/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣಪಕ್ಷ, ನವಮಿ ತಿಥಿ, ಪುಷ್ಯಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಮಾತಿನಿಂದ ಕುಟುಂಬದ ಮೇಲೆ ಪರಿಣಾಮನ್ನುಂಟು ಮಾಡಬಹುದು
- ವೃತ್ತಿ ವ್ಯಾಪಾರ ವ್ಯವಹಾರದಲ್ಲಿ ಅನುಕೂಲವಿದೆ
- ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
- ಮನೆಯಲ್ಲಿ ಕಿರಿಕಿರಿಯಾಗಬಹುದು
- ಈ ದಿನ ಆರೋಗ್ಯ ಹಣ ಚೆನ್ನಾಗಿರುತ್ತದೆ
- ಗರ್ಭಿಣಿ ಸ್ತ್ರೀಯರು ಎಚ್ಚರವಹಿಸಿ
- ಸರಸ್ವತಿಯನ್ನು ಪ್ರಾರ್ಥಿಸಿ
ವೃಷಭ
- ನಿಮ್ಮ ಧಾರಾಳತೆಯಿಂದ ಬೇರೆಯವರಿಗೆ ಅನುಕೂಲ
- ಯಾವುದೇ ವಿವಾದಗಳನ್ನು ಮಾಡಿಕೊಳ್ಳಬೇಡಿ
- ಹಿರಿಯರ ಆಶ್ರಯದಿಂದ ಸಮಾಧಾನ
- ಮನೆ ಬದಲಾಯಿಸುವುದು ಸಧ್ಯಕ್ಕೆ ಬೇಡ
- ಮಾನಸಿಕ ನೆಮ್ಮದಿ ಸಿಕ್ಕರೇ ಉಳಿದೆಲ್ಲಾ ನಿಮ್ಮ ವಶವಾಗಬಹುದು
- ಕ್ರೀಡಾಪಟುಗಳು ವಿಶೇಷ ಎಚ್ಚರಿಕೆ ವಹಿಸಬೇಕು
- ಕೃಷ್ಣನನ್ನು ತುಳಸಿಯಿಂದ ಪೂಜಿಸಿ
ಮಿಥುನ
- ಅಪರಿಚಿತ ವ್ಯಕ್ತಿಯೊಂದಿಗೆ ವಿವಾದ
- ಮಾನಸಿಕ ಧೈರ್ಯ ಕಡಿಮೆ ಬೇಸರ ಆಗಬಹುದು
- ಆರ್ಥಿಕ ತೊಂದರೆಯಿಲ್ಲ ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
- ಕೇವಲ ಹಣದಿಂದ ಏನೂ ಸಾಧಿಸಲಾಗದು ಎಂದು ತಿಳಿಯಬೇಕಾದ ದಿನ
- ಊಹಾಪೋಹಗಳಿಂದ ಮಾನಸಿಕ ಖಿನ್ನತೆ ಕಾಡಬಹುದು
- ಮನೆಯ ಸಮಸ್ಯೆಗಳಿಂದ ಉದ್ವೇಗಕ್ಕೆ ಒಳಗಾಗುತ್ತೀರಿ
- ಗೋವಿಗೆ ಅಕ್ಕಿಬೆಲ್ಲ ನೀಡಿ
ಕಟಕ
- ಮಕ್ಕಳಿಂದ ಖುಷಿ ಸಂತೋಷ ಸಿಗಲಿದೆ
- ಕೌಟುಂಬಿಕ ವಿಚಾರದಲ್ಲಿ ಸಾಮರಸ್ಯ ಇರುತ್ತದೆ
- ಮನಸ್ಸಿಗೆ ನೆಮ್ಮದಿಯಿಂದಿರುವ ದಿನ
- ಯಾರನ್ನೂ ಹೆಚ್ಚು ಹಚ್ಚಿಕೊಳ್ಳಬೇಡಿ ದುಃಖ ಆಗಬಹುದು
- ನಿಮ್ಮ ವ್ಯವಹಾರದಿಂದ ಬೇರೆಯವರಿಗೆ ಲಾಭವಿದೆ
- ಆಹಾರ ವ್ಯತ್ಯಯದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
- ಶ್ರೀರಾಮನನ್ನು ಪ್ರಾರ್ಥಿಸಿ
ಸಿಂಹ
- ಬೇರಯವರ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು
- ನಿಮ್ಮ ಮನಸ್ಥಿತಿಯನ್ನು ಹಾಗೇ ಕಾಯ್ದುಕೊಳ್ಳಿ
- ಶಿಕ್ಷಣ ರಂಗದಲ್ಲಿ ಕೆಲಸ ಮಾಡುವವರಿಗೆ ಅನುಕೂಲವಿದೆ
- ಪ್ರಯತ್ನ ಮಾಡಿ ಖಂಡಿತ ಯಶಸ್ಸಿದೆ
- ಬಂಧುಗಳಿಂದ ಸಹಾಯ ಅನುಕೂಲವಿದೆ
- ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ
- ರಾಜರಾಜೇಶ್ವರಿಯನ್ನು ಅರ್ಚಿಸಿ
ಕನ್ಯಾ
- ನಿಮ್ಮ ಸಂತೋಷವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ
- ಹಣದ ವಿಚಾರದಲ್ಲಿ ನಿಮ್ಮ ಆದಾಯ ಗಮನಿಸಿ
- ಇಂದು ಪ್ರೇಮಿಗಳಿಗೆ ಉತ್ತಮ ದಿನ
- ಕಾರ್ಯಕ್ಷೇತ್ರಗಳಲ್ಲಿ ಶೀಘ್ರ ಬದಲಾವಣೆಯಾಗಬಹುದು
- ಬೇರೆಯವರ ಪ್ರೀತಿಗೆ ನೀವು ಪಾತ್ರರಾಗಬಹುದು
- ಬೇರೆಯವರು ಕಷ್ಟವನ್ನು ನಿಮ್ಮ ಹತ್ತಿರ ಹೇಳಿಕೊಳ್ಳಬಹುದು
