/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಕಾರ್ತಿಕ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಅನೂರಾಧಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ನಿಮ್ಮದೇ ಆದ ಚಿಂತೆಗಳಲ್ಲಿ ಕಾಲಕಳೆಯುತ್ತೀರಿ
- ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯವರ್ತಿಗಳಿಂದ ಮೋಸಕ್ಕೆ ಸಂಚು ನಡೆಯಲಿದೆ
- ಆಸ್ತಿಯ ವಿಚಾರಕ್ಕೆ ಹಲವು ಚರ್ಚೆಯಾಗಬಹುದು
- ದುಶ್ಚಟಗಳಿರುವವರು ದೂರವಿರಬೇಕು ತೊಂದರೆಯಿದೆ ಎಚ್ಚರಿಕೆ
- ಬಾಕಿ ಇರುವ ಕೆಲಸಗಳ ಬಗ್ಗೆ ಚಿಂತಿಸುವಿರಿ
- ಎಲ್ಲಾ ದೃಷ್ಟಿಯಿಂದ ನಿಮಗೆ ಅನುಕೂಲ ಕಂಡರೂ ಹಿನ್ನಡೆ ಇದೆ
- ನರಸಿಂಹ ಸ್ವಾಮಿಯ ಪ್ರಾರ್ಥನೆ ಮಾಡಿ
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ನಿಮ್ಮನ್ನು ಯಾರು ಮೋಸಗೊಳಿಸಲು ಈ ದಿನ ಆಗುವುದಿಲ್ಲ
- ಇಂದು ನೀವು ಆತುರದ ತೀರ್ಮಾನ ಮಾಡಬೇಡಿ
- ನಿಮ್ಮ ಕೋಪ ಶಿಸ್ತು ನಿಮ್ಮ ಪರವಾಗಿರುತ್ತದೆ
- ಆಹಾರಕ್ಕಾಗಿ ನಿರೀಕ್ಷೆಯಲ್ಲಿದ್ದ ನಿಮಗೆ ತೊಂದರೆಯ ಸೂಚನೆ
- ಈ ದಿನ ಆರ್ಥಿಕವಾಗಿ ಸಮಸ್ಯೆಯಿಲ್ಲ
- ಭರವಸೆಯ ನಿರೀಕ್ಷೆಯಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
- ಈಶ್ವರನಿಗೆ ಬಿಲ್ವ ಪತ್ರೆ ಸಮರ್ಪಿಸಿ
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಕುಟುಂಬ ಸದಸ್ಯರ ಜೊತೆ ಕಾಲಕಳೆಯಬಹುದು
- ಬೇರೆಯವರು ನಿಮ್ಮ ಕೆಲಸದಲ್ಲಿ ಸಹಾಯ ಮಾಡಬಹುದು
- ನಿಜವಾದ ಕಷ್ಟದ ಬಗ್ಗೆ ನಿಮಗೆ ಅರಿವಿರುವುದಿಲ್ಲ
- ನೀವು ಉಳಿಸಿದ ಹಣ ಸಕಾಲದಲ್ಲಿ ಉಪಯೋಗಕ್ಕೆ ಬಹಬಹುದು
- ಸರಿಯಾದ ಮಾರ್ಗದಲ್ಲಿ ನಡೆಯಿರಿ ಯಶಸ್ಸಿದೆ
- ನಿಮ್ಮ ಜ್ಞಾನದ ಜೊತೆಗೆ ನಿರಂತರ ಪ್ರಯತ್ನ ಯಶಸ್ಸು ಕೊಡುತ್ತದೆ
- ಗೋವಿಗೆ ಅಕ್ಕಿ ಬೆಲ್ಲ ನೀಡಿ
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ಅಸಮಾಧಾನ ಬೇಡ ನಿಮ್ಮ ಪಾಲಿಗಿರುವುದನ್ನು ಅನುಭವಿಸಿ
- ಜೀವನ ಪೂರ್ತಿ ಬಂಧನ ಎಂದು ಭಾಸವಾಗುವ ದಿನ
- ಬಯಸದೇ ಬಂದ ಭಾಗ್ಯ ನಿಮ್ಮದಾಗುತ್ತದೆ
- ತಾಳ್ಮೆಯಿರಲಿ ಕೋಪ ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲ
