ಅವಿವಾಹಿತರಿಗೆ ಭರ್ಜರಿ ಗುಡ್​ನ್ಯೂಸ್.. ಏನು ಹೇಳ್ತಿದೆ ನಿಮ್ಮ ಭವಿಷ್ಯ..?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ. ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

author-image
Ganesh Kerekuli
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಧಾರ್ಮಿಕ ಆಧ್ಯಾತ್ಮ ವಿಚಾರಗಳಲ್ಲಿ ತೊಡಗಿಸಿಕೊಂಡವರಿಗೆ ಶುಭ
  • ಈ ದಿನ ಆರ್ಥಿಕವಾಗಿ ಕೊರತೆ ಇರುವುದಿಲ್ಲ
  • ಉತ್ತಮವಾದ ಶಿಸ್ತನ್ನು ಬೆಳೆಸಿಕೊಂಡರೆ ಅವಕಾಶಗಳು ಲಭಿಸುತ್ತದೆ
  • ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವವರಿಗೆ ಹಿನ್ನಡೆ ಸಾಧ್ಯತೆ
  • ​ಏಜೆಂಟ್ಸ್​ಗಳಿಗೆ ಕಮೀಷನ್ ಮೂಲಕ ಲಾಭವಾಗುವ ಸಾಧ್ಯತೆಗಳಿವೆ 
  • ರಿಯಲ್​ ಎಸ್ಟೇಟ್ ಭೂ ವ್ಯವಹಾರ ಮಾಡುವವರಿಗೆ ಈ ದಿನ ಲಾಭ
  • ಕಳ್ಳತನದ ಆಪಾದನೆ ನಿಮ್ಮ ಮೇಲೆ ಬರುವ ಸಾಧ್ಯತೆಗಳಿವೆ ಎಚ್ಚರ
  • ರಾಜಕೀಯ ವ್ಯಕ್ತಿಗಳು ಈ ದಿನ ಗೌಪ್ಯವಾದ ಸ್ಥಳದಲ್ಲಿ ಕಳೆಯುವ ಯೋಗವಿದೆ
  •  ಬೆಟ್ಟದ ಮೇಲಿರುವ ದೇವಿಗೆ ಕಾಲ್ನಡಿಗೆಯಲ್ಲಿ ಹೋಗಿ ಸೇವೆ ಮಾಡಿ 

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಅನಿರೀಕ್ಷಿತ ಧನಲಾಭ ಉಂಟಾಗಬಹುದು
  • ವಿವಾಹದ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಚ್ಚರಿಕೆವಹಿಸಿ
  • ಕಠಿಣ ಶ್ರಮವನ್ನು ಪಡಬೇಕಾಗುವಂತಹ ದಿನ
  • ಜನರ ಮಧ್ಯದಲ್ಲಿ ಸಮಾಜಸೇವೆ ಮಾಡುವ ಯೋಗವು ಒದಗಿಬರುವ ದಿನ
  • ಕಾರ್ಮಿಕ ವರ್ಗದವರಿಗೆ ಮೋಸವಾಗುವ ಸಾಧ್ಯತೆಗಳಿವೆ ಎಚ್ಚರಿಕೆ 
  • ನಾಯಕತ್ವದ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿವೆ
  • ವೈಯಕ್ತಿಕ ವಿಚಾರ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗಬಹುದು 
  • ಕಲಾವಿದರಿಗೆ ಉತ್ತಮ ಪುರಸ್ಕಾರ ಸಿಗುವ ದಿನ
  • ಇಂದು ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ
  • ರೇಣುಕಾ ದೇವಿಯನ್ನು ಆರಾಧಿಸಿ

