/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಉತ್ತರಾಷಾಡ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ಇಂದು ಪ್ರಯಾಣ ಮಾಡಲು ಶುಭದಿನ
 - ಧ್ಯಾನ-ಯೋಗ,ವ್ಯಾಯಾಮ ಇತ್ಯಾದಿಗಳಿಗೆ ಹೆಚ್ಚಿನ ಸಮಯವನ್ನು ನೀಡಿ
 - ಸ್ನೇಹಿತರು-ಬಂಧುಗಳು ನಿಮಗೆ ಪ್ರೀತಿ-ವಿಶ್ವಾಸವನ್ನು ತೋರಿಸುತ್ತಾರೆ
 - ನೀವು ಎಲ್ಲ ಕೆಲಸಗಳನ್ನು ಮಾಡಲು ಸ್ಫೂರ್ತಿದಾಯಕವಾಗಿರುತ್ತದೆ
 - ಇಂದು ಎಲ್ಲಾ ದೃಷ್ಟಿಯಿಂದ ನಿಮಗೆ ಶುಭದಿನ
 - ನಿಮ್ಮ ಪ್ರತಿಭೆ, ವಿಚಾರವಂತಿಕೆ ಪ್ರಕಾಶಪಡಿಸಲು ಸಹಾಯ ಸಿಗುತ್ತದೆ
 - ಕುಲದೇವತಾ ಪ್ರಾರ್ಥನೆ ಮಾಡಿ
 
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡರೆ ವೈದ್ಯರ ಸಲಹೆ ಪಡೆಯಿರಿ
 - ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು ಎಚ್ಚರಿಕೆ
 - ನಿಮ್ಮ ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸಿ
 - ಸಹೋದರರ ಅಥವಾ ಬಂಧುಗಳ ಜೊತೆ ಜಗಳ ಮಾಡಿಕೊಂಡು ಮನಸ್ತಾಪ ಆಗುವ ಸಾಧ್ಯತೆ
 - ಈ ದಿನ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
 - ನಿಮ್ಮ ಪರವಾಗಿ ಬೇರೆಯವರು ಮಾತನಾಡಿದ್ರೆ ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಾರೆ
 - ಕುಟುಂಬದ ಹೊರಗಿನ ವಿಚಾರದಲ್ಲಿ ಬೇರೆಯವರ ಸಲಹೆ ಪಡೆಯುವ ಅವಕಾಶವಿರುತ್ತದೆ
 - ಮಹಾಕಾಳಿಯನ್ನು ಪ್ರಾರ್ಥಿಸಿ
 
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಜನರಿಗೆ, ಸಮಾಜಕ್ಕೆ ಒಳ್ಳೆಯದು ಮಾಡಲು ಸದಾವಕಾಶ
 - ಜನರು ನಿಮ್ಮ ಕಡೆ ಆಕರ್ಷಣೆಗೆ ಒಳಗಾಗುತ್ತಾರೆ
 - ಅನಾವಶ್ಯಕವಾಗಿ ದುಂದುವೆಚ್ಚ ಮಾಡಬೇಡಿ
 - ಹಣಕ್ಕಿಂತ ಹೆಚ್ಚಾಗಿ ನಿಮ್ಮ ಕಾರ್ಯವೈಖರಿಯನ್ನು ಜನಮೆಚ್ಚಿ ಅಭಿನಂದಿಸುತ್ತಾರೆ
 - ಇಂದು ಆರ್ಥಿಕವಾಗಿ ನಿಮಗೆ ಅನುಕೂಲವಿದೆ
 - ನಿಮ್ಮನ್ನು ನೀವು ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಹೆಚ್ಚಿನ ಜನಪ್ರಿಯತೆ ಗಳಿಸಬಹುದು
 - ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮಗಿರುವ ಬದ್ಧತೆ ಮತ್ತು ಗೌರವವನ್ನು ಹೆಚ್ಚಿಸುವ ದಿನ
 - ಗುರು ಹಿರಿಯರನ್ನು ಗೌರವಿಸಿ, ಆಶೀರ್ವಾದ ಪಡೆಯಿರಿ
 
