/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಉತ್ತರಾಷಾಡ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಬೇರೆಯವರ ವಿಚಾರಕ್ಕೆ ಹೋಗಬೇಡಿ
- ನಿಮ್ಮ ದಿನಚರಿಯಲ್ಲಿ ಬದಲಾವಣೆಯಾಗಬಹುದು
- ಯಾವುದೇ ಒತ್ತಡಗಳಲ್ಲದ ಮನಸ್ಸು ನಿಮಗೆ ಶಾಂತತೆ ನೀಡಲಿ
- ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು ಎಚ್ಚರಿಕೆಯಿರಲಿ
- ವೈವಾಹಿಕ ವಿಚಾರದಲ್ಲಿ ಗೊಂದಲ ಇರುವವರಿಗೆ ಸಮಸ್ಯೆ ತಿಳಿಯಾಗುವ ದಿನ
- ದಂಪತಿಗಳಲ್ಲಿ ಜಗಳ ಬೇಡ
- ಸ್ವಯಂವರ ಪಾರ್ವತಿ ಜಪ
ವೃಷಭ
- ಹೊಸ ಆಲೋಚನೆಗಳಲ್ಲಿ ಯಶಸ್ಸಿದೆ
- ವ್ಯಾವಹಾರಿಕ ಫಲಿತಾಂಶ ಉತ್ತಮವಾಗಿರುತ್ತದೆ
- ದೂರದ ಪ್ರಯಾಣಕ್ಕೆ ತೊಂದರೆಯಾಗಬಹುದು
- ಆರೋಗ್ಯದ ಬಗ್ಗೆ ಹಳೆಯ ನೋವಿನ ಬಗ್ಗೆ ಹೆಚ್ಚು ಗಮನಹರಿಸಿ
- ನಿಮ್ಮ ಬಂಧುಗಳಲ್ಲಿ ಆತ್ಮೀಯತೆ ಬೆಳೆಸಿಕೊಳ್ಳಬೇಕು
- ಆತ್ಮವಿಶ್ವಾಸ ಶಕ್ತಿಯಿಂದ ನಿಮ್ಮ ಇರುವಿಕೆ ಎಂದೇ ಹೇಳಬೇಕು
- ಆಂಜನೇಯ ಸ್ವಾಮಿಯನ್ನು ಪೂಜಿಸಿ
ಮಿಥುನ
- ನಿಮ್ಮ ತಪ್ಪುಗಳೇ ನಿಮಗೆ ಶತ್ರುಗಳಾಗಬಹುದು
- ಸ್ವಂತಿಕೆಯಿಂದ ಯೋಚಿಸಿ ನಿರ್ಧಾರ ಮಾಡಿ ಯಶಸ್ಸಿದೆ
- ಬೇರೆಯವರನ್ನು ಅನುಸರಿಸಿ ಅನುಕರಿಸಬೇಡಿ
- ನಿಮ್ಮ ಪ್ರಾಮಾಣಿಕತೆ ದಕ್ಷತೆ ಗಟ್ಟಿಯಾಗಬೇಕು
- ವೃತ್ತಿ ಜೀವನದಲ್ಲಿ ತುಂಬಾ ಉತ್ಸುಕರಾಗಿರುವ ನಿಮಗೆ ಹಿನ್ನಡೆ ಭಯವಿರುತ್ತದೆ
- ಕೆಲವು ವಿಚಾರಗಳಲ್ಲಿ ಹಿಂಜರಿಕೆಯ ಭಾವನೆ ಕಾಡಬಹುದು
- ತಾಪಸ ಮನ್ಯುವನ್ನು ಉಪಾಸನೆ ಮಾಡಿ
ಕಟಕ
- ನಿಮ್ಮ ಉದಾರಭಾವ ಬೇರೆಯವರಿಗೆ ಅನುಕೂಲವಿರುತ್ತದೆ
- ಅನಗತ್ಯ ಸಲಹೆ ಮಾತಿನಿಂದ ಅವಮಾನಿತರಾಗಬಹುದು
- ಸಂಬಂಧಿಕರ ಮನೆಯ ಮದುವೆ ವಿಚಾರಕ್ಕೆ ತಲೆ ಹಾಕಬೇಡಿ
- ಉನ್ನತ ಶಿಕ್ಷಣ ಪಡೆಯಬೇಕಾದವರಿಗೆ ಸಮಸ್ಯೆಗಳು ಉಂಟಾಗಬಹುದು
- ಕುಟುಂಬದ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರೈಸಬೇಕು
- ಋಣಾತ್ಮಕ ವಿಷಯಗಳಿಂದ ದುಃಖ ಇರಬಹುದು
