/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು,ಆಶ್ವಯುಜ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಧನಿಷ್ಠ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಸಂಸ್ಥೆ, ಪ್ರಕಾಶನ, ಚಲನಚಿತ್ರಗಳಲ್ಲಿ ನಿರ್ವಹಣ ಕೆಲಸ ಮಾಡುತ್ತಿರುವವರಿಗೆ ಲಾಭ ಹೆಚ್ಚು
- ನಿಮ್ಮ ಪ್ರತಿಭೆಗೆ ಪುರಸ್ಕಾರ ದೊರೆಯುವ ದಿನ
- ಆರ್ಥಿಕವಾಗಿಯೂ ಅನುಕೂಲಕರವಾದ ದಿವಸ
- ನಿಮ್ಮ ವೃತ್ತಿಯ ನಿಮಿತ್ತವಾಗಿ ದೂರದೂರಿಗೆ ಪ್ರಯಾಣ ಮಾಡಲು ಅವಕಾಶವಿರಲಿದೆ
- ಸಂಬಂಧಿಕರಿಂದ ಶುಭವಾರ್ತೆ ಬರಲಿದೆ
- ಪಶು ಪಕ್ಷಿಗಳಿಗೆ ಆಹಾರ ನೀರು ಕೊಡಿ ಶುಭ
ವೃಷಭ
- ಕೋಪ ನಿಯಂತ್ರಣದಲ್ಲಿರಬೇಕು
- ಪರಸ್ಪರವಾಗಿ ವಿವಾಹವಾಗದಿದ್ದವರ ವಿಚಾರದಲ್ಲಿ ಸಹಾಯ ಮಾಡಿದರೆ ನೀವು ಕಷ್ಟಕ್ಕೆ ಸಿಲುಕುತ್ತೀರಿ
- ಅವಮಾನ ಆಗಬಹುದು ಜಾಗ್ರತೆವಹಿಸಿ
- ಯಾರಿಗೂ ಮನಸ್ಸಿಗೆ ನೋವಾಗದಂತೆ ವರ್ತಿಸಿ
- ವಿಕಲ ಚೇತನರಿಗೆ ಹಣ್ಣನ್ನು ನೀಡಿ
ಮಿಥುನ
- ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೂ ಶುಭಫಲಗಳಿವೆ
- ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಕೆಲಸಗಳೂ ಇಂದು ಸಡಿಲ ಆಗಲಿದೆ
- ಇಂದು ತುಂಬಾ ಕಾರ್ಯನಿರತರಾಗಿರುತ್ತೀರಿ
- ನೀವು ಬಿಡುವಿಲ್ಲದ ಕಾರ್ಯಕ್ರಮಗಳನ್ನು ಒತ್ತಡಗಳನ್ನು ನೋಡಿ ಸ್ನೇಹಿತರು ಕುಟುಂಬದವರು
- ಸಂತೋಷ ಪಡುತ್ತಾರೆ
- ಪರಶುರಾಮನನ್ನು ಸ್ಮರಿಸಿ
ಕಟಕ
- ನಿಮ್ಮ ಮನಸ್ಸು ಶಾಂತ ಸ್ಥಿತಿಯಲ್ಲಿರಲಿ
- ಯಾವುದೇ ಸಂದರ್ಭದಲ್ಲೂ ಉದ್ವಿಗ್ನಕ್ಕೆ ಒಳಗಾಗಬಾರದು
- ಆತುರವಾಗಿ ನಿರ್ಧಾರವನ್ನು ಮಾಡಬೇಡಿ
- ಉದ್ವಿಗ್ನ ಪರಿಸ್ಥಿತಿ ಏರ್ಪಾಟ್ಟಾಗ ನಿಮ್ಮಿಂದ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ
- ಸ್ವಾರ್ಥಿಗಳು ನಿಮ್ಮ ಹಿಂದೆ ಮುಂದೆ ಸುತ್ತುತ್ತಿರುತ್ತಾರೆ
- ಅವರ ಮಾತಿಗೆ ಮರುಳಾಗಿ ಹಣವನ್ನು ಕಳೆದುಕೊಳ್ಳಬೇಡಿ
- ಹಣದ ವಿಚಾರದಲ್ಲಿ ಎಚ್ಚರಿಕೆಯಿರಲಿ
- ಧನಲಕ್ಷ್ಮಿ ಪ್ರಾರ್ಥನೆ ಮಾಡಿ
ಸಿಂಹ
- ಒಳ್ಳೆಯ ವಿಚಾರಗಳಿಂದ ಶುಭ ಸುದ್ದಿಗಳಿಂದ ಆರಂಭವಾಗುತ್ತದೆ
- ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗುತ್ತದೆ
- ಮನೆಯವರ ಸಂತೋಷ ದೊಡ್ಡವರ ಪ್ರೀತಿ ಹಾರೈಕೆ ಚಿಕ್ಕಮಕ್ಕಳ ಮುದ್ದು ಧನಾತ್ಮಕವಾಗಿ ಸಿಗಲಿದೆ
- ತುಂಬಾ ಅದೃಷ್ಟಶಾಲಿ ಎಂಬ ಭಾವ ನಿಮಗಾಗುತ್ತದೆ
- ಯಥೇಚ್ಛ ಹಣವನ್ನು ಖರ್ಚು ಮಾಡುತ್ತೀರಿ
- ಇದೇ ರೀತಿ ಸದಾಕಾಲ ಆನಂದವಾಗಿರಿ
- ಶುಭವಾಗಲಿ
ಕನ್ಯಾ
- ಆರೋಗ್ಯ ಸಮಸ್ಯೆ ಉಂಟಾಗಬಹುದು
- ಹಿಂದೆ ಸೇವಿಸಿದ ಆಹಾರದಿಂದ ವಿಷಾಹಾರವಾಗಿ ಸಮಸ್ಯೆಯಾಗಬಹುದು
- ಮನೆಯಲ್ಲಿಯ ಔಷಧಿಯಿಂದ ಗುಣವಾಗುತ್ತದೆ
- ಆದಷ್ಟು ಮನೆಮದ್ದನ್ನು ಮಾಡಿ ಗುಣಮುಖರಾಗಿರಿ
- ಈ ದಿನ ಅಗತ್ಯವಾಗಿ ವಿಶ್ರಾಂತಿ ಮಾಡಿ
- ಅಗತ್ಯಬಿದ್ದರೆ ಮಾತ್ರ ರಕ್ತಪರೀಕ್ಷೆ ಮಾಡಿಸಿಕೊಳ್ಳಿ
- ಮೂಕಾಂಬಿಕ ದೇವಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಮನೆಯವರು ತೆಗೆದುಕೊಂಡ ಒಂದು ನಿರ್ಧಾರ ಇಡೀ ಕುಟುಂಬವನ್ನು ಅಲ್ಲೋಲ ಕಲ್ಲೋಲ ಮಾಡಲಿದೆ
- ನೀವು ಜಗಳ ಬೈಗುಳಗಳಿಗೆ ಅವಕಾಶ ಆಗದಂತೆ ಎಚ್ಚರವಹಿಸಿ
- ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ
- ಇದರ ಪರಿಣಾಮ ಮಕ್ಕಳ ಮೇಲೆ ಬೀರಲಿದೆ
- ಶಾಂತತೆಯನ್ನು ಕಾಪಾಡಿಕೊಳ್ಳುವ ಸಂದರ್ಭಗಳು ಹೆಚ್ಚಿನ ಒತ್ತಡಗಳನ್ನು ತರಲಿದೆ
- ಒಟ್ಟಾರೆ ಮನೆ ರಣರಂಗವಾಗುತ್ತದೆ
- ಇದೆಲ್ಲವನ್ನೂ ತಡೆದು ಶಾಂತಿಯನ್ನು ಕಾಪಾಡಿ
- ಕೆಂಪು ಹೂವಿನಿಂದ ಕಾಳಿಯನ್ನು ಅರ್ಚಿಸಿ
ವೃಶ್ಚಿಕ
- ಅತಿ ಮುಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಹಾಳಾಗುತ್ತದೆ
- ಅಗೌರವ ಹಣದ ನಷ್ಟ ಉಂಟಾಗಬಹುದು
- ಎಲ್ಲಾ ರೀತಿಯ ಆಗಬಾರದ ನಷ್ಟಗಳು ನಿಮ್ಮ ಹೆಗಲೇರುತ್ತದೆ
- ಅನಗತ್ಯ ಗೊಂದಲಕ್ಕೆ ಒಳಗಾಗುತ್ತೀರಿ
- ಮಾತೆಯರು ವಿಶೇಷವಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ಹೇಳಿಕೊಳ್ಳದಿದ್ದರೆ ಉತ್ತಮ
- ಹಿಂದಿನ ಯಾವುದೊ ವಿಚಾರ ಕುಟುಂಬದಲ್ಲಿ ಅಶಾಂತಿಗೆ ಕಾರಣ ಆಗುತ್ತೀರಿ
- ನಿಮಗೂ ಮನೆಯಲ್ಲಿ ಇರುವವರಿಗೂ ನೆಮ್ಮದಿ ಇಲ್ಲದೆ ಆಗುತ್ತದೆ
