/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೆಚ್ಚಿನ ವಿಚಾರ ಸಂಗ್ರಹಕ್ಕಾಗಿ ಅಧ್ಯಯನದ ಕಡೆಗೆ ಹೆಚ್ಚು ಗಮನ ಸಾಧ್ಯತೆ
- ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸುವುದರಿಂದ ನಷ್ಟವನ್ನು ಹೊಂದುತ್ತೀರಿ
- ನಿಮ್ಮ ಕರ್ತವ್ಯ ನಮ್ಮ ಧರ್ಮದ ಬಗ್ಗೆ ನ್ಯಾಯವನ್ನು ಒದಗಿಸುವ ನಡವಳಿಕೆ ಇರುತ್ತದೆ
- ಈ ನಷ್ಟದಿಂದ ನೀವು ದಂಡ ಕಟ್ಟಬೇಕಾಗಬಹುದು
- ನೀವು ಮಾಡಬೇಕಾದ ಕೆಲಸವನ್ನು ಬೇರೆಯವರಿಗೆ ವಹಿಸಬೇಡಿ
- ಮಾರುತಿಯನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ತಂದೆ ತಾಯಿ ಸಂತೋಷವಾಗಿದ್ದರೆ ನಿಮ್ಮ ಕಾರ್ಯ ಸದಾ ಯಶಸ್ಸಿನದಾಗಿರುತ್ತದೆ
- ನಿಮ್ಮ ಪ್ರಾಮಾಣಿಕ ಹಾಗೂ ಶಿಸ್ತುಬದ್ಧ ಕೆಲಸವನ್ನು ಗಮನಿಸಿ ಮೇಲಾಧಿಕಾರಿಗಳು ಹೆಚ್ಚಿನ
- ಜವಾಬ್ದಾರಿ ವಹಿಸಬಹುದು
- ಸಾಯಂಕಾಲದ ವೇಳೆಗೆ ಎದೆನೋವು ಕಾಣಿಸಿಕೊಳ್ಳಬಹುದು ಜಾಗ್ರತೆ ವಹಿಸಿ
- ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವಂತಹ ದಿನವಾಗಿದೆ
- ದಕ್ಷಿಣಾ ಮೂರ್ತಿಯನ್ನು ಪ್ರಾರ್ಥಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರಿಗೆ ಒಳ್ಳೆಯದನ್ನ ಮಾಡಬೇಕೆಂಬ ಮನಸ್ಥಿತಿ ಇರಲಿದೆ
- ಮನೆಯವರ ಒತ್ತಡಕ್ಕೆ ಮಣಿದು ಹೊಸ ವಾಹನ ಖರೀದಿಸಲು ಮುಂದಾಗಬಹುದು
- ಇಂದು ಹುಳಿ ಪದಾರ್ಥ ಸೇವಿಸಬೇಡಿ ಆರೋಗ್ಯದ ಕಡೆ ಗಮನವಿರಲಿ
- ಶಾಶ್ವತವಾದ ಗೌರವವನ್ನ ಅಂತಸತ್ವವನ್ನು ಹೆಚ್ಚಿಸುವ ಕೆಲಸ ಆಗಲಿದೆ
- ಮಕ್ಕಳಿಗೆ ಮೊದಲು ಯಾವುದು ಸರಿ ತಪ್ಪು ಅನ್ನೋ ತಿಳುವಳಿಕೆ ನೀಡಿ
- ಇದರಿಂದ ನಿಮಗೂ ಕುಟುಂಬದವರಿಗೂ ಸಂತೋಷವಾಗುವ ದಿನ
- ಶ್ರೀಲಕ್ಷ್ಮಿಯನ್ನು ಪ್ರಾರ್ಥಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಯಂಕಾಲದ ವೇಳೆಗೆ ಕಹಿಸುದ್ದಿಯಿಂದ ಮನಸ್ಸಿಗೆ ಬೇಸರವಾಗುವ ದಿನ
- ಕೈಯಲ್ಲಿ ಹೆಚ್ಚು ಹಣ ಓಡಾಡುವ ದಿನವಾಗಿದೆ
- ಇಂದು ರಾಜಕೀಯ ವ್ಯಕ್ತಿಗಳಿಗೆ ಶುಭದಿನ
- ಅವಿವಾಹಿತರಿಗೆ ನೀವು ಮದುವೆಯನ್ನು ಮಾಡಿಸುವ ಭರವಸೆಯನ್ನ ನೀಡುತ್ತೀರಿ
- ಕುಟುಂಬದವರಿಗೆ ಸಂಬಂಧಿಕರಿಗೆ ನಿಮ್ಮ ಜೊತೆ ಕೆಲಸ ಮಾಡುವವರಿಗೆ ಉಡುಗೊರೆ ನೀಡುತ್ತೀರಿ
- ಎಲ್ಲರನ್ನೂ ನೀವು ಸಂತೋಷ ಪಡಿಸುತ್ತೀರಿ ಅದಕ್ಕೆ ಉತ್ತಮವಾದ ಪ್ರಶಂಸೆ ಸಿಗುತ್ತದೆ
- ಇದೇ ಯೋಚನೆಯಲ್ಲಿ ದಿನಕಳೆಯುವ ಸ್ಥಿತಿ ಉಂಟಾಗಬಹುದು
- ಶ್ರೀಕೃಷ್ಣನನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಟ್ಟೆಗೆ ಸಂಬಂಧಪಟ್ಟ ಅನಾರೋಗ್ಯ ಈ ದಿನ ಹೆಚ್ಚಾಗಿ ಕಾಡಬಹುದು, ಗಮನಹರಿಸಿ
- ನಿಮಗೆ ನಂಬಿಕೆ ಇರುವ ವ್ಯಕ್ತಿಯೊಂದಿಗೆ ಮಾತ್ರ ವಿಷಯವನ್ನ ಚರ್ಚಿಸಿ
- ಕೆಲಸದ ಒತ್ತಡ ಮಾನಸಿಕ ಒತ್ತಡ ಹಾಗೂ ದೈಹಿಕ ತೊಂದರೆ ಕಾಡುವ ದಿನವಾಗಿದೆ
- ಇದರಿಂದ ಬೇರೆಯವರು ಉಪಯೋಗವನ್ನು ಪಡೆದುಕೊಳ್ಳುವ ಸಾಧ್ಯತೆ ಎಚ್ಚರವಹಿಸಿ
- ನಿಮ್ಮ ಯೋಜನೆಗಳಿಂದ ಬೇರೆಯವರಿಗೆ ಉಪಕಾರವಾದರೆ ನಿಮಗೆ ನಷ್ಟವಾಗುವ ಸಂಭವವಿದೆ
- ಸಾಯಿ ಬಾಬಾರನ್ನು ಪ್ರಾರ್ಥಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ರಾಶಿಯ ಸ್ತ್ರೀಯರು ಹೆಚ್ಚು ಹಣ ನೀಡಿ ದುಬಾರಿ ಪದಾರ್ಥಗಳನ್ನು ಖರೀದಿಸುವ ದಿನವಾಗಿದೆ
- ವ್ಯಾಪಾರ ವ್ಯವಹಾರಗಳಲ್ಲಿ ಹಣಕಾಸಿನ ವಿಚಾರದಲ್ಲಿ ಶುಭ ದಿನವಾಗಿದೆ
- ಅವಿವಾಹಿತರಿಗೆ ಇಂದು ಶುಭಸೂಚನೆ ಪ್ರಯತ್ನಿಸಿ
- ಮದುವೆ ವಿಚಾರದಿಂದ ನಿಮ್ಮ ಮನಸ್ಸಲ್ಲಿ ಗೊಂದಲಗಳು ಉಂಟಾಗುವ ದಿನ
- ವಿಶೇಷವಾಗಿ ಆಟೋ ಚಾಲಕರಿಗೆ ಶುಭದಿನ
- ಸ್ತ್ರೀಯರು ಚಾಲಕರಾಗಿದ್ದರೆ ಅವರಿಗೆ ವಿಶೇಷ ಗೌರವ ಸಿಗುವ ದಿನವಾಗಿದೆ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳಿಗೆ ತುಂಬಾ ಒತ್ತಡದ ದಿನವಾಗಿರುತ್ತದೆ
- ಈ ದಿನ ಮನಸ್ಸನ್ನು ಹಗುರ ಮಾಡಿಕೊಂಡರೆ ಒಳಿತು
- ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಿಂದ ಒತ್ತಡ ಆತಂಕ ನಿಮ್ಮನ್ನು ಕಾಡಬಹುದು
- ಇಂದು ನೀವು ನಿಮ್ಮ ಕೆಲಸದಲ್ಲಿ ಒಂಟಿಯಾಗಬಹುದು
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನವಾಗಿದೆ
- ಬಹಳ ದಿನದ ಆಸೆಯೊಂದು ಈ ದಿನ ನೆರವೇರುವ ಸಾಧ್ಯತೆ ಇದೆ
- ಧ್ಯಾನ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ದಿನ
- ಕಳಂಕರಹಿತವಾದ ಕೆಲಸಕ್ಕೆ ದೊಡ್ಡವರ ಮಾರ್ಗದರ್ಶನ ಪಡೆದುಕೊಳ್ಳುವುದರಿಂದ ಒಳಿತಾಗುತ್ತದೆ
- ಇಂದು ಆಭರಣಗಳ ಖರೀದಿಯಿಂದ ಕುಟುಂಬದವರು ಸಂತೋಷವಾಗಿರುತ್ತಾರೆ
- ಉತ್ತಮರಾದ ಸಾಧನೆ ಮಾಡಿರುವ ವ್ಯಕ್ತಿಗಳ ಸಂಪರ್ಕವಾಗುವ ದಿನವಾಗಿದೆ
- ಸಂಬಂಧಿಕರಲ್ಲಿ ಸೈದ್ಧಾಂತಿಕವಾದ ವಿಚಾರಕ್ಕೆ ನಿಷ್ಠೂರವನ್ನು ಮಾಡಿಕೊಳ್ಳಬೇಡಿ
- ಕುಲದೇವರನ್ನು ಸ್ಮರಿಸಿ
ಧನುಸ್
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಮನೆಯ ಸದಸ್ಯರ ಮೇಲೆ ಸ್ನೇಹಿತರು ಸಂಬಂಧಿಕರಿಂದ ಒಳ್ಳೆಯ ಅಭಿಪ್ರಾಯವಿರುವುದಿಲ್ಲ
- ಸಾಲದ ವಹಿವಾಟು ಈ ದಿನ ಬೇಡ
- ಚೀಟಿ ವ್ಯವಹಾರ ಮಾಡುವವರು ಜಾಗ್ರತೆವಹಿಸಿ
- ಈ ದಿನ ನೀವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದಕ್ಕೆ ಪ್ರಯತ್ನಿಸುತ್ತೀರಿ
- ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಿ
- ದೂಷಿಸುವರನ್ನ ಹೊಗಳುವುದರಿಂದ ಕುಟುಂಬ ಸದಸ್ಯರ ಕೆಂಗಣ್ಣಿಗೆ ಗುರಿಯಾಗುತ್ತೀರಿ
- ಶಿವನನ್ನು ಆರಾಧಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ಪರಸ್ಪರ ಜಗಳಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು
- ಕುಟುಂಬದವರು ಬೇರೆಯವರಿಂದ ನಿಮಗೆ ತಿಳುವಳಿಕೆ ಹೇಳಿಸಲು ಪ್ರಯತ್ನಿಸುತ್ತಾರೆ
- ಸಮಯದ ಬಗ್ಗೆ ತಾತ್ಸಾರ ಇರುವವರು ಅವಕಾಶವಂಚಿತರಾಗುವ ಸಾಧ್ಯತೆ ಇದೆ
- ವಿದ್ಯಾರ್ಥಿಗಳು ಓದುವ ಕಡೆ ಗಮನ ಹರಿಸಬೇಕು
- ಮನಸ್ಸು ಏಕಾಗ್ರತೆಯಿಂದ ಕೆಲಸ ಮಾಡಿದರೆ ಒಳಿತು
- ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರ ವರ್ತನೆಯಿಂದ ಮನಸ್ಸಿಗೆ ನೋವಾಗಬಹುದು
- ಈ ದಿನ ಸಮಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಿ
- ಸದ್ಗುರು ಶ್ರೀಧರ ಸ್ವಾಮಿಗಳನ್ನು ಪ್ರಾರ್ಥಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
- ಈ ದಿನ ನಿಮಗೆ ಸಮಾಧಾನ ಬೇಸರದಿಂದ ಕೂಡಿರುತ್ತದೆ
- ಕುಟುಂಬ ಸದಸ್ಯರ ಕಡೆ ಗಮನ ಕೊಡದೆ ಅವರ ಕೆಂಗಣ್ಣಿಗೆ ಗುರಿಯಾಗಬಹುದು
- ಅತಿಯಾದ ಕೆಲಸದ ಒತ್ತಡದಿಂದ ಆಯಾಸವಾಗಬಹುದು
- ಇಂದು ಬೇರೆಯವರ ಸಮಸ್ಯೆ ಪರಿಹರಿಸುವಲ್ಲಿ ಮಗ್ನರಾಗಿರುತ್ತೀರ
- ನಿಮ್ಮ ಕುಟುಂಬದ ಕಡೆ ಗಮನ ಕೊಡಿ
- ಮನೆಯಲ್ಲಿ ಶಿಸ್ತಿನ ವಾತಾವರಣವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ
- ಮನೆಯಲ್ಲಿ ಹೆಂಡತಿ ಮಕ್ಕಳು ದೂಷಣೆ ಮಾಡುವ ಸಾಧ್ಯತೆ ಇದೆ
- ಗಣಪತಿಯನ್ನು ಆರಾಧಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಒತ್ತಡವನ್ನು ಬೇರೆಯವರ ಮೇಲೆ ಹೇರಿ ಅಪಹಾಸ್ಯಕ್ಕೆ ಈಡಾಗಬಹುದು ಎಚ್ಚರ
- ಹೊರಗೆ ಸೇವಿಸಿದ ಆಹಾರದಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ
- ಮನೆಯಿಂದ ಹೊರಗೆ ಹೋದಾಗ ಆಹಾರ ಸೇವನೆ ಮಾಡುವುದು ಬೇಡ
- ಮಾನಸಿಕವಾಗಿ ವ್ಯತ್ಯಯಗಳು ಉಂಟಾಗುವ ದಿನವಾಗಿದೆ
- ಈ ದಿನ ಒಂದೇ ರೀತಿ ಇರಲು ಪ್ರಯತ್ನಿಸಿ
- ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ
- ಇಂದು ಹಣ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ
- ಆರೋಗ್ಯದ ಬಗ್ಗೆ ಅತಿ ಹೆಚ್ಚು ಜಾಗ್ರತೆವಹಿಸಿ
- ಈಶ್ವರನನ್ನು ಆರಾಧನೆ ಮಾಡಿ
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us