- ನರಸಿಂಹನನ್ನು ಪ್ರಾರ್ಥಿಸಿ
ಸಿಂಹ
- ಅನೇಕ ಕೆಲಸಗಳಲ್ಲಿ ತುಂಬಾ ಗಮನಕೊಟ್ಟು ವ್ಯವಹರಿಸಬೇಕು
- ಎದುರಾಳಿಗಳ ಶತ್ರುಗಳ ಬಲ ತಿಳಿದು ವ್ಯವಹರಿಸಿ
- ಬೇರೆಯವರ ತಪ್ಪನ್ನು ಹೇಳಬೇಡಿ
- ನಾಟಕೀಯ ಬುದ್ಧಿಯಿಂದ ನಿಮಗೆ ಹಿನ್ನಡೆಯಾಗಬಹುದು
- ವೈಯಕ್ತಿಕ ವಿಚಾರದಲ್ಲಿ ಕೆಲವು ಸುಧಾರಣೆಯ ಅಗತ್ಯ ಕಾಣಬಹುದು
- ಮನಸ್ಸಿನ ಗೊಂದಲಗಳು ದೂರವಾದರೆ ನಿಂತ ಕೆಲಸಗಳು ಚಾಲನೆ ಪಡೆಯುತ್ತದೆ
- ನವಗ್ರಹರನ್ನು ಪ್ರಾರ್ಥಿಸಿ ಅದರಲ್ಲೂ ವಿಶೇಷವಾಗಿ ಚಂದ್ರಗ್ರಹವನ್ನು ಪ್ರಾರ್ಥಿಸಿ
ಕನ್ಯಾ
- ಮನೆಗೆ ಹೊಸ ವಸ್ತು ತಂದು ನಷ್ಟವಾಗಬಹುದು
- ಬೇರೆ ಉಪಯುಕ್ತ ಯೋಜನೆಗಳ ಬಗ್ಗೆ ಚಿಂತೆ
- ಇಂದು ಮಾನಸಿಕ ಸಮಾಧಾನವಿಲ್ಲದಿರುವುದು
- ಏನು ಮಾಡಿದರೂ ಎಷ್ಟು ಗಳಿಸಿದರೂ ತೃಪ್ತಿಯಿರದ ದಿನ
- ಮನೆಗೆ ಬಂಧುಗಳ ಆಗಮನ ಆಗಲಿದೆ
- ಪ್ರೇಮ ವಿವಾಹದ ವಿಚಾರದಿಂದ ಮನೆಯಲ್ಲಿ ಅಲ್ಲೋಲ ಕಲ್ಲೋಲ ಜಗಳ ಆಗಬಹುದು
- ಶ್ರೀಸೂಕ್ತದ 16 ಮಂತ್ರಗಳನ್ನು ಶ್ರವಣ ಮಾಡಿ
ತುಲಾ
- ಅಹಂಕಾರದ ಭಾವನೆಯನ್ನು ತ್ಯಜಿಸಿ
- ಕುಟುಂಬ ಕಲಹ ಮಿತಿಮೀರಬಹುದು
- ಯಾವುದೇ ವಿಚಾರದಲ್ಲಿ ಅನುಮಾನ ಬೇಡ ಪರಾಮರ್ಶಿಸಿ
- ನಿಮ್ಮ ತಪ್ಪು ಗ್ರಹಿಕೆಯಿಂದ ಜನರ ಕೋಪಕ್ಕೆ ಗುರಿಯಾಗುತ್ತೀರಿ
- ನಿಮ್ಮ ಮಾತು ಕೆಟ್ಟ ಪರಿಣಾಮ ಬೀರಲಿದೆ
- ಏಕನಕ್ಷತ್ರ ಏಕರಾಶಿಯ ದಂಪತಿಗಳ ವೈಯಕ್ತಿಕ ವಿಚಾರ ಕಹಿಯಾಗಿರುತ್ತದೆ
- ಜಾತಕ ಪರೀಕ್ಷಿಸಿಕೊಳ್ಳಿ ಪರಿಹಾರ ಪಡೆಯಿರಿ
ವೃಶ್ಚಿಕ
- ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಮನಸ್ಸಿರುವುದಿಲ್ಲ
- ಪ್ರಯಾಣದಲ್ಲಿ ವ್ಯತ್ಯಯ ಆಗಬಹುದು
- ಪರೀಕ್ಷಾ ದೃಷ್ಠಿಯಿಂದ ಅಧ್ಯಯನ ಮಾಡಿದವರಿಗೆ ಹಿನ್ನಡೆ
- ಭಾವನೆಗಳು ಕೆಲಸಕ್ಕೆ ಬರುವುದಿಲ್ಲ
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಬೆಲೆ ಎಂಬುದನ್ನು ಅರಿಯಬೇಕು
- ಬೇರೆ ಮಾರ್ಗದಲ್ಲಿ ಆಲೋಚಿಸುವವರಿಗೆ ತುಂಬಾ ಹಿನ್ನಡೆ ಕಾಣಬಹುದು
