Advertisment

ತಾಯಿಯಿಂದ ಹಣ ಸಿಗುತ್ತದೆ.. ದೊಡ್ಡ ಜವಾಬ್ದಾರಿ ನಿಭಾಯಿಸುವುದರಲ್ಲಿ ಯಶಸ್ಸು; ಇಲ್ಲಿದೆ ಇಂದಿನ ನಭವಿಷ್ಯ!

ವ್ಯಾಪಾರ ನಿಮಿತ್ತ ಪ್ರಯಾಣ ಸಾಧ್ಯತೆ, ಉನ್ನತ ಅಧಿಕಾರಿಗಳಿಗೆ ಶುಭವಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಆಗಲಿದೆ. ಮಕ್ಕಳ ನಿರ್ಧಾರ ನಿಮಗೆ ಇಷ್ಟವಾಗದ ದಿನ. ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ. ಹೊಸ ಯೋಜನೆಯ ವಿಚಾರ ಚರ್ಚೆಯಾಗಲಿದೆ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣಪಕ್ಷ, ದಶಮಿ ತಿಥಿ, ಜೇಷ್ಠಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಕುಟುಂಬದಲ್ಲಿನ ಸಮಸ್ಯೆಯನ್ನ ಅರ್ಥಮಾಡಿಕೊಳ್ಳದೆ ಜಗಳ ಆಗಬಹುದು
  • ಹೊಸ ಕೆಲಸಗಳಿಗೆ ಸ್ಫೂರ್ತಿ ಸಿಗಲಿದೆ 
  • ಮನೆ ಕಟ್ಟುವ ವಿಚಾರದಲ್ಲಿ ದೀರ್ಘ ಸಮಾಲೋಚನೆ ಮಾಡುತ್ತೀರಿ
  • ಪ್ರೇಮಿಗಳಲ್ಲಿ ದ್ವೇಷ ಬೇರೆಯಾಗುವ ಸಂಭವ ಹೆಚ್ಚು 
  • ನಿಮಗಿಂತ ಕಿರಿಯರಿಗೆ ಸಹಾಯ ಮಾಡಬಹುದು
  • ಹೆಚ್ಚು ಖರ್ಚಿನಿಂದ ಬೇಸರ ಕಲಹ ಅಗಬಹುದು
  • ಚಂಡಿಕಾಪಾರಾಯಣ ಮಾಡಿಸಿ 

ವೃಷಭ

RASHI_BHAVISHA_VRSHABA

  • ಕಲೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತೀರಿ
  • ಆಧ್ಯ್ಮಾತಿಕ ಪ್ರಭಾವ ನಿಮ್ಮನ್ನು ಬೆರಗುಗೊಳಿಸುತ್ತದೆ
  • ದೊಡ್ಡ ಜವಾಬ್ದಾರಿ ನಿಭಾಯಿಸುವುದರಲ್ಲಿ ಯಶಸ್ಸು
  • ಹಲವು ಕೆಲಸಗಳು ನಿಮ್ಮಿಂದ ನಡೆಯುತ್ತದೆ
  • ಹಿರಿಯರ ಮಾರ್ಗದರ್ಶನ ನಿಮಗೆ ದೀವಟಿಗೆ
  • ಕೆಲಸದಲ್ಲಿ ಉತ್ತಮ ಸಾಧನೆ  ಮಾಡುತ್ತೀರಿ ಗೌರವ ಸಿಗಲಿದೆ
  • ಶಿವಾರಾಧನೆ ಮಾಡಿ
Advertisment

ಮಿಥುನ

RASHI_BHAVISHA_MITHUNA

  • ನಿಮ್ಮ ಆಲೋಚನೆಗಳಲ್ಲಿ ಏರುಪೇರು ಆಗಬಹುದು
  • ನೌಕರಿ  ವೃತ್ತಿಯಲ್ಲಿ ಅವಮಾನವಾಗಬಹುದು
  • ನಿಮ್ಮ ಶಕ್ತಿಮೀರಿ ಕೆಲಸಮಾಡಿ ಒಳ್ಳೆಯದಾಗಲಿದೆ
  • ವ್ಯಾಪಾರದಲ್ಲಿ ಮೋಸ ನಷ್ಟವಿರುತ್ತದೆ
  • ಹಳೆಯ ವಿಚಾರಗಳಿಂದ ಮನಸ್ಸು  ಚಂಚಲವಾಗಬಹುದು
  • ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಗಮನಿಸಿ
  • ದುರ್ಗಾರಾಧನೆ ಮಾಡಿ

