Advertisment

ಇಂದು ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮ ದಿನ.. ಕಷ್ಟದಿಂದ ಹೊರಬರುತ್ತೀರಿ; ಇಲ್ಲಿದೆ ನಿಮ್ಮ ಭವಿಷ್ಯ!

ಪ್ರೇಮಿಯೊಂದಿಗೆ ಸಮಯ ಕಳೆಯುತ್ತೀರಿ. ಸಮಾಜದ ಗಣ್ಯರ ಹೆಸರಿನೊಂದಿಗೆ ನಿಮ್ಮ ಹೆಸರು ಬರುತ್ತದೆ. ವಾಹನದಿಂದ ನಷ್ಟ ಸಾಧ್ಯತೆ ಎಚ್ಚರಿಕೆ ಇರಲಿ. ಮಾಡಬೇಕಾದ ಕೆಲಸದಿಂದ ದೂರ ಉಳಿದು ನಷ್ಟವಾಗುವ ಸಾಧ್ಯತೆ. ನಿಮಗಿರುವ ಪ್ರತಿಭೆ ಅನಾವರಣ ಮಾಡಲು ಉತ್ತಮ ದಿನ,

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಪುನರ್ವಸು ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ವಿಶೇಷವಾಗಿ ಉದ್ಯೋಗದಲ್ಲಿ ಆಸಕ್ತಿ ಹೆಚ್ಚಾಗಲಿದೆ
  • ಹಣದ ಅಡಚಣೆಯಿಂದ ನಿಂತಿದ್ದ ಕೆಲಸ ಪ್ರಾರಂಭ ಆಗಲಿದೆ
  • ನಿಮ್ಮ ಕೆಲಸಕ್ಕೆ ಅನುಕೂಲವಾಗುವ ಉಪಕರಣ ಖರೀದಿಸುವ ಸಾಧ್ಯತೆ
  • ಮರಗೆಲಸ ಮಾಡುವವರಿಗೆ ವಿಶೇಷ ದಿನ
  • ವಿಶ್ವಕರ್ಮ ಮುನಿಯ ಸ್ಮರಣೆ ಮಾಡಿ 

ವೃಷಭ

RASHI_BHAVISHA_VRSHABA

  • ನಿಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ
  • ಸಹೋದರ ಸಂಬಂಧ ಗಟ್ಟಿಯಾಗುವ ಸಾಧ್ಯತೆ
  • ಭಾವನಾತ್ಮಕ ನಿರ್ಧಾರಗಳಿಂದ ತೊಂದರೆಗೆ ಸಿಲುಕುತ್ತೀರಿ ಎಚ್ಚರಿಕೆ ಇರಲಿ
  • ಅನಾಥ ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತಿಸಿ ಕೈಲಾದ ಸಹಾಯ ಮಾಡಿ
  • ಮಕ್ಕಳಿಗಾಗಿ ಹಣ ಖರ್ಚು ಮಾಡಿ ತೃಪ್ತಿ ಪಡುವ ದಿನ
  • ಕುಲದೇವತಾರಾಧನೆ ಮಾಡಿ
Advertisment

ಮಿಥುನ

RASHI_BHAVISHA_MITHUNA

  • ಸ್ಥಿರಾಸ್ತಿಗೆ ಸಂಬಂಧಿಸಿದ ಮಾತಿನ ಇತ್ಯರ್ಥವಾಗಬಹುದು
  • ಮನೆಯಲ್ಲಿ ಶುಭ ಕೆಲಸದ ಪ್ರಸ್ತಾಪ ಸಾಧ್ಯತೆ
  • ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಸಾಧನೆಗೆ ಗೌರವ ಸಿಗುತ್ತದೆ
  • ಬ್ಯಾಂಕ್ ಅಥವಾ ಫೈನಾನ್ಸ್​ನಲ್ಲಿರುವ ಉದ್ಯೋಗಿಗಳಿಗೆ ಶುಭ ಸುದ್ದಿ
  • ಇಂದು ಪ್ರಾಮಾಣಿಕತೆಗೆ ನಿಜವಾದ ಬೆಲೆ ತಿಳಿಯುವ ದಿನ
  • ಶನೇಶ್ವರನ ದೇವಾಲಯಕ್ಕೆ ಎಳ್ಳೆಣ್ಣೆ ದಾನ ಮಾಡಿ 

