/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸದ ನಿಮಿತ್ತವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು
- ದುಬಾರಿ ವಸ್ತುಗಳ ಬಗ್ಗೆ ಚರ್ಚೆ ಮಾಡಿ ಅನಾವಶ್ಯಕ ಕಾಲಾಹರಣವಾಗಬಹುದು
- ಉದ್ಯೋಗದಲ್ಲಿ ತಂತ್ರಗಾರಿಕೆ ಬದಲಾಯಿಸುವುದರಿಂದ ಹಿನ್ನಡೆ ಸಾಧ್ಯತೆ
- ಸರಿಯಾದ ಮಾನಸಿಕ ಸಿದ್ಧತೆ ಇಲ್ಲದೆ ಪ್ರಯಾಣ ಮುಂದೂಡಿ ನಷ್ಟ ಸಾಧ್ಯತೆ
- ಇಂದು ಮಾನಸಿಕ ಅತೃಪ್ತಿ ಕಾಡಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೋರ್ಟ್​ ಕಚೇರಿಗಳಲ್ಲಿನ ಕೆಲಸಗಳು ಸುಗಮವಾಗಿ ಆಗಲಿದೆ
- ಅಪರಿಚಿತ ವ್ಯಕ್ತಿಗಳ ಜೊತೆ ಮಾತನಾಡುವಾಗ ಹಲ್ಲೆಗೆ ಒಳಗಾಗುವ ಸಾಧ್ಯತೆ ಇದೆ
- ನಿಮಗಿರುವ ಜನ ಬೆಂಬಲ ಶಕ್ತಿ ಸಾಮರ್ಥ್ಯದ ಬಗ್ಗೆ ಇಂದು ಜನರೇ ಮನದಟ್ಟು ಮಾಡಬಹುದು
- ನಿಮ್ಮ ಪ್ರೀತಿ ಪಾತ್ರರಿಂದ ನೋವಾಗಬಹುದು
- ಆಪತ್ತಿನಲ್ಲಿರುವ ನಿಮ್ಮನ್ನು ಜನ ಕಾಪಾಡಬಹುದು
- ಮೃತ್ಯುಂಜಯನನ್ನು ಪ್ರಾರ್ಥಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ಯಾವ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸುತ್ತೀರಿ ಅಂತ ಕೆಲಸ ಮಾತ್ರ ಮಾಡಿ
- ಇಂದು ನಿರೀಕ್ಷೆ ಮೀರಿದ ಆದಾಯ ಸಿಗುವ ದಿನ
- ಇಂದು ಬರಿ ಮಾತಿನ ಭರವಸೆ ಮಾತ್ರ ನೀಡಿದರೆ ಅವಮಾನ ಸಾಧ್ಯತೆ
- ನಿಮ್ಮ ಕೆಲಸದ ಒತ್ತಡದಿಂದ ಕುಟುಂಬ ಸದಸ್ಯರನ್ನು ನಿರ್ಲಕ್ಷ್ಯ ಮಾಡಬೇಡಿ
- ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ಸಿಗುವ ಸಾಧ್ಯತೆ
- ಭವಾನಿ ದೇವಿಯನ್ನು ಪ್ರಾರ್ಥಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳಿಗೆ ಪಾಕೆಟ್ ಮನಿ ನಿಂತು ಹೋಗುವ ಸಾಧ್ಯತೆ
- ಗೃಹ ನಿರ್ವಹಣೆ ಮಾಡುವವರು ಶಿಸ್ತಿನ ಜೀವನ ನಡೆಸಬೇಕು
- ನಿಮ್ಮ ಶಿಸ್ತುಬದ್ಧ ಜೀವನದ ಕೊರತೆಯಿಂದ ಆರ್ಥಿಕ ಸ್ಥಿತಿ ಅಸ್ತವ್ಯಸ್ತವಾಗುವ ಸಾಧ್ಯತೆ ಗಮನವಿರಲಿ
- ಮನೆಕಟ್ಟುವ ಯೋಗ ನಿಮ್ಮದಾಗಿರುತ್ತದೆ
- ನಿಮ್ಮ ಅಶಿಸ್ತಿನಿಂದ ಹಣ ಕೊಡುವುದನ್ನ ಕಡಿಮೆ ಮಾಡಬಹುದು
- ನಿಮ್ಮ ನೌಕರಿಯ ಬಗ್ಗೆ ಹೆಚ್ಚು ಗಮನ ನೀಡದೆ ಇದ್ದರೆ ತೊಂದರೆ ಸಾಧ್ಯತೆ
- ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬ ಸಮೇತ ಪುಣ್ಯಕ್ಷೇತ್ರದ ದರ್ಶನ ಮಾಡುತ್ತೀರಿ