- ಯಾವುದೇ ನೋವಿರಲಿ ಅದಕ್ಕೆ ಪರಿಹಾರ ಮಾರ್ಗ ಸಿಗಬಹುದು
- ನಿಮ್ಮ ನಂಬಿಕೆ ಶ್ರದ್ಧೆ ನಿಮ್ಮನ್ನು ಕಾಪಾಡುತ್ತದೆ
- ಶ್ರೀರಾಮ ಪರಿವಾರ ದೇವರನ್ನು ಪೂಜಿಸಿ
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಹಣ ಉಳಿಸಲು ಪ್ರಯತ್ನಿಸಿ ತೊಂದರೆಗೆ ಸಿಲುಕುತ್ತೀರಿ
- ನಿಮ್ಮ ಕೆಲಸ ಜವಾಬ್ದಾರಿಯ ಬಗ್ಗೆ ಬದ್ಧತೆ ಇರಲಿ
- ಬಂಧುಗಳ ಭೇಟಿ ಆಗುವುದರಿಂದ ಖರ್ಚು ಹೆಚ್ಚಾಗಬಹುದು
- ಇಂದು ಸಣ್ಣ ವ್ಯಾಪಾರಿಗಳಿಗೆ ಧನಲಾಭ
- ಜೀವನದ ತೊಂದರೆಗಳನ್ನು ಹೇಳಿಕೊಂಡು ತಪ್ಪು ಮಾಡಬೇಡಿ
- ನಿಮ್ಮ ಎಲ್ಲಾ ಪ್ರಯತ್ನಗಳು ಇಂದು ವಿಫಲ ಆಗಬಹುದು
- ವಿಷ್ಣುವಿನ ಸಹಸ್ರನಾಮ ಪಾರಾಯಣ ಮಾಡಿ
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ಲೆಕ್ಕ ಶಾಸ್ತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಯಶಸ್ಸು
- ಅಧಿಕ ಖರ್ಚು ಹಣ ಸಂಗ್ರಹದ ಬಗ್ಗೆ ಆಲೋಚನೆ ಮಾಡುತ್ತೀರಿ
- ನಿಮ್ಮ ಯೋಜನೆಗೆ ಕೆಲವು ವ್ಯಕ್ತಿಗಳ ಸಹಾಯ ಸಿಗುತ್ತದೆ
- ಹೊಸ ಯೋಜನೆಗಳು ಸಾಕಾರವಾಗಬಹುದು
- ಹಳೆಯ ಬಾಕಿ ಹಣ ನಿಮ್ಮ ಕೈ ಸೇರಬಹುದು
- ಆಸ್ಪತ್ರೆಗಾಗಿ ಹಣ ಖರ್ಚು ಮಾಡಬೇಕಾಗಬಹುದು
- ಕಾಲ ಭೈರವ ಮಂತ್ರ ಪಠಿಸಿ
ತುಲಾ
/filters:format(webp)/newsfirstlive-kannada/media/media_files/2025/07/31/rashi_bhavisha_tula-2025-07-31-22-55-03.jpg)
- ಮಕ್ಕಳ ಬಗ್ಗೆ ಚಿಂತೆ ಮಾಡಿ ಅವರಿಗೆ ಸರಿಯಾಗಿ ತಿಳುವಳಿಕೆ ನೀಡಿ
- ನಿಮ್ಮ ಸಂದೇಶ ಮನೆ ಮಕ್ಕಳಿಗೆ ದಾರಿದೀಪವಾಗಬೇಕು
- ನಿಮ್ಮ ಕೆಲಸ ಕಾರ್ಯಗಳು ನಿಮಗೆ ಯಾವುದೇ ರೀತಿಯ ಸಮಾಧಾನ ಕೊಡುವುದಿಲ್ಲ
- ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಬಗ್ಗೆ ಚಿಂತಿಸಿ
- ವಿಶ್ರಾಂತಿಯಿರುತ್ತದೆ ಮನಸ್ಸು ಮಾತ್ರ ಸಮಾಧಾನದಲ್ಲಿರುವುದಿಲ್ಲ
- ದೈಹಿಕ ಸಮಸ್ಯೆ ನೋವಿನಿಂದ ಬಳಲುತ್ತೀರಿ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ಅನಗತ್ಯ ವಿಚಾರಗಳೇ ಹೆಚ್ಚು ಪ್ರಸ್ತಾಪವಾಗುವ ದಿನ
- ಬೇರೆಯವರ ವಿಶ್ವಾಸ ಬೆಂಬಲ ಸಿಗುತ್ತದೆ
- ಕಠಿಣ ನಿರ್ಧಾರಗಳನ್ನು ಮಾಡಬೇಡಿ
- ಸಾಯಂಕಾಲ ಬಂಧುಗಳ ಸ್ನೇಹಿತರ ಸಮಾಗಮನವಾಗಬಹುದು