ಕಟಕ

RASHI_BHAVISHA_KATAKA

  • ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಚಿಕ್ಕಮಕ್ಕಳಿಗೆ ಬೆನ್ನಿನ ಭಾಗದಲ್ಲಿ ನೋವು ಸಾಧ್ಯತೆ 
  • ಮಕ್ಕಳು ಮೊಮ್ಮಕ್ಕಳೊಂದಿಗೆ ವಿಶೇಷವಾದ ಸಮಯ ಕಳೆಯುತ್ತೀರಿ
  • ನಿಮ್ಮ ಕುಟುಂಬದವರು ಅಥವಾ ಸ್ನೇಹಿತರು ನಿಮಗೆ ಆಶ್ಚರ್ಯ ಉಂಟುಮಾಡಬಹುದು
  • ಅಲರ್ಜಿ ತೊಂದರೆ ಕಾಡಬಹುದು ಜಾಗ್ರತೆ ವಹಿಸಿ
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಸಿಂಹ 

RASHI_BHAVISHA_SIMHA

  • ಕೋರ್ಟು ಕಚೇರಿಗಳಲ್ಲಿ ಕೇಸ್​ಗಳಿರುವವರಿಗೆ ಶುಭದಿನ
  • ಸರ್ಕಾರದಿಂದ ಬರಬೇಕಾದ ಹಣ ಇಂದು ಬರಬಹುದು
  • ಇಂದು ನಿಮ್ಮ ಕಾರ್ಯ ಮುಗಿದ ತಕ್ಷಣ ಮನೆ ಸೇರಿದರೆ ಒಳ್ಳೆಯದು
  • ಅನಿರೀಕ್ಷಿತವಾಗಿ ಹಣ ಖರ್ಚಾಗುವ ಸಾಧ್ಯತೆ
  • ನಿಮ್ಮ ದಾಖಲಾತಿಗಳಿಗೆ ಸಂಬಂಧಿಸಿದ ಪತ್ರಗಳನ್ನು ಬೇರೆಯವರಿಗೆ ಕೊಡಬೇಡಿ
  • ಗುರು ರಾಘವೇಂದ್ರರನ್ನು ಸ್ಮರಿಸಿ
Advertisment

ಕನ್ಯಾ

RASHI_BHAVISHA_KANYA

  • ಇಂದು ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮ ದಿನ
  • ಪಾಲುದಾರರು ತಮ್ಮ ಕಷ್ಟದಿಂದ ಹೊರಬರುತ್ತೀರಿ
  • ಆಸ್ತಿಯ ವಿಚಾರದಲ್ಲಿ ನಿಮಗೆ ಜಯವಿದೆ
  • ಕಠಿಣ ಪರಿಶ್ರಮದ ಕಡೆಗೆ ಮನಸ್ಸು ಬದಲಾವಣೆ
  • ಮಧ್ಯಾಹ್ನದ ವೇಳೆಗೆ ಸಿಹಿ ಸುದ್ದಿ ಮನಸ್ಸಿಗೆ ಸಮಾಧಾನ
  • ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆ ಆಗುವ ಸಾಧ್ಯತೆ
  • ದೇವಿಯನ್ನು ಆರಾಧನೆ ಮಾಡಿ

ತುಲಾ

RASHI_BHAVISHA_TULA

  • ಆರೋಗ್ಯದ ಸಮಸ್ಯೆ ಅಧಿಕ ಖರ್ಚು ಆಲಸ್ಯ ಕಾಡುವ ಸಾಧ್ಯತೆ
  • ಇಂದು ನಿರಾಶಾದಾಯಕ ದಿನ
  • ಗಂಡ ಹೆಂಡತಿ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆ ಇದೆ
  • ಈ ರಾಶಿಯ ಮಕ್ಕಳಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
  • ಒತ್ತಡದಿಂದ ಮಾನಸಿಕ-ದೈಹಿಕ ತೊಂದರೆ ಉಂಟಾಗಬಹುದು
  • ಮನೆಯಲ್ಲಿ ಕೂತು ಕೆಲಸ ಮಾಡುವವರಿಗೆ ತೊಂದರೆಯಾಗಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ನಿಮ್ಮ ಕೈ ಕೆಳಗೆ ಕೆಲಸ ನಿರ್ವಹಿಸುವವರೂ ನಿಮ್ಮಿಂದ ಸಂತೋಷವಾಗಿರುತ್ತಾರೆ
  • ನಿಂತಿದ್ದ ಕೆಲಸಗಳಿಗೆ ಮರು ಚಾಲನೆ ಸಿಗಬಹುದು
  • ಮಾನಸಿಕ ಒತ್ತಡ ಆರೋಗ್ಯ ಸಮಸ್ಯೆ ಕಾಡಬಹುದು
  • ದೊಡ್ಡ ದೊಡ್ಡ ಕೆಲಸಗಳಿಂದ ಆಕರ್ಷಿತರಾಗುವ ಸಾಧ್ಯತೆ
  • ಹೊಸ ಜೀವನದ ಅನುಭವ ಮನೆಗೆ ಅತಿಥಿಗಳ ಆಗಮನ ಸಾಧ್ಯತೆ
  • ನಿಮ್ಮ ತೊಂದರೆಗಳೆಲ್ಲಾ ದೂರವಾಗುತ್ತವೆ
  • ಶ್ರೀರಾಮನ ಆರಾಧನೆ ಮಾಡಿ
Advertisment

