Advertisment

ಜವಾಬ್ದಾರಿ ಹೆಚ್ಚಾಗಿ ಆತಂಕ ಸಾಧ್ಯತೆ.. ಹಣಕಾಸಿನ ವಿಚಾರದಲ್ಲಿ ಗಂಭೀರತೆ ಇರಲಿ; ಇಲ್ಲಿದೆ ಇಂದಿನ ಭವಿಷ್ಯ!

ಮನೆಯ ಜವಾಬ್ದಾರಿಯಲ್ಲಿ ಸಕ್ರಿಯರಾಗಿರುತ್ತೀರಿ. ಜೀವನ ಸಾಮರಸ್ಯದಿಂದ ಕೂಡಿರುತ್ತದೆ. ದೃಢ ವಿಶ್ವಾಸದಿಂದ ಬೇರೆಯವರನ್ನು ಗೆಲ್ಲುತ್ತೀರಿ. ಬೇರೆಯವರು ನಿಮ್ಮ ಆಶ್ರಯವನ್ನು ಅಪೇಕ್ಷಿಸುತ್ತಾರೆ ನಿರಾಕರಿಸಬೇಡಿ. ಇಂದು ಆತ್ಮ ವಿಶ್ವಾಸ ಚೆನ್ನಾಗಿರುತ್ತದೆ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಉತ್ತರಾಷಾಡ ನಂತರ ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ನಿಮ್ಮ ನಡವಳಿಕೆ ನಂಬಿಕೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ
  •  ಒಟ್ಟಾರೆ ಈ ದಿನ ಚೆನ್ನಾಗಿರುವುದಿಲ್ಲ 
  • ಅತಿಯಾದ ಶಿಸ್ತು  ಕೋಪಗಳು ಬೇಡ
  • ಭಾವನೆಗಳಿಗೆ ಒಳಗಾಗಿ ಕೆಲಸ ಹಾಳಾಗಬಹುದು
  • ತಂದೆಯವರ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
  • ನಿಧಾನವಾಗಿ ನಡೆಯುತ್ತಿರುವ ಕಾರ್ಯಗಳು ತಕ್ಷಣ ನಿಲ್ಲಬಹುದು
  • ಹಿರಿಯರ ಆಶೀರ್ವಾದ ಪಡೆಯಿರಿ

ವೃಷಭ

RASHI_BHAVISHA_VRSHABA

  • ತಂದೆಯವರ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
  • ಭವಿಷ್ಯದಲ್ಲಿ ಮುಂದುವರಿಯುವ ಬಗ್ಗೆ ಚಿಂತನೆ 
  • ಆರೋಗ್ಯ ಸೇವೆ ಮಾಡುವವರಿಗೆ ಶುಭದಿನ
  • ಇಂದು ನಿಮಗೆ ಯಾವುದೇ ಒತ್ತಡಗಳಿರುವುದಿಲ್ಲ
  • ನಿಮ್ಮ ವರ್ತನೆಯಿಂದ ಹಲವರು ದೂರವಾಗಬಹುದು
  • ಸ್ನೇಹಿತರೊಂದಿಗೆ ಕಾಲಾಹರಣ ಮಾಡುತ್ತೀರಿ
  • ವ್ಯಾಪಾರದಲ್ಲಿ ವ್ಯವಹಾರದಲ್ಲಿ ಸ್ವಲ್ಪ ನಷ್ಟ ಆಗಬಹುದು
  • ಸಂಪತ್ ಲಕ್ಷ್ಮೀಯನ್ನು ಪ್ರಾರ್ಥಿಸಿ
Advertisment

ಮಿಥುನ

RASHI_BHAVISHA_MITHUNA

  • ಸರ್ಕಾರಿ ಕಛೇರಿಗಳಲ್ಲಿ ಹೊಸ ಸಿಬ್ಬಂದಿಯ ನೇಮಕಾತಿ ಅಗಲಿದೆ
  • ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ನಿರಾಶೆ ಆಗಬಹುದು
  • ಕಲಾಕ್ಷೇತ್ರದವರಿಗೆ ಪುರಸ್ಕಾರ ದೊರೆಯಲಿದೆ
  • ಪಿತೃ ಸಂಪತ್ತು ವೃದ್ದಿಯಾಗಬಹುದು
  • ಅನುಭವಿಗಳಿಂದ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ
  • ನಿಮ್ಮ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಲು ಅವಕಾಶವಿದೆ
  • ಉಮಾಮಹೇಶ್ವರರನ್ನು ಪ್ರಾರ್ಥಿಸಿ
     