- ಈಶ್ವರನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ನಿಮ್ಮ ಹಲವು ದಿನದ ಕನಸು ನನಸಾಗಲಿದೆ
- ಸಮಾಜಮುಖಿಯಾಗಿ ಸಾರ್ವಜನಿಕವಾಗಿ ಸಮಾಜದ ಉದ್ಧಾರಕ್ಕೋಸ್ಕರ ಮಾಡುವ ಕೆಲಸ ಯಶಸ್ಸನ್ನು ಕೊಡಲಿದೆ
- ತಂತ್ರಜ್ಞಾನವಿರಬಹುದು ಅಥವಾ ನಿಮ್ಮ ಕಾರ್ಯಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ
- ಗೌರವ ಪುರಸ್ಕಾರಗಳಿಗೆ ಭಾಜನರಾಗುತ್ತೀರಿ
- ಕಣ್ಣು ಮತ್ತು ತಲೆನೋವಿನ ಸಮಸ್ಯೆ ಅಧಿಕವಾಗಿ ಕಾಡಬಹುದು
- ಆದಷ್ಟು ಲ್ಯಾಪ್ ಟಾಪ್ ಮೊಬೈಲ್ ಬಳಕೆಯನ್ನು ಅಗತ್ಯವಿದ್ದಷ್ಟು ಬಳಸಿ
- ವಿನಾಕಾರಣ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಜಾಗ್ರತೆ ಇರಲಿ
- ಅಶ್ವಿನಿ ದೇವತೆಗಳನ್ನು ಸ್ಮರಿಸಿ
ಮಕರ
- ಮನೆಯ ವಾತಾವರಣ ಚೆನ್ನಾಗಿರುತ್ತದೆ
- ಸರ್ಕಾರದಿಂದ ಹರಾಜಾಗುವ ಭೂಮಿ, ವಾಹನ ಖರೀದಿಯಲ್ಲಿ ಭಾಗವಹಿಸುವ ಯೋಗವಿದೆ
- ಭೂಮಿ ಖರೀದಿಗೆ ಮುಂದುವರೆಯಿರಿ
- ವಾಹನವಾದರೆ ಖಂಡಿತಾ ಬೇಡ ಅದರಿಂದ ತೊಂದರೆಯಾಗಬಹುದು
- ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಲಾಭವಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ
- ಕಾರ್ಯಕ್ಷೇತ್ರಗಳಲ್ಲಿ ಸ್ವಲ್ಪ ಸುಧಾರಣೆಗಳನ್ನು ಅಗತ್ಯವಾಗಿ ಮಾಡಿ
- ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಲ್ಲಿ ತೊಂದರೆಯನ್ನುಂಟು ಮಾಡಿಕೊಳ್ಳುತ್ತೀರಿ
- ಸರಿ ತಪ್ಪು ತಿಳಿದ ನಂತರ ಪಶ್ವಾತ್ತಾಪ ಪಡುತ್ತೀರಿ
- ಅವಮಾನ ಆಗಬಹುದು ಸರಿಯಾದ ತಿಳುವಳಿಕೆ ಇರಲಿ
- ಅತಿಯಾದ ಆತ್ಮವಿಶ್ವಾಸ ಬೇಡ
- ಗಾಯತ್ರಿ ದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
- ನಿಮ್ಮ ಸ್ವಭಾವ,ಸಿಟ್ಟು, ನಡವಳಿಕೆ,ಜುಗ್ಗತನದಿಂದ ಬಂಧುಗಳು ಮನೆಯವರು ಸ್ನೇಹಿತರು ಬೇಸರ ಪಡುತ್ತಾರೆ
- ರಾಜಕಾರಣಿಗಳೊಂದಿಗೆ ಉತ್ತಮ ದಿನ
- ವಿನಾಕಾರಣ ಬೇರೆ ರೀತಿ ವರ್ತನೆ ಮಾಡಿ ಸಿಕ್ಕಿ ಹಾಕಿಕೊಳ್ಳಬೇಡಿ
- ಸಾಕು ಪ್ರಾಣಿಯಿಂದ ಗಾಯಗೊಳ್ಳುವ ಸೂಚನೆಯಿದೆ
- ಕಾಲಭೈರವನ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