Advertisment

ಯಾವುದೇ ನೋವಿರಲಿ ಅದಕ್ಕೆ ಪರಿಹಾರ ಮಾರ್ಗ ಇದೆ.. ನಂಬಿಕೆ, ಶ್ರದ್ಧೆ ಕಾಪಾಡುತ್ತೆ; ಇಲ್ಲಿದೆ ಇಂದಿನ ಭವಿಷ್ಯ!

ಮನಸ್ಸಿನಲ್ಲಿರುವುದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು. ತಾಯಿ- ತಂದೆಯರ ಆರೋಗ್ಯದ ಕಡೆ ಕಾಳಜಿ ಇರಲಿ. ಹಣದ ಅಡಚಣೆಯೇ ಎಲ್ಲಾ ವಿಚಾರದಲ್ಲಿ ಕಾರಣವಾಗಬಹುದು. ಈ ದಿನ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಭೂ ಸಂಬಂಧಿ ವ್ಯವಹಾರಗಳಿಂದ ನಷ್ಟ ಕಾಣಬಹುದು.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಕಾರ್ತಿಕ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಅನೂರಾಧಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ನಿಮ್ಮದೇ ಆದ ಚಿಂತೆಗಳಲ್ಲಿ ಕಾಲಕಳೆಯುತ್ತೀರಿ
  • ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯವರ್ತಿಗಳಿಂದ ಮೋಸಕ್ಕೆ ಸಂಚು ನಡೆಯಲಿದೆ
  • ಆಸ್ತಿಯ ವಿಚಾರಕ್ಕೆ ಹಲವು ಚರ್ಚೆಯಾಗಬಹುದು
  • ದುಶ್ಚಟಗಳಿರುವವರು ದೂರವಿರಬೇಕು ತೊಂದರೆಯಿದೆ ಎಚ್ಚರಿಕೆ
  • ಬಾಕಿ ಇರುವ ಕೆಲಸಗಳ ಬಗ್ಗೆ ಚಿಂತಿಸುವಿರಿ
  • ಎಲ್ಲಾ ದೃಷ್ಟಿಯಿಂದ ನಿಮಗೆ ಅನುಕೂಲ ಕಂಡರೂ ಹಿನ್ನಡೆ ಇದೆ
  • ನರಸಿಂಹ ಸ್ವಾಮಿಯ ಪ್ರಾರ್ಥನೆ ಮಾಡಿ
     

ವೃಷಭ

RASHI_BHAVISHA_VRSHABA

  • ನಿಮ್ಮನ್ನು ಯಾರು ಮೋಸಗೊಳಿಸಲು ಈ ದಿನ ಆಗುವುದಿಲ್ಲ
  • ಇಂದು ನೀವು ಆತುರದ ತೀರ್ಮಾನ ಮಾಡಬೇಡಿ
  • ನಿಮ್ಮ ಕೋಪ ಶಿಸ್ತು ನಿಮ್ಮ ಪರವಾಗಿರುತ್ತದೆ
  • ಆಹಾರಕ್ಕಾಗಿ ನಿರೀಕ್ಷೆಯಲ್ಲಿದ್ದ ನಿಮಗೆ ತೊಂದರೆಯ ಸೂಚನೆ
  • ಈ ದಿನ ಆರ್ಥಿಕವಾಗಿ ಸಮಸ್ಯೆಯಿಲ್ಲ
  • ಭರವಸೆಯ ನಿರೀಕ್ಷೆಯಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
  • ಈಶ್ವರನಿಗೆ ಬಿಲ್ವ ಪತ್ರೆ ಸಮರ್ಪಿಸಿ
Advertisment

ಮಿಥುನ

RASHI_BHAVISHA_MITHUNA

  • ಕುಟುಂಬ ಸದಸ್ಯರ ಜೊತೆ ಕಾಲಕಳೆಯಬಹುದು
  • ಬೇರೆಯವರು ನಿಮ್ಮ ಕೆಲಸದಲ್ಲಿ ಸಹಾಯ ಮಾಡಬಹುದು
  • ನಿಜವಾದ ಕಷ್ಟದ ಬಗ್ಗೆ ನಿಮಗೆ ಅರಿವಿರುವುದಿಲ್ಲ
  • ನೀವು ಉಳಿಸಿದ ಹಣ ಸಕಾಲದಲ್ಲಿ ಉಪಯೋಗಕ್ಕೆ ಬಹಬಹುದು
  • ಸರಿಯಾದ ಮಾರ್ಗದಲ್ಲಿ ನಡೆಯಿರಿ ಯಶಸ್ಸಿದೆ
  • ನಿಮ್ಮ ಜ್ಞಾನದ ಜೊತೆಗೆ ನಿರಂತರ ಪ್ರಯತ್ನ ಯಶಸ್ಸು ಕೊಡುತ್ತದೆ
  • ಗೋವಿಗೆ ಅಕ್ಕಿ ಬೆಲ್ಲ ನೀಡಿ