- ಪಾರಿಜಾತ ಸರಸ್ವತಿಯನ್ನು ಆರಾಧಿಸಿ
ಧನುಸ್ಸು
- ಹೊಸ ಮನೆಯನ್ನು ಖರೀದಿ ಮಾಡುತ್ತೀರಿ
- ಸಹೋದ್ಯೋಗಿಗಳನ್ನು ಪೂರ್ಣವಾಗಿ ಅವಲಂಬಿಸಬೇಡಿ
- ಬೇರೆ ದಿನಕ್ಕಿಂತ ನಿಮ್ಮ ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರಿ
- ನಿಮ್ಮ ಆಸಕ್ತಿ ಹೆಚ್ಚಿದಷ್ಟು ಕೆಲಸದಿಂದ ಆದಾಯವಿದೆ
- ಮನೆಯವರ ಪ್ರೀತಿ ಅಭಿಮಾನಕ್ಕೆ ಪ್ರಯತ್ನಿಸಿ ವಿಫಲರಾಗುತ್ತೀರಿ
- ಕೆಲಸ ಮಾಡುತ್ತೀರಿ ಆದರೆ ಇಂದು ಧೈರ್ಯ ಕಡಿಮೆ ಇರಬಹುದು
- ಮಾರುತಿಯನ್ನು ಉಪಾಸನೆ ಮಾಡಿ
ಮಕರ
- ಬೇರೆಯವರ ಬೇಡದ ವಿಚಾರದಿಂದ ನಿಮಗೆ ಸಂತೋಷ
- ಮಕ್ಕಳೊಂದಿಗೆ ಕುಟುಂಬದ ಸದಸ್ಯರೊಂದಿಗೆ ಅನಗತ್ಯ ವಿಚಾರ ಚರ್ಚೆಯಾಗಲಿದೆ
- ಮನೆಯಲ್ಲಿನ ವಾತಾವರಣ ಹಾಸ್ಯಾಸ್ಪದವಾಗಬಹುದು
- ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭವಿದೆ
- ಆಧ್ಯಾತ್ಮಿಕ ಧಾರ್ಮಿಕ ವಿಚಾರಗಳು ಬಂದಾಗ ತಾತ್ಸಾರವಾಗಿ ನೋಡಬಹುದು
- ನಿಮ್ಮ ಆಲೋಚನೆ ಬೇರೆ ನಡೆಯುವುದೇ ಬೇರೆ
- ಪುಣ್ಯಕ್ಷೇತ್ರಗಳ ದರ್ಶನ ಮಾಡಿ
ಕುಂಭ
- ಆರೋಗ್ಯದ ಬಗ್ಗೆ ಗಮನಿಸಿ
- ಕಾಲು ನೋವಿನಿಂದ ತೊಂದರೆಯಾಗಬಹುದು
- ಹೊಸವಾಹನ ಖರೀದಿಯ ಮಾಡುತ್ತೀರಿ
- ಸಣ್ಣ ಪುಟ್ಟ ವಿಚಾರಗಳಿಗೆ ಮನೆಯಲ್ಲಿ ಕಲಹ
- ಆತುರದ ಕೆಲಸದಿಂದ ವಸ್ತು ನಷ್ಟ ಆಗಬಹುದು
- ನಿಮ್ಮ ಕೋಪ ಮಕ್ಕಳ ಮೇಲೆ ಬೇಡ ತೊಂದರೆಯಾಗಬಹುದು
- ಇಂದ್ರಾಕ್ಷೀ ಸ್ತೋತ್ರ ಪಠಿಸಿ
ಮೀನ
- ಶಾಂತ ಮನಸ್ಥಿತಿಯಲ್ಲಿರಬೇಕೆಂದು ಯೋಚಿಸಿದರೂ ಆಗುವುದಿಲ್ಲ
- ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ
- ದಾಂಪತ್ಯ ಜೀವನದಲ್ಲಿ ಕೋಪ ಬೇಡ
- ಮನೆಯವರ ಸಲಹೆ ಉಪಯುಕ್ತ ಎಂಬುದನ್ನು ಅರಿಯಬೇಕಾಗುತ್ತದೆ
- ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ
- ನಿಮ್ಮ ಕಿರಿಯರು ಭಯದಿಂದ ಗೌರವಿಸಬಹುದು
- ಧ್ಯಾನದ ಮೊರೆ ಹೋಗಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