/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣಪಕ್ಷ, ದ್ವಾದಶಿ ತಿಥಿ, ಪುಬ್ಬಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಆಧ್ಯಾತ್ಮಿಕ ವಿಚಾರಗಳಲ್ಲಿ ಚಿಂತಿಸಿ ನೆಮ್ಮದಿ ಸಿಗಲಿದೆ
- ಮಕ್ಕಳ ಚಿಂತೆ ಬಿಡಿ ಯಶಸ್ಸು ಸಿಗಲಿದೆ
- ನಿಮ್ಮ ಜೊತೆಯಲ್ಲಿ ಕೆಲಸ ಮಾಡಲು ಕೆಲವರು ಇಷ್ಟಪಡುತ್ತಾರೆ
- ಶತ್ರುಗಳಿಗೆ ಎದುರಾಳಿಗಳಿಗೆ ನಿಮ್ಮ ಹೆದರಿಕೆಯಿರಬಹುದು
- ಸರ್ಕಾರಿ ಉದ್ಯೋಗಿಗಳಿಗೆ ಶುಭವಿದೆ
- ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ
ವೃಷಭ
- ವಿಶ್ರಾಂತಿಯ ಕೊರತೆ ಅನಾರೋಗ್ಯಕ್ಕೆ ಕಾರಣವಾಗಬಹುದು
- ಹೆಚ್ಚು ಹಣ ವ್ಯಯ ಮಾಡುತ್ತೀರಿ
- ಸಮಾಜದಲ್ಲಿ ಗೌರವ ಪುರಸ್ಕಾರಗಳು ದೊರೆಯಲಿದೆ
- ಬಹುದಿನಗಳ ಉದ್ವಿಗ್ನತೆ ದೂರವಾಗಬಹುದು
- ವಿರೋಧಿಗಳ ಎದುರು ಚಿಕ್ಕವರಾಗುತ್ತೀರಿ
- ಮನೆದೇವರ ಆರಾಧನೆ ಮಾಡಿ
ಮಿಥುನ
- ಷೇರು ಹೂಡಿಕೆಗೆ ಅನುಕೂಲವಿದೆ
- ವೈಯಕ್ತಿಕ ವಿಚಾರದಲ್ಲಿ ಜಗಳ ಆಗುವುದರಿಂದ ಬೇಸರ ಆಗಬಹುದು
- ನವದಂಪತಿಗಳಿಂದ ಶುಭ ಹೊಂದಾಣಿಕೆಯಿರಲಿ
- ಅತಿಥಿಗಳ ಆಗಮನದಿಂದ ಸಂತಸ ಆಗಲಿದೆ
- ಉದ್ಯಮದಾರರಿಗೆ ಶುಭ ಲಾಭವಿದೆ , ಆಪಾದನೆಯೂ ಬರಬಹುದು
- ಆದಾಯ ಹೆಚ್ಚಳ ಅಗಲಿದೆ
- ಈಶ್ವರನ ಆರಾಧನೆ ಮಾಡಿ
ಕಟಕ
- ಗೊಂದಲವಿರುವ ಕೆಲಸಕ್ಕೆ ಕೈ ಹಾಕಬೇಡಿ
- ದೊಡ್ಡ ನಿರ್ಧಾರಗಳನ್ನು ಮಾಡಬೇಡಿ
- ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿರಬಹುದು
- ಶತ್ರುಕಾಟ ಎದುರಿಸುವ ಶಕ್ತಿಯಿರುವುದಿಲ್ಲ
- ಆತ್ಮೀಯರ ಮಾತಿನಿಂದ ದುಃಖ ಆಗಲಿದೆ
- ಮನೆಯ ವಾತಾವರಣದಿಂದ ಒತ್ತಡ ಉಂಟಾಗಬಹುದು
- ಸರಸ್ವತಿ ದೇವಿಯನ್ನು ಪ್ರಾರ್ಥಿಸಿ
ಸಿಂಹ
- ಸಣ್ಣ ವ್ಯಾಪಾರಸ್ಥರಿಗೆ ಲಾಭದ ದಿನ
- ಕುಟುಂಬ ಸದಸ್ಯರಿಗೆ ಸಮಯ ನೀಡದೆ ನಿಷ್ಠೂರ ಆಗಬಹುದು
- ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ
- ಸಂಶೋಧಕರಿಗೆ ಉತ್ತಮ ಸಮಯ
- ಧಾರ್ಮಿಕ ಕಾರ್ಯಗಳ ಚಿಂತನೆ ಮಾಡುತ್ತೀರಿ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭದಾಯಕವಾಗಿದೆ
- ಲಲಿತಾಪರಮೇಶ್ವರಿಯನ್ನು ಪ್ರಾರ್ಥಿಸಿ
ಕನ್ಯಾ
- ಸಮಯೋಚಿತವಾಗಿ ವರ್ತಿಸಿ
- ಮಾತು ಸ್ಪಷ್ಟ ಆದರೆ ಬೇರೆಯವರಿಗೆ ಕಠಿಣ ಎನಿಸಬಬಹುದು
- ಮನೆಯಿಂದ ಹೊರಗಿದ್ದರೆ ಸಂತೋಷದಿಂದಿರುತ್ತೀರಿ
- ನಿಮ್ಮ ಮಾತಿನಿಂದಲೇ ಸಿಕ್ಕಿಹಾಕಿಕೂಳ್ಳಬಹುದು
- ಅಪರಿಚಿತರೊಂದಿಗೆ ವ್ಯವಹಾರ ಬೇಡ
- ಕೈ ಕೆಳಗೆ ಕೆಲಸ ಮಾಡುವವರಿಗೆ ಸಮಸ್ಯೆಯಾಗಬಹುದು
- ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ
ತುಲಾ