ಕಟಕ

RASHI_BHAVISHA_KATAKA

  • ಪಾಲುದಾರಿಕೆ ಹೂಡಿಕೆಯಲ್ಲಿ ಲಾಭವಿದೆ
  • ನೀವು ಎಷ್ಟು ಪಾರದರ್ಶಕವಾಗಿರುತ್ತೀರೋ ಅಷ್ಟು ಲಾಭ
  • ತಾಯಿಯವರಿಂದ ಹಣ ಸಿಗಬಹುದು
  • ಜನರಲ್ಲಿ ವಿಶ್ವಾಸ ಮೂಡುವ ಕೆಲಸ ಮಾಡಿ
  • ಮನೆಯಲ್ಲಿ ಸಡಗರ ಖುಷಿ ಸಿಗಬಹುದು
  • ನಿಮ್ಮ ಬಂಧುತ್ವ ಸ್ನೇಹಿತರ ಮಧ್ಯೆ ಚೆನ್ನಾಗಿರಲಿ
  • ಮಹಾಲಕ್ಷ್ಮೀಯ ಪ್ರಾರ್ಥನೆ ಮಾಡಿ

ಸಿಂಹ 

RASHI_BHAVISHA_SIMHA

  • ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು
  • ಆರೋಗ್ಯ ಸಮಸ್ಯೆ ಹೊಟ್ಟೆ ನೋವು ಕಾಣಬಹುದು
  • ಮನಸ್ಸಿನಲ್ಲಿ ಅಹಿತಕರ ವಿಷಯಗಳ ಆತಂಕ
  • ಪೂರ್ಣ ವಿಶ್ರಾಂತಿಯಿಂದ ಚೇತರಿಕೆ ಕಾಣುತ್ತೀರಿ
  • ದೂರದ ಪ್ರಯಾಣ ಮಾಡುವುದರಿಂದ ಬೇಸರ ಆಗಬಹುದು
  • ನೌಕರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ
  • ಮೃತ್ಯುಂಜಯ ಮಂತ್ರ 21 ಬಾರಿ ಪಠನೆ ಮಾಡಿ
Advertisment

ಕನ್ಯಾ

RASHI_BHAVISHA_KANYA

  • ಪ್ರೇಮಿಗಳಿಗೆ ಶುಭ ದಿನ
  • ಧಾರ್ಮಿಕ ವಿಚಾರಗಳಲ್ಲಿ ಸಮಯ ಕಳೆಯಬಹುದು
  • ನಕಾರಾತ್ಮಕ ಚಿಂತೆಗಳು ನಿಮ್ಮಿಂದ ದೂರವಿರಲಿ
  • ಉತ್ತಮ ಅನುಭವಿಗಳ ಸಲಹೆ ನಿಮಗೆ ಸಹಾಯವಾಗುತ್ತದೆ
  • ಹಿರಿಯರು ಅಧಿಕಾರಿಗಳು ತುಂಬಾ ಪ್ರಭಾವ ಹೊಂದುತ್ತಾರೆ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
  • ಮನೆದೇವರ ಪ್ರಾರ್ಥನೆ ಮಾಡಿ

ತುಲಾ

RASHI_BHAVISHA_TULA

  • ನರಗಳಲ್ಲಿ ಮೂಳೆಗಳಲ್ಲಿ ನೋವು ಇರಬಹುದು
  • ವಾಹನ ಚಾಲನೆಯಲ್ಲಿ  ತುಂಬಾ ಎಚ್ಚರಿಕೆಯಿರಲಿ
  • ನಂಬಿದವರೇ ನಿಮಗೆ ಮೋಸ ದ್ರೋಹ ಮಾಡುತ್ತಾರೆ
  • ರಾಜಕೀಯ ವಿಚಾರಗಳಿಂದ ದೂರವಿರಿ
  • ವಿರೋಧಿಗಳಿಂದ ಸ್ನೇಹ ಸಂಪಾದಿಸಿ
  • ಇದು ವಿಚಿತ್ರ ದಿನವೆಂದೇ ಹೇಳಬಹುದು
  • ಗಣಪತಿಯ ಪ್ರಾರ್ಥನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಬೇರೆಯವರ ಅವಲಂಬನೆ ಬೇಡ
  • ಕೋಪದಿಂದ ಹಲವಾರು ಅವಘಡಗಳಾಗಬಹುದು
  • ಅನಗತ್ಯ ವಿವಾದಗಳು ನಿಮ್ಮ ಮೇಲೆ ಬರಬಹುದು
  • ಸಾಮರ್ಥ್ಯ ಮೀರಿ ಸಹಾಯ ಮಾಡಲು ಪ್ರಯತ್ನಿಸದಿರಿ 
  • ಬೇರೆಯವರಿಗೆ ಸಹಾಯ  ಮಾಡಲು ಅವಕಾಶವಿಲ್ಲ
  • ಕಾರ್ಯದ ಒತ್ತಡ  ದೈಹಿಕ ಹಿಂಸೆ
  • ರುದ್ರ ದೇವರನ್ನು ಆರಾಧಿಸಿ.
Advertisment

