/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣಪಕ್ಷ, ಏಕಾದಶಿ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಅನಗತ್ಯ ವಿಚಾರಗಳಿಂದ ದೂರವಿರಿ ತಾಳ್ಮೆಯಿರಲಿ
- ಬೇರೆಯವರ ಸಹಾಯ ಮಾಡಿ ಒಳಿತಿದೆ
- ಶತ್ರುಗಳಿಂದ ತೊಂದರೆ ಇರಬಹುದು ಎಚ್ಚರಿಕೆವಹಿಸಿ
- ಎದೆ, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು
- ಇಂದು ಜೀವ ಭಯದಿಂದ ಪಾರಾಗುತ್ತೀರಿ
- ಉದ್ಯೋಗದಲ್ಲಿ ಮೆಚ್ಚುಗೆ ಗಳಿಸುತ್ತೀರಿ
- ಸುದರ್ಶನ ಮಹಾವಿಷ್ಣುವಿನ ಆರಾಧನೆ ಮಾಡಿ
ವೃಷಭ
- ಹೂಡಿಕೆ ಮಾಡುವುದರಿಂದ ಆದಾಯ ಹೆಚ್ಚಾಗಲಿದೆ
- ಮನಸ್ಸಿಗೆ ಬೇಸರ ಆಗುವುದರಿಂದ ಕೆಲಸ ಮುಂದೂಡಲ್ಪಡುತ್ತದೆ
- ವೃತ್ತಿಯಲ್ಲಿ ಅಪಮಾನ ಆಗಬಹುದು
- ವ್ಯಾಪಾರದಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ
- ಭೂ ವ್ಯಾಪಾರಾಧಿಗಳಲ್ಲಿ ಗೊಂದಲ ಹಿನ್ನಡೆಯಿಂದ ದಿನ ವ್ಯರ್ಥ್ಯ ಆಗಬಹುದು
- ಬಂಧುಗಳ ವಿಚಾರದಲ್ಲಿ ಅತಿಯಾದ ಒತ್ತಡ
- ಕಾಲಭೈರವನನ್ನು ಪ್ರಾರ್ಥಿಸಿ
ಮಿಥುನ
- ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ನಿರ್ಲಕ್ಷ್ಯ
- ಅಪರಿಚಿತರ ಸಂಪರ್ಕದಿಂದ ಹಣ ನಷ್ಟ ಮೋಸ ಆಗಬಹುದು
- ಪ್ರೇಮಿಗಳಲ್ಲಿ, ದಂಪತಿಗಳಲ್ಲಿ ಜಗಳ ಆಗುವ ವಾತಾವರಣ
- ಆರ್ಥಿಕ ನಷ್ಟ ದುರ್ಬಲವಾಗಬಹುದು
- ಶತ್ರುಗಳನ್ನು ಜಯಿಸಲು ಕಷ್ಟವಾಗಬಹುದು
- ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಿರಿ
ಕಟಕ
- ಕಾರ್ಯನಿಮಿತ್ತ ಸಭೆಗಳಲ್ಲಿ ಭಾಗಿಗಳಾಗಬಹುದು
- ನಿಮ್ಮ ತೀರ್ಮಾನ ನಿಮಗೆ ಮಾರಕವಾಗುತ್ತದೆ
- ಹಣದ ವಿಚಾರ ಸಮಸ್ಯೆಯಾಗಬಹುದು
- ಪ್ರಯಾಣಕ್ಕೆ ಅನುಕೂಲವಾಗಿರುವ ದಿನ