ಕಟಕ

RASHI_BHAVISHA_KATAKA

  • ಇಂದು ಅತಿಯಾದ ಕೋಪದ ದಿನ
  • ಬದಲಾಗುತ್ತಿರುವ ಹವಾಮಾನದಿಂದ ಶೀತ ಜ್ವರದ ಸಮಸ್ಯೆ ಕಾಡಬಹುದು
  • ಮಾನಸಿಕ ಒತ್ತಡದಿಂದ ತೊಂದರೆಯಾಗಲಿದೆ
  • ಇಂದು ಹೊಸ ಕೆಲಸ ಪ್ರಾರಂಭಿಸಬೇಡಿ
  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಆಗುವುದರಿಂದ ಕಿರಿ ಕಿರಿ ಆಗಲಿದೆ
  • ಲಕ್ಷ್ಮೀನಾರಾಯಣರ ಅನುಗ್ರಹ ಪಡೆಯಿರಿ

ಸಿಂಹ 

RASHI_BHAVISHA_SIMHA

  • ಹೊಸಬರ ಪರಿಚಯ ಸಂಪರ್ಕ ಉಂಟಾಗಲಿದೆ
  • ಇಂದು ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಿ
  • ಬುದ್ದಿವಂತಿಕೆಯಿಂದ ಕೆಲಸ ಮಾಡಿ
  • ದಾಂಪತ್ಯದಲ್ಲಿ ಒತ್ತಡ ಆಗಬಹುದು
  • ವಾಹನಾ ಅಪಘಾತವಾಗಬಹುದು  ಎಚ್ಚರಿಕೆವಹಿಸಿ
  • ಆರೋಗ್ಯದಲ್ಲಿ ಸಮಸ್ಸೆ ಉಂಟಾಗಬಹುದು
  • ಅಮೃತ ಮೃತ್ಯುಂಜಯ ಜಪ ಮತ್ತು ಹೋಮ ಮಾಡಿ
Advertisment

ಕನ್ಯಾ

RASHI_BHAVISHA_KANYA

  • ಜವಾಬ್ದಾರಿ ಹೆಚ್ಚಾಗಿ ಆತಂಕ ಆಗಬಹುದು
  • ಹಣಕಾಸಿನ ವಿಚಾರದಲ್ಲಿ ಗಂಭೀರತೆ ಇರಲಿ
  • ಕುಟುಂಬಕ್ಕೆ ಸಮಯ ನೀಡಲು ಅವಕಾಶ ಕಡಿಮೆ
  • ಹೊಸ ಕೆಲಸಗಳಲ್ಲಿ ಆಸಕ್ತಿ ವಹಿಸುತ್ತೀರಿ
  • ವ್ಯಾಪಾರ ವ್ಯವಹಾರದವರಿಗೆ ದೊಡ್ಡ ಮೊತ್ತದ ಲಾಭ ಸಿಗಲಿದೆ
  • ಐಶ್ವರ್ಯ ಲಕ್ಷ್ಮೀ ಪ್ರಾರ್ಥನೆ ಮಾಡಿ
     

ತುಲಾ

RASHI_BHAVISHA_TULA

  • ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ವಿಶ್ರಾಂತಿಯ ಅಗತ್ಯ ತುಂಬಾ ಕಾಡುತ್ತದೆ
  • ಇಂದು ಯಾವುದೇ ಹೊಸ ಕೆಲಸ ಮಾಡಬೇಡಿ
  • ಈ ದಿನ ಸಮಯಾಭಾವ ಅನಿಸಬಹುದು
  • ಕೆಲಸದ ಒತ್ತಡ ತುಂಬಾ ಇರುತ್ತದೆ
  • ಸಹೋದ್ಯೋಗಿಗಳೊಂದಿಗೆ ಶಿಸ್ತನ್ನು ಕಾಪಾಡಿಕೊಳ್ಳಿ
  • ಸೂರ್ಯ ನಾರಾಯಣನನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಮನೆಯ ಜವಾಬ್ದಾರಿಯಲ್ಲಿ ಸಕ್ರಿಯರಾಗಿರುತ್ತೀರಿ
  • ಜೀವನ ಸಾಮರಸ್ಯದಿಂದ ಕೂಡಿರುತ್ತದೆ
  • ದೃಢ ವಿಶ್ವಾಸದಿಂದ ಬೇರೆಯವರನ್ನು ಗೆಲ್ಲುತ್ತೀರಿ
  • ಬೇರೆಯವರು ನಿಮ್ಮ ಆಶ್ರಯವನ್ನು ಅಪೇಕ್ಷಿಸುತ್ತಾರೆ ನಿರಾಕರಿಸಬೇಡಿ
  • ಇಂದು ಆತ್ಮ ವಿಶ್ವಾಸ ಚೆನ್ನಾಗಿರುತ್ತದೆ
  • ಬೇರೆಯವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
     