ಕಟಕ

RASHI_BHAVISHA_KATAKA

  • ಅಸಮಾಧಾನ ಬೇಡ ನಿಮ್ಮ ಪಾಲಿಗಿರುವುದನ್ನು ಅನುಭವಿಸಿ
  • ಜೀವನ ಪೂರ್ತಿ ಬಂಧನ ಎಂದು ಭಾಸವಾಗುವ ದಿನ
  • ಬಯಸದೇ ಬಂದ ಭಾಗ್ಯ ನಿಮ್ಮದಾಗುತ್ತದೆ
  • ತಾಳ್ಮೆಯಿರಲಿ ಕೋಪ ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲ
  • ಯಾವುದೇ ನೋವಿರಲಿ ಅದಕ್ಕೆ ಪರಿಹಾರ ಮಾರ್ಗ ಸಿಗಬಹುದು
  • ನಿಮ್ಮ ನಂಬಿಕೆ ಶ್ರದ್ಧೆ ನಿಮ್ಮನ್ನು ಕಾಪಾಡುತ್ತದೆ
  • ಶ್ರೀರಾಮ ಪರಿವಾರ ದೇವರನ್ನು ಪೂಜಿಸಿ

ಸಿಂಹ 

RASHI_BHAVISHA_SIMHA

  • ಹಣ ಉಳಿಸಲು ಪ್ರಯತ್ನಿಸಿ ತೊಂದರೆಗೆ ಸಿಲುಕುತ್ತೀರಿ
  • ನಿಮ್ಮ ಕೆಲಸ ಜವಾಬ್ದಾರಿಯ ಬಗ್ಗೆ ಬದ್ಧತೆ ಇರಲಿ
  • ಬಂಧುಗಳ ಭೇಟಿ ಆಗುವುದರಿಂದ ಖರ್ಚು ಹೆಚ್ಚಾಗಬಹುದು
  • ಇಂದು ಸಣ್ಣ ವ್ಯಾಪಾರಿಗಳಿಗೆ ಧನಲಾಭ
  • ಜೀವನದ ತೊಂದರೆಗಳನ್ನು ಹೇಳಿಕೊಂಡು ತಪ್ಪು ಮಾಡಬೇಡಿ
  • ನಿಮ್ಮ ಎಲ್ಲಾ ಪ್ರಯತ್ನಗಳು ಇಂದು ವಿಫಲ ಆಗಬಹುದು
  • ವಿಷ್ಣುವಿನ ಸಹಸ್ರನಾಮ ಪಾರಾಯಣ ಮಾಡಿ
Advertisment

ಕನ್ಯಾ

RASHI_BHAVISHA_KANYA

  • ಲೆಕ್ಕ ಶಾಸ್ತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಯಶಸ್ಸು
  • ಅಧಿಕ ಖರ್ಚು ಹಣ ಸಂಗ್ರಹದ ಬಗ್ಗೆ ಆಲೋಚನೆ ಮಾಡುತ್ತೀರಿ
  • ನಿಮ್ಮ ಯೋಜನೆಗೆ ಕೆಲವು ವ್ಯಕ್ತಿಗಳ ಸಹಾಯ ಸಿಗುತ್ತದೆ
  • ಹೊಸ ಯೋಜನೆಗಳು ಸಾಕಾರವಾಗಬಹುದು
  • ಹಳೆಯ ಬಾಕಿ ಹಣ ನಿಮ್ಮ ಕೈ ಸೇರಬಹುದು
  • ಆಸ್ಪತ್ರೆಗಾಗಿ ಹಣ ಖರ್ಚು ಮಾಡಬೇಕಾಗಬಹುದು
  • ಕಾಲ ಭೈರವ ಮಂತ್ರ ಪಠಿಸಿ

ತುಲಾ

RASHI_BHAVISHA_TULA

  • ಮಕ್ಕಳ ಬಗ್ಗೆ ಚಿಂತೆ ಮಾಡಿ ಅವರಿಗೆ ಸರಿಯಾಗಿ ತಿಳುವಳಿಕೆ ನೀಡಿ
  • ನಿಮ್ಮ ಸಂದೇಶ ಮನೆ ಮಕ್ಕಳಿಗೆ ದಾರಿದೀಪವಾಗಬೇಕು
  • ನಿಮ್ಮ ಕೆಲಸ ಕಾರ್ಯಗಳು ನಿಮಗೆ ಯಾವುದೇ ರೀತಿಯ ಸಮಾಧಾನ ಕೊಡುವುದಿಲ್ಲ
  • ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಬಗ್ಗೆ ಚಿಂತಿಸಿ
  • ವಿಶ್ರಾಂತಿಯಿರುತ್ತದೆ ಮನಸ್ಸು ಮಾತ್ರ ಸಮಾಧಾನದಲ್ಲಿರುವುದಿಲ್ಲ
  • ದೈಹಿಕ ಸಮಸ್ಯೆ ನೋವಿನಿಂದ ಬಳಲುತ್ತೀರಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಅನಗತ್ಯ ವಿಚಾರಗಳೇ ಹೆಚ್ಚು ಪ್ರಸ್ತಾಪವಾಗುವ ದಿನ
  • ಬೇರೆಯವರ ವಿಶ್ವಾಸ ಬೆಂಬಲ ಸಿಗುತ್ತದೆ
  • ಕಠಿಣ ನಿರ್ಧಾರಗಳನ್ನು ಮಾಡಬೇಡಿ
  • ಸಾಯಂಕಾಲ ಬಂಧುಗಳ ಸ್ನೇಹಿತರ ಸಮಾಗಮನವಾಗಬಹುದು
  • ಪ್ರೇಮಿಗಳಿಗೆ ತಿರುವು ಪಡೆಯುವಂತಹ ದಿನ
  • ಮಧ್ಯಾಹ್ನದ ನಂತರ ಹಣಕಾಸಿನ ವಿಚಾರದಲ್ಲಿ ಅನುಕೂಲ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
Advertisment

