/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಉತ್ತರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಕಾರ್ಮಿಕ ವರ್ಗದವರಿಗೆ ಸ್ವಲ್ಪ ಸಂಕಷ್ಟ ಅಲ್ಪ ತೃಪ್ತಿ ಸಿಗಲಿದೆ
- ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಗಣನೀಯ ನಷ್ಟ ಆಗಲಿದೆ
- ತುಂಬಾ ಜವಾಬ್ದಾರಿಯುತ ಕೆಲಸಗಳು ಹೆಚ್ಚಾಗಿರುತ್ತದೆ
- ಪ್ರೇಮಿಗಳಿಗೆ ಅನುಕೂಲವಾದ ದಿನ
- ರಹಸ್ಯವಾಗಿಟ್ಟ ವಿಷಯಗಳಿಂದ ನಷ್ಟ ಆಗುತ್ತದೆ
- ಅನಾರೋಗ್ಯ ಪೀಡಿತರು ಈ ದಿನ ಗುಣಮುಖರಾಗುವ ಸೂಚನೆ ಇದೆ
- ಕುಬೇರನನ್ನು ಬಿಳೀ ಹೂಗಳಿಂದ ಅರ್ಚನೆ ಮಾಡಿ
ವೃಷಭ
- ಜನರ ಅಭಿಪ್ರಾಯದಲ್ಲಿ ನೀವು ಪೂಜ್ಯರಾಗಿ ಕಾಣುತ್ತೀರಿ
- ಆಧ್ಯಾತ್ಮಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಒಲವು ಮೂಡುವ ದಿನ
- ಸಾಲ ಕೊಟ್ಟಿದ್ದರೆ ಅದರ ಬಾಕಿ ಈ ದಿನ ಹಿಂದಿರುಗಿ ಬರಲಿದೆ
- ಅರ್ಥಿಕ ಅನುಕೂಲ ಈ ದಿನ ಇದೆ
- ನಿಮ್ಮನ್ನು ನೀವು ಸರಿಯಾಗಿ ತಿದ್ದಿಕೊಳ್ಳಬೇಕು
- ಸಂತೋಷದಿಂದ ಪ್ರಯಾಣವನ್ನು ಮಾಡುವ ದಿನ
ಮಿಥುನ
- ಸಂಗಾತಿಯೊಂದಿಗೆ ಉತ್ತಮ ನಡುವಳಿಕೆಯೊಂದಿಗೆ ಇರಬೇಕು
- ತಮ್ಮ ಕೋಪವನ್ನು ಸ್ನೇಹಿತರು, ಮನೆಯವರ ಮೇಲೆ ತೀರಸಬಾರದು
- ಇಂದು ಈ ರಾಶಿಯವರಿಗೆ ಕೋಪ ಹೆಚ್ಚಾಗುವ ಸಾಧ್ಯತೆ
- ಇವತ್ತು ಮೃತ್ಯುಂಜಯನನ್ನು ಪ್ರಾರ್ಥಿಸುವುದು ಒಳ್ಳೆಯದು
- ಕಾಲಿನ ಭಾಗದಲ್ಲಿ ನೋವು ಕಾಣಿಸುವ ಸಾಧ್ಯತೆ
- ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡುತ್ತೀರಿ
- ಈಶ್ವರನನ್ನು ಆರಾಧನೆ ಮಾಡಿ
ಕಟಕ
- ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆದರುವುದು ಬೇಡ
- ಕುಟುಂಬದಲ್ಲಿ ಸಾಮರಸ್ಯವಿರಲಿ ಕೋಪ ಬೇಡ
- ಭಯದಿಂದ ಹೊರಬಂದು ಎಲ್ಲವನ್ನು ಸಾಧಿಸಬೇಕಾದ ದಿನ
- ವಿರೋಧಿಗಳು ನಮ್ಮ ಕೆಲಸ ಹಾಳು ಮಾಡಬಹುದು
- ದೈಹಿಕವಾಗಿ ಆರಾಮ ಇರುವುದಿಲ್ಲ ಆಲಸ್ಯ
- ವ್ಯಾಪಾರ, ವ್ಯವಹಾರಾದಿಗಳಲ್ಲಿ ನಿರೀಕ್ಷಿತ ಲಾಭ ಕಡಿಮೆ