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕಟ್ಟಡ ಮಾಲೀಕರು ಕಾರ್ಮಿಕರು ಎಚ್ಚರಿಕೆಯಿಂದಿರಬೇಕು
  • ಜವಾಬ್ದಾರಿಗಳನ್ನು ತುಂಬಾ ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ 
  • ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಿ
  • ಚಲನಚಿತ್ರ ನಿರ್ಮಾಪಕರಿಗೆ ಲಾಭವಿದೆ ಅಷ್ಟೇ ಅವಮಾನವೂ ಅಗತ್ತೆ ಜಾಗ್ರತೆ
  • ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಶುಭಫಲ
  • ಈ ರಾಶಿಯವರು ಮುದ್ರಣಾ ಕ್ಷೇತ್ರದಲ್ಲಿದ್ದರೆ ನಷ್ಟವನ್ನು ಅನುಭವಿಸುವ ದಿನವಾಗಿದೆ 
  • ತೈಲ ವ್ಯಾಪಾರಿಗಳಿಗೆ ಶುಭಫಲ, ಧನಲಾಭವೂ ಇದೆ
  • ಕೈಗಾರಿಕೆ ಹಾಗೂ ಕಾರ್ಖಾನೆಗಳಲ್ಲಿ ಬೆಂಕಿಯ ಅವಘಡ ಸಂಭವಿಸಬಹುದು ಜಾಗ್ರತೆವಹಿಸಿ
  • ಅಗ್ನಿದುರ್ಗೆಯನ್ನು ಆರಾಧಿಸಿ 

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ವಂತ ವ್ಯವಹಾರ ಮಾಡುವವರಿಗೆ ತುಂಬಾ ಅನುಕೂಲವಾಗುವ ದಿನ
  • ಬಾ ಶ್ರಮ ಪಡಬೇಕಾದ ದಿನವಾಗಿರುತ್ತದೆ
  • ಇಂದು ಮನೆ ಬದಲಾಯಿಸುವವರಿಗೆ ಸರಿಯಾದ ಮಾರ್ಗದರ್ಶನ ಸಿಗಲಿದೆ
  • ಧಾರ್ಮಿಕ ವೃತ್ತಿ ಪುರೋಹಿತರು ಅರ್ಚಕರಿಗೆ ಧನಲಾಭವಾಗುವ ದಿನವಾಗಿದೆ
  • ಸರ್ಕಾರಿ ನೌಕರರಿಗೆ ಒತ್ತಡ ಹೆಚ್ಚಾಗುವ ದಿನ
  • ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿರುವವರಿಗೆ ವಿಶೇಷ ಪುರಸ್ಕಾರ ಗೌರವ ಸಿಗುತ್ತದೆ
  • ಇಂದು ಹಿತಶತ್ರುಗಳ ಕಾಟ ಹೆಚ್ಚಾಗಬಹುದು
  • ಸುದರ್ಶನ ಹೋಮ ಮಾಡಿಸಿ