Advertisment

ಧನುಸ್ಸು

RASHI_BHAVISHA_DHANASU

  • ಆತ್ಮ ವಿಶ್ವಾಸ ಚೆನ್ನಾಗಿರುತ್ತದೆ
  • ಆದಾಯ ಕಡಿಮೆ ಕೆಲಸ ಹೆಚ್ಚು ಇರಲಿದೆ
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲದ ಮಾತು
  • ತಾರ್ಕಿಕ ನಿಲುವು ಯಶಸ್ಸಿಗೆ ಕಾರಣವಾಗುತ್ತದೆ
  • ಕಾನೂನಿನ ಹೋರಾಟದಲ್ಲಿ ಅಪಜಯ ಆಗಬಹದು
  • ಉದ್ಯೋಗದಲ್ಲಿ ನಿಮ್ಮ ಸೇವೆ ಬೇರೆಯವರಿಗೆ ಮಾದರಿ
  • ಹಿರಿಯರು ನಿಮ್ಮಿಂದ ಪ್ರಭಾವಿತರಾಗುತ್ತಾರೆ
  • ವರಾಹ ಸ್ವಾಮಿಯನ್ನು ಅರ್ಚಿಸಿ

ಮಕರ

RASHI_BHAVISHA_MAKARA

  • ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಗಮನಹರಿಸಬೇಕು
  •  ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
  • ಮನೆಯಲ್ಲಿ ಹಣದ ಸಮಸ್ಯೆಯಾಗಬಹುದು
  • ಹೊಸ ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು ಸಿಗಲಿದೆ
  • ಬೇರೆಯವರು ಕೇಳಿದರೆ ಮಾತ್ರ ಸಲಹೆ ಕೊಡಿ
  • ಬೇರೆಯವರ ತಪ್ಪು ತಿದ್ದಲು ಹೋಗಬೇಡಿ  ಅವಮಾನ ಆಗಬಹುದು
  • ಶಾರದಾ ಪರಮೇಶ್ವರಿಯನ್ನು ಆರಾಧಿಸಿ 

ಕುಂಭ

RASHI_BHAVISHA_KUMBHA

  • ಕಾರ್ಯ ಕ್ಷೇತ್ರದಲ್ಲಿ ಹಲವಾರು ವಿಷಯಗಳಲ್ಲಿ ನಿಯಂತ್ರಣ ಕಾರ್ಯ ನಡೆಯುತ್ತದೆ
  • ವೃತ್ತಿಗೆ ಸಂಬಂಧಿಸಿದಂತೆ ವಿಷಯ ಸಂಗ್ರಹ ಮಾಡುವ ಅವಕಾಶವಿದೆ
  • ಉದಾರ ವರ್ತನೆಯಿಂದ ಜನಪ್ರಿಯತೆಗಳಿಸುತ್ತೀರಿ
  • ಶತ್ರು ಜಯ ಅನ್ನೋದು ಉತ್ತಮವಾದ ಫಲ ಕೊಡುತ್ತದೆ
  • ಸ್ನೇಹಿತರೊಂದಿಗಿನ  ವ್ಯವಹಾರ ವೃದ್ಧಿಯಾಗಲಿದೆ
  • ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತೀರಿ
  • ಕಾರ್ತಿಕೇಯನ ಆರಾಧನೆ ಮಾಡಿ 
Advertisment

ಮೀನ

RASHI_BHAVISHA_MEENA

  • ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಶೈಲಿ ಬದಲಿಸಿಕೊಳ್ಳಬೇಕು
  • ಸರ್ಕಾರಿ ಕೆಲಸಗಳು ನಿಮಗೆ ಸಿಗುವಂತ ಅನುಕೂಲವಿದೆ
  • ವ್ಯಾವಹಾರಿಕವಾಗಿ ಎಲ್ಲಾ ದೌರ್ಬಲ್ಯಗಳನ್ನ ದೂರ ಮಾಡಿಕೊಳ್ಳಲು ಇದೊಂದು ಅವಕಾಶ 
  • ನಿತ್ಯದ ಎಲ್ಲಾ ಕೆಲಸಗಳು ಕೂಡ ಸಕಾಲದಲ್ಲಿ ಆಗಲಿದೆ
  • ಯಾವುದೇ ಒತ್ತಡಗಳಿಲ್ಲದೆ ತುಂಬ ವಿರಾಮವಾದ ದಿನ
  • ಕುಲದೇವತೆಯನ್ನು ಪ್ರಾರ್ಥನೆ ಮಾಡಿ   

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore Rashi Bhavishya Horoscope
Advertisment
Advertisment
Advertisment