Advertisment

ವ್ಯಾಪಾರ ವಿಸ್ತರಣೆಗೆ ಅವಕಾಶ.. ಕಾನೂನಿನ ವಿಚಾರದಲ್ಲಿ ಜಯ ಸಿಗಲಿದೆ; ಇಲ್ಲಿದೆ ಇಂದಿನ ಭವಿಷ್ಯ!

ಕೆಲಸ ಕಾರ್ಯಗಳಿಂದ ಆಯಾಸ ಆಗಬಹುದು. ವ್ಯಾಪಾರದಲ್ಲಿ ಹೊಂದಾಣಿಕೆಯ ಅಗತ್ಯವಿದೆ. ವಿಶ್ರಾಂತಿಯಿಲ್ಲದ ಕೋಪ ಮನೆಯ ವಾತಾವರಣ ಹಾಳುಮಾಡುತ್ತದೆ. ಕೈ ಹಾಕಿದ ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ. ಈ ದಿನ ಅನಗತ್ಯ ಖರ್ಚು ಮಾಡಬೇಡಿ. ಬೇರೆಯವರ ವಿಷಯಕ್ಕೆ ಹೋಗಬೇಡಿ

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣಪಕ್ಷ, ಏಕಾದಶಿ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಅನಗತ್ಯ ವಿಚಾರಗಳಿಂದ ದೂರವಿರಿ ತಾಳ್ಮೆಯಿರಲಿ
  • ಬೇರೆಯವರ ಸಹಾಯ ಮಾಡಿ ಒಳಿತಿದೆ
  • ಶತ್ರುಗಳಿಂದ ತೊಂದರೆ ಇರಬಹುದು ಎಚ್ಚರಿಕೆವಹಿಸಿ
  • ಎದೆ, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು
  • ಇಂದು ಜೀವ ಭಯದಿಂದ ಪಾರಾಗುತ್ತೀರಿ
  • ಉದ್ಯೋಗದಲ್ಲಿ ಮೆಚ್ಚುಗೆ ಗಳಿಸುತ್ತೀರಿ
  • ಸುದರ್ಶನ ಮಹಾವಿಷ್ಣುವಿನ ಆರಾಧನೆ ಮಾಡಿ
     

ವೃಷಭ

RASHI_BHAVISHA_VRSHABA

  • ಹೂಡಿಕೆ ಮಾಡುವುದರಿಂದ ಆದಾಯ ಹೆಚ್ಚಾಗಲಿದೆ
  • ಮನಸ್ಸಿಗೆ ಬೇಸರ ಆಗುವುದರಿಂದ ಕೆಲಸ ಮುಂದೂಡಲ್ಪಡುತ್ತದೆ
  • ವೃತ್ತಿಯಲ್ಲಿ ಅಪಮಾನ ಆಗಬಹುದು
  • ವ್ಯಾಪಾರದಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ
  • ಭೂ ವ್ಯಾಪಾರಾಧಿಗಳಲ್ಲಿ ಗೊಂದಲ ಹಿನ್ನಡೆಯಿಂದ ದಿನ ವ್ಯರ್ಥ್ಯ ಆಗಬಹುದು
  • ಬಂಧುಗಳ ವಿಚಾರದಲ್ಲಿ ಅತಿಯಾದ ಒತ್ತಡ
  • ಕಾಲಭೈರವನನ್ನು ಪ್ರಾರ್ಥಿಸಿ
Advertisment

ಮಿಥುನ

RASHI_BHAVISHA_MITHUNA

  • ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ನಿರ್ಲಕ್ಷ್ಯ
  • ಅಪರಿಚಿತರ ಸಂಪರ್ಕದಿಂದ ಹಣ ನಷ್ಟ ಮೋಸ ಆಗಬಹುದು
  • ಪ್ರೇಮಿಗಳಲ್ಲಿ, ದಂಪತಿಗಳಲ್ಲಿ ಜಗಳ ಆಗುವ ವಾತಾವರಣ
  • ಆರ್ಥಿಕ ನಷ್ಟ ದುರ್ಬಲವಾಗಬಹುದು
  • ಶತ್ರುಗಳನ್ನು ಜಯಿಸಲು ಕಷ್ಟವಾಗಬಹುದು
  • ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಿರಿ

ಕಟಕ

RASHI_BHAVISHA_KATAKA

  • ಕಾರ್ಯನಿಮಿತ್ತ ಸಭೆಗಳಲ್ಲಿ ಭಾಗಿಗಳಾಗಬಹುದು
  • ನಿಮ್ಮ ತೀರ್ಮಾನ ನಿಮಗೆ ಮಾರಕವಾಗುತ್ತದೆ
  • ಹಣದ ವಿಚಾರ ಸಮಸ್ಯೆಯಾಗಬಹುದು
  • ಪ್ರಯಾಣಕ್ಕೆ ಅನುಕೂಲವಾಗಿರುವ ದಿನ
  • ಕುಟುಂಬದವರೊಡನೆ ಆನಂದದಾಯಕ ಸಮಯ ಕಳೆಯಬಹುದು
  • ಪ್ರೇಮಿಗಳಲ್ಲಿ ಅನ್ಯೋನ್ಯತೆ ಹೆಚ್ಚಾಗಬಹುದು
  • ಶ್ರೀರಾಮನನ್ನು ಆರಾಧಿಸಿ

ಸಿಂಹ 

RASHI_BHAVISHA_SIMHA

  • ಕೆಲಸದ ಶೈಲಿ ಬದಲಾದರೆ ನಿಮಗೆ ಮಾರಕವಾಗುತ್ತದೆ
  • ಕಾಲು ನೋವಿನಿಂದ ಬೇಸರ ಆಗಬಹುದು
  • ಕಾನೂನು ವಿಷಯಗಳು ನಿಮ್ಮ ಪರವಾಗಿರುತ್ತದೆ
  • ಖಾಸಗಿ ಕ್ಷೇತ್ರದವರ ಆದಾಯ ಹೆಚ್ಚಾಗಲಿದೆ
  • ಈ ದಿನ ಸ್ವಲ್ಪ ಮಂದಗತಿಯಿಂದ ಇರಲಿದೆ
  • ಗುರಿಮುಟ್ಟುವ ತನಕ ವಿಶ್ರಮಿಸಬೇಡಿ
  • ಸುಬ್ರಹ್ಮಣ್ಯಸ್ವಾಮಿಯನ್ನು ಪ್ರಾರ್ಥಿಸಿ
Advertisment

ಕನ್ಯಾ

RASHI_BHAVISHA_KANYA

  • ಶೀತ ಸಂಬಂಧೀ ಸಮಸ್ಯೆಯಾಗಬಹುದು
  • ಆರ್ಥಿಕ ನಷ್ಟ ವೃತ್ತಿಯಲ್ಲಿ ಅಸಮಾಧಾನ
  • ಹೊಸಬರ ಪರಿಚಯದಿಂದ ಸಂತೋಷ ಸಿಗಲಿದೆ
  • ಪ್ರಯಾಣದಲ್ಲಿ ಆಲಸ್ಯ ಹೆಚ್ಚಾಗಲಿದೆ
  • ಸ್ನೇಹಿತರಲ್ಲಿ ಬಾಂಧವ್ಯ ಹೆಚ್ಚು
  • ಈ ದಿನ ಜವಾಬ್ದಾರಿಯ ಮಾತುಕತೆ ನಡೆಯಬಹುದು
  • ಲಲಿತಾ ಪರಮೇಶ್ವರಿಯನ್ನು ಪೂಜಿಸಿ

ತುಲಾ

RASHI_BHAVISHA_TULA

  • ಕೆಲಸ ಕಾರ್ಯಗಳಿಂದ ಆಯಾಸ ಆಗಬಹುದು
  • ವ್ಯಾಪಾರದಲ್ಲಿ ಹೊಂದಾಣಿಕೆಯ ಅಗತ್ಯವಿದೆ
  • ವಿಶ್ರಾಂತಿಯಿಲ್ಲದ ಕೋಪ ಮನೆಯ ವಾತಾವರಣ ಹಾಳುಮಾಡುತ್ತದೆ
  • ಕೈ ಹಾಕಿದ ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ
  • ಈ ದಿನ ಅನಗತ್ಯ ಖರ್ಚು ಮಾಡಬೇಡಿ
  • ಬೇರೆಯವರ ವಿಷಯಕ್ಕೆ ಹೋಗಬೇಡಿ
  • ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ವ್ಯಾಪಾರ ವಿಸ್ತರಣೆಗೆ ಅವಕಾಶವಿದೆ
  • ಆತ್ಮವಿಶ್ವಾಸಕ್ಕೆ ಧಕ್ಕೆ ಬರುವ ಪ್ರಸಂಗಗಳು 
  • ಕಾನೂನಿನ ವಿಚಾರದಲ್ಲಿ ಜಯ ಸಿಗಲಿದೆ
  • ಭಾವನಾತ್ಮಕ ವಿಷಯಗಳು ದುಃಖ ತರಬಹುದು
  • ದಾಂಪತ್ಯದಲ್ಲಿ ಬಲ ಸಿಗಲಿದೆ
  • ಉತ್ತಮ ಕೆಲಸಗಳಿಂದ ಯಶಸ್ಸು ಸಿಗಲಿದೆ
  • ಕುಲದೇವತಾ ಆರಾಧನೆ ಮಾಡಿ
Advertisment

