/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸುವುದರಿಂದ ನೀವು ನಷ್ಟವನ್ನು ಹೊಂದುತ್ತೀರಿ
 - ಇಂದು ಹುಳಿ ಪದಾರ್ಥ ಸೇವಿಸಬೇಡಿ ಆರೋಗ್ಯದ ಕಡೆ ಗಮನವಿರಲಿ
 - ಸಾಯಂಕಾಲದ ವೇಳೆಗೆ ಎದೆನೋವು ಕಾಣಿಸಿಕೊಳ್ಳಬಹುದು ಜಾಗ್ರತೆವಹಿಸಿ
 - ಈ ನಷ್ಟದಿಂದ ನೀವು ದಂಡ ಕಟ್ಟಬೇಕಾಗಬಹುದು
 - ನೀವು ಮಾಡಬೇಕಾದ ಕೆಲಸವನ್ನು ಬೇರೆಯವರಿಗೆ ವಹಿಸಬೇಡಿ
 - ಮಾರುತಿಯನ್ನು ಪ್ರಾರ್ಥಿಸಿ
 
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ನಿಮ್ಮ ತಂದೆ-ತಾಯಿಯನ್ನು ಗೌರವ, ಸಂತೋಷದಿಂದ ನೋಡಿಕೊಳ್ಳಿ
 - ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವಂತಹ ದಿನವಾಗಿದೆ
 - ನಿಮ್ಮ ಪ್ರಾಮಾಣಿಕ ಹಾಗೂ ಶಿಸ್ತುಬದ್ಧ ಕೆಲಸವನ್ನು ಗಮನಿಸಿ ಮೇಲಾಧಿಕಾರಿಗಳು ಹೆಚ್ಚಿನ
 - ಜವಾಬ್ದಾರಿ ನೀಡುತ್ತಾರೆ
 - ತಂದೆ-ತಾಯಿ ಸಂತೋಷವಾಗಿದ್ದರೆ ನಿಮ್ಮ ಕಾರ್ಯ ಸದಾ ಯಶಸ್ಸಿನದಾಗಿರುತ್ತದೆ
 - ಹೆಚ್ಚಿನ ವಿಚಾರ ಸಂಗ್ರಹಕ್ಕಾಗಿ ಅಧ್ಯಯನದ ಕಡೆಗೆ ಹೆಚ್ಚು ಗಮನ ನೀಡಿ
 - ತಂದೆ-ತಾಯಿಯನ್ನು ಮನಸಾರೆ ಪ್ರಾರ್ಥಿಸಿ
 
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಬೇರೆಯವರಿಗೆ ಒಳ್ಳೆಯದನ್ನ ಮಾಡಬೇಕೆಂಬ ಮನಸ್ಥಿತಿ ಉಂಟಾಗುತ್ತದೆ
 - ಶಾಶ್ವತವಾದ, ಗೌರವವನ್ನ, ಅಂತಸ್ತನ್ನ ಹೆಚ್ಚಿಸುವ ಕೆಲಸ ಆಗಲಿದೆ
 - ನಮ್ಮ ಧರ್ಮದ ಬಗ್ಗೆ ನ್ಯಾಯವನ್ನು ಒದಗಿಸುತ್ತೀರಿ
 - ಮಕ್ಕಳಿಗೆ ಮೊದಲು ಯಾವುದು ಸರಿ ತಪ್ಪು ಅನ್ನೋ ತಿಳುವಳಿಕೆ ನೀಡಿ
 - ಮನೆಯವರ ಒತ್ತಡಕ್ಕೆ ಮಣಿದು ಹೊಸ ವಾಹನ ಖರೀದಿಸಲು ಮುಂದಾಗಬಹುದು
 - ಕುಟುಂಬದವರು ಸಂತೋಷವಾಗುವ ದಿನ
 - ಶ್ರೀಲಕ್ಷ್ಮಿಯನ್ನು ಪ್ರಾರ್ಥಿಸಿ
 