- ಪ್ರೇಮಿಗಳಿಗೆ ತಿರುವು ಪಡೆಯುವಂತಹ ದಿನ
- ಮಧ್ಯಾಹ್ನದ ನಂತರ ಹಣಕಾಸಿನ ವಿಚಾರದಲ್ಲಿ ಅನುಕೂಲ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ವೃತ್ತಿಯಲ್ಲಿ ಹಿನ್ನಡೆಯಾಗುವುದರಿಂದ ಲಾಭವಿಲ್ಲ
- ಪ್ರಯಾಣ ಪ್ರವಾಸದ ಯೋಜನೆ ಹಾಕಬಹುದು
- ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥಮಾಡಬೇಡಿ
- ಸ್ನೇಹಿತರ ಮಿಲನದಿಂದ ನಿಮ್ಮ ಕೆಲಸಕ್ಕೆ ಅನುಕೂಲ
- ದೀರ್ಘಕಾಲದ ಆಲೋಚನೆಗಳಿಂದ ಮನಸ್ಸಿಗೆ ಅನುಕೂಲ
- ಆರೋಗ್ಯದಲ್ಲಿ ಸಮಾಧಾನ ಸಿಗಲಿದೆ
- ಲಕ್ಷ್ಮೀಮಂತ್ರ ಪಠಿಸಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ಮನಸ್ಸಿನಲ್ಲಿರುವುದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು
- ತಾಯಿ- ತಂದೆಯರ ಆರೋಗ್ಯದ ಕಡೆ ಕಾಳಜಿ ಇರಲಿ
- ಹಣದ ಅಡಚಣೆಯೇ ಎಲ್ಲಾ ವಿಚಾರದಲ್ಲಿ ಕಾರಣವಾಗಬಹುದು
- ಈ ದಿನ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಭೂ ಸಂಬಂಧಿ ವ್ಯವಹಾರಗಳಿಂದ ನಷ್ಟ ಕಾಣಬಹುದು
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ಭೂ ವರಾಹನನ್ನು ಅರ್ಚಿಸಿ
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ಉತ್ತಮ ವಾತಾವರಣ ಇರಲಿದೆ
- ಜೀವನದ ಅನುಭವ ನಿಮ್ಮನ್ನು ಪರಿವರ್ತಿಸಬಹುದು
- ಪ್ರವಾಸ ಕುರಿತು ಮಾನಸಿಕ ಉಲ್ಲಾಸ
- ನೀವಂದುಕೊಂಡ ಕೆಲಸಗಳ ಪರಿಪೂರ್ಣತೆ ಇರಲಿದೆ
- ದಾಂಪತ್ಯ ಜೀವನದಲ್ಲಿ ಸುಖ ಸಂತೋಷ
- ನಿಮಗೆ ಹಳೆಯ ನೆನಪುಗಳು ಸಂತೋಷ ಕೊಡಬಹುದು
- ಗಣಪತಿಯ ಅನುಗ್ರಹ ಪಡೆಯಿರಿ
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಬೇರೆಯವರ ಸಹಾಯದಿಂದ ನಿಮಗೆ ತೃಪ್ತಿ ಸಿಗಬಹುದು
- ಕಾರ್ಯಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತೀರಿ
- ಪ್ರೇಮಿಗಳಿಗೆ ಗೊಂದಲದ ದಿನ
- ಹೊಸ ಸ್ನೇಹಿತರನ್ನು ಜನರನ್ನು ಆಕರ್ಷಿಸುತ್ತೀರಿ
- ಮಾನಸಿಕ ಶಾಂತಿಗಾಗಿ ದುಡಿದ ಹಣ ಸ್ವಲ್ಪ ಖರ್ಚು ಮಾಡಿ
- ಆತ್ಮವಿಶ್ವಾಸದೊಂದಿಗೆ ಎಲ್ಲಾ ಕೆಲಸಗಳನ್ನು ಪ್ರಾರಂಭಿಸಿ ಶುಭವಿದೆ
- ಕುಲದೇವತಾ ಆರಾಧಾನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us