- ಇಷ್ಟದೇವತಾ ಪ್ರಾರ್ಥನೆ
ತುಲಾ
- ಹಣವಿದೆ ಆದರೆ ನೆಮ್ಮದಿಯಿಲ್ಲ
- ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ
- ಮಾನಸಿಕ ದುಃಖ ನಿಮ್ಮನ್ನು ಕಾಡಬಹುದು
- ಮನೆಯಲ್ಲಿ ಪರಸ್ಪರ ಅನ್ಯೋನ್ಯತೆ ಕಾಪಾಡಿಕೊಳ್ಳಬೇಕು
- ನಿಮ್ಮ ಮಾತಿನಿಂದಲೇ ಅವಮಾನ ಅಗಬಹುದು
- ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಬೇಕು
- ದುರ್ಗಾದೇವಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ವೈವಾಹಿಕ ಜೀವನದ ಏರಿಳಿತಗಳ ಅನುಭವ ಆಗಬಹುದು
- ನಿಮ್ಮ ಬುದ್ಧಿವಂತಿಕೆ ಕೆಲಸ ಮಾಡುತ್ತದೆ
- ಆಧ್ಯಾತ್ಮಿಕ ಲಾಭಕ್ಕಾಗಿ ಧ್ಯಾನ ಯೋಗ ಮಾಡಿ
- ಪ್ರೇಮಿಗಳಿಗೆ ಸಾಧಾರಣವಾದ ದಿನ
- ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿವಸ
- ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಿ
- ಮಹಾವಿಷ್ಣುವನ್ನು ಸ್ಮರಿಸಿ
ಧನುಸ್ಸು
- ಪ್ರಯತ್ನ ಪೂರ್ವಕವಾಗಿ ಸಂತೋಷ ಪಡೆಯಬೇಕು
- ಕುಟುಂಬದಲ್ಲಿ ವೈಮನಸ್ಯ ಮೂಡಬಹುದು
- ಹಣ ಬರುತ್ತದೆ ಅಪಮಾನವೂ ಆಗಲಿದೆ
- ಮಧ್ಯವರ್ತಿಗಳಿಂದ ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು
- ಇಂದು ನಿಮ್ಮ ಕೋಪ ನಿಯಂತ್ರಣದಲ್ಲಿರಲಿ
- ಕೆಲವು ಗಂಭೀರ ಸಮಸ್ಯೆಗಳು ಎದುರಾಗಬಹುದು
- ಈಶ್ವರನ ಆರಾಧನೆ ಮಾಡಿ
ಮಕರ
- ನಿಮ್ಮ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುತ್ತೀರಿ ಆದರೆ ಉಪಯೋಗವಿಲ್ಲ
- ಬೇರೆಯವರನ್ನು ಅವಲಂಬನೆ ಮಾಡಬೇಡಿ
- ವೃತ್ತಿಯಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು
- ಆಹಾರ ನಿಯಂತ್ರಣದಲ್ಲಿರಲಿ
- ವಾದ ವಿವಾದಗಳ ಸುಳಿವಲ್ಲಿ ಸಿಲುಕುತ್ತೀರಿ
- ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು
- ಕುಲದೇವತಾ ಆರಾಧನೆ ಮಾಡಿ
ಕುಂಭ
- ಹೊಸ ವಸ್ತ್ರ ಖರೀದಿ ವಿಚಾರದಲ್ಲಿ ನಿರಾಶೆಯಾಗಬಹುದು
- ಸಮಯೋಚಿತ ಬದಲಾವಣೆಗೆ ಆದ್ಯತೆ ನೀಡಿ
- ಕುಟುಂಬದ ಸದಸ್ಯರ ಬಗ್ಗೆ ಕಾಳಜಿಯಿರಲಿ
- ಇಂದು ಮಾನಸಿಕ ಶಾಂತಿ ಕಡಿಮೆ ಇರಲಿದೆ
- ಹಳೆಯ ಗೆಳೆಯರ ಸಂಪರ್ಕದಿಂದ ಸಮಸ್ಯೆಯಾಗಬಹುದು
- ಇಂದು ಆರ್ಥಿಕ ಸಮಸ್ಯೆಯಿರುವುದಿಲ್ಲ
- ನವಗ್ರಹರ ಆರಾಧನೆ ಮಾಡಿ
ಮೀನ
- ಹಳೆಯ ನೆನಪು ಕಾಡುವುದರಿಂದ ಸಂತೋಷ ಸಿಗಲಿದೆ
- ಹಣದ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
- ವೃತ್ತಿಯಲ್ಲಿ ಸ್ವಲ್ಪ ವ್ಯತ್ಯಯ ಆಗಬಹುದು
- ಮಕ್ಕಳೊಂದಿಗೆ ನಿಮ್ಮ ಅಮೂಲ್ಯ ಸಮಯ ಕಳೆಯುತ್ತೀರಿ
- ಸಹೋದರರ ಸಹಕಾರ ಸಿಗಲಿದೆ
- ಯಾವುದೇ ರೀತಿಯ ಹೊಸ ವ್ಯವಹಾರ ಬೇಡ
- ಲಕ್ಷ್ಮಿದೇವಿ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