- ಮೂಲ ದೇವರನ್ನು ಪ್ರಾರ್ಥಿಸಿ
ಸಿಂಹ
- ದ್ವೇಷ ಅಸೂಯೆಗಳ ಸಂಕೋಲೆಗಳಿಂದ ಹೊರಬರಬೇಕಾಗುತ್ತದೆ
- ಸಾಧಿಸಬೇಕಾದ್ದು ತುಂಬಾ ಇದೆ ಎಂದು ತಿಳಿಯಬೇಕು
- ಹಲವಾರು ಕೊರತೆಗಳು ಜೀವನದಲ್ಲಿ ಕಾಡುವ ಸೂಚನೆ
- ವೈರಾಗ್ಯದ ಮಾತುಗಳು ಬೇರೆಯವರನ್ನು ನಿಂದಿಸಬಹುದು
- ಎಲ್ಲಾ ಇದ್ದರೂ ಮಾನಸಿಕ ನೆಮ್ಮದಿಯಿಲ್ಲ ಎನ್ನುವಂತಹ ಸ್ಥಿತಿ
- ಕುಟುಂಬದ ಹಿಂದಿನ ಶಾಪ ನಿಮ್ಮ ಮೇಲೆ ಪರಿಣಾಮ ಬೀರಬಹುದು
- ಬೂದಗುಂಬಳಕಾಯಿಯಿಂದ ದೃಷ್ಟಿ ತೆಗೆಯಿರಿ
ಕನ್ಯಾ
- ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
- ಸಣ್ಣ ತಪ್ಪಿನಿಂದ ಮೌನಕ್ಕೆ ಶರಣು ಹೋಗಬಹುದು
- ಅಗತ್ಯವಿದ್ದ ಕೆಲಸಕ್ಕೆ ಗೈರಾಗಿ ಬೇಸರ ಪಡಬಹುದು
- ಸ್ನೇಹಿತರ- ಬಂಧುಗಳ ಮಾತಿಗೆ ಗುರಿಯಾಗಬಹುದು
- ಕೆಲಸಗಳ ಒತ್ತಡ, ಮಾನಸಿಕ ಆತಂಕಗಳು ಕಾಡಬಹುದು
- ವೃತ್ತಿ ನೌಕರಿಯಲ್ಲಿ ಗೌರವ ಹೆಚ್ಚುವ ದಿನ
- ಶಿವನನ್ನು ಬಿಲ್ವಪತ್ರೆಯಿಂದ ಅರ್ಚಿಸಿ
ತುಲಾ
- ಮಕ್ಕಳ ವಿಚಾರದಲ್ಲಿ ಸಂತೋಷ ಸಮಾಧಾನ ಸಿಗಲಿದೆ
- ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ ಅದನ್ನ ಹಾಗೇ ಕಾಪಾಡಿಕೊಳ್ಳಬೇಕು
- ಬೇರೆಯವರ ಮಾತಿಗೆ ಮರುಳಾಗದಿರಿ
- ಅದೃಷ್ಟದ ಬೆಂಬಲವಿದೆ ಮನಸ್ಸು ಶುದ್ಧವಾಗಿರಲಿ ಅನುಮಾನ ಬೇಡ
- ವ್ಯವಹಾರದಲ್ಲಿ ನೈಜತೆ ಇರಲಿ
- ಯುವ ಪೀಳಿಗೆಗೆ ವೃತ್ತಿ ಜೀವನದ ಸಿಹಿ ಅನುಭವ
- ರಾಧಾಕೃಷ್ಣರನ್ನು ಪೂಜಿಸಿ
ವೃಶ್ಚಿಕ
- ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ಕೊಡಬೇಕಾಗುತ್ತದೆ
- ಸ್ಥಿರ ಮನಸ್ಸಿದ್ದರೇ ಎಲ್ಲವನ್ನೂ ಸಾಧಿಸಬಹುದು
- ಚರ್ಮಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು ಎಚ್ಚರಿಕೆ
- ಕಾರಣಾಂತರಗಳಿಂದ ಮನೆಯಲ್ಲಿ ಕಿರಿಕಿರಿ
- ಕುಟುಂಬದ ಒಳಗೇ ಮದುವೆಯ ವಿಚಾರ ಬರಬಹುದು
- ಸೋದರ ಮಾವ ಅಥವಾ ಸೋದರತ್ತೆಯ ಸಂಬಂಧಿಯಿಂದ ಸಿಹಿ ಸುದ್ದಿ
- ಸೂರ್ಯ ದೇವಾಲಯಕ್ಕೆ ಕೆಂಪು ಬಟ್ಟೆ ಕೊಡಿ
ಧನುಸ್ಸು
- ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಕೆಲಸ ಬೇಡ
- ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪ ಮಾಡಬಾರದು
- ಇಂದಿನ ಜಾಗ್ರತೆ ಮುಂದಿನ ನೈಜತೆ ಎಂದು ತಿಳಿಯಬೇಕಾದ ದಿನ
- ಮನಸ್ಸಿಗೆ ತೋಚಿದ್ದನ್ನು ಮಾಡಬೇಡಿ ಸರಿಯಾದ ಸಲಹೆ ಅಗತ್ಯ
- ಯಂತ್ರೋಪಕರಣಗಳ ಖರೀದಿಯಲ್ಲಿ ಮೋಸ ಆಗಬಹುದು
- ಹಳೆಯ ಕೆಟ್ಟ ಅಭ್ಯಾಸಗಳಿಗೆ ಮತ್ತೆ ದಾಸರಾಗಬಹುದು ಎಚ್ಚರವಹಿಸಿ
- ಸುದರ್ಶನನನ್ನು ಪೂಜಿಸಿ
ಮಕರ
- ಬೇರೆಯವರೊಂದಿಗೆ ವರ್ತಿಸಬೇಕಾದರೆ ವ್ಯಂಗ್ಯ ಬೇಡ
- ಪ್ರೇಮಿಗಳಿಗೆ ತೊಂದರೆಯಿದೆ ಜಗಳ ಬೇಡ
- ಹೊಸ ಕೆಲಸಗಳ ಹುಡುಕಾಟದಲ್ಲಿ ಆಲೋಚನೆ ಒಳ್ಳೆಯದಿರಲಿ
- ಹಣಹೂಡಿಕೆಯಲ್ಲಿ ಜಾಗರೂಕರಾಗಿರಬೇಕು
- ನಾನು ಎಂಬುದು ಎಲ್ಲದಕ್ಕೂ ತೊಂದರೆಯಾಗಲಿದೆ
- ಖರ್ಚುಗಳಿಂದ ಕುಟುಂಬದಲ್ಲಿ ಕಲಹ ಉಂಟಾಗಬಹುದು
- ಪುಣ್ಯಕಥಾ ಶ್ರವಣ ಮಾಡಿ
ಕುಂಭ
- ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಯಶಸ್ಸು
- ಹಲವು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
- ಮಹಿಳೆಯರು ಹಲವಾರು ಜನರಿಗೆ ಸಹಾಯ ಮಾಡುವ ಸೂಚನೆಯಿದೆ
- ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು
- ಹೆಚ್ಚು ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ
- ವ್ಯವಹಾರದಲ್ಲಿ ಸ್ನೇಹಿತರ ಬಲ ಸಿಗಲಿದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ
ಮೀನ
- ಸಾಯಂಕಾಲದ ಹೊತ್ತಿಗೆ ಅಪಶಕುನ ಬೇಸರ ಆಗಬಹುದು
- ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆ ಉಂಟಾಗಬಹುದು
- ಶರೀರದಲ್ಲಿ ನೋವು ಕಾಣಿಸಿಕೊಳ್ಳಬಹುದು
- ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಲ್ಲಿ ಅಪನಂಬಿಕೆ ಕಾಣಬಹುದು
- ಮಕ್ಕಳ ಬಗ್ಗೆ ಕಾಳಜಿ ಇರಲಿ
- ಕುಟುಂಬ ರಕ್ಷಣೆ ಒಂದು ಸವಾಲಾಗಿ ಪರಿಣಮಿಸುತ್ತದೆ
- ಧ್ಯಾನ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