/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಪ್ರತಿಪತ್ (ಬಿದಿಗೆ)ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಖಾಸಗಿ ಉದ್ಯೋಗಿಗಳಿಗೆ ಬದಲಾವಣೆಯ ಭಯ
- ಹಣದಿಂದ ಜನರು ಗೌರವಿಸುವ ಸಾಧ್ಯತೆ
- ಇಂದು ನಿಮ್ಮ ಮಾತು ಕೋಪದಿಂದ ಕೆಲಸವಾಗಬಹುದು
- ತುಂಬಾ ಬುದ್ದಿವಂತರರಾದ ನೀವು ಮೋಸಹೋಗುವ ಸಾಧ್ಯತೆ
- ಸ್ಪರ್ಧಾತ್ಮಕ ವಿಚಾರಗಳಿಗೆ ಶುಭದಿನ
- ನಿಮ್ಮ ಆಲೋಚನೆಗಳು ಕುಟುಂಬದ ಮಧ್ಯದಲ್ಲಿರಲಿ
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ವೃಷಭ
- ಸಹೋದರರಲ್ಲಿ ವಿವಾದ, ಕಲಹ ಬೇಡ
- ವ್ಯವಹಾರದಲ್ಲಿ ನಿಮ್ಮ ಜಾಗ್ರತೆ ಬೇರೆಯವರಿಗೆ ಮಾದರಿ
- ಆರೋಗ್ಯ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
- ಅನಿವಾರ್ಯವಾಗಿ ಪ್ರಯಾಣ ಸಾಧ್ಯತೆ ಆದರೆ ಶುಭಕರವಿಲ್ಲ
- ಯಾವುದೇ ವಿಚಾರಗಳನ್ನು ಲಘುವಾಗಿ ಪರಿಗಣಿಸಬೇಡಿ
- ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇದ್ದರೂ ದ್ರೋಹ ಅಥವಾ ಮೋಸ ಸಾಧ್ಯತೆ
- ಬಿಳಿ ಎಕ್ಕದ ಗಿಡಕ್ಕೆ ಪೂಜೆ ಮಾಡಿ ,12 ಪ್ರದಕ್ಷಿಣೆ ಹಾಕಿ
ಮಿಥುನ
- ಹಳೆಯ ವಿಚಾರ ಪ್ರಸ್ತಾಪವಾಗಿ ಬೇಸರ ಸಾಧ್ಯತೆ
- ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ
- ಸ್ನೇಹ ಮಿತ್ರತ್ವಕ್ಕೆ ಬೆಲೆ ಸಿಗಬಹುದು ಅದರಿಂದ ನೆಮ್ಮದಿ ಕೂಡ ಸಿಗುವ ದಿನ
- ಪ್ರೇಮಿಗಳಿಗೆ ತೊಂದರೆಯಾಗುವ ಸಾಧ್ಯತೆ
- ಹೊಸ ಉದ್ಯೋಗ ಅಥವಾ ವೃತ್ತಿ ಆರಂಭಿಸಲು ಶುಭದಿನ
- ಪ್ರಯಾಣವು ಕೂಡ ಸುಖಕರವಾಗಿರಬಹುದು
- ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ
ಕಟಕ
- ಯಾವುದೋ ತೊಂದರೆಯಿದೆ ಎಂದು ಮನಸ್ಸಿನಲ್ಲಿ ಭಯ ಸಾಧ್ಯತೆ
- ವಿನಾಕಾರಣ ಕುಟುಂಬ ಕಲಹ ಸಾಧ್ಯತೆ
- ಇಂದು ಜೀವ ಭಯವಾಗುವಂತ ಯಾವುದೇ ಘಟನೆ ನಡೆಯುವುದಿಲ್ಲ ಭಯ ಬೇಡ
- ಸಣ್ಣ-ಸಣ್ಣ ಸಮಸ್ಯೆಗಳು ಮನಸ್ಸಿನಲ್ಲಿ ಭಯ ಹುಟ್ಟಿಸಬಹುದು
- ಇಂದು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಬೇಸರ ಉಂಟು ಮಾಡಬಹುದು