ಧನುಸ್ಸು

RASHI_BHAVISHA_DHANASU

  • ಮೂಢನಂಬಿಕೆಗಳಿಂದ ಮೋಸಹೋಗಬಹುದು
  • ಆದಾಯ ಮೂಲಗಳು ಗಟ್ಟಿಯಾಗುತ್ತದೆ
  • ಬರಹಗಾರರಿಗೆ ಶುಭ ಲಾಭಗಳಿವೆ ಗೌರವ ಸಿಗಲಿದೆ
  • ಇಂದು ರಾಜಕಾರಣಿಗಳಿಗೆ ಉತ್ತಮ ದಿನ 
  • ವ್ಯಾಪಾರಾದಿಗಳಿಂದ ಉತ್ತಮ ಲಾಭ ಇದೆ
  • ರಾಜಕೀಯ ವಿಚಾರದಲ್ಲಿ ಆಸಕ್ತಿ ಹೊಂದುತ್ತೀರಿ
  • ಕುಬೇರನನ್ನು ಪ್ರಾರ್ಥಿಸಿ

ಮಕರ

RASHI_BHAVISHA_MAKARA

  • ವ್ಯಾಪಾರ ನಿಮಿತ್ತ ಪ್ರಯಾಣ ಸಾಧ್ಯತೆ
  • ಉನ್ನತ ಅಧಿಕಾರಿಗಳಿಗೆ ಶುಭವಿದೆ
  • ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ
  • ಮಕ್ಕಳ ನಿರ್ಧಾರ ನಿಮಗೆ ಇಷ್ಟವಾಗದ ದಿನ
  • ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
  • ಹೊಸ ಯೋಜನೆಯ ವಿಚಾರ ಚರ್ಚೆಯಾಗಲಿದೆ
  • ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿ

ಕುಂಭ

RASHI_BHAVISHA_KUMBHA

  • ನಿಮ್ಮ ಗುರಿಯ ಬಗ್ಗೆ ಗಮನವಿರಲಿ
  • ನೀವು ಈ ದಿನ ಅಪಹಾಸ್ಯಕ್ಕೆ ಗುರಿಯಾಗಬಹುದು
  • ಪರಿಶ್ರಮಕ್ಕೆ ತಕ್ಕ ಪ್ರತಿಫಲವಿರುವುದಿಲ್ಲ
  • ಮಕ್ಕಳಿಂದ ಸಂತೋಷವಿದೆ
  • ಜೀವನ ಸಂಗಾತಿಯ ಬಗ್ಗೆ ಚಿಂತೆಯಿರಲಿ
  • ಹೊಸ ಕೆಲಸಗಳು ಯೋಜನೆಗಳು ಬೇಡ
  • ಕುಲದೇವತಾ ಆರಾಧನೆ
Advertisment

ಮೀನ

RASHI_BHAVISHA_MEENA

  • ಮನೆಯಲ್ಲಿ ಕೆಲವು ಕೊರತೆಗಳಿಂದ ಅಸಂತೋಷ
  • ಆರ್ಥಿಕ ತೊಂದರೆಯಿಲ್ಲ ಸಂತೋಷ ಇರಲಿದೆ
  • ಮಕ್ಕಳ ನಡವಳಿಕೆಯಿಂದ ಬೇಸರ ಆಗಬಹುದು
  • ನಿಧಾನದ ಕೆಲಸಗಳೆಲ್ಲಾ ವೇಗದಿಂದ ನಡೆಯುತ್ತವೆ
  • ನಿಮ್ಮ ಪ್ರಚಾರ ಹೆಸರು ಕೇಳಿಬರುತ್ತದೆ
  • ವಾದ ವಿವಾದಗಳು ನಿಮ್ಮ ಪರವಾಗುವ ಸೂಚನೆಗಳಿವೆ
  • ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ
     

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

News First Kannada News First Web
Advertisment
Advertisment
Advertisment