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ನಿಮ್ಮ ಯೋಜನೆಗಳಿಂದ ಬೇರೆಯವರಿಗೆ ಉಪಕಾರವಾಗಲಿದೆ ಆದರೆ ನಿಮಗೆ ನಷ್ಟವಾಗಲಿದೆ
 - ನಿಮಗೆ ನಂಬಿಕೆ ಇರುವ ವ್ಯಕ್ತಿಯೊಂದಿಗೆ ಮಾತ್ರ ವಿಷಯವನ್ನ ಚರ್ಚಿಸಿ
 - ಇದರಿಂದ ಬೇರೆಯವರು ಉಪಯೋಗವನ್ನು ಪಡೆದುಕೊಳ್ಳುವ ಸಾಧ್ಯತೆ ಎಚ್ಚರವಹಿಸಿ
 - ಕೆಲಸದ ಒತ್ತಡ, ಮಾನಸಿಕ ಒತ್ತಡ, ಮಾನಸಿಕ ತೊಂದರೆ, ದೈಹಿಕ ತೊಂದರೆ ಕಾಡುವ ದಿನವಾಗಿದೆ
 - ಹೊಟ್ಟೆಗೆ ಸಂಬಂಧಪಟ್ಟ ಅನಾರೋಗ್ಯ ಈ ದಿನ ಹೆಚ್ಚಾಗಿ ಕಾಡತ್ತೆ ಗಮನಹರಿಸಿ
 - ಸಾಯಿ ಬಾಬಾರನ್ನು ಪ್ರಾರ್ಥಿಸಿ
 
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಅವಿವಾಹಿತರಿಗೆ ನೀವು ಮದುವೆಯನ್ನು ಮಾಡಿಸುವ ಭರವಸೆಯನ್ನ ನೀಡುತ್ತೀರಿ
 - ಕೈಯಲ್ಲಿ ಹೆಚ್ಚು ಹಣ ಓಡಾಡುವ ದಿನವಾಗಿದೆ
 - ಸಾಯಂಕಾಲದ ವೇಳೆಗೆ ಕಹಿಸುದ್ದಿಯಿಂದ ಮನಸ್ಸಿಗೆ ಬೇಸರವಾಗುವ ದಿನ
 - ಎಲ್ಲರನ್ನೂ ನೀವು ಸಂತೋಷ ಪಡಿಸುವುದರಿಂದ ಉತ್ತಮವಾದ ಪ್ರಶಂಸೆ ಸಿಗುತ್ತದೆ
 - ಕುಟುಂಬದವರಿಗೆ, ಸಂಬಂಧಿಕರಿಗೆ ನಿಮ್ಮ ಜೊತೆ ಕೆಲಸ ಮಾಡುವವರಿಗೆ ಉಡುಗೊರೆ ನೀಡುತ್ತೀರಿ
 - ಇಂದು ರಾಜಕೀಯ ವ್ಯಕ್ತಿಗಳಿಗೆ ಶುಭದಿನ
 - ಶ್ರೀಕೃಷ್ಣನನ್ನು ಪ್ರಾರ್ಥಿಸಿ
 
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ಈ ರಾಶಿಯ ಸ್ತ್ರೀಯರು ಹೆಚ್ಚು ಹಣ ನೀಡಿ ದುಬಾರಿ ಪದಾರ್ಥಗಳನ್ನು ಖರೀದಿಸುತ್ತೀರಿ
 - ಅವಿವಾಹಿತರಿಗೆ ಇಂದು ಶುಭಸೂಚನೆ ಪ್ರಯತ್ನಿಸಿ
 - ಮದುವೆ ವಿಚಾರದಿಂದ ನಿಮ್ಮ ಮನಸ್ಸಲ್ಲಿ ಗೊಂದಲಗಳು ಉಂಟಾಗುವ ದಿನ
 - ವ್ಯಾಪಾರ- ವ್ಯವಹಾರಗಳಲ್ಲಿ, ಹಣಕಾಸಿನ ವಿಚಾರದಲ್ಲಿ ಶುಭ ದಿನವಾಗಿದೆ
 - ವಿಶೇಷವಾಗಿ ವಾಹನ ಚಾಲಕರಿಗೆ ಶುಭದಿನ
 - ಸ್ತ್ರೀಯರು ಚಾಲಕರಾಗಿದ್ದರೆ ಅವರಿಗೆ ವಿಶೇಷ ಗೌರವ ಸಿಗುವ ದಿನವಾಗಿದೆ
 - ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ
 
ತುಲಾ
/filters:format(webp)/newsfirstlive-kannada/media/media_files/2025/07/31/rashi_bhavisha_tula-2025-07-31-22-55-03.jpg)
- ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಿಂದ ಒತ್ತಡ, ಆತಂಕ ನಿಮ್ಮನ್ನು ಕಾಡಬಹುದು
 - ವಿದ್ಯಾರ್ಥಿಗಳಿಗೆ ತುಂಬಾ ಒತ್ತಡದ ದಿನವಾಗಿರುತ್ತದೆ
 - ಈ ದಿನ ಮನಸ್ಸನ್ನು ಹಗುರ ಮಾಡಿಕೊಂಡರೆ ಒಳಿತು
 - ಧ್ಯಾನ ಮಾಡುವುದರಿಂದ ಸಂತೋಷವಾಗಿರುತ್ತೀರಿ
 - ನೀವು ನಿಮ್ಮ ಕೆಲಸದಲ್ಲಿ ಒಂಟಿಯಾಗಬಹುದು
 - ಬಹಳ ದಿನದ ಆಸೆಯೊಂದು ಈ ದಿನ ನೆರವೇರುವ ಸಾಧ್ಯತೆ ಇದೆ
 - ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನವಾಗಿದೆ
 
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ಚೀಟಿ ವ್ಯವಹಾರ ಮಾಡುವವರು ಜಾಗ್ರತೆ ವಹಿಸಿ
 - ದೂಷಿಸುವವರನ್ನ ಹೊಗಳುವುದರಿಂದ ಕುಟುಂಬ ಸದಸ್ಯರ ಕೆಂಗಣ್ಣಿಗೆ ಗುರಿಯಾಗುತ್ತೀರಿ
 - ಸಾಲದ ವಹಿವಾಟು ಈ ದಿನ ಬೇಡ
 - ಈ ದಿನ ನೀವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದಕ್ಕೆ ಪ್ರಯತ್ನಿಸುತ್ತೀರಿ
 - ಇಂದು ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಿ
 - ಮನೆಯ ಸದಸ್ಯರ ಮೇಲೆ ಸ್ನೇಹಿತರು,ಸಂಬಂಧಿಕರಿಂದ ಒಳ್ಳೆಯ ಅಭಿಪ್ರಾಯವಿರುವುದಿಲ್ಲ
 - ಶಿವನನ್ನು ಆರಾಧಿಸಿ
 
ಧನುಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ಆಭರಣಗಳ ಖರೀದಿಯಿಂದ ಕುಟುಂಬದವರು ಸಂತೋಷವಾಗಿರುವ ದಿನ
 - ಕಳಂಕರಹಿತವಾದ ಕೆಲಸಕ್ಕೆ ಇವರ ಮಾರ್ಗದರ್ಶನ ಪಡೆದುಕೊಳ್ಳುವುದರಿಂದ ಒಳಿತಾಗುತ್ತದೆ
 - ಉತ್ತಮರಾದ, ಶ್ರೇಷ್ಠ, ಸಾಧನೆ ಮಾಡಿರುವ ವ್ಯಕ್ತಿಗಳ ಸಂಪರ್ಕವಾಗುವ ದಿನವಾಗಿದೆ
 - ಸಂಬಂಧಿಕರಲ್ಲಿ ಸೈದ್ಧಾಂತಿಕವಾದ ವಿಚಾರಕ್ಕೆ ನಿಷ್ಠೂರವನ್ನು ಮಾಡಿಕೊಳ್ಳಬೇಡಿ
 - ಕುಲದೇವರನ್ನು ಸ್ಮರಿಸಿ
 
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ಈ ದಿನ ಸಮಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಿ
 - ವಿದ್ಯಾರ್ಥಿಗಳು ಪರಸ್ಪರ ಜಗಳಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ
 - ಮನಸ್ಸು ಏಕಾಗ್ರತೆಯಿಂದ ಕೆಲಸ ಮಾಡಿದರೆ ಒಳಿತು
 - ವಿದ್ಯಾರ್ಥಿಗಳು ಓದುವ ಕಡೆ ಗಮನ ಹರಿಸಬೇಕು
 - ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರ ವರ್ತನೆಯಿಂದ ಮನಸ್ಸಿಗೆ ನೋವಾಗಬಹುದು
 - ಕುಟುಂಬದವರು ಬೇರೆಯವರಿಂದ ನಿಮಗೆ ತಿಳುವಳಿಕೆ ಹೇಳಿಸುವ ಪ್ರಯತ್ನವಾಗಿರುತ್ತದೆ
 - ಸಮಯದ ಬಗ್ಗೆ ತಾತ್ಸಾರ ಇರುವವರು ಅವಕಾಶವಂಚಿತರಾಗುವ ಸಾಧ್ಯತೆ ಇದೆ
 - ಸದ್ಗುರು ಶ್ರೀಧರ ಸ್ವಾಮಿಗಳನ್ನು ಪ್ರಾರ್ಥಿಸಿ
 
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
 - ಈ ದಿನ ನಿಮಗೆ ಸಮಾಧಾನ, ಬೇಸರದಿಂದ ಕೂಡಿರುತ್ತೆ
 - ಮನೆಯಲ್ಲಿ ಶಿಸ್ತಿನ ವಾತಾವರಣವನ್ನ ಕಾಪಾಡಿಕೊಳ್ಳುವುದು ಬಹಳ ಮುಖ್ಯ
 - ಕುಟುಂಬ ಸದಸ್ಯರ ಕಡೆ ಗಮನ ಕೊಡದೆ ಅವರ ಕೆಂಗಣ್ಣಿಗೆ ಗುರಿಯಾಗಬಹುದು
 - ಮನೆಯಲ್ಲಿ ಹೆಂಡತಿ, ಮಕ್ಕಳು ದೂಷಣೆ ಮಾಡುವ ಸಾಧ್ಯತೆ ಇದೆ
 - ನಿಮ್ಮ ಕುಟುಂಬದ ಕಡೆ ಗಮನ ಕೊಡಿ
 - ಇಂದು ಬೇರೆಯವರ ಸಮಸ್ಯೆ ಪರಿಹರಿಸುವಲ್ಲಿ ಮಗ್ನರಾಗಿರುತ್ತೀರಿ
 - ಅತಿಯಾದ ಕೆಲಸದ ಒತ್ತಡದಿಂದ ಆಯಾಸವಾಗಬಹುದು
 - ಗಣಪತಿಯನ್ನು ಆರಾಧಿಸಿ
 
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಇಂದು ಹಣ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ
 - ನಿಮ್ಮ ಒತ್ತಡವನ್ನು ಬೇರೆಯವರ ಮೇಲೆ ಹೇರಿ ಅಪಹಾಸ್ಯಕ್ಕೆ ಈಡಾಗಬಹುದು ಎಚ್ಚರ
 - ಹೊರಗೆ ಸೇವಿಸಿದ ಆಹಾರದಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ
 - ಮನೆಯಿಂದ ಹೊರಗೆ ಹೋದಾಗ ಆಹಾರ ಸೇವನೆ ಮಾಡುವುದು ಬೇಡ
 - ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ ಜಾಗ್ರತೆವಹಿಸಿ
 - ಈ ದಿನ ಒಂದೇ ರೀತಿ ಇರಲು ಪ್ರಯತ್ನಿಸಿ
 - ಮಾನಸಿಕವಾಗಿ ವ್ಯತ್ಯಯಗಳು ಉಂಟಾಗುವ ದಿನವಾಗಿದೆ
 - ಆರೋಗ್ಯದ ಬಗ್ಗೆ ಅತಿ ಹೆಚ್ಚು ಜಾಗ್ರತೆವಹಿಸಿ
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us