/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ರೋಹಿಣಿ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ವಿದೇಶ ಪ್ರಯಾಣ ಮಾಡುವುದರಿಂದ ಆನಂದ
- ಸರ್ಕಾರದಿಂದ ಲಾಭದ ಸೂಚನೆ ಇದೆ
- ಬೇರೆಯವರಿಂದ ಏನನ್ನು ನಿರೀಕ್ಷಿಸಬೇಡಿ
- ನಿಮ್ಮ ಧೈರ್ಯ ಬೇರೆಯವರಿಗೆ ಮಾದರಿಯಾಗಲಿದೆ ಕೋಪಬೇಡ
- ವಿರೋಧಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾರೆ
- ಹಳೆಯ ಸ್ನೇಹಿತರಿಂದ ಅಪಮಾನ ಆಗಬಹುದು
- ಹಗುರವಾದ ಮಾತುಕತೆಯಿಂದ ಬೇಸರ ಆಗಬಹುದು
- ವನದುರ್ಗಾ ಆರಾಧನೆ ಮಾಡಿ
ವೃಷಭ
- ಆದಾಯದಲ್ಲಿ ಇಳಿಕೆ ಬೇಸರ ಆತಂಕ ಆಗಬಹುದು
- ವ್ಯಾಪಾರದಲ್ಲಿ ನಷ್ಟ ಆಗಲಿದೆ
- ಅನಗತ್ಯ ಸಲಹೆ ಪಡೆಯುತ್ತೀರಿ ವಾದ ಬೇಡ
- ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ದೊಡ್ಡ ಅನಾಹುತ ಆಗಬಹುದು
- ಪ್ರೇಮಿಗಳಿಗೆ ಕಷ್ಟದ ಪರಿಸ್ಥಿತಿ ಸ್ಥಳ ಬದಲಾವಣೆ
- ಆರೋಗ್ಯದಲ್ಲಿ ತಕ್ಷಣ ಏರುಪೇರಾಗಬಹುದು
- ಸೂರ್ಯನಾರಾಯಣನನ್ನು ಪ್ರಾರ್ಥಿಸಿ
ಮಿಥುನ
- ಪ್ರಯಾಣದಲ್ಲಿ ಆಯಾಸ ಆಗುವುದರಿಂದ ಕೆಲಸ ಮುಂದೂಡುತ್ತೀರಿ
- ನಿದ್ರಾಹೀನತೆ ಆರೋಗ್ಯದ ಬಗ್ಗೆ ನಿಗಾ ಇರಬೇಕು
- ತಾಯಿ ಅಜ್ಜಿಯವರಿಗೆ ತೊಂದರೆಯಿದೆ ಎಚ್ಚರಿಕೆವಹಿಸಿ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಮಕ್ಕಳ ಸಹಾಯದಿಂದ ಅಥವಾ ಬೇರೆಯವರಿಂದ ಅನುಕೂಲ ಆಗಲಿದೆ
- ನಿಮ್ಮ ಹಟ ಸ್ವಭಾವದಿಂದ ಅವಮಾನ ಆಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಪ್ರಮುಖ ವ್ಯಕ್ತಿಗಳ ಜೊತೆ ಮಾತಾಡುವುದರಿಂದ ಸಮಯ ವ್ಯರ್ಥ ಆಗಬಹುದು
- ಪ್ರೇಮಿಗಳು ವಿವಾಹದ ವಿಚಾರವನ್ನು ಪ್ರಸ್ತಾಪ ಮಾಡಲು ಉತ್ತಮ ದಿನ
- ಮಕ್ಕಳ ಸಮಸ್ಯೆ ಬಗೆಹರಿಸಿ