ಸಿಂಹ 

ಪ್ರೇಮಿಗಳಿಗೆ ಶುಭ, ಮನೆ, ಜಮೀನು ಮಾರುವವರಿಗೆ ಲಾಭ ಸಿಗುವ ದಿನ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಖರ್ಚಿಗೆ ಹೆಚ್ಚಿನ ಕಡಿವಾಣ ಹಾಕಬೇಕು
  • ಸಾಮಾಜಿಕ ದೃಷ್ಟಿಯಲ್ಲಿ ನಿಮಗೆ ಉತ್ತಮವಾದ ಸ್ಥಾನ ಸಿಗಲಿದೆ
  • ನಿರೀಕ್ಷಿತ ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚಾಗಿದೆ
  • ಸಾಮಾಜಿಕವಾಗಿ ಪ್ರೋತ್ಸಾಹ ಸಿಗಲಿದೆ
  • ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
  • ವಿರೋಧಿಗಳಿಂದ ಕೆಲವು ಕೆಲಸಕ್ಕೆ ಅಡ್ಡಿಯಾಗಬಹುದು
  • ಬಹಳ ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ 
  • ಯಾವುದೇ ಗಲಾಟೆಗೆ ಅವಕಾಶ ಮಾಡಿಕೊಡಬೇಡಿ
  • ತೆಂಗು ಬೆಳೆಗಾರರಿಗೆ ಕಾರ್ಮಿಕರಿಗೆ ಲಾಭವಾಗುವ ದಿನ
  • ಕಾಶಿ ಬಿಂದುಮಾಧವ ದೇವರನ್ನು ಪೂಜಿಸಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಸರ್ಕಾರಿ ಕೆಲಸಗಳಲ್ಲಿ ಹಿನ್ನೆಡೆ ಉಂಟಾಗಬಹುದು
  • ತೈಲ ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ
  • ಹಳೆಯ ನಿಯಮಗಳಿಗೆ ಅನುಸಾರವಾಗಿ ನಿಮ್ಮ ವ್ಯಾಪಾರದಲ್ಲಿ ಮುಂದುವರೆಯಬಹುದು
  • ಹೊಸ ನಿಯಮಗಳನ್ನು ಅನ್ವಯಿಸದೆ ವ್ಯಾಪಾರ ಮಾಡುತ್ತಿದ್ದರೆ ದಂಡ ಕಟ್ಟಬೇಕಾಗಬಹುದು ಜಾಗ್ರತೆ  
  • ಲೇವಾದೇವಿ ವ್ಯವಹಾರ ಮಾಡುವವರಿಗೆ ವಿಶೇಷ ಲಾಭವಿದೆ
  • ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಗಮನ ಕೊಡಿ
  • ನಿಮ್ಮ ಉದ್ಯೋಗ ಬದಲಾವಣೆಯ ವಿಚಾರವನ್ನು ಮೇಲಾಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ  
  • ಚಂಡಿಕಾ ಪಾರಾಯಣ ಮಾಡಿಸಿ  

ತುಲಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಈ ರಾಶಿಯ ವಿದ್ಯಾರ್ಥಿಗಳಿಗೆ ಅಶುಭ 
  • ನೌಕರರಿಗೆ ಶುಭಫಲಗಳು ಹೆಚ್ಚಾಗಿರುತ್ತದೆ
  • ನೌಕರಿಯಲ್ಲಿರುವ ಸ್ತ್ರೀಯರಿಗೆ ವಿಶೇಷವಾದ ಸ್ಥಾನಮಾನ ಲಾಭಗಳು ದೊರೆಯಲಿದೆ
  • ಕುಟುಂಬದಲ್ಲೂ ಪ್ರಗತಿ ಕಾಣುತ್ತೀರಿ
  • ವಿಶೇಷ ವ್ಯಕ್ತಿಯ ಸಹಕಾರ ದೊರಕುವ ದಿವಸ 
  • ಆತ್ಮೀಯರಿಂದ ಸುಖ-ಸಂತೋಷ ಸಿಗುವ ದಿನ
  • ಹಿನ್ನಡೆಯಾದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಮಗ್ನರಾದರೆ ಒಳಿತು
  • ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುವ ಚಾಲಕರಿಗೆ ವಿಶೇಷವಾದ ಲಾಭವಿದೆ 
  • ಲಲಿತ ಪರಮೇಶ್ವರಿಯನ್ನು ಪ್ರಾರ್ಥಿಸಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಾನಸಿಕವಾಗಿ ದೈಹಿಕವಾಗಿ ಹೆಚ್ಚು ಸಂತೋಷದಿಂದಿರುತ್ತೀರಿ
  • ಅಧಿಕಾರ ಪ್ರೋತ್ಸಾಹ ದೊರಕುವುದರಿಂದ ಮನಸ್ಸಿಗೆ ಹೆಚ್ಚು ಆನಂದ ಉಂಟಾಗುವ ದಿನ
  • ನೌಕರಿಯಲ್ಲಿ ಉತ್ತಮ ಪದವಿಯನ್ನು ಪಡೆಯುತ್ತೀರಿ
  • ಬರಹಗಾರರಿಗೆ ಸಂಶೋಧಕರಿಗೆ ಸಿಹಿ ಸುದ್ದಿ ಸಿಗುವ ದಿನ
  • ಚಿತ್ರೀಕರಣ ಮಾಡುವ ವ್ಯಕ್ತಿಗಳಿಗೆ ಲಾಭವಿದೆ 
  • ಉಪಕರಣಗಳು ನಷ್ಟವಾಗುವುದರಿಂದ ನಷ್ಟವನ್ನು ತುಂಬಬೇಕಾಗಬಹುದು
  • ಸರ್ಕಾರಿ ಗುತ್ತಿಗೆ ಕೆಲಸಗಳು ಹೇರಳವಾಗಿ ಬರಬಹುದು
  • ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಹಿನ್ನಡೆ ಉಂಟಾಗಬಹುದು
  • ಕುಲದೇವತಾ ಹೋಮವನ್ನು ಮಾಡಿಸಿ