- ನಿಮ್ಮ ವರ್ತನೆ ಸ್ವಭಾವ ನಿಮ್ಮ ಕುಟುಂಬ ಮತ್ತು ಬಂಧುಗಳಿಗೆ ಇಷ್ಟವಾಗುವುದಿಲ್ಲ
- ಹಿರಿಯರ ಸಾಧು-ಸಂತರ ಮಾರ್ಗದರ್ಶನ ಪಡೆದು ನಿಮ್ಮ ಸ್ವಭಾವವನ್ನು ಬದಲಿಸಿಕೊಂಡರೆ ಒಳ್ಳೆಯದು
- ನಿಮ್ಮ ವರ್ತನೆ ಸ್ವಭಾವ ಬದಲಿಸಿಕೊಂಡರೆ ಪ್ರೀತಿ ಅಭಿಮಾನ ಸಿಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಲಾವಿದರಿಗೆ ಗೌರವ ಸನ್ಮಾನ ಸಿಗಲಿದೆ
- ಮನೆಯ ನವೀಕರಣ ಮತ್ತು ಆಭರಣ ಖರೀದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ಸಾಧ್ಯತೆ
- ಕುಟುಂಬದಲ್ಲಿ ಉತ್ತಮ ವಾತಾವರಣ ಇರುತ್ತದೆ
- ನಿಮ್ಮ ಜೊತೆ ಭಿನ್ನಾಭಿಪ್ರಾಯ ಹೊಂದಿದವರು ಇಂದು ಸುಮ್ಮನಾಗುತ್ತಾರೆ
- ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಕೆಲಸಗಳನ್ನು ಪೂರೈಸುತ್ತೀರಿ
- ಮಕ್ಕಳಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
- ನವಗ್ರಹರನ್ನು ಪ್ರಾರ್ಥಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯವಾಗಿದ್ದವರು ಸೂರ್ಯ ನಮಸ್ಕಾರ ಮಾಡಿ
- ಹೃದ್ರೋಗಕ್ಕೆ ಒಳಗಾಗಿರುವವರು ತುಂಬಾ ಜಾಗ್ರತೆವಹಿಸಿ ಆರೋಗ್ಯದ ಬಗ್ಗೆ ತಾತ್ಸಾರ ಬೇಡ
- ಉತ್ತಮ ಅವಕಾಶದಿಂದ ವಂಚಿತರಾಗುವ ಸಾಧ್ಯತೆ ಇದೆ ಎಚ್ಚರ
- ಆರೋಗ್ಯದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡರು ತಕ್ಷಣ ವೈದ್ಯರ ಭೇಟಿ ಮಾಡಿ
- ಇಂದು ವಿದ್ಯಾರ್ಥಿಗಳು ಆಲಸ್ಯ ಮಾಡಬೇಡಿ
- ಅನಾರೋಗ್ಯ ಪೀಡಿತರಾಗಿದ್ದರೆ ಸೂರ್ಯ ನಮಸ್ಕಾರ ಮಾಡಬೇಡಿ
- ಕೆಲವರಿಗೆ ಇಂದು ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಡಬಹುದು ಎಚ್ಚರ
- ಸೂರ್ಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯ ಭದ್ರತೆಯ ಬಗ್ಗೆ ಸಮಾಧಾನವಿರುತ್ತದೆ
- ಉದ್ಯೋಗದಲ್ಲಿ ನಿಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಹೆಚ್ಚಾಗಬಹುದು
- ನಿಮ್ಮ ಆಲಸ್ಯದಿಂದ ಇಂದು ಮಾಡಬೇಕಾದ ಕೆಲಸವನ್ನು ನಾಳೆಗೆ ಮುಂದೂಡಬಹುದು
- ಇಂದು ಮಕ್ಕಳಿಗೆ ಸಿಹಿ ತಿಂಡಿ ಕೊಡಿಸಿ
- ನಿಮ್ಮ ವೈಯಕ್ತಿಕ ಜೀವನಕ್ಕೆ ಬೇಕಾಗುವ ಕೆಲವು ಸಾಮಗ್ರಿಗಳನ್ನು ಹೆಚ್ಚು ಹಣಕೊಟ್ಟು ಖರೀದಿಸಬಹುದು
- ಕೆಲಸವನ್ನು ನಾಳೆಗೆ ಮುಂದೂಡಿದರೆ ನಷ್ಟ ಸಾಧ್ಯತೆ
- ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ
ಧನುಸ್
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಏನನ್ನಾದರು ಖರೀದಿಸಬೇಕೆಂದರೆ ನಿಮ್ಮ ಜೊತೆ ಸರಿಯಾದವರನ್ನು ಕರೆದುಕೊಂಡು ಹೋಗಿ
- ಆತುರಾತುರದಿಂದ ಏನಾದರೂ ಮಾಡಿದರೆ ತಪ್ಪಾಗಿ ತೊಂದರೆಯಾಗುವ ಸಾಧ್ಯತೆಗಳಿವೆ
- ಆರೋಗ್ಯದ ದೃಷ್ಟಿಯಿಂದ ಮೂಳೆ ನರಕ್ಕೆ ಸಂಬಂಧಿಸಿದ ತೊಂದರೆ ಕಾಡಬಹುದು ತಾತ್ಸಾರ ಬೇಡ
- ಹಳೇ ಆರೋಗ್ಯ ನೋವಿರುವವರಿಗೆ ತೊಂದರೆ ಸಾಧ್ಯತೆ
- ಕಾನೂನಾತ್ಮಕವಾದ ವಿಷಯಗಳು ಎದುರಾದರೆ ಈ ದಿನ ಸುಮ್ಮನಿರುವುದು ಒಳಿತು
- ಅಂಬಾಭವಾನಿಯನ್ನು ಆರಾಧಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೃಷಿ ಮಾಡುವವರಿಗೆ ಒಳ್ಳೆಯದಿನ
- ತಂದೆ ತಾಯಿಯರಿಗೆ ಗೌರವವನ್ನು ನೀಡಿ
- ನೀವು ನೀವಾಗಿರಬೇಕೆ ಹೊರತು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಬೇಡಿ
- ಬೇರೆಯವರನ್ನು ನೋಡಿ ಹಣ ಹೂಡಿಕೆ ಮಾಡಲು ಮುಂದಾಗಿ ನಷ್ಟ ಸಾಧ್ಯತೆ
- ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗೆ ಮುಂದಾಗಿರಿ
- ದುರ್ಗಾದೀಪ ನಮಸ್ಕಾರ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಜೀವನದಲ್ಲಿ ಸತ್ಯ ಸಾಧನೆ ಮತ್ತು ಸತ್ಯ ಶೋಧನೆ ಮುಖ್ಯವಾಗುತ್ತದೆ
- ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಸರಿಯಾಗಿ ಚಿಂತನೆ ಮಾಡಿ
- ಕಾನೂನಿನ ಚೌಕಟ್ಟಿನಲ್ಲಿ ವ್ಯವಹಾರ ಮಾಡುವುದರಿಂದ ಯಶಸ್ಸು
- ಆಸ್ತಿ ಖರೀದಿ ಅಥವಾ ಮಾರಾಟದಿಂದ ಲಾಭವಾಗಬಹುದು
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಜನರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
- ವ್ಯವಹಾರದಲ್ಲಿ ನಿಮ್ಮ ಬುದ್ಧಿವಂತಿಕೆಯಿಂದ ಕೆಲಸಗಳಾಗುತ್ತವೆ
- ರಕ್ತದೊತ್ತಡ ಇರುವವರು ತಮ್ಮ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- ಇಂದು ಎರಡೆರಡು ಕೆಲಸಗಳನ್ನು ಒಟ್ಟಿಗೆ ಮಾಡಲು ಪ್ರಯತ್ನಿಸಬೇಡಿ ಸೋಲಾಗಬಹುದು
- ವ್ಯಾಪಾರ ವ್ಯವಹಾರ ಮಾಡುವವರಿಗೆ ಒಳ್ಳೆಯದಿನ
- ಕಾಳಿ ದೇವಿಯನ್ನು ಆರಾಧಿಸಿ
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us