/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ತೃತೀಯಾ ತಿಥಿ, ಭರಣಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಹಣವಿರುತ್ತದೆ ಅನುಭವಿಸುವ ಯೋಗ ಕಡಿಮೆ
- ಇಂದು ಆಶ್ಚರ್ಯ ಹುಟ್ಟಿಸುವಂತೆ ಸೌಮ್ಯವಾಗಿರುತ್ತೀರಿ
- ಮಕ್ಕಳಿಂದ ಸಂತೋಷ ಸಿಗಲಿದೆ
- ಸ್ವಂತ ಭೂಮಿಯ ವಿಚಾರದ ಮಾತುಕತೆ ನಡೆಯಲಿದೆ
- ಮನೆಯಲ್ಲಿ ಅಶಾಂತಿ ವಾತಾವರಣ
- ಅನೇಕ ರೀತಿಯಲ್ಲಿ ಮನಸ್ಸು ವಿಚಲಿತವಾಗಬಹುದು
- ವಿಘ್ನೇಶ್ವರನನ್ನು ಪ್ರಾರ್ಥಿಸಿ
ವೃಷಭ
- ಅನುಕೂಲವಿದ್ದಾಗ ಖುಷಿಪಡಿ ಯೋಚಿಸಬೇಡಿ
- ದೈವಭಕ್ತಿಯಿರಲಿ ಶುಭವಿದೆ ಸಂಕಟದಿಂದ ಪಾರಾಗುವಿರಿ
- ವೃತ್ತಿಯಲ್ಲಿ ಅಧಿಕಾರಿಗಳಿಂದ ಸಲಹೆ ಸೂಚನೆ ಸಿಗಲಿದೆ
- ಮನೆಯವರ ಸಲಹೆ ಇಷ್ಟವಾಗುವುದಿಲ್ಲ
- ಆದಾಯಕ್ಕಿಂತ ಖರ್ಚು ಹೆಚ್ಚು
- ಅನುಚಿತ ಕೆಲಸಗಳ ವಿಚಾರ ಮಾಡಬೇಡಿ
- ಗಾಯತ್ರೀ ಮಂತ್ರ ಶ್ರವಣ ಮಾಡಿ
ಮಿಥುನ
- ಬಂಧುಗಳ ನೆರವು ಉತ್ತಮ ಸಹಕಾರ ಸಿಗಲಿದೆ
- ಇಂದು ವೃತ್ತಿಪರರಿಗೆ ಅನುಕೂಲವಿದೆ
- ಹೆಂಗಸರಿಗೆ ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
- ದಾಂಪತ್ಯ ವಿಚಾರ ಏರಿಳಿತಗಳಿಂದ ಕೂಡಿರುತ್ತದೆ
- ಎದುರಾಳಿಗಳಿಗೆ ಹೆದರಿಕೆ ಆಗಬಹುದು
- ವಿದ್ಯಾರ್ಥಿಗಳಿಗೆ ಅಡಚಣೆಯಿಂದ ಬೇಸರ ಆಗಬಹುದು
- ಧನ್ವಂತರಿಯನ್ನು ಆರಾಧಿಸಿ
ಕಟಕ
- ಸಭ್ಯ ನಡವಳಿಕೆ ಬೇರೆಯವರಿಗೆ ಇಷ್ಟ ಮನೆಯವರಿಗೆ ಕಷ್ಟ
- ಕೆಲಸಗಳನ್ನು ಏಕಾಗ್ರಚಿತ್ತದಿಂದ ಮಾಡಿ
- ಉದ್ಯೋಗದಲ್ಲಿ ಬಡ್ತಿ ಅವಕಾಶ ಹೊಸಬರಿಗೆ ಆದ್ಯತೆ ಸಿಗಲಿದೆ
- ವಿವಾಹ ವಿಚಾರ ಸಂತೋಷ ಕೊಡಲಿದೆ
- ಮನಸ್ಸಿನ ಅನುಮಾನಗಳು ಕೆಲವು ನಿಜವಾಗಬಹುದು
- ಖಾಸಗಿ ಕ್ಷೇತ್ರದವರಿಗೆ ಸಿಹಿ ಸುದ್ದಿ
- ಸಾಲಿಗ್ರಾಮ ಮಹಾವಿಷ್ಣುವನ್ನು ಪ್ರಾರ್ಥಿಸಿ