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
 - ಕಾರ್ಯಕ್ಷೇತ್ರದಲ್ಲಿ ಹಿರಿಯ ಆಧಿಕಾರಿಗಳ ಸಂಪೂರ್ಣ ಬೆಂಬಲ ಸಿಗುತ್ತದೆ
 - ನಿಮಗಿರುವ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿ ಅದಕ್ಕೆ ಗೌರವ ಲಭಿಸುತ್ತೆ
 - ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಗೆ ಗೌರವ ದೊರೆಯುವ ದಿನ
 - ಓದಬೇಕೆಂಬ ಹಂಬಲವಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ
 - ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಾ ಉನ್ನತ ವ್ಯಾಸಂಗ ಮಾಡಲು ಅವಕಾಶವಾಗುತ್ತದೆ
 - ತಾಯಿಯ ಕಡೆಯಿಂದ ಉತ್ತಮ ಬೆಂಬಲ ಮತ್ತು ಧನ ಸಹಾಯವಾಗುತ್ತದೆ
 - ಇಂಜಿನಿಯರ್ಸ್​ ಮತ್ತು ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಶುಭಪ್ರದವಾದ ದಿನ
 - ಕುಲದೇವತಾ ಆರಾಧನೆ ಮಾಡಿ
 
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಅವಕಾಶವನ್ನು ಮುಂದಿಟ್ಟುಕೊಂಡು ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ
 - ಪದವೀಧರ ವಿದ್ಯಾರ್ಥಿಗಳಿಗೆ ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆ
 - ನಿಮ್ಮದೆ ಸ್ಥಳದಲ್ಲಿ ಹಾಗೂ ವಿದೇಶದಲ್ಲಿ ಕೆಲಸಕ್ಕೆ ಹೋಗುವ ಅವಕಾಶಗಳಿವೆ
 - ವಿದೇಶ ಪ್ರಯಾಣಕ್ಕೆ ಪ್ರಯತ್ನಿಸುವವರಿಗೆ ಈ ದಿನ ಶುಭವಾಗಲಿದೆ
 - ಹಣದ ಕೊರತೆಯಾಗಬಹುದು ಸರಿಯಾಗಿ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ
 - ವಿಷ್ಟು ಸಹಸ್ರನಾಮ ಶ್ರವಣ ಮಾಡಿ
 
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ಅದೃಷ್ಟ ಲಕ್ಷ್ಮಿ ನಿಮ್ಮ ಮನೆಯ ಬಾಗಿಲಿಗೆ ಬಂದ ಅನುಭವವಾಗುತ್ತದೆ
 - ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಇದೊಂದು ಸದಾವಕಾಶ
 - ಯಾವುದನ್ನು ದುರುಪಯೋಗ ಮಾಡಿಕೊಳ್ಳದೆ ಕಾರ್ಯತತ್ಪರರಾಗಿ ಶುಭವಿದೆ
 - ಮನೆಯಲ್ಲಿ ಹಲವು ವಿಷಯಗಳಿಗೆ ಭಿನ್ನಾಭಿಪ್ರಾಯಗಳಿರುತ್ತವೆ
 - ರಾಜಕೀಯಕ್ಕೆ ಬರುವವರು ನಾಯಕರ ಮಾರ್ಗದರ್ಶನ ಪಡೆದು ಮುಂದುವರೆದರೆ ಒಳಿತು
 - ವಿದ್ಯಾರ್ಥಿಗಳಿಗೆ, ಯುವಕರಿಗೆ ತುಂಬಾ ಪ್ರೋತ್ಸಾಹ ಸಿಗುತ್ತದೆ
 - ಹಣದ ಅನುಕೂಲ ಆಗುವ ಸಾಧ್ಯತೆಗಳಿವೆ
 - ನದಿ ತೀರದಲ್ಲಿರುವ ದೇವಿಯನ್ನು ಪ್ರಾರ್ಥಿಸಿ
 
ತುಲಾ
/filters:format(webp)/newsfirstlive-kannada/media/media_files/2025/07/31/rashi_bhavisha_tula-2025-07-31-22-55-03.jpg)
- ವಾದ-ವಿವಾದಗಳಿಗೆ ಅಥವಾ ಜಗಳಕ್ಕೆ ಪರಿಹಾರವಲ್ಲ
 - ಶಾಂತವಾಗಿ ನಿಮ್ಮ ಮನಸ್ಸು ಒಳ್ಳೆಯ ಮಾರ್ಗದತ್ತ ಮುಂದುವರೆಯಲಿ
 - ಪ್ರೀತಿಸಿ ಮದುವೆಯಾದ ದಂಪತಿಗಳು ಒಂದೇ ನಕ್ಷತ್ರ ಆಗಿದ್ರೆ ಜಗಳ ಮಾಡಿಕೊಳ್ಳುವ ಸಾಧ್ಯತೆ
 - ವೈವಾಹಿಕ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು
 - ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳಬಾರದು
 - ನಿಧಾನವಾಗಿ ಯೋಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
 - ಇಂದು ನಿಮಗೆ ತುಂಬಾ ತಾಳ್ಮೆ ಇರಬೇಕು
 - ಪ್ರೇಮಿಗಳ ಮಧ್ಯೆ ಬಿರುಕು ಉಂಟಾಗುವ ದಿನ
 - ಕೊನೆಗೆ ಕಾನೂನಿನ ಮೊರೆ ಹೋಗುವ ಸಾಧ್ಯತೆಗಳು ಇದೆ
 - ಈ ರಾಶಿಯವರಿಗೆ ಮಾನಸಿಕ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ
 - ವೃದ್ಧ ದಂಪತಿಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ
 
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ನಿಮ್ಮ ಕೆಲಸಕ್ಕೆ ಭರವಸೆ ನೀಡುವ ಕೆಲಸಗಳು ನಡೆಯುತ್ತದೆ
 - ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಅಡಚಣೆಯಾಗಬಹುದು
 - ಆರೋಗ್ಯದ ಬಗ್ಗೆ ಕಾಳಜಿವಹಿಸಿ
 - ವ್ಯಾವಹಾರಿಕವಾಗಿ,ಉದ್ಯೋಗಿಕವಾಗಿ ಸ್ವಲ್ಪ ನಷ್ಟವನ್ನು ಅನುಭವಿಸುವ ದಿನ
 - ರಕ್ತದೊತ್ತಡ ಸಮಸ್ಯೆಯಿರುವವರು ಜಾಗ್ರತೆಯಿಂದಿರಿ
 - ಈ ದಿನ ಕೆಲಸದಲ್ಲಿ ನಿಮಗೆ ಬಡ್ತಿ ಸಿಗಲಿದೆ
 - ಆಲಸ್ಯ ತೋರಿಸಬೇಡಿ, ನಿಮ್ಮ ಕೆಲಸಕ್ಕೆ ಸಂಬಂಧಿಸಿದ ನಿಮ್ಮ ಅಹವಾಲನ್ನು ಸ್ವೀಕರಿಸಿ
 - ನಿಮ್ಮ ಮನಸ್ಸಿಗೆ ಆನಂದವಾಗುವ ದಿನ
 - ವ್ಯಾವಹಾರಿಕವಾಗಿ, ಉದ್ಯೋಗಿಕವಾಗಿ ಸ್ವಲ್ಪ ನಷ್ಟವನ್ನು ಅನುಭವಿಸುವ ದಿನ
 - ಸರ್ಕಾರಿ ನೌಕರಿಯಲ್ಲಿರುವ ಸ್ತ್ರೀಯರಿಗೆ ಶುಭವಾರ್ತೆ
 - ಪಾರ್ವತಿ ದೇವಿಯನ್ನು ಆರಾಧಿಸಿ
 
ಧನುಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ಈ ದಿನ ಸ್ಥಿರಾಸ್ತಿಯನ್ನು ನೋಂದಣಿ ಮಾಡಿಸುವವರು ಮಧ್ಯಾಹ್ನದ ನಂತರ ಮಾಡಿಸಿ
 - ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ಧಿಯನ್ನು ಹೆಚ್ಚಿಸಲಿದೆ
 - ತುಂಬಾ ಅಗತ್ಯವಿರುವ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚೆಮಾಡಿ
 - ಸ್ನೇಹಿತರಿಂದ ಅಂತರವನ್ನು ಕಾಯ್ದುಕೊಳ್ಳಿ
 - ಕೆಲಸದ ಸ್ಥಳದಲ್ಲಿ ನಿಮಗೆ ಸಣ್ಣ ಪುಟ್ಟ ಅಡ್ಡಿಯಾದ್ರೂ ಆತಂಕ ಪಡಬೇಡಿ
 - ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದವರನ್ನು ದ್ವೇಷಿಸಬೇಡಿ
 - ಈಶ್ವರ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ
 
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ಭೂ ವ್ಯವಹಾರ ಮಾಡುವವರಿಗೆ ಸಾಯಂಕಾಲ ಶುಭವಾಗಲಿದೆ
 - ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳ ಮಾಡಿಕೊಳ್ಳಬೇಡಿ
 - ಹೊಸ ವ್ಯಾಪಾರ ಪ್ರಾರಂಭಿಸುವ ಮುಂಚೆ ಯೋಚಿಸಿ ನಿರ್ಧಾರ ಮಾಡಿ
 - ವ್ಯಾಪಾರ,ವ್ಯವಹಾರದಲ್ಲಿ ಲಾಭ ದೊರಕುವ ದಿನ
 - ಬೇರೆಯವರು ಏನೇನೋ ಮಾತಾಡಿಕೊಳ್ಳುತ್ತಾರೆಂದು ನಿಮ್ಮ ಕೆಲಸಕ್ಕೆ ಅಡ್ಡಿ ಮಾಡಿಕೊಳ್ಳಬೇಡಿ
 - ಇಂದು ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಯಶಸ್ಸು ನಿಮ್ಮದಾಗಿರುತ್ತದೆ
 - ದುರ್ಗಾದೇವಿಯನ್ನು ಆರಾಧಿಸಿ
 
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ನಿಧಾನವಾಗಿ ಯೋಚನೆ ಮಾಡಿ ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ
 - ಅಕ್ಕ ಪಕ್ಕದವರ ಜೊತೆ ಜಗಳ ಮಾಡಬೇಡಿ
 - ಮಾನಸಿಕ ಸಮಾಧಾನ ಮುಖ್ಯವಾಗಿರುತ್ತದೆ
 - ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು ಅವರನ್ನು ಗೌರವಿಸಿ
 - ಈ ರಾಶಿಯ ನೌಕರರಿಗೆ ಕಿರಿ ಕಿರಿ ಉಂಟಾಗುವ ದಿನ
 - ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪದಿಂದ ಬೇಸರಗೊಳ್ಳುವ ಸಾಧ್ಯತೆ
 - ವಿದ್ಯಾರ್ಥಿಗಳು ತಮ್ಮ ಕೆಲಸಕ್ಕೆ ತುಂಬಾ ಆತುರವಾಗಿ ಮುಂದುವರೆಯುತ್ತೀರಿ
 - ವಿದ್ಯಾರ್ಥಿಗಳ ಯಶಸ್ಸಿಗೆ ಅಡ್ಡಿ ಉಂಟಾಗಬಹುದು
 - ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
 
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಇಂದು ಸ್ತ್ರೀಯರಿಗೆ ಅನುಕೂಲಕರವಾದ ದಿನ
 - ಈ ದಿನ ಖರೀದಿಗೆ ಹೆಚ್ಚು ಅವಕಾಶಗಳಿವೆ
 - ಆಹಾರದ ವೃತ್ಯಯದಿಂದ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳು ಕಾಣಬಹುದು ಜಾಗ್ರತೆ
 - ಇದು ನಿಮ್ಮ ಮನಸ್ಥೈರ್ಯವನ್ನು ಹೆಚ್ಚಿಸುವಂತದ್ದು
 - ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರಿಕೆ
 - ಜನರು ನಿಮ್ಮ ದೌರ್ಬಲ್ಯಗಳನ್ನು ಅಸ್ತ್ರವನ್ನಾಗಿಟ್ಟುಕೊಂಡು ನಿಮಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ
 - ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಸಿಗುವ ದಿನ
 - ಮನೆ ದೇವರನ್ನು ಪ್ರಾರ್ಥಿಸಿ
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us