಜ್ಜಿಯ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
- ಬಂಧುಗಳ ಆಗಮನದಿಂದ ಮನೆಯಲ್ಲಿ ಮನಸ್ತಾಪ ಉಂಟಾಗಬಹುದು
- ಇಂದಿನ ಕೆಲಸ ಕಾರ್ಯಗಳು ನಿಮ್ಮ ಚುರುಕುತನಕ್ಕೆ ತಕ್ಕಂತೆ ಆಗುವುದಿಲ್ಲ
- ಶ್ರೀ ಕೃಷ್ಣನನ್ನು ಪ್ರಾರ್ಥಿಸಿ
ಧನುಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದೆ
- ಬೇರೆಯವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ
- ಗುರಿ ಮುಟ್ಟುವುದೇ ನಿಮ್ಮ ಮೂಲ ಉದ್ದೇಶ ಆಗಿರುತ್ತದೆ
- ಇಂದು ನೀವು ತುಂಬಾ ಕಾರ್ಯ ಒತ್ತಡಕ್ಕೆ ಸಿಲುಕುತ್ತೀರಿ
- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುತ್ತೀರಿ
- ಗೋವಿನ ದರ್ಶನ ಮಾಡಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ಷೇರು ಮಾರುಕಟ್ಟೆಯಲ್ಲಿ ನಿಮಗೆ ಲಾಭವಾಗುವ ಸೂಚನೆಯಿದೆ
- ಷೇರು ವ್ಯವಹಾರವನ್ನು ಬೆಳಗ್ಗೆ 11.30 ರಿಂದ 1 ಗಂಟೆಯೊಳಗೆ ಒಳಗೆ ಮುಗಿಸಿಕೊಳ್ಳಿ
- ನಿಮಗಿರುವ ಧಾರ್ಮಿಕ ಭಾವನೆಯನ್ನು ಹೆಚ್ಚಿಸಿಕೊಳ್ಳಿ
- ನಿಮ್ಮ ಸಂಗಾತಿಗೆ ಆಶ್ಚರ್ಯಕರ ಉಡುಗೊರೆ ಕೊಟ್ಟು ಸಂತೋಷಪಡಿಸಿ
- ಇಂದು ಪತಿ- ಪತ್ನಿಯರ ಮಧ್ಯೆ ಉತ್ತಮ ಬಾಂಧವ್ಯ ಇರಲಿದೆ
- ಗುರುಗಳನ್ನು ಆರಾಧಿಸಿ
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ವಾಹನ ಚಾಲನೆ ಮಾಡುವಾಗ ಜಾಗ್ರತೆವಹಿಸಿ
- ಆಸ್ತಿಯ ಖರೀದಿ ವಿಚಾರದಲ್ಲಿ ಮನಸ್ಸಿಗೆ ಸಮಾಧಾನ ಸಿಗುತ್ತದೆ
- ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸದ ವಿಚಾರದಲ್ಲಿ ಶುಭ ಸುದ್ದಿ ಬರುತ್ತದೆ
- ನಿಮಗಿರುವ ಪ್ರತಿಭೆಯನ್ನ ಜನ ಇಂದು ಗುರುತಿಸುತ್ತಾರೆ
- ಇಂದು ಅನಗತ್ಯ ಕೆಲಸಗಳಿಂದ ದೂರವಿರಿ
- ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಪರಸ್ಪರ ಭಿನ್ನಾಭಿಪ್ರಾಯಬರಬಹುದು ಮಾತು ಮೃದುವಾಗಿರಲಿ
- ನೇರವಾಗಿ ಮಾತನಾಡಿ ನಿಷ್ಠೂರಕ್ಕೆ ಗುರಿಯಾಗುತ್ತೀರಿ
- ಇವತ್ತು ಯಾರನ್ನೂ ಅತಿಯಾಗಿ ನಂಬಬೇಡಿ
- ಇಂದು ಸ್ವಲ್ಪ ದುರ್ಬಲವಾದ ದಿನ
- ಪ್ರೇಮಿಗಳ ವಿಚಾರದಲ್ಲಿ ನಿರಾಸೆಯಾಗಬಹುದು
- ಇವತ್ತು ಯಾರನ್ನೂ ಅತಿಯಾಗಿ ನಂಬಬೇಡಿ
- ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
- ಸೂರ್ಯನಿಗೆ 12 ಬಾರಿ ನಮಸ್ಕರಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us