ಧನುಸ್ಸು

RASHI_BHAVISHA_DHANASU

  • ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು
  • ಆಹಾರದಿಂದ ಆರೋಗ್ಯ ಕೆಡಬಹುದು
  • ಮೇಲಾಧಿಕಾರಿಗಳ ಹಾಗೂ ಹಿರಿಯರ ಕೋಪಕ್ಕೆ ಗುರಿಯಾಗುತ್ತೀರಿ
  • ಬೇರೆಯವರೊಂದಿಗೆ ವ್ಯವಹರಿಸುವಾಗ ಗಮನವಿರಲಿ
  • ನಿಮ್ಮ ಅನುಭವ ನಿಮ್ಮನ್ನು ಕಾಪಾಡಬಹುದು
  • ನಿಮ್ಮ ಕರ್ತವ್ಯದ ಬಗ್ಗೆ ಗಮನಹರಿಸಲಾಗದೆ ಲೋಪ
  • ಗಣಪತಿಗೆ ಗಂಧದಿಂದ ಅಭಿಷೇಕ ಮಾಡಿಸಿ

ಮಕರ

RASHI_BHAVISHA_MAKARA

  • ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರಲಿದೆ
  • ತಂದೆಯವರ ಆರೋಗ್ಯದಲ್ಲಿ ಏರುಪೇರು ಆಗಬಹುದು ಜಾಗ್ರತೆವಹಿಸಿ
  • ಪತಿ ಪತ್ನಿಯರ ಪರಸ್ಪರ ಕಾಳಜಿಯಿಂದ ಸಂತೋಷ 
  • ಸರ್ಕಾರಿ ಕೆಲಸ ವಿಳಂಬ ಆಗಬಹುದು
  • ದೈವಾನುಗ್ರಹ ಪಡೆಯುವಲ್ಲಿ ಯಶಸ್ಸು ಕಾಣಬಹುದು
  • ಖಾಸಗಿ ಕ್ಷೇತ್ರದಲ್ಲಿ ನೌಕರರ ಕಲಹ
  • ಸ್ವಯಂವರ ಪಾರ್ವತಿಯನ್ನು ಧ್ಯಾನಿಸಿ

ಕುಂಭ

RASHI_BHAVISHA_KUMBHA

  • ವಿರೋಧಿಗಳನ್ನು ಒಳ್ಳೆಯ ಮಾತಿನಿಂದ ಸೋಲಿಸಿ
  • ಅಸೂಯೆ ದ್ವೇಷಗಳನ್ನು ಮಾಡಬೇಡಿ
  • ಜೀವನ ಶೈಲಿಯಲ್ಲಿ ಬದಲಾವಣೆ ಕಾಣಬಹುದು
  • ವ್ಯಾಪಾರ ವ್ಯವಹಾರದ ಸಮಸ್ಯೆಗಳು ಇತ್ಯರ್ಥವಾಗಲಿದೆ
  • ಕೆಲಸಗಳು ಪೂರ್ಣಗೊಂಡು ಸಂತೋಷವಾಗುತ್ತದೆ
  • ಇಂದು ಉತ್ತಮದಿನ ಸಮಾಧಾನವಾಗಿರಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ
Advertisment

ಮೀನ

RASHI_BHAVISHA_MEENA

  • ಅಕ್ಕಪಕ್ಕದವರ ಸಹಾಯ ವಿಶ್ವಾಸ ಚೆನ್ನಾಗಿರುತ್ತದೆ
  • ವಿದ್ಯಾರ್ಥಿಗಳಿಗೆ ಭವಿಷ್ಯದ ನಿರ್ಧಾರದ ದಿನ
  • ಕುಟುಂಬದಲ್ಲಿ ಮನಸ್ತಾಪ ಆಗಬಹುದು
  • ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ನಷ್ಟ ಆಗಬಹುದು
  • ಸಮಾಜ ಸೇವೆಯಲ್ಲಿ ಉತ್ತಮ ಸಾಧನೆ ಮಾಡುತ್ತೀರಿ
  • ಮಕ್ಕಳಿಗಾಗಿ ಖರ್ಚು ಮಾಡುತ್ತೀರಿ
  • ಪಾರ್ವತೀ ಪರಮೇಶ್ವರರನ್ನು ಆರಾಧಿಸಿ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Horoscope
Advertisment
Advertisment
Advertisment