- ಕುಟುಂಬದವರೊಡನೆ ಆನಂದದಾಯಕ ಸಮಯ ಕಳೆಯಬಹುದು
- ಪ್ರೇಮಿಗಳಲ್ಲಿ ಅನ್ಯೋನ್ಯತೆ ಹೆಚ್ಚಾಗಬಹುದು
- ಶ್ರೀರಾಮನನ್ನು ಆರಾಧಿಸಿ
ಸಿಂಹ
- ಕೆಲಸದ ಶೈಲಿ ಬದಲಾದರೆ ನಿಮಗೆ ಮಾರಕವಾಗುತ್ತದೆ
- ಕಾಲು ನೋವಿನಿಂದ ಬೇಸರ ಆಗಬಹುದು
- ಕಾನೂನು ವಿಷಯಗಳು ನಿಮ್ಮ ಪರವಾಗಿರುತ್ತದೆ
- ಖಾಸಗಿ ಕ್ಷೇತ್ರದವರ ಆದಾಯ ಹೆಚ್ಚಾಗಲಿದೆ
- ಈ ದಿನ ಸ್ವಲ್ಪ ಮಂದಗತಿಯಿಂದ ಇರಲಿದೆ
- ಗುರಿಮುಟ್ಟುವ ತನಕ ವಿಶ್ರಮಿಸಬೇಡಿ
- ಸುಬ್ರಹ್ಮಣ್ಯಸ್ವಾಮಿಯನ್ನು ಪ್ರಾರ್ಥಿಸಿ
ಕನ್ಯಾ
- ಶೀತ ಸಂಬಂಧೀ ಸಮಸ್ಯೆಯಾಗಬಹುದು
- ಆರ್ಥಿಕ ನಷ್ಟ ವೃತ್ತಿಯಲ್ಲಿ ಅಸಮಾಧಾನ
- ಹೊಸಬರ ಪರಿಚಯದಿಂದ ಸಂತೋಷ ಸಿಗಲಿದೆ
- ಪ್ರಯಾಣದಲ್ಲಿ ಆಲಸ್ಯ ಹೆಚ್ಚಾಗಲಿದೆ
- ಸ್ನೇಹಿತರಲ್ಲಿ ಬಾಂಧವ್ಯ ಹೆಚ್ಚು
- ಈ ದಿನ ಜವಾಬ್ದಾರಿಯ ಮಾತುಕತೆ ನಡೆಯಬಹುದು
- ಲಲಿತಾ ಪರಮೇಶ್ವರಿಯನ್ನು ಪೂಜಿಸಿ
ತುಲಾ
- ಕೆಲಸ ಕಾರ್ಯಗಳಿಂದ ಆಯಾಸ ಆಗಬಹುದು
- ವ್ಯಾಪಾರದಲ್ಲಿ ಹೊಂದಾಣಿಕೆಯ ಅಗತ್ಯವಿದೆ
- ವಿಶ್ರಾಂತಿಯಿಲ್ಲದ ಕೋಪ ಮನೆಯ ವಾತಾವರಣ ಹಾಳುಮಾಡುತ್ತದೆ
- ಕೈ ಹಾಕಿದ ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ
- ಈ ದಿನ ಅನಗತ್ಯ ಖರ್ಚು ಮಾಡಬೇಡಿ
- ಬೇರೆಯವರ ವಿಷಯಕ್ಕೆ ಹೋಗಬೇಡಿ
- ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ
ವೃಶ್ಚಿಕ
- ವ್ಯಾಪಾರ ವಿಸ್ತರಣೆಗೆ ಅವಕಾಶವಿದೆ
- ಆತ್ಮವಿಶ್ವಾಸಕ್ಕೆ ಧಕ್ಕೆ ಬರುವ ಪ್ರಸಂಗಗಳು
- ಕಾನೂನಿನ ವಿಚಾರದಲ್ಲಿ ಜಯ ಸಿಗಲಿದೆ
- ಭಾವನಾತ್ಮಕ ವಿಷಯಗಳು ದುಃಖ ತರಬಹುದು
- ದಾಂಪತ್ಯದಲ್ಲಿ ಬಲ ಸಿಗಲಿದೆ
- ಉತ್ತಮ ಕೆಲಸಗಳಿಂದ ಯಶಸ್ಸು ಸಿಗಲಿದೆ
- ಕುಲದೇವತಾ ಆರಾಧನೆ ಮಾಡಿ
ಧನುಸ್ಸು
- ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು
- ಆಹಾರದಿಂದ ಆರೋಗ್ಯ ಕೆಡಬಹುದು
- ಮೇಲಾಧಿಕಾರಿಗಳ ಹಾಗೂ ಹಿರಿಯರ ಕೋಪಕ್ಕೆ ಗುರಿಯಾಗುತ್ತೀರಿ
- ಬೇರೆಯವರೊಂದಿಗೆ ವ್ಯವಹರಿಸುವಾಗ ಗಮನವಿರಲಿ
- ನಿಮ್ಮ ಅನುಭವ ನಿಮ್ಮನ್ನು ಕಾಪಾಡಬಹುದು
- ನಿಮ್ಮ ಕರ್ತವ್ಯದ ಬಗ್ಗೆ ಗಮನಹರಿಸಲಾಗದೆ ಲೋಪ
- ಗಣಪತಿಗೆ ಗಂಧದಿಂದ ಅಭಿಷೇಕ ಮಾಡಿಸಿ
ಮಕರ
- ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರಲಿದೆ
- ತಂದೆಯವರ ಆರೋಗ್ಯದಲ್ಲಿ ಏರುಪೇರು ಆಗಬಹುದು ಜಾಗ್ರತೆವಹಿಸಿ
- ಪತಿ ಪತ್ನಿಯರ ಪರಸ್ಪರ ಕಾಳಜಿಯಿಂದ ಸಂತೋಷ
- ಸರ್ಕಾರಿ ಕೆಲಸ ವಿಳಂಬ ಆಗಬಹುದು
- ದೈವಾನುಗ್ರಹ ಪಡೆಯುವಲ್ಲಿ ಯಶಸ್ಸು ಕಾಣಬಹುದು
- ಖಾಸಗಿ ಕ್ಷೇತ್ರದಲ್ಲಿ ನೌಕರರ ಕಲಹ
- ಸ್ವಯಂವರ ಪಾರ್ವತಿಯನ್ನು ಧ್ಯಾನಿಸಿ
ಕುಂಭ
- ವಿರೋಧಿಗಳನ್ನು ಒಳ್ಳೆಯ ಮಾತಿನಿಂದ ಸೋಲಿಸಿ
- ಅಸೂಯೆ ದ್ವೇಷಗಳನ್ನು ಮಾಡಬೇಡಿ
- ಜೀವನ ಶೈಲಿಯಲ್ಲಿ ಬದಲಾವಣೆ ಕಾಣಬಹುದು
- ವ್ಯಾಪಾರ ವ್ಯವಹಾರದ ಸಮಸ್ಯೆಗಳು ಇತ್ಯರ್ಥವಾಗಲಿದೆ
- ಕೆಲಸಗಳು ಪೂರ್ಣಗೊಂಡು ಸಂತೋಷವಾಗುತ್ತದೆ
- ಇಂದು ಉತ್ತಮದಿನ ಸಮಾಧಾನವಾಗಿರಿ
- ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ
ಮೀನ
- ಅಕ್ಕಪಕ್ಕದವರ ಸಹಾಯ ವಿಶ್ವಾಸ ಚೆನ್ನಾಗಿರುತ್ತದೆ
- ವಿದ್ಯಾರ್ಥಿಗಳಿಗೆ ಭವಿಷ್ಯದ ನಿರ್ಧಾರದ ದಿನ
- ಕುಟುಂಬದಲ್ಲಿ ಮನಸ್ತಾಪ ಆಗಬಹುದು
- ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ನಷ್ಟ ಆಗಬಹುದು
- ಸಮಾಜ ಸೇವೆಯಲ್ಲಿ ಉತ್ತಮ ಸಾಧನೆ ಮಾಡುತ್ತೀರಿ
- ಮಕ್ಕಳಿಗಾಗಿ ಖರ್ಚು ಮಾಡುತ್ತೀರಿ
- ಪಾರ್ವತೀ ಪರಮೇಶ್ವರರನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