ಧನುಸ್ಸು

RASHI_BHAVISHA_DHANASU

  • ಸಹೋದ್ಯೋಗಿಗಳ ವರ್ತನೆಯಿಂದ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ
  • ಇಂದು ಕುಟುಂಬದಿಂದ ನಿಮ್ಮಗೆ ಬೆಂಬಲ ಸಿಗುತ್ತದೆ
  •  ಪಿತ್ರಾರ್ಜಿತ ಆಸ್ತಿ ಹಣದಿಂದ ಅನುಕೂಲ ಸಾಧ್ಯತೆ 
  • ಉದ್ಯೋಗದಲ್ಲಿ  ಸ್ಥಳ ಬದಲಾವಣೆಯಾಗುವ ಸಾಧ್ಯತೆ
  • ನಿಮ್ಮ ಧೈರ್ಯದ ಮಾತುಗಳಿಂದ ಅನುಕೂಲ ಆಗುತ್ತದೆ
  •  ಕುಲದೇವತಾ ಆರಾಧನೆ ಮಾಡಿ

ಮಕರ

RASHI_BHAVISHA_MAKARA

  • ಪ್ರೇಮಿಯೊಂದಿಗೆ ಸಮಯ ಕಳೆಯುತ್ತೀರಿ
  • ಸಮಾಜದ ಗಣ್ಯರ ಹೆಸರಿನೊಂದಿಗೆ ನಿಮ್ಮ ಹೆಸರು ಬರುತ್ತದೆ
  • ವಾಹನದಿಂದ ನಷ್ಟ ಸಾಧ್ಯತೆ ಎಚ್ಚರಿಕೆ ಇರಲಿ
  • ಮಾಡಬೇಕಾದ ಕೆಲಸದಿಂದ ದೂರ ಉಳಿದು ನಷ್ಟವಾಗುವ ಸಾಧ್ಯತೆ
  • ನಿಮಗಿರುವ ಪ್ರತಿಭೆ ಅನಾವರಣ ಮಾಡಲು ಉತ್ತಮ ದಿನ
  •  ದುರ್ಗಾ ಪರಮೇಶ್ವರಿಯನ್ನು ಆರಾಧನೆ ಮಾಡಿ

ಕುಂಭ

RASHI_BHAVISHA_KUMBHA

  • ನಿಮ್ಮ ಯೋಚನೆ ಯೋಜನೆಗಳನ್ನು ರಹಸ್ಯವಾಗಿಡಿ
  • ಮನೆಯಲ್ಲಿ ಅವಿವಾಹಿತರಿದ್ದರೆ ಪ್ರಯತ್ನಿಸಿ ಶುಭ ಫಲವಿದೆ
  • ಮನೆಯವರಿಗೆಲ್ಲಾ ಆತಂಕ ಸೃಷ್ಟಿಮಾಡಿ ಅವರ ಕೋಪಕ್ಕೆ ಒಳಗಾಗಬಹುದು
  • ಇಂದು ತಾಳ್ಮೆಯಿಂದ ಇರುವುದು ಒಳ್ಳೆಯದು
  • ನರ ಮೂಳೆಗೆ ಸಂಬಂಧಿಸಿದ ತೊಂದರೆ ಕಾಡಬಹುದು
  • ಗಣಪತಿ ಪ್ರಾರ್ಥನೆ ಮಾಡಿ
Advertisment

ಮೀನ

RASHI_BHAVISHA_MEENA

  • ಸಗಟು ವ್ಯಾಪಾರಿಗಳಿಗೆ ಶುಭಫಲ
  • ಭೂಮಿ ಅಥವಾ ಮನೆಯನ್ನು ಖರೀದಿ ಮಾಡುತ್ತೀರಿ
  • ಕೆಲಸದಲ್ಲಿ ವಿಶೇಷವಾದ ಆಸಕ್ತಿ ತೋರಿ ಅನುಕೂಲ ಪಡೆಯುತ್ತೀರಿ
  • ವಿದ್ಯಾರ್ಥಿಗಳಿಗೆ ಅಪರೂಪದ ಯಶಸ್ಸು
  • ನಿಮ್ಮ ಆತ್ಮೀಯರ ಜೊತೆ ಹೆಚ್ಚು ಕಾಲ ಕಳೆಯುತ್ತೀರಿ
  • ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗುವ ಸಾಧ್ಯತೆ
  • ಸೂರ್ಯನಾರಯಣನನ್ನು ಆರಾಧನೆ ಮಾಡಿ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

News First Web News First Kannada
Advertisment
Advertisment
Advertisment