- ಸಮಾಜ ಸೇವೆಯಲ್ಲಿ ಸಿಲುಕಿ ದ್ರೋಹವಾಗಬಹುದು
- ಆದಾಯ ಹೆಚ್ಚಾದರು ಅಷ್ಟೇ ಖರ್ಚು ಇರಲಿದೆ
- ತಾಯಿಯ ಆರೋಗ್ಯದ ಕಡೆ ಗಮನಹರಿಸಿ
- ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಆಲೋಚನೆ ಒಳ್ಳೆಯದಲ್ಲ
- ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
- ವ್ಯಾಪಾರದಲ್ಲಿ ದೊಡ್ಡ ಆಘಾತ ಉಂಟಾಗಬಹುದು
- ಶ್ರೀ ರಾಮನನ್ನು ಪೂಜಿಸಿ
ವೃಶ್ಚಿಕ
- ಮನಸ್ಸಿನ ಕೇಂದ್ರರೀಕರಣದ ಕೊರತೆ ಆಗಬಹುದು
- ವೈಯಕ್ತಿಕ ವ್ಯವಹಾರದಲ್ಲಿ ಬೇರೆಯವರನ್ನು ನಂಬುವಂತಿಲ್ಲ
- ವಿದ್ಯಾರ್ಥಿಗಳಿಗೆ ಮನಶ್ಚಾಂಚಲ್ಯ ಆಗಬಹುದು
- ಆಸ್ತಿ ಖರೀದಿ ಮಾರಾಟ ವಿಚಾರದಲ್ಲಿ ವಿವಾದ ಆಗಬಹುದು
- ಹಣದ ವಿಚಾರವಾಗಿ ಭರವಸೆ ನೀಡಬಾರದು
- ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಶುಭವಿಲ್ಲ
- ಭೂದೇವಿಯನ್ನು ಪ್ರಾರ್ಥಿಸಿ
ಧನುಸ್ಸು
- ಜನಪ್ರಿಯತೆ ಹೆಚ್ಚಾಗಲು ಅವಕಾಶಗಳಿವೆ
- ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಬಹುದು
- ಮಕ್ಕಳ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೀರಿ
- ಭಿನ್ನಾಭಿಪ್ರಾಯದಿಂದ ಕೆಲಸದಲ್ಲಿ ಹಿನ್ನಡೆಯಾಗಬಹುದು
- ಮನಸ್ಸಿನ ಗೊಂದಲ ನಿವಾರಣೆಯಾಗಲಿ
- ನೌಕರಿ ಅಥವಾ ವೃತ್ತಿಯಲ್ಲಿ ಲಾಭವಿದೆ
- ಮನೆದೇವರ ಪ್ರಾರ್ಥನೆ ಮಾಡಿ
ಮಕರ
- ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ವಿಫಲರಾಗಬಹುದು
- ಭಯ ಆತಂಕ ಸೃಷ್ಟಿಯಾಗಬಹುದು
- ಕುಟುಂಬದಲ್ಲಿ ಬೆಂಬಲ ಇದೆ ಆದರೆ ಸಮಾಧಾನವಿಲ್ಲ
- ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು
- ಉದ್ಯೋಗದಲ್ಲಿನ ಜವಾಬ್ದಾರಿ ಹೆಚ್ಚಾಗಿರುತ್ತದೆ
- ವಿರೋಧಿಗಳಿಂದ ಅವಮಾನ ಸಾಧ್ಯತೆ
- ದುರ್ಗಾದೇವಿ ಆರಾಧನೆ
ಕುಂಭ
- ಹಿತೈಷಿಗಳಿಂದ ಉತ್ತಮ ಸಲಹೆ
- ವೈವಾಹಿಕ ಜೀವನದಲ್ಲಿ ಕಿರಿಕಿರಿಯಾಗಬಹುದು
- ತಾಯಿಯವರ ಜೊತೆ ಜಗಳ ಸಂಭವ
- ಗುರಿ ತಲುಪಲು ಪರಿಶ್ರಮ ಪಡಬೇಕು
- ಪ್ರೀತಿ ಮತ್ತು ಸಂಬಂಧಗಳಲ್ಲಿ ನಂಬಿಕೆ ಮುಖ್ಯ
- ವ್ಯಾಪಾರ ವ್ಯವಹಾರದಲ್ಲಿ ಉನ್ನತಿ ಕಾಣುತ್ತೀರಿ
- ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಮೀನ
- ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
- ನಿಮ್ಮ ದೌರ್ಬಲ್ಯಗಳನ್ನು ಗೌಪ್ಯ ಮಾಡಬೇಡಿ
- ಇಂದು ಪ್ರಯಾಣ ಒಳ್ಳೆಯದಲ್ಲ
- ನೀವಂದುಕೊಂಡ ಕೆಲಸಗಳು ನಿಧಾನವಾಗಬಹುದು
- ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ಧನ್ವಂತರಿ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