ಸಿಂಹ
- ವೈವಾಹಿಕ ಜೀವನ ಉತ್ತಮ ಹೊಂದಾಣಿಕೆ ಇರಲಿ
- ವೃತ್ತಿ ಜೀವನದಲ್ಲಿ ಎಡವಟ್ಟು ಅಪಮಾನದ ಭಯ
- ಕೆಲಸದಲ್ಲಿ ಬಡ್ತಿ ಸಿಗಬಹುದು
- ನ್ಯಾಯಾಲಯದ ವಿಚಾರಗಳಿಗೆ ತಿರುವು ಸಿಗುವುದರಿಂದ ಸಂತೋಷ ಸಿಗಲಿದೆ
- ನಿಮ್ಮ ಸ್ವಭಾವದಿಂದ ಸಂಬಂಧಿಕರಿಗೆ ಸಂತೋಷ
- ಜನರು ನಿಮ್ಮಿಂದ ನಿರೀಕ್ಷೆ ಇಟ್ಟುಕೊಂಡು ನಿರಾಶೆ ಹೊಂದಬಹುದು
- ಶ್ರೀರಾಮನನ್ನು ಪ್ರಾರ್ಥಿಸಿ
ಕನ್ಯಾ
- ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿ ನೆಮ್ಮದಿಯಿದೆ
- ಬಂಧುಗಳಿಂದ ಉತ್ತಮ ಸುದ್ದಿ ಸಿಗಲಿದೆ
- ಹಳೆಯ ಸಮಸ್ಯೆಗಳಿಂದ ಅಶಾಂತಿ
- ಯಂತ್ರಗಳಿಂದ ತೊಂದರೆ ಆಗಬಹುದು
- ಷೇರು ಪೇಟೆಯಲ್ಲಿ ಗಣನೀಯ ಲಾಭವಿದೆ
- ಕುಟುಂಬದವರ ಸಹಕಾರವಿರುವುದಿಲ್ಲ
- ಯೋಗಾನರಸಿಂಹನನ್ನು ಪ್ರಾರ್ಥಿಸಿ
ತುಲಾ
- ಕುಟುಂಬದ ನೆಮ್ಮದಿಯನ್ನು ಹಾಳುಮಾಡಿಕೊಳ್ಳುತ್ತೀರಿ
- ಅನುಭವಿಗಳ ಮಾತನ್ನು ಕೇಳಿ ಒಳಿತಾಗಲಿದೆ
- ಗಂಡ - ಹೆಂಡತಿಯ ಜಗಳ ಮಕ್ಕಳಿಗೆ ಆಘಾತವಾಗಬಹುದು
- ಯಾವ ಕಾರ್ಯಕ್ಕೂ ಉತ್ಸಾಹವಿಲ್ಲ
- ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು
- ಅನುಮಾನದಿಂದ ದಾಂಪತ್ಯದಲ್ಲಿ ಕಲಹ ಉಂಟಾಗಲಿದೆ
- ಕುಲದೇವತೆಯನ್ನು ಸರಿಯಾಗಿ ಆರಾಧಿಸಿ
ವೃಶ್ಚಿಕ
- ಹಣದ ಸಮಸ್ಯೆಗಳು ಬಗೆಹರಿಯುತ್ತದೆ
- ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ
- ತಾಯಿಯನ್ನು ಗೌರವಿಸಿ ಬೆಲೆ ಕೊಡಿ
- ಕಾರ್ಯಚಟುವಟಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆ
- ಸ್ನೇಹಿತರ ಬಂಧುಗಳ ಮಾತಿನಿಂದ ಪ್ರಭಾವಿತರಾಗುತ್ತೀರಿ
- ವ್ಯವಹಾರದಲ್ಲಿ ಹಿಂದಿನ ಶ್ರಮ ಇಂದಿನ ಲಾಭ ಆಗಲಿದೆ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥಿಸಿ
ಧನುಸ್ಸು
- ದೇಹಾಲಸ್ಯ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ
- ಚಿಕ್ಕ ಮಕ್ಕಳನ್ನು ನಿರ್ಲಕ್ಷಿಸಬೇಡಿ
- ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು
- ರಾಜಕೀಯ ಸಂಪರ್ಕದಿಂದ ಲಾಭವಿದೆ
- ವ್ಯವಹಾರದಲ್ಲಿ ಸಹಭಾಗಿತ್ವದಿಂದ ಲಾಭ ಆಗಲಿದೆ
- ಪತಿ - ಪತ್ನಿಯರ ಕಲಹಕ್ಕೆ ಈ ದಿನ ಔಷಧಿಯಿಲ್ಲ
- ಗಣಪತಿಯನ್ನು 21 ಗರಿಕೆಯಿಂದ ಪೂಜಿಸಿ
ಮಕರ
- ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರವಹಿಸಿ
- ಆತ್ಮೀಯರೊಂದಿಗೆ ವೈಮನಸ್ಯ ಉಂಟಾಗಬಹುದು
- ಬೇರೆಯವರನ್ನು ಗೌರವಿಸಿ ಲಾಭವಿದೆ
- ಬಹುನಿರೀಕ್ಷಿತ ಕೆಲಸದಲ್ಲಿ ವಿಳಂಬ ಆಗಬಹುದು
- ವಿದೇಶ ಪ್ರಯಾಣ ಪ್ರವಾಸಕ್ಕೆ ಅನುಕೂಲವಿದೆ
- ಸರಿಯಾದ ದಿನಚರಿಯನ್ನು ಆಯೋಜಿಸಿಕೊಳ್ಳಿ
- ವಿಷ್ಣುತ್ರಯೀ ಮಂತ್ರ ಜಪ ಮಾಡಿ
ಕುಂಭ
- ಸಮಾಜದ ಜನಪ್ರಿಯತೆಯ ಹಿಂದೆ ಹೋಗಬೇಡಿ
- ಕುಟುಂಬದ ಶಾಂತಿ ಕಾಪಾಡಿ
- ಪ್ರತಿಷ್ಠೆ - ಗೌರವ ಹೆಚ್ಚಾಗಲಿದೆ
- ಅಂದುಕೊಂಡ ಕಾರ್ಯ ಕೈಗೂಡುವುದರಿಂದ ಉತ್ಸಾಹ
- ಇಂದು ನೀವು ನೀವಾಗಿರಬೇಕು
- ಹೊಸ ಹೊಸ ಅವಕಾಶಗಳು ಹೊರೆಯಲಿವೆ
- ಇಷ್ಟದೇವತಾ ಪೂಜೆ ಮಾಡಿ
ಮೀನ
- ಅಲ್ಪ ಪ್ರಯತ್ನದಿಂದ ದೊಡ್ಡ ಕೆಲಸಗಳಾಗಬಹುದು
- ಮಕ್ಕಳ ಶಿಕ್ಷಣದ ಕುರಿತು ಚಿಂತೆ ಬೇಡ ಶುಭವಿದೆ
- ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಲಿದೆ
- ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಕಾಲ ಪ್ರಯತ್ನಿಸಿ
- ವಿದ್ಯಾರ್ಥಿಗಳ ಸಾಧನೆಗೆ ಉತ್ತಮ ವಾತಾವರಣ
- ಹೊಸ ಆಸ್ತಿ ಆದಾಯ ನಿಮ್ಮದಾಗಬಹುದು
- ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