- ಅಧಿಕಾರಿ ವರ್ಗದವರೊಂದಿಗೆ ವಾದ ಬೇಡ
- ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ ಮಾಡಿ
- ಹಣದ ಅಭಾವದಿಂದ ಮಾನಸಿಕ ಒತ್ತಡ
- ಲಕ್ಷ್ಮೀಯನ್ನು 16 ಕಮಲ ಪುಷ್ಪಗಳಿಂದ ಅರ್ಚಿಸಿ
ಸಿಂಹ
- ನಿಮ್ಮ ಕರ್ತವ್ಯಕ್ಕೆ ಬದ್ಧರಾಗಿರಿ
- ಪ್ರೇಮಿಗಳಲ್ಲಿ ಪರಸ್ಪರ ಕಿತ್ತಾಟ ಆಗಲಿದೆ
- ಈ ದಿನ ನಿರಾಶಾಭಾವನೆ ಬೇಡ
- ವಿದ್ಯಾರ್ಥಿಗಳಿಗೆ ವಿಚಲಿತವಾಗುವ ಮನಸ್ಸು ಅಧ್ಯಯನಕ್ಕೆ ತೊಂದರೆಯಾಗಬಹುದು
- ಸ್ಪರ್ಧಾತ್ಮಕ ಜೀವನ ಬೇಸರಕ್ಕೆ ಕಾರಣ ಆಗಲಿದೆ
- ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಆಗಬಹುದು ಗಾಬರಿ ಬೇಡ
- ಧ್ಯಾನ ಮಾಡಿ
ಕನ್ಯಾ
- ನಾಯಕತ್ವ ಗೌರವ ತಂದುಕೊಡುತ್ತದೆ.
- ಹಲವರ ಕೆಂಗಣ್ಣಿಗೆ ಗುರಿಯಾಗುತ್ತೀರಿ
- ಕಲಾ ಪ್ರಪಂಚದ ಹಿರೀಕರಿಗೆ ಗೌರವ ಸಿಗಲಿದೆ
- ಪುಸ್ತಕ ವ್ಯಾಪಾರಿಗಳಿಗೆ ಲಾಭ ಮನ್ನಣೆ ಸಿಗುವ ದಿನ
- ಷೇರು ಮಾರುಕಟ್ಟೆಯಿಂದ ಲಾಭ ಹಣಹೂಡಿಕೆ ಬೇಡ
- ದಾಂಪತ್ಯದಲ್ಲಿ ಒಳ ಜಗಳ ಇದ್ದೇ ಇರುತ್ತದೆ
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ತುಲಾ
- ಅಪಘಾತ ಆಗುವ ಸಂಭವ ಎಚ್ಚರಿಕೆವಹಿಸಿ
- ಮಾನಸಿಕ ಒತ್ತಡವನ್ನು ದೂರಮಾಡಿ
- ವೈಯಕ್ತಿಕ ವಿಚಾರಗಳಲ್ಲಿ ಗೊಂದಲ ಬೇಡ
- ಅನುಪಯುಕ್ತ ಕೆಲಸಗಳಲ್ಲಿ ಹಣ ವ್ಯಯಯಾಗಬಹುದು
- ಬಟ್ಟೆ ವ್ಯಾಪಾರಿಗಳಿಗೆ ನಷ್ಟದ ಸಾಧ್ಯತೆ
- ಆದಾಯಕ್ಕಿಂತ ಖರ್ಚು ಅಧಿಕ
- ಕಾಲ ಭೈರವನನ್ನು ಪೂಜಿಸಿ
ವೃಶ್ಚಿಕ
- ಎಲ್ಲರೊಂದಿಗೆ ಸಂತೋಷವಾಗಿರಿ ಯಶಸ್ಸಿದೆ
- ನಿಮ್ಮ ಎಲ್ಲ್ಲಾ ಕಾರ್ಯಗಳು ಯಶಸ್ವಿಯಾಗಲಿ
- ಮನೋಬಲ ಹೆಚ್ಚಾಗುವ ದಿನ
- ಯಾವುದೇ ಕಾರಣಕ್ಕೂ ಅತಿಯಾದ ನಂಬಿಕೆಬೇಡ
- ಕುಟುಂಬದಲ್ಲಿ ಶುಭ ವಾತಾವರಣ ಇರಲಿದೆ
- ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿಯಿರುವುದಿಲ್ಲ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥಿಸಿ
ಧನುಸ್ಸು
- ನಿಮ್ಮ ವೃತ್ತಿ ನೌಕರಿಯಲ್ಲಿ ಒತ್ತಡದಿನ
- ನಂಬಿದವರಿಂದ ಹಣದ ಮೋಸ ಆಗಬಹುದು
- ಪ್ರೇಮಿಗಳಿಗೆ ಸಮಸ್ಯೆ ಉಂಟಾಗಬಹುದು
- ಲಾಭವಿದ್ದರೂ ಎಚ್ಚರಿಕೆ ಇರಬೇಕು
- ವಿದ್ಯಾರ್ಥಿ, ಉಪಾಧ್ಯಾಯರ ಮಧ್ಯೆ ವೈಮನಸ್ಸು ಏರ್ಪಾಟಾಗಬಹುದು
- ಅಧ್ಯಯನದ ಕಡೆ ಮನಸ್ಸಿದ್ದವರಿಗೆ ಮಾತ್ರ ಜಯವಿದೆ
- ಉಮಾ ಮಹೇಶ್ವರರ ಆರಾಧನೆ ಮಾಡಿ
ಮಕರ
- ಜೀವನದಲ್ಲಿ ಪರಸ್ಪರ ಹೊಂದಾಣಿಕೆಯಿರಲಿ
- ಸ್ನೇಹಿತರ ಕೆಲಸಕ್ಕಾಗಿ ಸಮಯ ವ್ಯರ್ಥ ಆಗಬಹುದು
- ಸಹೋದರಿಯ ಚಿಂತೆ ಮಾಡುವುದರಿಂದ ಬೇಸರ ಆಗಬಹುದು
- ರಕ್ತದೊತ್ತಡ ರೋಗಿಗಳು ಎಚ್ಚರವಹಿಸಿ
- ಹಿರಿಯರ ನಿರ್ಲಕ್ಷ್ಯ ಎಲ್ಲದಕ್ಕೂ ಅಡ್ಡಿಯಾಗಬಹುದು
- ಪೋಷಕರನ್ನು ನಿಂದಿಸಬೇಡಿ ಆಶೀರ್ವಾದ ಇರಲಿ
- ತಿರುಪತಿ ದೇವರ ದರ್ಶನ ಮಾಡಿ
ಕುಂಭ
- ಉದ್ಯೋಗ ವೃತ್ತಿಯಲ್ಲಿ ಆತಂಕ ಎದುರಾಗಬಹುದು
- ಬಂಧುಗಳಿಂದ ಟೀಕೆ ಬರಲಿದೆ
- ಹಣಕ್ಕೆ ತೊಂದರೆಯಿಲ್ಲ ಖರ್ಚು ಅಧಿಕ
- ಆತುರದ ಕ್ರಮದಿಂದ ನಷ್ಟ ಆಗಬಹುದು
- ಸಮಯದ ಸದುಪಯೋಗವಾಗಲಿ
- ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು ಎಚ್ಚರಿಕೆ
- ಗಣಪತಿಗೆ 21 ಗರಿಕೆ ಸಮರ್ಪಿಸಿ
ಮೀನ
- ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಿ
- ವೈವಾಹಿಕ ವಿಚಾರದಲ್ಲಿ ನಕಾರಾತ್ಮಕ ಚಿಂತನೆ ಬೇಡ
- ವ್ಯಾಪಾರದಲ್ಲಿ ಉತ್ತಮ ಲಾಭವಿದೆ
- ಕೆಲಸ ಕಾರ್ಯಗಳನ್ನೆಲ್ಲಾ ಯೋಜನೆಯಂತೆ ಮಾಡಿ
- ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
- ಕುಲದೇವತಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