ಧನುಸ್ಸು

RASHI_BHAVISHA_DHANASU

  • ವೃತ್ತಿಯಲ್ಲಿ ಹಿನ್ನಡೆಯಾಗುವುದರಿಂದ ಲಾಭವಿಲ್ಲ
  • ಪ್ರಯಾಣ ಪ್ರವಾಸದ ಯೋಜನೆ ಹಾಕಬಹುದು
  • ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥಮಾಡಬೇಡಿ
  • ಸ್ನೇಹಿತರ ಮಿಲನದಿಂದ ನಿಮ್ಮ ಕೆಲಸಕ್ಕೆ ಅನುಕೂಲ
  • ದೀರ್ಘಕಾಲದ ಆಲೋಚನೆಗಳಿಂದ ಮನಸ್ಸಿಗೆ ಅನುಕೂಲ
  • ಆರೋಗ್ಯದಲ್ಲಿ ಸಮಾಧಾನ ಸಿಗಲಿದೆ
  • ಲಕ್ಷ್ಮೀಮಂತ್ರ ಪಠಿಸಿ

ಮಕರ

RASHI_BHAVISHA_MAKARA

  • ಮನಸ್ಸಿನಲ್ಲಿರುವುದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು
  • ತಾಯಿ- ತಂದೆಯರ ಆರೋಗ್ಯದ ಕಡೆ ಕಾಳಜಿ ಇರಲಿ
  • ಹಣದ ಅಡಚಣೆಯೇ ಎಲ್ಲಾ ವಿಚಾರದಲ್ಲಿ ಕಾರಣವಾಗಬಹುದು
  • ಈ ದಿನ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಭೂ ಸಂಬಂಧಿ ವ್ಯವಹಾರಗಳಿಂದ ನಷ್ಟ ಕಾಣಬಹುದು
  • ಇಂದು ವಿದ್ಯಾರ್ಥಿಗಳಿಗೆ  ಯಶಸ್ಸಿದೆ
  • ಭೂ ವರಾಹನನ್ನು ಅರ್ಚಿಸಿ

ಕುಂಭ

RASHI_BHAVISHA_KUMBHA

  • ಉತ್ತಮ ವಾತಾವರಣ ಇರಲಿದೆ
  • ಜೀವನದ ಅನುಭವ ನಿಮ್ಮನ್ನು ಪರಿವರ್ತಿಸಬಹುದು
  • ಪ್ರವಾಸ ಕುರಿತು ಮಾನಸಿಕ ಉಲ್ಲಾಸ 
  • ನೀವಂದುಕೊಂಡ ಕೆಲಸಗಳ ಪರಿಪೂರ್ಣತೆ ಇರಲಿದೆ
  • ದಾಂಪತ್ಯ ಜೀವನದಲ್ಲಿ ಸುಖ ಸಂತೋಷ
  • ನಿಮಗೆ ಹಳೆಯ ನೆನಪುಗಳು ಸಂತೋಷ ಕೊಡಬಹುದು
  • ಗಣಪತಿಯ ಅನುಗ್ರಹ ಪಡೆಯಿರಿ
Advertisment

ಮೀನ

RASHI_BHAVISHA_MEENA

  • ಬೇರೆಯವರ ಸಹಾಯದಿಂದ ನಿಮಗೆ ತೃಪ್ತಿ ಸಿಗಬಹುದು
  • ಕಾರ್ಯಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತೀರಿ
  • ಪ್ರೇಮಿಗಳಿಗೆ ಗೊಂದಲದ ದಿನ
  • ಹೊಸ ಸ್ನೇಹಿತರನ್ನು ಜನರನ್ನು ಆಕರ್ಷಿಸುತ್ತೀರಿ 
  • ಮಾನಸಿಕ ಶಾಂತಿಗಾಗಿ ದುಡಿದ ಹಣ ಸ್ವಲ್ಪ ಖರ್ಚು ಮಾಡಿ
  • ಆತ್ಮವಿಶ್ವಾಸದೊಂದಿಗೆ ಎಲ್ಲಾ ಕೆಲಸಗಳನ್ನು ಪ್ರಾರಂಭಿಸಿ ಶುಭವಿದೆ
  • ಕುಲದೇವತಾ ಆರಾಧಾನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

News First Digital News First Horoscope
Advertisment
Advertisment
Advertisment