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬ್ಯಾಂಕ್​ ಫೈನಾನ್ಸ್ ಕೆಲಸ ಮಾಡುವವರಿಗೆ ತುಂಬಾ ಕಿರಿಕಿರಿ ಉಂಟಾಗುವ ದಿನ
  • ಹಣದ ಮತ್ತು ವ್ಯಾವಹಾರಿಕ ಲೆಕ್ಕಾಚಾರವನ್ನು ಪರಿಪೂರ್ಣವಾಗಿ ಮುಗಿಸದೆ ಒದ್ದಾಡಬೇಕಾಗುವ ಪರಿಸ್ಥಿತಿ
  • ಆದರೆ ಕೆಲಸವನ್ನು ಮಾತ್ರ ನಾಳೆಗೆ ಮುಂದೂಡಬೇಡಿ
  • ಇಂದು ಪರೀಕ್ಷಾ ಸ್ಪರ್ಧಿಗಳಿಗೆ ಶುಭದಿನ
  • ದೂರದೂರಿಗೆ ಪ್ರವಾಸ ಹೋಗಲು ಇಂದು ಪ್ಲಾನ್​ ಮಾಡುತ್ತೀರಿ
  • ಎಲೆಕ್ಟ್ರಿಕಲ್​ ಮತ್ತು ವಾಹನ ರಿಪೇರಿ ಮಾಡುವವರಿಗೆ ಧನಲಾಭ ಸಾಧ್ಯತೆ
  • ಗುರುದತ್ತಾತ್ರೇಯರನ್ನು ಆರಾಧಿಸಿ 

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಒಡಹುಟ್ಟಿದವರಿಗೆ ಸಹಾಯವನ್ನು ಮಾಡುವ ಯೋಗ ನಿಮ್ಮದಾಗುತ್ತದೆ
  • ಹಣ ನಿರ್ವಹಣೆಯನ್ನು ನೀವು ಚೆನ್ನಾಗಿ ನಿರ್ವಹಿಸುತ್ತೀರಿ ಶುಭಫಲ
  • ಇಂದು ಅವಿವಾಹಿತರಿಗೆ ಶುಭ ಸುದ್ದಿ
  • ಪಶುಸಂಗೋಪನೆ ಮಾಡುವವರಿಗೆ ಒಳ್ಳೆಯ ದಿನ
  • ಹಣವನ್ನು ಮಿತವಾಗಿ ಖರ್ಚು ಮಾಡಿ
  • ಭೂ ವ್ಯವಹಾರದಲ್ಲಿ ಲಾಭ ಕಾಣುತ್ತೀರಿ
  • ಹಳೆಯ ಹೂಡಿಕೆಯ ಬಗ್ಗೆ ಹೆಚ್ಚು ಚಿಂತನೆ ಮಾಡಿದರೆ ಅನುಕೂಲವಾಗುತ್ತದೆ
  • ಕಾರ್ಯದೊತ್ತಡ ಬದಿಗಿಟ್ಟು ಈ ದಿನ ಆನಂದವಾಗಿರುತ್ತೀರಿ
  • ತಾಯಿಗೆ ಅನಾರೋಗ್ಯ ಕಾಡಬಹುದು ಎಚ್ಚರಿಕೆವಹಿಸಿ
  • ಗಾಯಿತ್ರಿದೇವಿಯನ್ನು ಆರಾಧಿಸಿ

ಕುಂಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆರ್ಥಿಕವಾದ ಮುಗ್ಗಟ್ಟು ತುಂಬಾ ಕಾಡಬಹುದು
  • ಬರಬೇಕಾದ ಹಣ ಸಕಾಲದಲ್ಲಿ ಕೈ ಸೇರದೆ ತೊಂದರೆಯಾಗಬಹುದು
  • ಅನಿಲ ವ್ಯಾಪಾರಿಗಳಿಗೆ​ ಸ್ವಲ್ಪ ನಷ್ಟ ಉಂಟಾಗಬಹುದು 
  • ಮೇಲಾಧಿಕಾರಿಗಳಿಂದ ಸಿಗುವ ಮಾರ್ಗದರ್ಶನದಿಂದ ನಷ್ಟವನ್ನು ಭರಿಸಬಹುದು
  • ಈ ದಿನ ಮನಸ್ಸನ್ನು ಸ್ಥಿಮಿತವಾಗಿಟ್ಟುಕೊಳ್ಳಿ 
  • ಮುಂದಿನ ದಿನಗಳಲ್ಲಿ ಲಾಭದ ಸೂಚನೆಗಳಿರುತ್ತವೆ 
  • ಇವತ್ತಿನ ನಷ್ಟ ಮುಂದೆ  ವ್ಯಾವಹಾರಿಕವಾಗಿ ಅನುಕೂಲವಾಗಲಿದೆ
  • ಇಂದು ಕೆಲಸದಲ್ಲಿ ವ್ಯತ್ಯಯವನ್ನು ಮಾಡಿಕೊಳ್ಳುತ್ತೀರಿ
  • ಕೆಲಸದ ಬದಲಾವಣೆ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ಕೈಬಿಡಿ
  • ಶನಿಶಾಂತಿಯನ್ನು ಮಾಡಿಸಿ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಆತ್ಮವಿಶ್ವಾಸದ ಕೊರತೆ ಹೆಚ್ಚಾಗಿ ಕಾಡಬಹುದು
  • ಅನುಮಾನಾಸ್ಪದ ಕೆಲಸಗಳನ್ನು ಮಾಡಬೇಡಿ ಶೋಭೆ ತರೋಲ್ಲ
  • ಕೃಷಿ ಕಾರ್ಮಿಕರಿಗೆ ಹೆಚ್ಚು ಆದಾಯ ಸಿಗುವ ದಿನವಾಗಿದೆ
  • ನೀವು ಮಾಡಬೇಕಾದ ಕೆಲಸಗಳನ್ನು ರಹಸ್ಯವಾಗಿಡಿ
  • ಮಾತು ಮಿತವಾಗಿದ್ದರೆ ತುಂಬಾ ಒಳ್ಳೆಯದು
  • ಕೂಲಿ ಕಾರ್ಮಿಕರಿಗೆ ಹೆಚ್ಚು ಸಂಬಳ ಸಿಗುವ ದಿನ
  • ಸಹೋದರ-ಸಹೋದರಿ ವರ್ಗದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ ಅನರ್ಥವಾಗುವ ಸಾಧ್ಯತೆ  
  • ಮನೋರಂಜನೆಗಾಗಿ ಹಣವ್ಯಯ ಮಾಡುವ ಸಾಧ್ಯತೆ 
  • ಮಧುಮತಿ ದೇವಿಯನ್ನು ಆರಾಧಿಸಿ

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment