/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಪೂರ್ಣಿಮಾ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಆತ್ಮ ವಿಶ್ವಾಸ ಹೆಚ್ಚಿದರೆ ನಿಮ್ಮ ಗುರಿ ಮುಟ್ಟಬಹುದು
- ಒಬ್ಬರೆ ಇದ್ದು ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದನ್ನು ತಪ್ಪಿಸಿ
- ನಿಮಗೆ ಅಜೀರ್ಣ ಸಮಸ್ಯೆ ಕಾಡಬಹುದು
- ಇಂದು ನಿಮ್ಮ ಮನೆ ಮನ ಸಂತಸದಿಂದ ಇರುವುದಿಲ್ಲ
- ಹಳೆಯ ತಪ್ಪು ಪುನರಾವರ್ತನೆಯಾಗಬಹುದು
- ಓದು ಕೆಲಸ ಎರಡೂ ಇರುವವರಿಗೆ ಸವಾಲಿನ ದಿನ
- ಕುಲದೇವತಾ ಪ್ರಾರ್ಥನೆ ಮಾಡಿ
ವೃಷಭ
- ಪ್ರೇಮ ವಿಚಾರದಲ್ಲಿ ಸಮಾಧಾನವಿರಬಹುದು
- ಈ ದಿನ ಸಾಲದ ವಿಚಾರ ಬೇಡ
- ವಿನಾಕಾರಣ ತಿರುಗಾಟ ಮಾಡದಿದ್ದರೆ ಯಶಸ್ಸು ಸಿಗಲಿದೆ
- ಮನೆಯ ಅಗತ್ಯತೆಗಳನ್ನು ಗಮನಿಸಿ
- ವಿವಾಹ ವಿಚಾರ ಪ್ರಸ್ತಾಪಬೇಡ ನಿರಾಸೆಯಾಗಬಹುದು
- ಗೌರವ ಇರುವಲ್ಲಿ ಭಾಗಿಗಳಾಗಿ
- ಲಕ್ಷ್ಮೀನಾರಾಯಣರ ಅನುಗ್ರಹ ಪಡೆಯಿರಿ
ಮಿಥುನ
- ವ್ಯವಹಾರದಲ್ಲಿ ನಷ್ಟ ಅವಮಾನ ಆಗಬಹುದು
- ಆಸ್ತಿಯ ವಿಚಾರ ಮುಂದೆ ಮಾರಕವಾಗಲಿದೆ
- ದಾಂಪತ್ಯದಲ್ಲಿ ಬೇರೆಯವರ ಆಗಮನದಿಂದ ಬೇಸರ ಆಗಬಹುದು
- ಬಂಧುಗಳಿಂದಲೇ ನಿಮ್ಮ ವೃತ್ತಿಗೆ ಪೆಟ್ಟು ಬೀಳಬಹುದು
- ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಿ
- ಲಾಭ ಅಥವಾ ಹಣ ತಾತ್ಕಾಲಿಕವಾದದ್ದು
- ನಿಮ್ಮ ಹಿಂದಿನ ಪರಿಸ್ಥಿತಿಯನ್ನು ಜ್ಞಾಪಿಸಿಕೊಳ್ಳಿ
- ಕುಟುಂಬದ ಮೂಲ ದೇವರನ್ನು ಪ್ರಾರ್ಥಿಸಿ
ಕಟಕ
- ಕುಟುಂಬದ ಹೆಂಗಸರ ವಿಚಾರದಲ್ಲಿ ಬೇಜಾರು
- ಹಣದ ವಿಚಾರಕ್ಕೆ ತೊಂದರೆಯಾಗುವುದರಿಂದ ಬೇಸರ ಆಗಬಹುದು
- ಇಂದು ಆಲಸ್ಯ ದೂರಮಾಡಿಕೊಳ್ಳಿ
- ಕೆಲಸದಲ್ಲಿ ಉತ್ಸಾಹವಿಲ್ಲದೆ ಎಡವಟ್ಟು ಮಾಡಿಕೊಳ್ಳಬಹುದು
- ಮಧ್ಯಾಹ್ನದ ನಂತರ ದುಃಖ ಹೆಚ್ಚಾಗಲಿದೆ
- ನಿಮ್ಮ ಆರೋಗ್ಯ ಸುಧಾರಿಸುತ್ತದೆ
- ಕುಬೇರ ಲಕ್ಷ್ಮೀಯನ್ನು ಅರ್ಚಿಸಿ
ಸಿಂಹ
- ನಿಮ್ಮ ಪರಿಚಯ ಬಂಧುತ್ವ ಎಲ್ಲಾ ವ್ಯರ್ಥವಾಗಬಹುದು
- ಅನಗತ್ಯ ಕೆಲಸಗಳಿಂದ ದೂರವಿರಿ
- ಈ ದಿನ ತುಂಬಾ ಖರ್ಚು ಮಾಡುತ್ತೀರಿ
- ನಿಮ್ಮ ಮಾತಿನಿಂದ ತೊಂದರೆಯಾಗಬಹುದು
- ಸಂಜೆಯ ಹೊತ್ತಿಗೆ ಬೇಸರದಿಂದ ಒಂಟಿತನ ಕಾಡಲಿದೆ
- ಕುಟುಂಬದ ಸದಸ್ಯರು ಆತಂಕದಲ್ಲಿರುತ್ತಾರೆ
- ನಿಮಗೆ ಯಾರ ಸಹಾಯವೂ ದೊರೆಯುವುದಿಲ್ಲ
- ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನೀವು ನಂಬಿದವರು ಸಹಾಯ ಮಾಡದೆ ಇರಬಹುದು
- ಬೇರೆಯವರ ಹಿತವನ್ನೇ ಬಯಸುತ್ತೀರಿ ಆದರೆ ಅವರಿಗೆ ಬೆಲೆ ತಿಳಿಯುವುದಿಲ್ಲ
- ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ
- ಉತ್ತಮ ಹೆಸರುಗಳಿಸಲು ಅವಕಾಶ ತಾನಾಗಿಯೇ ಬರುತ್ತದೆ
- ಶಿಸ್ತು ಬದ್ದವಾದ ಜೀವನ ಸಮಾಜದ ಹಿತ ನಿಮ್ಮಿಂದ ಆಗಬಹುದು
- ನಿಮ್ಮ ಶ್ರಮ ಸಾರ್ಥಕವಾದ ಭಾವವಿರುತ್ತದೆ
- ನವಗ್ರಹರನ್ನು ಆರಾಧಿಸಿ
ತುಲಾ
- ನಿಮಗೆ ಎಲ್ಲವೂ ಇರಲಿದೆ ಆದರೂ ನರಳುತ್ತೀರಿ
- ಬಂಧುಗಳಲ್ಲಿ ಅವಮಾನ ಆಗಬಹುದು
- ಸ್ವಭಾವ, ನಡವಳಿಕೆ ಬದಲು ಮಾಡಿಕೊಳ್ಳಲು ಅವಕಾಶವಿದೆ
- ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಒದಗಿ ಬರಲಿದೆ
- ನಿಮ್ಮ ತಿರುಗಾಟ ಅಲಂಕಾರ ಇತ್ಯಾದಿಗಳಿಗೆ ಕಡಿವಾಣವಿರಬೇಕು
- ದುಡ್ಡಿನ ಚಿಂತೆ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು
- ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ಸ್ವಾರ್ಥಕ್ಕಾಗಿ ಬೇರೆಯವರನ್ನು ದೂಷಿಸಬಾರದು
- ಸ್ನೇಹಿತರ ಮಧ್ಯೆ ಜಗಳ ಸಂಭವ
- ಸಾಯಂಕಾಲದ ಹೊತ್ತಿಗೆ ತಾಯಿಯಿಂದ ಸಮಾಧಾನ ಗೆಲವು ಸಿಗಲಿದೆ
- ವಿದ್ಯಾಭ್ಯಾಸದ ವಿಚಾರದಲ್ಲಿ ಮುನ್ನಡೆ
- ನಿಮ್ಮ ಸಮಸ್ಯೆಯನ್ನು ಸ್ನೇಹಿತರು ಬಂಧುಗಳಲ್ಲಿ ಹೇಳಿಕೊಳ್ಳಿ
- ಮಾನಸಿಕ ನೋವಿನಿಂದ ಬಳಲುತ್ತೀರಿ
- ತಾಯಿಯ ಪ್ರೀತಿಗೆ ಪಾತ್ರರಾಗಿರಿ
ಧನುಸ್ಸು
- ಹೊಸ ವಾಹನ ಖರೀದಿ ಸಾಧ್ಯತೆ
- ಭೂಮಿ ಖರೀದಿ ಮಾಡುತ್ತೀರಿ
- ಯಶಸ್ಸಿನ ಬಯಕೆ ಹಣ ಹೂಡಿಕೆಯ ಚಿಂತನೆ ಮಾಡುತ್ತೀರಿ
- ವೃತ್ತಿಯಲ್ಲಿ ದ್ವೇಷ ಸಾಧಿಸುತ್ತೀರಿ
- ಮಧ್ಯಾಹ್ನದ ನಂತರ ನಿಮ್ಮ ಸಮಯ ಚೆನ್ನಾಗಿದೆ
- ಆಹಾರದಿಂದ ಸಮಸ್ಯೆಯಾಗಬಹುದು
- ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ
ಮಕರ
- ನಂಬಿಕೆ ದ್ರೋಹಕ್ಕೆ ಪಾತ್ರರಾಗಬಹುದು
- ವಿದೇಶ ಪ್ರಯಾಣದ ವಿಚಾರದಲ್ಲಿ ಗೊಂದಲ
- ಪ್ರೀತಿಸಿದವರಿಂದ ವಂಚನೆಯ ಸೂಚನೆ
- ಆಸೆಗಳಿಗೆ ವಿರುದ್ದವಾದ ವಾತಾವರಣ
- ಮಾನಸಿಕ ಧೈರ್ಯ ನಿಮಗೆ ಮಾರ್ಗಸೂಚಿ
- ಎಲ್ಲಾ ಕಡೆ ಅಪಮಾನ ಆಗುವ ಸಾಧ್ಯತೆ
- ಆಂಜನೇಯನನ್ನು ಪ್ರಾರ್ಥಿಸಿ, ಹನುಮಾನ್ ಚಾಲೀಸ್ ಪಠಿಸಿ
ಕುಂಭ
- ಕುಟುಂಬದಲ್ಲಿ ಶಾಂತಿಯ ವಾತಾವರಣ
- ನಿಮ್ಮ ಮನಸ್ಸಿಗೆ ಒಪ್ಪದ ಸ್ಥಳಕ್ಕೆ ಕೆಲಸಕ್ಕೆ ಹೋಗಬೇಡಿ
- ಸಮಾಜದಲ್ಲಿ ಜಯಸಾಧಿಸುವುದು ಕಷ್ಟ ಮಾತಿನಲ್ಲಿ ಗೆಲ್ಲಬೇಕು
- ನಿಮ್ಮ ಗಮನ ನಿಮ್ಮ ಕರ್ತವ್ಯದ ಮೇಲಿರಲಿ
- ಅನಿರೀಕ್ಷಿತ ಸಿಹಿ ಸುದ್ದಿ ಉಲ್ಲಾಸ ಕೊಡಲಿದೆ
- ಗೌರವವನ್ನು ಕೇಳಿ ಪಡೆಯುವುದಲ್ಲ ಎಂದು ಅರಿಯಬೇಕು
- ವಾಗ್ದೇವತಾ ಆರಾಧನೆ ಮಾಡಿ
ಮೀನ
- ಪ್ರಯಾಣದಿಂದ ತೊಂದರೆಯಾಗಬಹುದು
- ಅವಿವಾಹಿತರಿಗೆ ಸಿಹಿಸುದ್ದಿ ಸಿಗಲಿದೆ ಅನುಮಾನ ಬೇಡ
- ನಿಮ್ಮ ನಾಯಕತ್ವದ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ
- ಬುದ್ಧಿವಂತರ ಸಹವಾಸದಿಂದ ಸಂತೋಷ ಸಿಗಲಿದೆ
- ಮನೆ ನವೀಕರಣ ವಿಚಾರ ಬರಲಿದೆ
- ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