- ವ್ಯವಹಾರಿಕವಾದ ಅಡೆತಡೆಗಳು ನಿಮ್ಮ ಮುಂದೆ ಬರಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಸಿಂಹ
- ಹೂ ಬೆಳೆಗಾರರಿಗೆ ನಷ್ಟ ಸಾಧ್ಯತೆ
- ಸಾಯಂಕಾಲ ಶುಭ ಸುದ್ದಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ
- ಕೌಟುಂಬಿಕ ಸಂಬಂಧದಲ್ಲಿ ವಿಶ್ವಾಸವಿರಲಿ
- ಮನೆಯ ಸದಸ್ಯರಿಗೆ ಅಧ್ಯಾತ್ಮದ ವಿಚಾರಗಳ ಬಗ್ಗೆ ತಿಳುವಳಿಕೆ ಹೇಳಿ
- ಪ್ರಾಯೋಗಿಕವಾದ ಕೆಲಸಕ್ಕೆ ಆದ್ಯತೆ ನೀಡಿ
- ಕೆಲವು ಅನುಮಾನಾಸ್ಪದ ವಾತಾವರಣ ನಿರ್ಮಾಣವಾಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನಿಮ್ಮ ದೌರ್ಬಲ್ಯ ನಿಮ್ಮ ನಿಯಂತ್ರಣದಲ್ಲಿರಲಿ
- ನಿರೀಕ್ಷಿಸಿದ ವಿಚಾರಗಳಿಗೆ ಸಂಪೂರ್ಣವಾದ ಸಹಾಯ, ಭರವಸೆ ಸಿಗಬಹುದು
- ವೃತ್ತಿ ಮತ್ತು ಕೆಲಸದ ಬಗ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಬಹುದು
- ವಿನಾಕಾರಣ ಬೇರೆಯವರೊಂದಿಗೆ ನಿಷ್ಠೂರ ಬೇಡ
- ದೊಡ್ಡವರ ಸಂಪರ್ಕ ಮತ್ತು ಅವರ ಮಾತು ಸಮಾಧಾನ ಕೊಡುವ ಸಾಧ್ಯತೆ
- ನಿಮ್ಮ ಜವಾಬ್ದಾರಿಯುತ ಕೆಲಸಕ್ಕೆ ಮುಂಗಡ ಹಣ ಸಿಗಬಹುದು
- ಗಣಪತಿ ಪ್ರಾರ್ಥನೆ ಮಾಡಿ
ತುಲಾ
- ಆರ್ಥಿಕ ಸಂಕಷ್ಟ ಕಾಡುವ ಸಾಧ್ಯತೆ
- ದಾಂಪತ್ಯ ವಿಚಾರದಲ್ಲಿ ವಿರಸ ಸಾಧ್ಯತೆ
- ಮಕ್ಕಳು ಮತ್ತು ವಿದ್ಯಾರ್ಥಿಗಳನ್ನು ಗೌರವಿಸಲ್ಪಡುವ ದಿನ
- ಬಡ್ಡಿ ವ್ಯವಹಾರ ಮಾಡುವವರಿಗೆ ಇಂದು ಹಿನ್ನಡೆ ಸಾಧ್ಯತೆ
- ಮನೆಯ ಅಗತ್ಯ ವಸ್ತುಗಳ ಖರೀದಿಯಿಂದ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ
- ವೃತ್ತಿಪರರಿಗೆ ಹೆಚ್ಚು ಅನುಕೂಲ ಇರುವ ದಿನ
- ಐಕ್ಯಮತ್ಯ ಮಂತ್ರ ಜಪಿಸಿ
ವೃಶ್ಚಿಕ
- ವಿದ್ಯಾಭ್ಯಾಸದಲ್ಲಿ ಸ್ವಲ್ಪ ಅನಾನುಕೂಲ ಸಾಧ್ಯತೆ
- ದೂರ ಪ್ರಯಾಣದ ವಿಚಾರವಾಗಿ ಮಾತುಕತೆ ನಡೆಯಬಹುದು
- ಅಧಿಕ ಖರ್ಚಿರುತ್ತೆ ಆದರೆ ಖರ್ಚನ್ನ ನಿಭಾಯಿಸುವ ಶಕ್ತಿ ಕೂಡ ಇರುತ್ತದೆ
- ಸ್ವಲ್ಪ ಸಂತೋಷ ಸ್ವಲ್ಪ ಬೇಸರ ಇರುವ ದಿನ
- ನಿಮ್ಮ ಆಹಾರದ ಬಗ್ಗೆ ಜಾಗ್ರತೆವಹಿಸಿ
- ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗುವ ದಿನ
- ಸರಸ್ವತಿ ಆರಾಧನೆ ಮಾಡಿ
ಧನುಸ್ಸು
- ವಿದೇಶದ ಶುಭ ವಿಚಾರವೊಂದು ಮನಸ್ಸಿಗೆ ಸಂತೋಷ ನೀಡುತ್ತದೆ
- ಮಾತಿನಿಂದ ಜನಾಕರ್ಷಣೆ ಸಾಧ್ಯತೆ
- ಜವಾಬ್ದಾರಿಗಳ ಪೂರೈಕೆ ಆಗುತ್ತದೆ ಅದರಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
- ನವ ವಿವಾಹಿತರಿಗೆ ಶುಭ ದಿನ
- ವ್ಯಾಪಾರದಲ್ಲಿ ಸವಾಲುಗಳು ಎದುರಾಗಬಹುದು ಆದರೆ ನಿಮ್ಮ ಅನುಭವ ನಿಮಗೆ ಜಯ ತಂದು ಕೊಡುತ್ತದೆ
- ನೌಕರಿ ಅಥವಾ ವೃತ್ತಿಯಲ್ಲಿ ಗೌರವ ಹೆಚ್ಚಾಗಬಹುದು
- ಹಿರೀಕರ ಆರ್ಶೀವಾದ ಪಡೆಯಿರಿ
ಮಕರ
- ಮಂಗಳಕಾರ್ಯ ಅಥವಾ ಶುಭ ಕಾರ್ಯದ ಬಗ್ಗೆ ಚಿಂತನೆ ಸಾಧ್ಯತೆ
- ಎರಡನೇ ಬಳಗದ ಅಣ್ಣತಮ್ಮಂದಿರಿಗೆ ತೊಂದರೆ ಸಾಧ್ಯತೆ
- ಕುಟುಂಬದವರೊಂದಿಗೆ ಸಾಯಂಕಾಲ ಉತ್ತಮ ವಾತಾವರಣವಿರುತ್ತದೆ
- ಸಹೋದ್ಯೋಗಿಗಳಿಗೆ ನಿಮ್ಮಿಂದ ಸಹಾಯ ಸಾಧ್ಯತೆ
- ದಿನದ ಆರಂಭದಲ್ಲಿ ಕೆಲಸದಲ್ಲಿ ಉದಾಸೀನತೆ, ತಾತ್ಸಾರ ಆಲಸ್ಯ ಕಾಣಬಹುದು
- ನಿಮ್ಮ ಪರಿಶ್ರಮದಿಂದ ಹಲವರಿಗೆ ಲಾಭ ಸಾಧ್ಯತೆ
- ದುರ್ಗಾರಾಧನೆ ಮಾಡಿ
ಕುಂಭ
- ಮನೆಯಿಂದ ಹೊರಗಿದ್ದಾಗ ಖುಷಿಯಾಗಿರುವ ಸಾಧ್ಯತೆ
- ಪ್ರಯಾಣವು ಕೂಡ ಇಷ್ಟವಾಗಬಹುದು
- ಮನೋರಂಜನೆಯ ದಿನವಾದರೂ ಸಂತೋಷ ಕಡಿಮೆ
- ದಾಂಪತ್ಯದಲ್ಲಿ ಹೊಂದಾಣಿಕೆ ಬೇಕಾಗಬಹುದು
- ಅನೇಕ ಯೋಚನೆಗಳು ಒಟ್ಟಿಗೆ ಬರಬಹುದು
- ಸ್ನೇಹಿತರ ಜೊತೆ ವಿವಾದಗಳು ಉಂಟಾಗಬಹುದು
- ಕುಲದೇವತಾ ಪ್ರಾರ್ಥನೆ ಮಾಡಿ
ಮೀನ
- ಮಕ್ಕಳ ವಿಚಾರದಲ್ಲಿ ಸಮಸ್ಯೆ, ತೊಂದರೆ ಕಾಡಬಹುದು ಎಚ್ಚರಿಕೆ ಇರಲಿ
- ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಸಾಧ್ಯತೆ
- ಮೂಳೆಗೆ ಸಂಬಂಧಿಸಿದ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
- ಜನರ ಪರ ಕೆಲಸದಿಂದ ಹೊಗಳಿಕೆ ಸಾಧ್ಯತೆ
- ಹಿರಿಯರ ಅಭಿಪ್ರಾಯ, ಮಾರ್ಗದರ್ಶನವನ್ನ ನಿರ್ಲಕ್ಷ್ಯ ಮಾಡಬೇಡಿ
- ಇಂದು ಯಾವುದೇ ಹೊಸ ಕೆಲಸ ಆರಂಭಿಸುವುದು ಬೇಡ
- ಕುಟುಂಬದಲ್ಲಿ ಸಂತೋಷ ವಿರುತ್ತದೆ ಅದನ್ನ ಹಾಗೆ ಕಾಪಾಡಿ
- ಧನ್ವಂತರಿಯನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